ಶನಿವಾರ, ಜನವರಿ 11, 2025
ಸಂಗಪ್ಪಾ ಬಿರಾದಾರ
ಹಿರಿಯ ಸಾಹಿತಿ ಸಂಗಪ್ಪಾ ಬಿರಾದಾರ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಡೊಣಗಾಪೂರ ಗ್ರಾಮದ ಶರಣಪ್ಪಾ ಬಿರಾದಾರ ಮತ್ತು ಭಾಗೀರಥಿ ದಂಪತಿಗಳಿಗೆ ದಿನಾಂಕ ೮-೭-೧೯೩೭ರಲ್ಲಿ ಜನಿಸಿದ್ದಾರೆ. ೪ನೇ ತರಗತಿಯವರೆಗೆ ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ೫ನೇ ತರಗತಿಯನ್ನು ಕನ್ನಡದಲ್ಲಿ ಅಧ್ಯಯನ ಮಾಡಿ ಮುಂದೆ ಕಲಿಯಲಾಗದೆ ಸ್ವಯಂ ವೃತ್ತಿಯಲ್ಲಿ ತೊಡಗಿ, ಸಾಹಿತ್ಯದ ಆಸಕ್ತಿಯನ್ನು ಮೂಡಿಸಿಕೊಂಡು ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ, `ಶ್ರೀ ಮಹಬೂಬ ಮಹಾನಂದ ಪ್ರಭುಗಳು' (ಚರಿತ್ರೆ) `ಮಾನವ ಧರ್ಮ' (ಕಿರುನಾಟಕ) `ನಮ್ಮೂರು ಡೊಣಗಾಪೂರ' (ಗ್ರಾಮ ಚರಿತೆ) `ರಂಭಾಪುರಿ ಪ್ರಿಯ ಶ್ರೀ ಗುರು ರಾಚೋಟೆಶ್ವರ ವಚನಾಂಕಿತ ವಚನಗಳು' (ಆಧುನಿಕ ವಚನ ಸಂಕಲನ) ಹಾಗೂ `ಭಜನಾ ಪದಗಳು' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ೧೯೬೮ರಿಂದ ೧೯೮೨ರವರೆಗೆ ಮಂಡಲ ಪಂಚಾಯತ್ ಉಪಾಧ್ಯಕ್ಷರಾಗಿ, ೧೯೮೭ರಿಂದ ೧೯೯೨ರವರೆಗೆ ಪ್ರಧಾನರಾಗಿ ಸೇವೆ ಸಲ್ಲಿಸಿ, ಗ್ರಾಮೀಣ ಅಭಿವೃದ್ಧಿಗಾಗಿ ಶ್ರಮಿಸಿದ್ದಾರೆ. ಹಾಗೂ ಹುಟ್ಟೂರಿನ ಡೋಣೇಶ್ವರ ದೇವಸ್ಥಾನ ಸಂಸ್ಥೆಯ ಕಾರ್ಯದರ್ಶಿಯಾಗಿ, ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು ಅಷ್ಟೇಯಲ್ಲದೆ ರಂಗ ಕಲಾವಿದರಾಗಿ, ಸಂಗೀತಗಾರರಾಗಿಯು ಹೆಸರುವಾಸಿಯಾಗಿದ್ದಾರೆ. ಇವರ ಕಲೆ, ಸಾಹಿತ್ಯ, ಸಂಗೀತ ಸಾಧನೆಗೆಯನ್ನು ಕಂಡು ೨೦೧೦ರಲ್ಲಿ ಡೊಣಗಾಪೂರ ಗ್ರಾಮದಲ್ಲಿ ನಡೆದ ಭಾಲ್ಕಿ ತಾಲೂಕಿನ ದ್ವಿತೀಯ ಗ್ರಾಮ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರಿಗೆ ಉತ್ತಮ ಮಂಡಲ ಪಂಚಾಯತ್ ಪ್ರಶಸ್ತಿ, ಹಾಗೂ ತಾಲೂಕು, ಜಿಲ್ಲಾ ಮಟ್ಟದ ರಾಜ್ಯೋತ್ಸವ ಪ್ರಶಸ್ತಿಯು ಲಭಿಸಿವೆ. ೧೯೯೩-೯೪ರಲ್ಲಿ ಡೋಣೇಶ್ವರ ಶಿಕ್ಷಣ ಸಂಸ್ಥೆಯೊAದು ಸ್ಥಾಪಿಸಿ ಅದರ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ರಾಚೋಟೆ ಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆಯೊಂದು ತೆರದು ೮೩ನೇ ಇಳಿವಯಸ್ಸಿನಲ್ಲೂ ಗ್ರಾಮ ಶಿಕ್ಷಣಕ್ಕಾಗಿ ಶ್ರಮಿಸುವುದರೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ