ಮಂಗಳವಾರ, ಜನವರಿ 14, 2025
ಪುಷ್ಪಾವತಿ ಚಿಕುರ್ತೆ
ಉದಯೋನ್ಮಖ ಕವಯತ್ರಿ ಪುಷ್ಪಾವತಿ ಚಿಕುರ್ತೆ ಯವರು ಕಮಲನಗರ ತಾಲೂಕಿನ ಖತಗಾಂವ ಗ್ರಾಮದ ಘಾಳೇಪ್ಪಾ ಮತ್ತು ಶಾಂತಮ್ಮಾ ದಂಪತಿಗಳಿಗೆ ದಿನಾಂಕ ೨೦-೭-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪದವಿಧರರಾದ ಇವರು ಗೋರ್ಟಾ (ಬಿ) ಗ್ರಾಮದ ಅಶೋಕ ಚಿಕುರ್ತೆಯವರ ಧರ್ಮಪತ್ನಿಯಾಗಿದ್ದಾರೆ. ೧೯೯೪ರಲ್ಲಿ ಡೊಣಗಾಂವ(ಎ) ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ನಂತರ ಭಾಲ್ಕಿ ತಾಲೂಕಿನ ವರವಟ್ಟಿ(ಬಿ) ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಕವನ ಸಂಕಲನ, ಸ್ಮರಣೆ ಸಂಚಿಕೆ, ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. `ಜೀವನ ವಿಕಾಸದಲ್ಲಿ ಅನಕ್ಷರಸ್ಥರ ಗೋಳು' `ಅಕ್ಕರೆಯ ಅಕ್ಕ' `ಶಿವಾ-ರೇಖಾ' ಇವು ಅವರ ಪ್ರಮುಖ ಕವನಗಳಾಗಿವೆ. ಇವರಿಗೆ ೨೦೦೩ರಲ್ಲಿ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿವೆ ಸದ್ಯ ಇವರು ಗೋರ್ಟಾ (ಬಿ) ಗ್ರಾಮದ ನಿವಾಸಿಯಾಗಿ ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ