ಶನಿವಾರ, ಜನವರಿ 11, 2025
ನಾಗನಾಥ ಚಿಟಮೆ
ಸಾಹಿತಿ ನಾಗನಾಥ ಚಿಟಮೆ ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ತೋಟೆಪ್ಪಾ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೯-೭-೧೯೬೫ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಎಂ.ಇಡಿ.ಪದವೀಧರರಾದ ಇವರು ೧೯೮೯ರಲ್ಲಿ ಔರಾದ ತಾಲೂಕಿನ (ಅನುದಾ£ತ) ನಳಂದಾ ಪ್ರೌಢ ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಶಿಕ್ಷಕ ಹುದ್ದೆಗೆ ಸೇರಿದ ನಂತರ ಸಾಹಿತ್ಯದಲ್ಲಿ ಆಸಕ್ತಿ ಬೆಳೆಸಿಕೊಂಡು ಮಕ್ಕಳ ಕತೆ, ಕವನ,ಲೇಖನ ಬರಹಗಳ ರಚನೆಯಲ್ಲಿ ತೊಡಗಿ ೨೦೧೪ರಲ್ಲಿ ‘ಸ್ಫೂರ್ತಿಯ ಚಿಲುಮೆ’ ಎಂಬ ಕತೆಗಳು ಮಕ್ಕಳಿಗಾಗಿ ೧೩೦ ಮಹಾನ್ ವ್ಯಕ್ತಿಗಳ ಜೀವನದಲ್ಲಿ ನಡೆದ ಘಟನೆಗಳಾಧರಿಸಿ ಬರೆದು ಪ್ರಕಟಿಸಿದ್ದಾರೆ. ಇವರ ಕತೆ ಲೇಖನಗಳು ನಾಡಿನ ಪ್ರಮುಖ ಪತ್ರಿಕೆಗಳಾದ ವಿಜಯ ಕರ್ನಾಟಕದ ಬೋಧಿವೃಕ್ಷ ಪುರವಣಿ, ಉತ್ತರ ಕರ್ನಾಟಕ ಸೇರಿದಂತೆ ಮೊದಲಾದ ಸ್ಥಳೀಯ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ ಸೇವೆಯನ್ನು ಕಂಡು ಅನೇಕ ಕನ್ನಡಪರ ಸಂಘ ಸಂಸ್ಥೆಯವರು ಸನ್ಮಾನಿಸಿ ಸತ್ಕಾರಿಸಿದ್ದಾರೆ. ಮತ್ತು ಇವರಿಗೆ ೨೦೧೭ರಲ್ಲಿ ಔರಾದ ತಾಲೂಕಿನ ಆದರ್ಶ ಶಿಕ್ಷಕ ಪ್ರಶಸ್ತಿಯೂ ನೀಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ