ಶನಿವಾರ, ಜನವರಿ 11, 2025
ಎಸ್.ಎಸ್.ಹೊಡಮನಿ
ಹಿರಿಯ ಸಾಹಿತಿ ಎಸ್.ಎಸ್.ಹೊಡಮನಿಯವರ ಪೂರ್ಣನಾಮ ಸುರೇಂದ್ರ ಸಂಗಪ್ಪ ಹೊಡಮನಿಯಾಗಿದೆ. ಇವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಸಂಗಪ್ಪಾ ಮತ್ತು ಸುಶೀಲಾಬಾಯಿ ದಂಪತಿಗಳಿಗೆ ದಿನಾಂಕ ೧-೫-೧೯೫೬ರಲ್ಲಿ ಜನಿಸಿದ್ದಾರೆ. ಬಿ.ಎ. ಎಂ.ಎಡ್.ಪದವಿ ಪಡೆದು ೧೯೮೫ರಲ್ಲಿ ಹಳ್ಳಿಖೇಡ ಬಿ ಗ್ರಾಮದ ಡಾ.ಬಿ.ಆರ್.ಅಂಬೇಡ್ಕರ (ಅನುದಾನಿತ) ಪಿ.ಯು.ಕಾಲೇಜಿನಲ್ಲಿ ಶಿಕ್ಷಣ ಶಾಸ್ತ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೨೦೧೬ರಲ್ಲಿ ನಿವೃತ್ತರಾಗಿದ್ದಾರೆ. ಇವರು ೨೦೧೬ರಲ್ಲಿ `ಪ್ರೇಮದ ಹೂಗಳು' ೨೦೧೯ರಲ್ಲಿ `ಪ್ರೇಮದ ಗುಚ್ಚಗಳು' (ಕವನಸಂಕಲನಗಳು) ೨೦೧೮ `ಪ್ರೇಮದ ಕುಡಿಗಳು' (ಕಾದಂಬರಿ) ೨೦೨೦ರಲ್ಲಿ `ಪ್ರೇಮದ ಪರಿ' (ಕಥಾಸಂಕಲನ) ಹಾಗೂ ೨೦೨೦ರಲ್ಲಿ `ಪ್ರೇಮ, ಪ್ರೀತಿ, ಪ್ರಣಯ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರಿಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದ `ಕಾವ್ಯ ಪ್ರೇಮಾಂಜಲಿ ರತ್ನ’ ಎಂಬ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಮತ್ತು ೨೯ ಜನೆವರಿ ೨೦೨೦ರಂದು ಹುಮನಾಬಾದ ತಾಲೂಕಿನ ೭ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ