ಶನಿವಾರ, ಜನವರಿ 11, 2025
ದಿ.ನರಸಿಂಗ ಮಾಸ್ತರ
ಹವ್ಯಾಸಿ ಬರಹಗಾರರಾದ ದಿ.ನರಸಿಂಗ ಮಾಸ್ತರ ಅವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾಗೂರ (ಬಿ) ಗ್ರಾಮದ ಅಂಬಾಜಿ ಮತ್ತು ಜಳಬಾಯಿ ದಂಪತಿಗಳಿಗೆ ೧೯೩೨ರಲ್ಲಿ ಜನಿಸಿದ್ದಾರೆ. ಮೋಡಿ ಅಕ್ಷರದ ಮೂಲಕ ಶಿಕ್ಷಣ ಪಡೆದ ಇವರು `ಸತ್ಯಹರಿಶ್ಚಂದ್ರ, ಧನಪಾಲರಾಜ, ತಾಯಿಯ ಕರುಳು, ನೀಲಕಂಠ ರಾಜ, ಮಡದಿ ಮಾಂಗಲ್ಯ,' ಎಂಬ ನಾಟಕಗಳನ್ನು ರಚಿಸಿದ್ದಾರೆ. ಮತ್ತು ಮೊಹರಮ್ ಪದ, ಜಾನಪದ, ಭಜನೆ ಹಾಡುಗಳನ್ನು ಬರೆದಿದ್ದು ಅಷ್ಟೇಯಲ್ಲದೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳು ನಾಟಕ ರೂಪಾಂತರ ಮಾಡಿ ಪ್ರದರ್ಶನ ಮಾಡಿದ್ದಾರೆ. ಶ್ರೀ ಕೃಷ್ಣ ಲೀಲೆ, ರಾಮ- ಲಕ್ಷ್ಮಣ, ಕೊಳಲಿನ ಪ್ರಸಂಗಗಳು ತುಂಬ ಪ್ರಸಿದ್ಧಿ ಪಡೆದಿದ್ದವು. ತಮ್ಮ ೮೮ರ ಇಳಿವಯಸ್ಸಿನಲ್ಲೂ ಸುಮಧುರ ಕಂಠದಿAದ ಹಾಡುವ ಕಲೆಯನ್ನು ಉಳಿಸಿಕೊಂಡಿದ್ದರು. ಇವರು ೨೦೧೨ರಲ್ಲಿ ನಿಧನ ಹೊಂದಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ