ಪುಟಗಳು

ಶನಿವಾರ, ಜನವರಿ 11, 2025

ಗುರುನಾಥ ವಡ್ಡೆ

ಸಾಹಿತಿ ಹಾಗೂ ಪತ್ರಕರ್ತರಾಗಿ ಅನೇಕ ಹೋರಾಟಗಳೊಂದಿಗೆ ಲೇಖನಗಳು ಬರೆದು ಸಾಮಾಜಿಕ ಪರಿವರ್ತನೆಯೊಂದಿಗೆ ಶರಣರ ತತ್ವನಿಷ್ಠೆಯನ್ನು ಮೈಗೂಡಿಸಿಕೊಂಡು ಕೆಲ ಅಧ್ಯಾತ್ಮಿಕ ಶರಣ ಸಾಹಿತ್ಯ ಕೃತಿಗಳು ರಚಿಸಿದ ಲೇಖಕರೆಂದರೆ ಗುರುನಾಥ ವಡ್ಡೆಯವರು. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ಭವಾನಿ ಬಿಜಲಗಾಂವ ಗ್ರಾಮದ ಶ್ರೀ ವೈಜಿನಾಥ ಮತ್ತು ಶ್ರೀಮತಿ ಶಕುಂತಲಾ ದಂಪತಿಗಳಿಗೆ ದಿನಾಂಕ ೩-೨-೧೯೬೭ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ೧೯೯೨ರಿಂದ ಪತ್ರಿಕಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು `ಸೀಮಾವಾರ್ತೆ' ಎಂಬ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಪ್ರಜಾಪ್ರಭುತ್ವ ಉಳಿಸಿ' ಎಂಬ ಹೋರಾಟ, ಮತ್ತು ಅನೇಕ ಸಾರ್ವಜನಿಕ ಹಿತಾಸಕ್ತಿಯಿಂದ ಗ್ರಾಮೀಣ ಪ್ರದೇಶದ ಜನಜೀವನದ ಏಳಿಗೆಗಾಗಿ ರಾಜ್ಯಾದ್ಯಂತ ಹೋರಾಟ, ಸತ್ಯಾಗ್ರಹ, ಉಪವಾಸ, ಪ್ರತಿಭಟನೆಗಳನ್ನು ಮಾಡುತ್ತಾ ಉತ್ತಮ ಸಮಾಜಿಕ ಕಾರ್ಯಕರ್ತರಾಗಿ, ಸಾಹಿತಿ ಪತ್ರಕರ್ತರಾಗಿ ಗುರುತಿಸಿಕೊಂಡಿದ್ದಾರೆ. ಮತ್ತು ಇವರು `ವಿಭೂತಿ ಮಹಿಮಾ, ಲಿಂಗಾಚಾರ, ವೀರಶೈವ ಪಂಚಾಚಾರ, ಅಷ್ಟಾವರಣ, ವೀರಶೈವ ಧರ್ಮ ಪರಿಚಯ, ಓಂ.ನಮಃಶಿವಾಯ, ಶ್ರೀ ಕ್ಷೇತ್ರ ಭವಾನಿ ಬಿಜಲಗಾಂವ, ಶರಣ ವಚನಾಮೃತ, ಸಹಕಾರ ಮಹರ್ಷಿ ಶ್ರೀ ಗುರುಪಾದಪ್ಪಾ ನಾಗಮಾರಪಳ್ಳಿ, ಮತ್ತು `ಡಾ.ನಾಗಮಾರಪಳ್ಳಿ ನೆನಪುಗಳು' ಎಂಬ ಕೃತಿಗಳು ರಚಿಸಿ ಪ್ರಕಟಿಸಿದ್ದಾರೆ. ಇವರ ಲೇಖನ ಬರಹಗಳು ನಾಡಿನ ಹಲವಾರು ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರ ಸಾಹಿತ್ಯ ಹಾಗೂ ಹೋರಾಟಕ್ಕೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ