ಶನಿವಾರ, ಜನವರಿ 11, 2025
ಹಂಶಕವಿ
‘ಹಂಶಕವಿ’ ಎಂಬ ಕಾವ್ಯನಾಮದಿಂದ ಬರೆಯುತ್ತಿರುವ ಲೇಖಕ ಹಣಮಂತಪ್ಪಾ ತಂದೆ ಶಂಕರೆಪ್ಪ ವಲ್ಲೆಪೂರೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ನಾಗೂರ (ಬಿ) ಗ್ರಾಮದ ಶಂಕರೆಪ್ಪಾ ಮತ್ತು ಗಂಗಮ್ಮ ದಂಪತಿಗಳಿಗೆ ದಿನಾಂಕ ೧-೫-೧೯೬೫ ರಲ್ಲಿ ಜ£ಸಿದ್ದಾರೆ. ಬಿ.ಎ.ಬಿ.ಇಡಿ.ಪದವಿಧರರಾಗಿ ೧೯೯೩ರಲ್ಲಿ ಪೋಲಿಸ್ ಪೆದೆ ಹುದ್ದೆಗೆ ಸೇರಿ ಕತೆ ಕವನ ವಚನ ಲೇಖನಗಳು ಬರೆದು ಕವಿ ಸಾಹಿತಿಯಾಗಿ ಗುರ್ತಿಸಿಕೊಂಡಿದ್ದಾರೆ. ೨೦೦೧ರಲ್ಲಿ ‘ಹಾಹಾಕಾರ’ ಎಂಬ ಕವನ ಸಂಕಲನ ಪ್ರಕಟಿಸಿ ನಂತರ ‘ಬದುಕು’, ‘ಕಾವ್ಯ ಲಹರಿ’, ‘ಬದುಕು ಬೆಳಕು’ ಕೃತಿಗಳು ಹೊರತಂದಿದ್ದಾರೆ. ಮತ್ತು ‘ಸಂತ ಗುಂಡಯ್ಯ’ ‘ಜ್ಯೋರ್ತಿಲಿಂಗಾಶ್ರಮದಲ್ಲಿ ಸದ್ಗುರು ಬಸವಲಿಂಗರು’ ‘ಶ್ರೀಗುರು ಚರಿತ್ರೆ’ ‘ದತ್ತ ದರ್ಶನ’ ‘ಅಪರೂಪದ ಶರಣರು’ ‘ನನ್ನಪ್ಪ ನನ್ನವ್ವೆ’ ‘ಅಪೂರ್ವಸಂತ ಶ್ರೀ ಗಜಾನನ ಮಹಾರಾಜ’ ‘ಚಮತ್ಕಾರಿ ಸಂತ ತಾಜ ಬಾಬಾ’ ‘ಚತುರ್ಥಿ ದತ್ತಾವತಾರಿ ಶ್ರೀ ಮಾಣಿಕ ಪ್ರಭು’ ಇವು ಅವರು ರಚಿಸಿದ ಜೀವನ ಚರಿತ್ರೆಗಳಾದರೆ, ‘ಸಿರಿಧಾನ್ಯಗಳು’ ಮತ್ತು ‘ವ್ಯಕ್ತಿ ಚಿತ್ರ ದರ್ಶನ’ ಇವು ಅವರ ಲೇಖನಗಳ ಕೃತಿಗಳಾಗಿವೆ.
‘ಶ್ರೀದತ್ತ ಭಾಗವತ್’ ಎನ್ನುವುದು ಅವರ ಇತ್ತೀಚಿನ ೧೨೦೦ ಪುಟಗಳ ಬೃಹತ್ ಸಂಪುಟವಾಗಿದೆ. ಮತ್ತು ೩೬ ಆಧುನಿಕ ವಚನಗಳ ಸಂಪುಟಗಳು, ಅಭಿನಂದನಾ ಗ್ರಂಥಗಳು, ಸ್ಮರಣ ಸಂಚಿಕೆಗಳು ಒಟ್ಟು ಸೇರಿ ೧೨೫ಕ್ಕೂ ಹೆಚ್ಚು ಪುಸ್ತಕಗಳು ಪ್ರಕಟಿಸಿದ್ದಾರೆ. ಇವರಿಗೆ ಸಸ್ತಾಪೂರದ ಯಲ್ಲಾಲಿಂಗೇಶ್ವ ಮಠದ ವತಿಯಿಂದ ನಡೆದ ೩ನೇ ಆಧುನಿಕ ಜಿಲ್ಲಾ ವಚನ ಸಾಹಿತ್ಯ ಸಮ್ಮೇಳನ ಹಾಗೂ ೨೦೧೮ರಲ್ಲಿ ನಡೆದ ಬೀದರ ತಾಲೂಕು ೫ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ. ಇವರಿಗೆ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಹಳಕಟ್ಟಿ ಪ್ರಶಸ್ತಿ, ವಚನಶ್ರೀ ಪ್ರಶಸ್ತಿ, ಕಲ್ಯಾಣ ರತ್ನ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ, ಪುರಸ್ಕಾರಗಳು ಲಭೀಸಿವೆ. ಸದ್ಯ ಭಾಲ್ಕಿಯ ನಗರ ಪೋಲಿಸ್ ಠಾಣೆಯಲ್ಲಿ ಎ.ಎಸ್.ಐ ಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ