ಶನಿವಾರ, ಜನವರಿ 11, 2025
ದಿ.ಗುರುನಾಥ ಬೇಂದ್ರೆ
ಸಾಹಿತಿ ದಿ. ಗುರುನಾಥ ಬೇಂದ್ರೆಯವರು ಬೀದರ ಜಿಲ್ಲೆ ಔರಾದ ತಾಲೂಕಿನ ಲಾದಾ ಗ್ರಾಮದ ಇಸ್ಮಾಯಿಲಪ್ಪಾ ಮತ್ತು ಸುಂದ್ರಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೫೪ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವೀಧರರಾದ ಇವರು ಬೆಂಗಳೂರಿನಲ್ಲಿ ಸಮಾಜ ಶಾಸ್ತ್ರದ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ದಿನಾಂಕ ೩೦-೮-೨೦೦೨ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಬಾಲ್ಯದಿಂದಲೇ ಕಲೆ, ಸಾಹಿತ್ಯದ ಬಗ್ಗೆ ಆಸಕ್ತರಾದ ಇವರು ದಿ. ಪಂಚಶೀಲ ಗವಾಯಿಗಳ ಪ್ರಭಾವದಿಂದಾಗಿ ಅನೇಕ ಬುದ್ಧ, ಅಂಬೇಡ್ಕರ್ ರವರ ಕುರಿತಾದ ಹಾಡುಗಳು ಬರೆದಿದ್ದಾರೆ. ಮತ್ತು ೧೯೮೧ರಲ್ಲಿ `ಬುದ್ಧ, ಅಂಬೇಡ್ಕರ್ ಪದ್ಯಗಳು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಮತ್ತು ಅನೇಕ ಕವನ, ಲೇಖನ, ಹಾಡುಗಳು ಬರೆದಿದ್ದು, ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ