ಶನಿವಾರ, ಜನವರಿ 11, 2025
ಕೆ.ವೀರಾರೆಡ್ಡಿ
ಸಾಹಿತಿ ಕೆ.ವೀರಾರೆಡ್ಡಿಯವರು ಬೀದರ ಜಿಲ್ಲೆ ಹುಮನಾಬಾದಿನ ನಾಗರೆಡ್ಡಿ ಮತ್ತು ಗುಜ್ಜಮ್ಮ ದಂಪತಿಗಳಿಗೆ ದಿನಾಂಕ ೨೬-೭-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್.ಎಂ.ಎ.ಎA.ಎಡ್ ಪದವಿಧರರಾದ ಇವರು ೧೯೯೯ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕೆಲವರ್ಷ ಶಾಸಕರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ ಇವರು ಚಂದನಹಳ್ಳಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ೨೦೧೯ರಲ್ಲಿ `ಸ್ಪೂರ್ತಿಯ ಸೆಲೆ' ಎಂಬ ವ್ಯಕ್ತಿತ್ವ ವಿಕಾಸನ ಕೃತಿ, ಮತ್ತು ೨೦೨೦ರಲ್ಲಿ `ಆಚರಣೆಗಳು ಆದರ್ಶಮಯವಾಗಿರಲಿ,ಆಡಂಬರವಲ್ಲ’ ಎಂಬ ಲೇಖನಗಳ ಸಂಕಲನವು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಇವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಹುಮನಾಬಾದ ತಾಲೂಕಾ ಅಧ್ಯಕ್ಷರಾಗಿ, ಜಾನಪದ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ