ಪುಟಗಳು

ಶನಿವಾರ, ಜನವರಿ 11, 2025

ದಿ.ನರಸಿಂಗ ಮಾಸ್ತರ

ಹವ್ಯಾಸಿ ಬರಹಗಾರರಾದ ದಿ.ನರಸಿಂಗ ಮಾಸ್ತರ ಅವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾಗೂರ (ಬಿ) ಗ್ರಾಮದ ಅಂಬಾಜಿ ಮತ್ತು ಜಳಬಾಯಿ ದಂಪತಿಗಳಿಗೆ ೧೯೩೨ರಲ್ಲಿ ಜನಿಸಿದ್ದಾರೆ. ಮೋಡಿ ಅಕ್ಷರದ ಮೂಲಕ ಶಿಕ್ಷಣ ಪಡೆದ ಇವರು `ಸತ್ಯಹರಿಶ್ಚಂದ್ರ, ಧನಪಾಲರಾಜ, ತಾಯಿಯ ಕರುಳು, ನೀಲಕಂಠ ರಾಜ, ಮಡದಿ ಮಾಂಗಲ್ಯ,' ಎಂಬ ನಾಟಕಗಳನ್ನು ರಚಿಸಿದ್ದಾರೆ. ಮತ್ತು ಮೊಹರಮ್ ಪದ, ಜಾನಪದ, ಭಜನೆ ಹಾಡುಗಳನ್ನು ಬರೆದಿದ್ದು ಅಷ್ಟೇಯಲ್ಲದೆ ರಾಮಾಯಣ, ಮಹಾಭಾರತ ಮಹಾಕಾವ್ಯಗಳು ನಾಟಕ ರೂಪಾಂತರ ಮಾಡಿ ಪ್ರದರ್ಶನ ಮಾಡಿದ್ದಾರೆ. ಶ್ರೀ ಕೃಷ್ಣ ಲೀಲೆ, ರಾಮ- ಲಕ್ಷ್ಮಣ, ಕೊಳಲಿನ ಪ್ರಸಂಗಗಳು ತುಂಬ ಪ್ರಸಿದ್ಧಿ ಪಡೆದಿದ್ದವು. ತಮ್ಮ ೮೮ರ ಇಳಿವಯಸ್ಸಿನಲ್ಲೂ ಸುಮಧುರ ಕಂಠದಿAದ ಹಾಡುವ ಕಲೆಯನ್ನು ಉಳಿಸಿಕೊಂಡಿದ್ದರು. ಇವರು ೨೦೧೨ರಲ್ಲಿ ನಿಧನ ಹೊಂದಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ