ಪುಟಗಳು

ಶನಿವಾರ, ಜನವರಿ 11, 2025

ಕೆ.ವೀರಾರೆಡ್ಡಿ

ಸಾಹಿತಿ ಕೆ.ವೀರಾರೆಡ್ಡಿಯವರು ಬೀದರ ಜಿಲ್ಲೆ ಹುಮನಾಬಾದಿನ ನಾಗರೆಡ್ಡಿ ಮತ್ತು ಗುಜ್ಜಮ್ಮ ದಂಪತಿಗಳಿಗೆ ದಿನಾಂಕ ೨೬-೭-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್.ಎಂ.ಎ.ಎA.ಎಡ್ ಪದವಿಧರರಾದ ಇವರು ೧೯೯೯ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ಕೆಲವರ್ಷ ಶಾಸಕರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸಿದ ಇವರು ಚಂದನಹಳ್ಳಿ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ೨೦೧೯ರಲ್ಲಿ `ಸ್ಪೂರ್ತಿಯ ಸೆಲೆ' ಎಂಬ ವ್ಯಕ್ತಿತ್ವ ವಿಕಾಸನ ಕೃತಿ, ಮತ್ತು ೨೦೨೦ರಲ್ಲಿ `ಆಚರಣೆಗಳು ಆದರ್ಶಮಯವಾಗಿರಲಿ,ಆಡಂಬರವಲ್ಲ’ ಎಂಬ ಲೇಖನಗಳ ಸಂಕಲನವು ಪ್ರಕಟಿಸಿದ್ದಾರೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಹಾಗೂ ಇವರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲೆ ಶಿಕ್ಷಕರ ಸಂಘದ ಹುಮನಾಬಾದ ತಾಲೂಕಾ ಅಧ್ಯಕ್ಷರಾಗಿ, ಜಾನಪದ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ