ಮಂಗಳವಾರ, ಜನವರಿ 14, 2025
ರಮೇಶ ಬಾಬು
ಹವ್ಯಾಸಿ ಬರಹಗಾರರಾದ ರಮೇಶ ಬಾಬು ರವರು ಬೀದರ ತಾಲೂಕಿನ ಅಮಲಾಪೂರ ಗ್ರಾಮದ ಶಿವಪ್ಪ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ.ಪದವಿಧರರಾದ ಇವರು ಸಮಾಜ ಸೇವಕರಾಗಿ ಬೌದ್ಧ ಮಹಾಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ, ಲೇಖನ, ಬರಹಗಳು ಬರೆದಿದ್ದು ಅವು ಕೆಲವು ಕಡೆ ಪ್ರಕಟವಾಗಿವೆ.
ಬಕ್ಕಪ್ಪ ದಂಡಿನ
ಹವ್ಯಾಸಿ ಬರಹಗಾರ ಬಕ್ಕಪ್ಪ ದಂಡಿನ ರವರು ಬೀದರ ತಾಲೂಕಿನ ಮಾಳೆಗಾಂವ ಗ್ರಾಮದ ಹಣಮಂತಪ್ಪ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೬-೬-೧೯೬೬ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಅನೇಕ ಕವನ, ಲೇಖನ ಬರಹಗಳು ಬರೆದಿದ್ದು, ಅವು ಕೆಲವು ಕಡೆ ಪ್ರಕಟವಾಗಿವೆ. ಇವರು ಬೀದರ ಜಿಲ್ಲಾ ಪಿ.ಯು.ಕೆ ಸಂಚಾಲಕರಾಗಿ, ದಲಿತ ಸಂಘರ್ಷ ಸಮಿತಿ ಸಂಚಾಲಕರಾಗಿ, ಮಾಳೆಗಾಂವ ಗ್ರಾಮ ಪಂಚಾಯತ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಬಾಬುರಾವ ಬನ್ನೇರ್.
ಹವ್ಯಾಸಿ ಬರಹಗಾರರಾದ ಬಾಬುರಾವ ಬನ್ನೇರ್ ರವರು ಬೀದರ ತಾಲೂಕಿನ ಹಾರೂಗೇರಿಯ ನರಸಪ್ಪಾ ಮತ್ತು ಅಂಬಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೪ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಪದವಿಧರರಾದ ಇವರು ರಾಯಚೂರು ಜಿಲ್ಲೆಯ ತಾರಾನಾಥ ಶಿಕ್ಷಣ ಸಂಸ್ಥೆಯಲ್ಲಿ ಶಿಕ್ಷರಾಗಿ, ಉಪಪ್ರಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದಿರುವ ಕತೆ, ಕವನ, ಲೇಖನ, ಬರಹಗಳು ಕೆಲ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಶಿವರಾಜ ಬೋಧಿಸತ್ವ
ಕವಿ ಕಲಾವಿದರಾದ ಶಿವರಾಜ ಬೋಧಿಸತ್ವರವರು ಬೀದರ ತಾಲೂಕಿನ ನಿಡವಂಚಾ ಗ್ರಾಮದ ಪುಂಡಲೀಕಪ್ಪಾ ಮತ್ತು ಶರಣಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೬೪ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಸಮಾಜ ಸೇವಕರಾಗಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ.ಅನೇಕ ಕವನ ಲೇಖನಗಳು ಬರೆದಿದ್ದಾರೆ. ಮಹಾತ್ಮ ಜ್ಯೋತಿಬಾ ಪುಲೆ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುವುದರೊಂದಿಗೆ ಸಾಹಿತ್ಯ ಕೃಷಿ ಮುಂದುವರೆಸಿದ್ದಾರೆ.
ಅರ್ಜುನರಾವ ಹಾವೆ
ಕವಿ ಸಾಹಿತಿ ಹಾಗೂ ಶಿಕ್ಷಕರಾದ ಅರ್ಜುನರಾವ ಹಾವೆಯವರು ಬೀದರದ ಹಾರೂರಗೇರಿಯ ಹಣಮಂತಪ್ಪಾ ಮತ್ತು ನರಸಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೨ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಬಿ.ಎ.ಪದವೀಧರರಾದ ಇವರು ಸರ್ಕಾರಿ ಅನುದಾನಿತ ಶಾರದಾ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕವನ, ಲೇಖನ, ಬರಹಗಳು ಬರೆದಿದ್ದು, ಅವು ಕೆಲ ಪ್ರಾತಿನಿಧಿಕ ಸಂಕಲನ ಮತ್ತು ಇತರೆ ಪತ್ರಿಕೆಗಳಲ್ಲಿಯು ಪ್ರಕಟವಾಗಿವೆ. ಮತ್ತು ಇವರು ಉತ್ತಮ ಹಾರ್ಮೋನಿಯಂ ತಬಲ ವಾದಕರಾಗಿದ್ದಾರೆ.
ಡಾ.ಸಿ.ಆನಂದರಾವ
ಹವ್ಯಾಸಿ ಬರಹಗಾರ ಡಾ.ಸಿ.ಆನಂದರಾವ ರವರು ಬೀದರದ ಮಲ್ಲಪ್ಪ ಮತ್ತು ಈಶ್ವರಮ್ಮ ದಂಪತಿಗಳಿಗೆ ದಿನಾಂಕ ೧೦-೨-೧೯೫೮ರಲ್ಲಿ ಜನಿಸಿದ್ದಾರೆ. ಎಂ.ಬಿ.ಬಿ.ಎಸ್. ಡಿ.ಸಿ.ಎಚ್. ಪದವೀಧರರಾದ ಇವರು ವೈದ್ಯಕೀಯ ವೃತ್ತಿಯಲ್ಲಿದ್ದುಕೊಂಡು ಅನೇಕ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ.
ಡೇವಿಡ್
ಡೇವಿಡ್
ಹವ್ಯಾಸಿ ಬರಹಗಾರರಾದ ಡೇವಿಡ್ ರವರು ಬೀದರ ಮಂಗಲ ಪೇಟೆಯ ತಿಮೋಥಿ ಮತ್ತು ಸಮಧಾನಮ್ಮ ದಂಪತಿಗಳಿಗೆ ದಿನಾಂಕ ೧೬-೪-೧೯೫೬ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಪದವಿಧರರಾದ ಇವರು ಮೆಥೋಡಿಸ್ಟ್ ಬಾಲಕಯರ ವಸತಿ ಗೃಹದ ಮೇಲ್ವಿಚಾರಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಅನೇಕ ಕವನ, ಲೇಖನ, ಬರಹಗಳು ಬರೆದಿದ್ದು ಅವು ಕೆಲವು ಕಡೆ ಪ್ರಕಟವಾಗಿವೆ.
ಮಾರುತಿ ಬಬಚೌಡಿ
ಮಾರುತಿ ಬಬಚೌಡಿ
ಕವಿ, ತತ್ವಪದಕಾರ ಮಾರುತಿ ಬಬಚೌಡಿಯವರು ಬೀದರ ತಾಲೂಕಿನ ಬಬಚೌಡಿ ಗ್ರಾಮದ ಬಸಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೬-೪-೧೯೫೪ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿರುವ ಇವರು ಬೀದರ ತಾಲೂಕಿನ ಮಂದಕನಳ್ಳಿ ಗ್ರಾಮದ ಪಿ.ಕೆ.ಪಿ.ಎಸ್.ಸೋಸಾಯಿಟಿಯಲ್ಲಿ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೇ ಹಾಡುವ ಕಲೆಯನ್ನು ಕರಗತ ಮಾಡಿಕೊಂಡ ಇವರು ತಮ್ಮ ಗಾಯನದೊಂದಿಗೆ ಅನೇಕ ಮೋಹರಮ್ ಪದ ತತ್ವ ಪದಗಳನ್ನು ರಚನೆ ಮಾಡಿದ್ದಾರೆ. ಅವು ಕೆಲವು ಕಡೆ ಅವು ಪ್ರಕಟವಾಗಿವೆ.
ದೇವೇಂದ್ರ ನವಲಸ್ ಪೂರ್
ತತ್ವಪದ, ಭಜನೆ ಪದಗಳನ್ನು ಬರೆದ ಕವಿ ದೇವೇಂದ್ರ ನವಲಸ್ ಪೂರ ರವರು ಬೀದರ ತಾಲೂಕಿನ ನವಲಸ್ ಪೂರ ಗ್ರಾಮದ ಶರಣಪ್ಪ ರತ್ನಮ್ಮ ದಂಪತಿಗಳಿಗೆ ೧೯೫೦ರಲ್ಲಿ ಜನಿಸಿದ್ದಾರೆ. ಮೊಹರಮ್ ತತ್ವಪದ ಭಜನೆ ಹಾಡುಗಳನ್ನು ಬರೆದು ಸ್ವತಃ ಕವಿ ಗಾಯಕರಾಗಿದ್ದು, ಇವರ ಗಾಯನ ಕಲೆಗೆ ಸಾಕಷ್ಟು ಕಡೆಗಳಿಂದ ಬಹುಮಾನವು ಬಂದಿರುತ್ತವೆ.
ತಿಪ್ಪಣ್ಣ ಜ್ಯೋತಿ
ಬಂಡಾಯದ ಧಮ್ಮ ಗೀತೆಗಳನ್ನು ರಚನೆ ಮಾಡಿದ ಕವಿ ತಿಪ್ಪಣ್ಣ ಜ್ಯೋತಿಯವರು. ಬೀದರ ತಾಲೂಕಿನ ಚಿಲ್ಲರ್ಗಿ ಗ್ರಾಮದ ಸಂಬಣ್ಣ ಮತ್ತು ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೧೫-೮-೧೯೪೭ರಂದು ನಮ್ಮ ದೇಶಕ್ಕೆ ಸ್ವತಂತ್ರ ಬಂದ ದಿನವೇ ಜನಿಸಿದ್ದಾರೆ. ದಲಿತ ಕವಿ ದಿ. ಪಂಚಶೀಲ ಗವಾಯಿಗಳ ಪ್ರಭಾವದಿಂದಾಗಿ ಬುದ್ದ, ಬಾಬಾ ಸಾಹೇಬ ಅಂಬೇಡ್ಕರ್ ರವರ ತತ್ವಕ್ಕೆ ಮಾರು ಹೋಗಿ ಮೂಢ ನಂಬಿಕೆಗಳ ವಿರುದ್ಧ ಬಂಡೆದ್ದು ಕ್ರಾಂತಿಕಾರಿ ಸಾಹಿತ್ಯ ರಚಿಸಿದ್ದಾರೆ. ಅವರಿಗೆ `ಬೌದ್ಧಾಚಾರ್ಯ' ಎಂಬ ಬಿರುದು ನೀಡಲಾಗಿದೆ.
ದಿ.ಸಂಬಣ್ಣ ಬಬಚೌಡಿ
ತತ್ವಪದ ಮೊಹರಮ್ ಪದಗಳನ್ನು ಬರೆದ ಇವರು ಬೀದರ ತಾಲೂಕಿನ ಬಬಚೌಡಿ ಗ್ರಾಮದ ತಿಪ್ಪಣ್ಣ ಮತ್ತು ಗಂಗಮ್ಮ ದಂಪತಿಗಳಿಗೆ ೧೯೩೮ರಲ್ಲಿ ಜನಿಸಿದ್ದಾರೆ. ತಿಪರಂತಿ ಮಾಸ್ತರ ಅವರ ಶಿಷ್ಯರಾದ ಇವರು ಅನೇಕ ಹಾಡುಗಳನ್ನು ಬರೆದಿದ್ದಾರೆ. ಅವು ಕೆಲವು ಕಡೆ ಪ್ರಕಟ ಕೂಡ ಆಗಿವೆ. ಇವರು ೧೯೮೬ರಲ್ಲಿ ನಿಧನರಾಗಿದ್ದಾರೆ.
ದಿ.ಸಿದ್ರಾಮಪ್ಪ ಹೊಸಮನಿ
ಮೊಹರಮ್ ಮತ್ತು ತತ್ವಪದಗಳನ್ನು ಬರೆದ ಸಿದ್ರಾಮಪ್ಪ ಹೊಸಮನಿಯವರು ಬೀದರದ ಹಾರೂರಗೇರಿಯ ಭೀಮಣ್ಣ ಮತ್ತು ಜ್ಯೋತೆಮ್ಮ ದಂಪತಿಗಳಿಗೆ ೧೯೩೭ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೇ ಹಾಡುವುದನ್ನು ರೂಢಿಸಿಕೊಂಡ ಇವರು ತಿಪರಂತಿ ಮಾಸ್ತರರಿಂದ ಹಾಡು ಕಲಿತು ಸ್ವತಃ ಬರೆದು ಕವಿಯಾಗಿ ಗುರುತಿಸಿಕೊಂಡಿದ್ದಾರೆ. ಮತ್ತು ತತ್ವಪದ, ಭಜನೆ, ಮೊಹರಮ್ ಪದಗಳನ್ನು ಬರೆದಿದ್ದು ಅವು ಕೆಲವು ಕಡೆ ಪ್ರಕಟವಾಗಿದ್ದು ಅಷ್ಟೇಯಲ್ಲದೆ ಇವರ ಹಾಡುಗಳು ಇಂದಿಗೂ ಕೆಲ ಗ್ರಾಮೀಣ ಪ್ರದೇಶದಲ್ಲಿ ಹಾಡುತ್ತಾರೆ. ಇವರ ಮಗ ಈಶ್ವರ ಹೊಸಮನಿ ಕೂಡ ಉತ್ತಮ ಕವಿ ಗಾಯಕರಾಗಿದ್ದಾರೆ. ಇವರು ೧೯೭೬ರಲ್ಲಿ ನಿಧನರಾಗಿದ್ದಾರೆ.
ಪ್ರೊ. ದೇವೇಂದ್ರ ಕಮಲ
ಹವ್ಯಾಸಿ ಬರಹಗಾರರಾದ ಪ್ರೊ. ದೇವೇಂದ್ರ ಕಮಲ ರವರು ಬೀದರ ರಾಂಪುರೆ ನಗರದ ವಿಠಲರಾವ ಮತ್ತು ಗುಂಡಮ್ಮ ದಂಪತಿಗಳಿಗೆ ದಿನಾಂಕ ೧೭-೫-೧೯೩೫ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಇವರು ಕವನ, ಲೇಖನ, ಬರಹಗಳು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ.
ಕಲ್ಲಪ ಬಲಂಡೆ
ತತ್ವಪದಕಾರ, ಕವಿ ಕಲ್ಲಪ್ಪ ಬಲಂಡೆಯವರು. ಬೀದರ ತಾಲೂಕಿನ ಮಿರ್ಜಾಪೂರ ಗ್ರಾಮದ ಶಿವಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ೧೯೩೫ರಲ್ಲಿ ಜನಿಸಿದ್ದಾರೆ. ಪ್ರಾಥಮಿಕ ಶಿಕ್ಷಣ ಮಾತ್ರ ಅಧ್ಯಯನ ಮಾಡಿದ ಇವರು ಅಲ್ಪ ಸ್ವಲ್ಪ ಹಿಂದಿ ಬರವಣಿಗೆ ಕಲಿತು ಮಾಟ ಮಂತ್ರ ಪೀಡಿತರಿಗೆ ಗುಣಪಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡು ಸಮಾಜಿಕ ಸೇವೆ ಮಾಡುತ್ತಿದ್ದರು. ಸಾಹಿತ್ಯದಲ್ಲಿ ಆಸಕ್ತರಾಗಿ ಜಾನಪದ ಸವಾಲ್- ಜವಾಬ್ ಹಾಡುಗಳು, ತತ್ವಪದ, ಭಜನೆ ಹಾಡುಗಳು ಬರೆದು ಗಾಯನ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. ಸಾಹಿತ್ಯ ರಚನೆಯಿಂದ ಇವರಿಗೆ ಹಲವಾರು ಬಹುಮಾನಗಳು ಲಭಿಸಿವೆ.
ಮಾಣಿಕರಾವ ಜ್ಯೋತಿ
`ಭೀಮಕವಿ' ಎಂದೇ ಖ್ಯಾತರಾದ ಕವಿ ಮಾಣಿಕರಾವ ಜ್ಯೋತಿ ರವರು ಬೀದರ ತಾಲೂಕಿನ ಖಾಸೆಂಪೂರ ಗ್ರಾಮದ ನರಸಪ್ಪ ಮತ್ತು ಹಣಮವ್ವ ದಂಪತಿಗಳಿಗೆ ೧೯೩೩ರಲ್ಲಿ ಜನಿಸಿದ್ದಾರೆ. ಮತ್ತು ಕೆಲಕಾಲ ಹೈದರಾಬಾದ್ ನಲ್ಲಿ ಸೈನಿಕರಾಗಿ ಸೇವೆ ಸಲ್ಲಿಸಿ ನಂತರ ಸರ್ಕಾರಿ ವಸತಿ ಗೃಹ ಇಲಾಖೆಯಲ್ಲಿ ಮತ್ತು ಬೀದರ ಏರ್ ಫೋರ್ಸ್ ನಲ್ಲಿ ಸೇವಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿ ಇಹಲೋಕ ತ್ಯಜಿಸಿದ್ದಾರೆ. ಇವರು ಬೀದರ ಹತ್ತಿರದ ಪಾತರಪಳ್ಳಿಯಲ್ಲಿ ಬಹುಕಾಲ ಜೀವನ ಕಳೆದಿದ್ದು ದಿ. ಪಂಚಶೀಲ ಗವಾಯಿ ಕಾಶಿನಾಥ ಅವರೊಂದಿಗೆ ನಾಗಪುರದಲ್ಲಿ ಬೌದ್ಧ ಧಮ್ಮ ದೀಕ್ಷೆ ಪಡೆದು ಹಿಂದೂ ದೇವತೆಗಳ ಆರಾಧನೆ ಗೀತೆಗಳನ್ನು ಕೈ ಬಿಟ್ಟು ಸ್ವತಃ ಬುದ್ದ ಬಸವ ಅಂಬೇಡ್ಕರ್ ಕುರಿತಾದ ಗೀತೆಗಳು ರಚನೆ ಮಾಡಿ ಹಾಡುವ ಕಲಾವಿದರಾಗಿದ್ದರು. ಮೊದಲು ತತ್ವಪದಗಳು ಬರೆದಿದ್ದ, ನಂತರದಲ್ಲಿ ಅಂಬೇಡ್ಕರ್ ಬುದ್ದ ಬಸವಣ್ಣನವರ ಬಗ್ಗೆ ಬರೆದ ಹಾಡುಗಳು ಭಜನೆ ಪದಗಳಾಗಿ ತುಂಬ ಜನಪ್ರಿಯವಾಗಿವೆ. ಮತ್ತು ಇವರು ವಿಶೇಷವಾಗಿ ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಹೆಚ್ಚು ಸಾಹಿತ್ಯ ರಚನೆ ಮಾಡಿದ್ದರಿಂದ ಇವರಿಗೆ `ಭೀಮ ಕವಿ' ಎಂದು ಜನರೆ ನೀಡಿದ ಬಿರುದಾಗಿದೆ. ಹಾಗಾಗಿ ಇವರ ಕುರಿತು ಸಾಹಿತಿ ಚಂದ್ರಪ್ಪ ಹೆಬ್ಬಾಳಕರ್ ಅವರು `ಭೀಮ ಕವಿ ಮಾಣಿಕರಾವ ಜ್ಯೋತಿ' ಎಂಬ ಕೃತಿಯನ್ನು ಪ್ರಕಟಿಸಿದರೆ, ಮಂಗಲಾ ವಿ.ಕಪರೆಯವರು `ಮಾಣಿಕ್ಯ ಜ್ಯೋತಿ’ ಎಂಬ ಜೀವನ ಚರಿತ್ರೆ ಬರೆದಿದ್ದಾರೆ.
ಗುಂಡಪ್ಪ ಬೆಳ್ಳೂರು
ತತ್ವಪದಕಾರ ಹಾಗೂ ಗಾಯಕ ಗುಂಡಪ್ಪ ಬೆಳ್ಳೂರು ರವರು ಬೀದರದ ಹಾರೂರಗೇರಿಯ ಭೀಮಣ್ಣ ಮತ್ತು ಕಲ್ಲಮ್ಮ ದಂಪತಿಗಳ ಜೇಷ್ಠ ಪುತ್ರರಾಗಿ ೧೯೩೦ರಲ್ಲಿ ಜನಿಸಿದ್ದಾರೆ. ತುಂಬ ಬಡತನದಲ್ಲಿ ಹುಟ್ಟಿ ಬೆಳೆದ ಇವರು ಹಳ್ಳಿಯಲ್ಲಿ ಕೆಲಸವಿಲ್ಲದೆ ಬದುಕು ದುಸ್ಥರವಾದಾಗ ಬೇರೆ ಊರಿನಿಂದ ಬೀದರಗೆ ವಲಸೆ ಬಂದು ಹಾರೂರಗೇರಿಯಲ್ಲಿ ನೆಲೆಸಿದ್ದಾರೆ. ಇವರು ತಿಪರಂತಿ ಮಾಸ್ತರರ ಶಿಷ್ಯರಾಗಿದ್ದು ಅನೇಕ ಹಾಡು, ಪದ್ಯ, ಅಧ್ಯಾತ್ಮಿಕ ಅನುಭಾವ ಗೀತೆಗಳನ್ನು ರಚಿಸಿದ್ದಾರೆ.
ರೋಹಿಣಿ ಬಿರಾದಾರ
ಯುವ ಕವಯತ್ರಿ ರೋಹಿಣಿ ಬಿರಾದಾರ ರವರು ಹುಮನಾಬಾದ ತಾಲೂಕಿನ ನಿಂಬೂರು ಗ್ರಾಮದ ಚಂದ್ರಕಾAತ ಮತ್ತು ಜೈ ಸುಧಾ ದಂಪತಿಗಳಿಗೆ ದಿನಾಂಕ ೨೭-೪-೨೦೦೧ ರಲ್ಲಿ ಜನಿಸಿದ್ದಾರೆ. ಬಿ.ಕಾಂ. ಪದವಿ ಮೂರನೇ ಸೆಮಿಸ್ಟರ್ ವಿದ್ಯಾರ್ಥಿನಿಯಾದ ಇವರು ವಿಶೇಷವಾಗಿ ಕಾವ್ಯ ರಚನೆಯಲ್ಲಿ ಹೆಚ್ಚು ಆಸಕ್ತರಾಗಿ ಎರಡು ನೂರಕ್ಕೂ ಹೆಚ್ಚು ಕವನಗಳು ರಚಿಸಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಕಟವಾಗಿವೆ. ಹಾಗೂ ಕಸಾಪದ ವಿವಿಧ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕವಿಗೋಷ್ಠಿಗಳಲ್ಲಿ ಕವನ ವಾಚನೆ ಮಾಡಿದ್ದಾರೆ. ಇವರು `ಅಮ್ಮಾ ನೀನಿಲ್ಲದೆ' ಮತ್ತು `ಮಾತು ಬರಹವಾಗಿದೆ' ಎಂಬ ಕವನ ಸಂಕಲನಗಳು ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ.
ಡಾ. ರಾಜಶೇಖರ ಹೂಗಾರ
ಉದಯೋನ್ಮುಖ ಬರಹಗಾರ ಡಾ.ರಾಜಶೇಖರ ಹೂಗಾರ ರವರು ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದ ಶಿವರಾಜ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೧-೬-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಹುಮನಾಬಾದಿನ ವೀರಭದ್ರೇಶ್ವರ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅಥಿತಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕವನ, ಲೇಖನ, ಚುಟುಕು, ಹನಿಗವನ, ಪ್ರಬಂಧಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆಗಳಲ್ಲಿಯೂ ಪ್ರಕಟವಾಗಿವೆ. ಮತ್ತು `ಶ್ರೀ ರಂಜಾನ್ ದರ್ಗಾ ರವರ ಸಾಹಿತ್ಯ ಒಂದು ಅವಲೋಕನ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ರಂಜಾನ್ ದರ್ಗಾ ರವರ ಕಾವ್ಯಾವಲೋಕನ' ಎಂಬ ಒಂದು ವಿಮರ್ಶಾ ಕೃತಿಯು ಬರೆದಿದ್ದಾರೆ. ಹೀಗೆ ಇವರು ತಮ್ಮ ಸಾಹಿತ್ಯ ರಚನೆಯೊಂದಿಗೆ ಹುಮನಾಬಾದ ತಾಲೂಕಿನ ಅಖಿಲ ಭಾರತ ವಚನ ಸಾಹಿತ್ಯ ಮತ್ತು ಸಾಂಸ್ಕೃತಿಕ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಬೇಲೂರಿನ ಉರಿಲಿಂಗ ಪೆದ್ದಿ ಮಠ, ಹಾಗೂ ಸಸ್ತಾಪೂರದ ಯಲ್ಲಾಲಿಂಗೇಶ್ವರ ಮಠದಿಂದ, ಮತ್ತು ಕಸಾಪ, ದಸಾಪದ ವತಿಯಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.
ಸಂಗಮೇಶ್ವರ ವ್ಹಿ.ಹಿರೇಮಠ
ಹವ್ಯಾಸಿ ಬರಹಗಾರರಾದ ಸಂಗಮೇಶ್ವರ ವ್ಹಿ.ಹಿರೇಮಠ ರವರು ಹುಮನಾಬಾದ ತಾಲೂಕಿನ ಮದರಗಾಂವ ಗ್ರಾಮದವರಾಗಿದ್ದು, ಸದ್ಯ ಕಲಬುರಗಿಯಲ್ಲಿ ವಾಸವಾಗಿದ್ದಾರೆ. ಕವನ, ಲೇಖನ, ಆಧುನಿಕ ವಚನಗಳು ರಚಿಸಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಗೀತಾ ರೆಡ್ಡಿ
ಉದಯೋನ್ಮುಖ ಕವಯತ್ರಿಯಾದ ಗೀತಾ ರೆಡ್ಡಿಯವರು ಹುಮನಾಬಾದ ತಾಲೂಕಿನ ಘಾಟಬೋರಾಳ ಗ್ರಾಮದ ಹನಮಂತರೆಡ್ಡಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೬-೩-೧೯೮೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಎಂ.ಎಸ್.ಡೆಬ್ಲು ಸ್ನಾತಕೋತ್ತರ ಪದವಿಧರರಾದ ಇವರು ೨೦೦೫ರಿಂದ ಹುಮನಾಬಾದ ಸರ್ಕಾರಿ ಆಸ್ಪತ್ರೆಯಲ್ಲಿ ಕರ್ನಾಟಕ ರಾಜ್ಯ ಏಡ್ಸ ನಿಯಂತ್ರಣ ಘಟಕದ ಆಪ್ತ ಸಮಾಲೋಚಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ಆಸಕ್ತರಾದ ಇವರು ಕವನ, ಲೇಖನ, ಆಧುನಿಕ ವಚನ, ಮೊದಲಾದವು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಹಲವಾರು ಕವಿಗೋಷ್ಠಿಗಳಲ್ಲಿಯು ಕವನ ವಾಚನ ಮಾಡಿದ್ದಾರೆ. ಆರೋಗ್ಯ ಇಲಾಖೆಯಲ್ಲಿ ಸೇವೆ ಸಲ್ಲಿಸುತ್ತಿರುವ ಇವರು ತಮ್ಮ ವೃತ್ತಿ ಬದುಕಿನೊಂದಿಗೆ ವೈದ್ಯಕೀಯ ಲೇಖನಗಳು, ಹಾಗೂ ಆಹಾರ ಮತ್ತು ಆರೋಗ್ಯದ ಕುರಿತು ಮತ್ತು ದಾಂಪತ್ಯ ಜೀವನಕ್ಕೆ ಸಂಬAಧಿಸಿದ ಲೇಖನ, ಕವನ, ಚುಟುಕು, ಹನಿಗವನ ಸೇರಿದಂತೆ ಮೊದಲಾದ ಬರಹಗಳು ಬರೆಯುತ್ತಿದ್ದಾರೆ.
ಜಗನ್ನಾಥ ಬೇಂದ್ರೆ
ಕವಿ ಕಲಾವಿದರು ಹಾಗೂ ಹವ್ಯಾಸಿ ಬರಹರಾದ ಜಗನ್ನಾಥ ಬೇಂದ್ರೆಯವರು ಹುಮನಾಬಾದ ತಾಲೂಕಿನ ಮೋಳಕೇರಾ ಗ್ರಾಮದ ಸಂಬಣ್ಣ ಮತ್ತು ಶಾಂತಾಬಾಯಿ ದಂಪತಿಗಳ ಪುತ್ರನಾಗಿ ಜನಿಸಿದ್ದಾರೆ. ಎಂ.ಎ.ಕನ್ನಡ ಹಿಂದೂಸ್ತಾನಿ ಸಂಗೀತದಲ್ಲಿ ಸ್ನಾತಕೋತ್ತರ ಪದವಿಧರರಾದ ಇವರು ಮಂಠಾಳ ಪ್ರೌಢಶಾಲಾ ಸಂಗೀತ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸ್ವರಚಿತ ಹಾಡು ಪದ್ಯಗಳನ್ನು ಬರೆದು ಹಾಡುವ ಆಕಾಶವಾಣಿ ಕಲಾವಿದರಾಗಿ ಹೆಸರು ವಾಸಿಯಾಗಿದ್ದಾರೆ. ಇವರು ಕಲಬುರಗಿ ಆಕಾಶವಾಣಿಯಿಂದ ಅನೇಕ ಭಾವ ಗೀತೆ, ಭಕ್ತಿ ಗೀತೆಗಳನ್ನು ಹಾಡಿ ಕೇಳುಗರ ಮನರಂಜಿಸಿದ್ದಾರೆ. ಇವರಿಗೆ ೨೦೦೬ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸಂಗೀತ ರತ್ನ, ಸಂಗೀತ ಶ್ರೀ, ಬಸವ ಬೆಳಗು, ಕನ್ನಡ ಸೇವಾ ರತ್ನ' ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ನಾಗಮ್ಮ ಎಚ್.ಭಂಗರಗಿ
ಕವಯತ್ರಿ, ನಾಗಮ್ಮ ಎಚ್. ಭಂಗರಗಿಯವರು ಕಲಬುರ್ಗಿ ತಾಲೂಕಿನ ಸಾವಳಗಿ (ಬಿ) ಗ್ರಾಮದ ಹುಲೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೯-೭-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್, ಎಂ,ಫೀಲ್ ಪದವಿಧರರಾದ ಇವರು ೨೦೦೯ರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಹುಮನಾಬಾದ ತಾಲೂಕಿನ ಮನ್ನಾಏಖೇಳಿಯ ಮಲ್ಲಿಕಾರ್ಜುನ ಅಮಗೊಂಡ ಅವರ ಧರ್ಮ ಪತ್ನಿಯಾಗಿರುವ ಇವರು ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿದ್ದು, ತಮ್ಮ ತಂದೆಯವರು ಲೇಖಕರು, ಆಧ್ಯಾತ್ಮವಾದಿಗಳು ಹಾಗೂ ಸಮಾಜ ಸೇವಕರು ಆಗಿದ್ದರಿಂದ ಅವರ ಪ್ರೇರಣೆಯಿಂದ ಸಾಹಿತ್ಯ ರಚಿಸುತ್ತಿದ್ದಾರೆ. `ಬೀದರ ಜಿಲ್ಲೆಯ ಮಹಿಳಾ ಕಾವ್ಯಗಳ ಒಂದು ಅಧ್ಯಯನ’ ಎಂಬ ಕಿರು ಸಂಶೋಧನೆಯನ್ನು ಪೂರ್ಣಗೊಳಿಸಿದ್ದಾರೆ. ಇವರ ಬರಹಗಳು `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಹಾಗೂ `ಅಚಲ’ ಎಂಬ ಮಾಸಪತ್ರಿಕೆ ಹಾಗೂ ಕೆಲ ಕನ್ನಡದ ಪ್ರಮುಖ ಪತ್ರಿಕೆಗಳಲ್ಲಿ ಮತ್ತು ಇತರರು ಹೊರತಂದ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಯಲ್ಲಿ ಕವನ ವಾಚನವು ಮಾಡಿದ ಇವರು ಅನೇಕ ರಾಜ್ಯ, ರಾಷ್ಟ ಮಟ್ಟದ ಕಮ್ಮಟಗಳಲ್ಲಿಯೂ ಉಪನ್ಯಾಸಗಳು ನೀಡಿದ್ದಾರೆ. ಇವರ ಶೃಕ್ಷಣಿಕ ಹಾಗೂ ಸಾಹಿತ್ಯ ಸಾಧನೆಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ .
ಓಂಕಾರ ಪಾಟೀಲ್
ಹವ್ಯಾಸಿ ಬರಹಗಾರರಾದ ಓಂಕಾರ ಪಾಟೀಲ್ ರವರು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಬಸವರಾಜ ಮತ್ತು ಪ್ರಭಾವತಿ ದಂಪತಿಗಳಿಗೆ ದಿನಾಂಕ ೨೫-೧೧-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ. ಪದವೀಧರರಾದ ಇವರು ಸ್ವಯಂ ವೃತ್ತಿಯೊಂದಿಗೆ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ , ಲೇಖನ, ಹನಿಗವನ, ಮೊದಲಾದವು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಕಲೆ, ಸಾಹಿತ್ಯದೊಂದಿಗೆ ಸಾಮಾಜಿಕ, ರಾಜಕೀಯವಾಗಿ ಗುರ್ತಿಸಿಕೊಂಡಿರುವ ಇವರು ಬೀದರ ಕರ್ನಾಟಕ ಸಾಹಿತ್ಯ ಅಕಾಡೆಮಿ, ಮತ್ತು ಚಕೋರ ಕವಿ ಕಾವ್ಯ ವೇದಿಕೆಯ ಪ್ರತಿನಿಧಿಯಾಗಿ. ಸೇವೆ ಸಲ್ಲಿಸಿದ ಇವರು ಸದ್ಯ ಬೀದರ ಜಿಲ್ಲಾ ಮಕ್ಕಳ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿದ್ದಾರೆ. ಇವರಿಗೆ ಕಸಾಪದ ವತಿಯಿಂದ ಬೆಳ್ಳಿ ಗೌರವ ಸನ್ಮಾನ ಮತ್ತು ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಸಾಹಿತ್ಯ ರತ್ನ ಪ್ರಶಸ್ತಿ, ಹಾಗೂ ಕಾಸರಗೋಡು ಸಾಹಿತ್ಯ ವೇದಿಕೆಯಿಂದ ಕಾವ್ಯ ಶಿಖಾಮಣಿ, ನೈಜದೀಪ ಸಾಹಿತ್ಯ ವೇದಿಕೆಯಿಂದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.
ಅನುರಾಧ ಕೆ.ಪೊದ್ದಾರ
ಉದಯೋನ್ಮುಖ ಕವಯತ್ರಿಯಾದ ಅನುರಾಧ ಕೆ.ಪೊದ್ದಾರ ರವರು ಹುಮನಾಬಾದ ತಾಲೂಕಿನ ಕಂದಗೂಳ ಗ್ರಾಮದ ಗೋಪಾಳರಾವ ಕುಲಕರ್ಣಿ ಮತ್ತು ಶೈಲಜಾ ಕುಲಕರ್ಣಿ ದಂಪತಿಗಳಿಗೆ ದಿನಾಂಕ ೨೭-೧೦-೧೯೭೮ರಲ್ಲಿ ಜನಿಸಿದ್ದಾರೆ. ಬಿ.ಎ. ಬಿಎಡ್. ಪದವಿಧರರಾದ ಇವರು ಹುಮನಾಬಾದಿನ ಶ್ರೀ ಕಾಳೂರ ಲಿಂಗೇಶ್ವರ (ಸಿ.ಬಿ.ಎಸ್.ಸಿ) ಶಾಲೆಯ ಕನ್ನಡ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬ ಆಸಕ್ತಿಯನ್ನು ಹೊಂದಿದ ಇವರು ವಿಶೇಷವಾಗಿ ಕಾವ್ಯ ರಚನೆ ಮಾಡುವುದರಲ್ಲಿ ತೊಡಗಿ ನೂರಾರು ಕವನ, ಆಧುನಿಕ ವಚನ ಲೇಖನಗಳನ್ನು ಬರೆದಿದ್ದಾರೆ. ಇವರ ಕವಿತೆಗಳು ನಾಡಿನ ವಿವಿಧ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ವಿವಿಧ ಸಾಹಿತ್ಯ ಸಮ್ಮೇಳನದಲ್ಲಿಯು ಪಾಲ್ಗೊಂಡು ತಮ್ಮ ಕವನಗಳ ವಾಚನ ಮಾಡಿದ್ದಾರೆ. ಆದ್ದರಿಂದ ಇವರಿಗೆ ವಿವಿಧ ಸಂಘ ಸಂಸ್ಥೆಯವರು ಇವರ ಕಾವ್ಯ ಕೃಷಿಯನ್ನು ಕಂಡು ಹಲವು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.
ಚನ್ನಪ್ಪ ಸಂಗೂಳಗಿ
ಉದಯೋನ್ಮುಖ ಬರಹಗಾರ ಚನ್ನಪ್ಪ ಸಂಗೂಳಗಿಯವರು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ಗಣಪತರಾವ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೫-೫-೧೯೭೭ರಲ್ಲಿ ಜನಿಸಿದ್ದಾರೆ. ಬಿ.ಎ ಪದವಿಧರರಾದ ಇವರು ೧೯೯೬ರಿಂದ ಬೀದರದ ಚಿದಂಬರ ಆಶ್ರಮ ಸಂಸ್ಥೆಯ ಎನ್.ಕೆ.ಜೆ.ಆಯುರ್ವೇದಿಕ್ ಕಾಲೇಜಿನಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕತೆ, ಕವನ, ಚುಟುಕು, ಲೇಖನ, ಹನಿಗವನಗಳ ರಚನೆಯಲ್ಲಿ ತೊಡಗಿ `ಪ್ರೇಮ ಕಾರಂಜಿ' ಎಂಬ ಕವನ ಸಂಕಲನ ಮತ್ತು `ನೆನಪಿನ ಅಂಗಳ' ಎಂಬ ಕಥಾ ಸಂಕಲನ ಬರೆದಿದ್ದು, ಅವು ಅಪ್ರಕಟಿತವಾಗಿವೆ. ಇವರು ಬೆಂಗಳೂರಿನ ಸ್ವರಾಜ ಪತ್ರಿಕೆಯ ಜಿಲ್ಲಾ ವರದಿಗಾರರಾಗಿಯು ಸೇವೆ ಸಲ್ಲಿಸಿದ್ದು ಆ ಪತ್ರಿಕೆ ಸೇರಿದಂತೆ ವಚನ ಕ್ರಾಂತಿ, ಪಬ್ಲಿಕ್ ಪತ್ರಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಮತ್ತು ಇವರು ಅಖಿಲ ಸಾಹಿತ್ಯ ಶರಣ ಸಾಹಿತ್ಯ ಪರಿಷತ್ತು ಹಾಗೂ ಧರಿನಾಡು ಕನ್ನಡ ಸಂಘದ ಕಾರ್ಯದರ್ಶಿಯಾಗಿ, ಚುಟುಕು ಸಾಹಿತ್ಯ ಪರಿಷತ್ತು ಹಾಗೂ ಕರ್ನಾಟಕ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಲ್ಯಾಣ ಕರ್ನಾಟಕ ವಿಭಾಗಿಯ ಕಾರ್ಯಾಧ್ಯಕ್ಷರಾಗಿ, ಸೇವೆ ಸಲ್ಲಿಸಿದ್ದಾರೆ. ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಮೂರು ಸಲ ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನಗಳನ್ನು ಯಶಸ್ವಿಯಾಗಿ ನಡೆಸಿದ್ದಾರೆ. ಇವರಿಗೆ ಬೆಂಗಳೂರಿನ ಕರ್ನಾಟಕ ಸಾಂಸ್ಕೃತಿಕ ಅಕಾಡೆಮಿ ವತಿಯಿಂದ ಪ್ರಶಸ್ತಿ ನೀಡಿ ಗೌರವಿಸಿದೆ. ಮತ್ತು ವಿವಿಧ ಕನ್ನಡ ಪರ ಸಂಘ ಸಂಸ್ಥೆಯವರು ಸೇವಾ ರತ್ನ ಪ್ರಶಸ್ತಿ, ಕಲ್ಯಾಣ ಕರ್ನಾಟಕ ಆರೂಢ ಪ್ರಶಸ್ತಿ, ಚುಟುಕು ಮಂದಾರ ರತ್ನ ಪ್ರಶಸ್ತಿ, ಚುಟುಕು ಚಂದ್ರಿಕೆ ಪ್ರಶಸ್ತಿ, ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.
ಡಾ. ಐಶ್ವರಿ ಶಂಭುಶಂಕರ
ಉದಯೋನ್ಮುಖ ಲೇಖಕಿ ಡಾ. ಐಶ್ವರಿ ಶಂಭುಶಂಕರ. ರವರು ಹುಮನಾಬಾದಿನ ರಾಮಚಂದ್ರಪ್ಪ ವೀರಪ್ಪನವರ ಓಣಿಯ ಶಿವರಾಯ ಮತ್ತು ತುಳಸಮ್ಮರ ದಂಪತಿಗಳಿಗೆ ದಿನಾಂಕ ೧೫-೧-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ಹುಮನಾಬಾದಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ಲೇಖನ ಮೊದಲಾದ ಬರಹಗಳು ಬರೆದಿದ್ದು,ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಾಗೂ ರಾಜ್ಯ, ರಾಷ್ಟ್ರ ಮಟ್ಟದ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. `ಹೈದ್ರಾಬಾದ ಕರ್ನಾಟಕ ಪ್ರಕಟಿತ ಮಹಿಳಾ ಸಂಶೋಧನೆ, ಬೀದರ ಜಿಲ್ಲೆಯ ದಲಿತ ತತ್ವಪದಕಾರರು, ಹಾಗೂ `ತತ್ವ ಪದ ಸಾಹಿತ್ಯ' ಕುರಿತ ಇವರ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. .
ವಿಜಯಕುಮಾರ ಚಟ್ಟಿ
ಹವ್ಯಾಸಿ ಬರಹಗಾರ ವಿಜಯಕುಮಾರ ಚಟ್ಟಿ ಯವರು `ವಿಚಂಚೆ’ ಎಂಬ ಕಾವ್ಯನಾಮದಲ್ಲಿ ಕವಿತೆ ಬರೆಯುತ್ತಿದ್ದಾರೆ. ಮತ್ತು `ಶ್ರೀವಿಜಯಾನಂದ’ ಎಂಬ ಅಂಕಿತನಾಮದಲ್ಲಿ ಆಧುನಿಕ ವಚನಗಳು ಬರೆದಿದ್ದಾರೆ. ಹುಮನಾಬಾದಿನ ಚಂದ್ರಶೇಖರ ಚಟ್ಟಿ ಮತ್ತು ಜಯಶ್ರೀ ದಂಪತಿಗಳಿಗೆ ದಿನಾಂಕ-೧೧-೭-೧೯೭೪ರಲ್ಲಿ ಜನಿಸಿದ್ದಾರೆ. ಬಿ.ಕಾಂ.ಪದವಿಧರರಾದ ಇವರು ಬೋಧಿವೃಕ್ಷ ಪದವಿ ಮಹಾವಿದ್ಯಾಲಯದಲ್ಲಿ ದ್ವಿತೀಯ ದರ್ಜೆ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಹನಿಗವನ ಲೇಖನಗಳನ್ನು ಬರೆದಿದ್ದಾರೆ. ಅವು ಕರ್ಮವೀರ, ಸಂಯುಕ್ತ ಕರ್ನಾಟಕ, ವಿಜಯವಾಣಿ ಈ ಭಾನುವಾರ, ಜನಪದ ಮುಂತಾದ ಪತ್ರಿಕೆಯಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಪ್ರಭು ಬಿ ಮಾಲೆ
ಉದಯೋನ್ಮುಖ ಕವಿ, ಕಲಾವಿದರಾದ ಪ್ರಭು ಬಿ.ಮಾಲೆ ರವರು ಹುಮನಾಬಾದ ತಾಲೂಕಿನ ಹುಡುಗಿ ಗ್ರಾಮದ ಬಂಡೆಪ್ಪಾ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ವೃತ್ತಿಪರ ಕಲಾವಿದರಾಗಿದ್ದಾರೆ. ಸಾಹಿತ್ಯದಲ್ಲಿಯು ಆಸಕ್ತರಾಗಿ ಕವನ, ಹಾಡು, ವಚನ, ಪದ್ಯಗಳನ್ನು ರಚನೆ ಮಾಡಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಇವರು ಕೆಲ ವರ್ಷ ಸಾಕ್ಷರತಾ ಸಂಯೋಜಕರಾಗಿ, ನವಚೇತನ ಕಲಾ ತಂಡದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿ ಸರ್ಕಾರಿ ಇಲಾಖೆಗಳ ವತಿಯಿಂದ ಜನಜಾಗೃತಿಗಾಗಿ ಬೀದಿ ನಾಟಕ, ಹಾಡು, ರೂಪಕಗಳನ್ನು ಪ್ರದರ್ಶನ ಮಾಡುತ್ತಾ ಬಂದಿದ್ದಾರೆ. ಆರೋಗ್ಯ, ಕೃಷಿ, ಶಿಕ್ಷಣ, ಸಾಕ್ಷರತೆ, ಚುನಾವಣೆ, ನೀರು ಮತ್ತು ನೈರ್ಮಲ್ಯ, ಬಾಲ್ಯ ವಿವಾಹ, ವರದಕ್ಷಿಣೆ, ಬಾಲ ಕಾರ್ಮಿಕ, ಜೀತ ಪದ್ಧತಿ, ಮೂಢನಂಬಿಕೆ ಮೊದಲಾದ ವಿಷಯಗಳ ಕುರಿತಾದ ಬೀದಿ ನಾಟಕಗಳನ್ನು ರಚಿಸಿ ಸ್ವತಃ ಪಾತ್ರವನ್ನು ಮಾಡಿದ್ದಾರೆ. `ಅಪ್ಪ ನನ್ನ ಹೊಡೆಯಬೇಡಪ್ಪ' ಎಂಬ ಶಿಕ್ಷಣ ಇಲಾಖೆಯಡಿ ಪ್ರದರ್ಶಿಸಿದ ಬೀದಿ ನಾಟಕ ಸೇರಿದಂತೆ ಮೊದಲಾದ ಕವನ, ಲೇಖನ, ಬರಹಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.
ಸದಾಶಿವಯ್ಯಾ ಎಸ್. ಹಿರೇಮಠ
ಹವ್ಯಾಸಿ ಬರಹಗಾರ ಸದಾಶಿವಯ್ಯಾ ಎಸ್.ಹಿರೇಮಠ ರವರು ಹುಮನಾಬಾದ ತಾಲೂಕಿನ ಕಠಳ್ಳಿ ಗ್ರಾಮದ ಸೋಮಶೇಖರಯ್ಯಾ ಮತ್ತು ಶಕುಂತಲಾಬಾಯಿ ದಂಪತಿಗಳಿಗೆ ದಿನಾಂಕ ೪-೧೧-೧೯೭೧ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಪದವಿಧರರಾದ ಇವರು ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಕೆಲಕಾಲ ಸಿ.ಆರ್.ಪಿ.ಯಾಗಿ, ಡಿ.ಪಿ.ಇ.ಪಿ.ಜಿಲ್ಲಾ ಸಂಪನ್ಮೂಲ ವ್ಯಕ್ತಿಯಾಗಿ, ಸೇವೆ ಸಲ್ಲಿಸಿದ ಇವರು ಹಳ್ಳಿ ಖೇಡ (ಕೆ) ವಲಯ ಕಸಾಪ ಅಧ್ಯಕ್ಷರಾಗಿಯು ಸೇವೆ ಸಲ್ಲಿಸಿದ್ದಾರೆ. ಮತ್ತು ಸದ್ಯ ಶಿಕ್ಷಣ ಇಲಾಖೆಯ ಆರ್.ಪಿ.ಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡು ಕವನ , ಲೇಖನ, ಹನಿಗವನ, ಪ್ರಬಂಧ, ಮೊದಲಾದವು ರಚಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಪ್ರೊ.ಜೈರಾಜ ಚಿಕ್ಕ ಪಾಟೀಲ್
ದೃಶ್ಯ ಕಲಾವಿದ, ಚಿತ್ರಕಾರ, ಸಾಹಿತಿಯಾದ ಪ್ರೊ.ಜೈರಾಜ ಚಿಕ್ಕ ಪಾಟೀಲ್. ರವರು ಹುಮನಾಬಾದ ತಾಲೂಕಿನ ನಿಂಬೂರು ಗ್ರಾಮದ ಮಡಿವಾಳಪ್ಪ ಮತ್ತು ವಿಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೭-೧೯೭೦ರಲ್ಲಿ ಜನಿಸಿದ್ದಾರೆ. ದೃಶ್ಯ ಕಲಾ ವಿಷಯದಲ್ಲಿ ಎಂ.ಎಫ್.ಎ. ಮತ್ತು ಪಿ.ಎಚ್.ಡಿ ಪದವಿ ಪಡೆದ ಇವರು ದಾವಣಗೆರೆ ವಿಶ್ವವಿದ್ಯಾಲಯದಲ್ಲಿ ದೃಶ್ಯ ಕಲಾ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಚಿತ್ರಕಲೆಯೊಂದಿಗೆ ಕಾವ್ಯ ರಚನೆಯಲ್ಲೂ ಇವರದು ಎತ್ತಿದ ಕೈ ನಾಡಿನಾದ್ಯಂತ ಕವನ ಸ್ಪರ್ಧೆಯಲ್ಲಿ ಹಲವಾರು ಬಹುಮಾನ, ಪ್ರಶಸ್ತಿ ಪಡೆದ ಇವರು ಪ್ರತಿ ತಿಂಗಳು ರಾಜ್ಯ ಮಟ್ಟದ ಪ್ರಮುಖ ಪತ್ರಿಕೆಗಳಿಗೆ ಕವನ, ಹನಿಗವನಗಳು ಪ್ರಕಟಿಸಿ ಖ್ಯಾತಿ ಹೊಂದಿದ್ದಾರೆ. ತೊಂಬತ್ತರ ದಶಕದಲ್ಲಿಯೇ ಕಾವ್ಯ ರಚನೆಯಲ್ಲಿ ತೊಡಗಿಸಿಕೊಂಡು ನಾಡಿನಾದ್ಯಂತ ಹೆಸರು ಮಾಡಿದ ಬೀದರದ ಕೆಲವೇ ಕೆಲವು ಸಾಹಿತಿಗಳಲ್ಲಿ ಇವರ ಹೆಸರು ಎದ್ದು ತೋರುತ್ತದೆ. ಇವರ ಬರಹಗಳು ಕರ್ಮವೀರ, ತುಷಾರ, ತರಂಗ, ಮಯೂರ, ಸುಧಾ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಮತ್ತು ೧೯೯೧ರಲ್ಲಿ ಶ್ರೀ ಮಾಸ್ತಿ ವೆಂಕಟೇಶ ಅಯ್ಯಂಗಾರ್ `ಜನ್ಮ ಶತಾಬ್ದಿ' ಅಂಗವಾಗಿ ಪ್ರಕಟಿಸಿದ ರಾಜ್ಯ ಮಟ್ಟದ ಕವನ ಸಂಕಲನದಲ್ಲಿ ಇವರ `ಜೀವನದ ಅರ್ಥ, ಎಂಬ ಕವನ ಆಯ್ಕೆಯಾದರೆ ೧೯೯೬ರಲ್ಲಿ ಬೆಂಗಳೂರಿನಿAದ ಪ್ರಕಟವಾದ `ಎರಡು ಬಳ್ಳಿ, ಹೂ ಹಲವು, ಎಂಬ ಕವಿತೆ ಆಯ್ಕೆಯಾಗಿ ಪ್ರಕಟಾಗಿದೆ.ಮತ್ತು ೨೦೦೧ರಲ್ಲಿ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಜ್ಞಾನಸೂರ್ಯ ತರುಣ ಸಂಘ, ಏರ್ಪಡಿಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ `ಜಗಳ' ಎಂಬ ಕವಿತೆ ಆಯ್ಕೆಯಾಗಿ `ಜ್ಞಾನಸೂರ್ಯ' ಕವನಸಂಕಲನದಲ್ಲಿ ಪ್ರಕಟವಾಗಿದೆ. ಈ ಕೃತಿ ಮಚ್ಚೇಂದ್ರ ಪಿ ಅಣಕಲ್. ರವರು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ಕೆಲ ಕನ್ನಡಪರ ಸಂಘ ಸಂಸ್ಥೆಗಳ ವತಿಯಿಂದ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಕನ್ಯಾಕುಮಾರಿ
ಕವಯತ್ರಿಯಾದ ಕನ್ಯಾಕುಮಾರಿ ಯವರು. ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದ ಶಾಂತಪ್ಪಾ ದೇವರಾಯ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೨೨-೭-೧೯೬೯ರಲ್ಲಿ ಜನಿಸಿದ್ದಾರೆ. ಎಂ. ಎ ಸ್ನಾತಕೋತ್ತರ ಪದವಿಧರರಾಗಿ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ತಂದೆ ಶಾಂತಪ್ಪ ದೇವರಾಯ `ದೇಶಾಂಶ ಹುಡಗಿ' ಎಂಬ ಕಾವ್ಯನಾಮದಿಂದ ಸಾಹಿತ್ಯ ಕ್ಷೇತ್ರದಲ್ಲಿ ಉತ್ತಮ ಹೆಸರು ಮಾಡಿ ಖ್ಯಾತರಾಗಿದ್ದಾರೆ. ಅವರ ಮಗಳಾದ ಇವರು ಕತೆ, ಕವನ, ಚುಟುಕು, ಲೇಖನ, ಆಧುನಿಕ ವಚನ ಮೊದಲಾದ ಪ್ರಕಾರದಲ್ಲಿ ಸಾಹಿತ್ಯ ರಚನೆ ಮಾಡುತ್ತಿದ್ದಾರೆ. ಇವರ ಬರಹಗಳು ರಾಜ್ಯ ಮಟ್ಟದ ಕೆಲ ಪತ್ರಿಕೆ ಹಾಗೂ ಪ್ರಾತಿನಿಧೀಕ ಸಂಕಲನ ಮತ್ತು ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರು ಬೀದರ ಜಿಲ್ಲೆಯ ವಿವಿಧ ಸಾಹಿತ್ಯಕ ಸಭೆ ಸಮಾರಂಭದ ಕಾರ್ಯಕ್ರಮಗಳನ್ನು ನಡೆಸಿಕೊಟ್ಟು ಉತ್ತಮ ನಿರೂಪಕಿಯಾಗಿಯು ಗುರುತಿಸಿಕೊಂಡಿದ್ದಾರೆ.
ಸೂರ್ಯಕಲಾ ಎಸ್. ಹೊಡಮನಿ
ಕವಯತ್ರಿ ಸೂರ್ಯಕಲಾ ಎಸ್.ಹೊಡಮನಿ. ರವರು ಬೀದರ ಜಿಲ್ಲೆ ಕಮಲನಗರ ತಾಲೂಕಿನ ಚಾಂಡೆಶ್ವರಿ ಗ್ರಾಮದ ಶಿವಲಿಂಗಪ್ಪ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೨-೨-೧೯೬೬ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಎಡ್. ಎಂ.ಎ. ಪದವಿಧರರಾದ ಇವರು ೧೯೯೨ರಿಂದ ಹುಮನಾಬಾದ ತಾಲೂಕಿನ ಹಳ್ಳಿಖೇಡ್ (ಬಿ) ಗ್ರಾಮದ ಅನುದಾನಿತ ಭಾಯಿ ಬನ್ಸಿಲಾಲ್ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಾಲೇಜು ದಿನಗಳಿಂದಲೂ ಕನ್ನಡ ಸಾಹಿತ್ಯದಲ್ಲಿ ವಿಶೇಷ ಆಸಕ್ತಿಯನ್ನು ಹೊಂದಿದ ಇವರು ವಿವಾಹವಾದ ನಂತರ ತಮ್ಮ ಪತಿ ಎಸ್.ಎಸ್.ಹೊಡಮನಿಯವರ ಸಾಹಿತ್ಯಕ್ಕೆ ಮಾರುಹೋಗಿ ಕವಿತೆ ಬರೆಯಲು ಪ್ರಾರಂಭಿಸಿರುವುದು ಅವರ ಉತ್ತಮ ಸಾಹಿತ್ಯಿಕ ಬೆಳವಣಿಗೆಯಾಗಿದೆ. ಈ ಇಬ್ಬರು ಸತಿಪತಿಗಳು ಕೂಡಿಕೊಂಡು ಹಲವಾರು ಕವನಗಳು ರಚಿಸಿದ್ದು, ಅವು ಓದುಗರ ಮನಸೂರೆಗೊಳಿಸಿವೆ. ಇವರು `ಅಮ್ಮಾ' ಎಂಬ ಕವನ ಸಂಕಲನವನ್ನು ಬರೆದಿದ್ದು, ಅಲ್ಲದೆ ಇನ್ನೂ ಹಲವಾರು ಕವನ,ಲೇಖನ, ಜಾನಪದ ಸಂಪಾದಿತ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಮತ್ತು ಜನಪದ ಶೈಲಿಯಲ್ಲಿ ಕೆಲ ಕತೆಗಳು ಕೂಡ ಬರೆದಿದ್ದಾರೆ.
ಶಿವರಾಜ ಪಿ.ಕಿಣಗಿ
ಅಧ್ಯಾತ್ಮಿಕ ತಳಹದಿಯಲ್ಲಿ ಬರೆಯುತ್ತಿರುವ ಶಿವರಾಜ ಪಿ.ಕಿಣಗಿಯವರು ಹುಮನಾಬಾದ್ ತಾಲೂಕಿನ ಕಲ್ಲೂರು ಗ್ರಾಮದ ಪೀರಪ್ಪ ಮತ್ತು ಕಾಶಮ್ಮ ದಂಪತಿಗಳಿಗೆ ದಿನಾಂಕ ೧-೨-೧೯೫೮ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಹುಮನಾಬಾದಿನ ಶ್ರೀ ಬೀರಲಿಂಗೇಶ್ವರ ಪ.ಪಂ.ಪತ್ತಿನ ಸಹಕಾರ ಬ್ಯಾಂಕಿನಲ್ಲಿ ಕಾರ್ಯನಿರ್ವಾಹಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಂಗೀತದಲ್ಲಿ ಆಸಕ್ತರಾಗಿರುವುದರಿಂದ ಭಜನೆ ಪದಗಳನ್ನು ಹಾಡುತ್ತಾ ಬೆಳೆದವರು. ಬರು ಬರುತ್ತಾ ಭಜನೆ ಹಾಡುಗಳನ್ನು ಬರೆಯಲು ಸುರುಮಾಡಿ ತಮ್ಮದೆ ರಾಗ ಧಾಟಿಯಲ್ಲಿ ಹಾಡಿ ಅನೇಕ ವೈಚಾರಿಕ ಲೇಖನಗಳು ಬರೆದಿದ್ದಾರೆ. `ಕೇಳಿಸುತ್ತಿದೆಯೇ ಧರ್ಮದ ಹೂಂಕಾರ', `ಗುರುವಿನ ಗುರುತು', `ಯುವಕರಿಗೆ ಕರೆ', `ಜಾತಿ ವ್ಯವಸ್ಥೆ ಒಂದು ಸಮಸ್ಯೆಯೇ?', `ದೇವರಾಗುವ ದಾರಿ', `ನಾನು ಯಾರು?', `ಪ್ರೇಮವೇ ಪರಮೇಶ್ವರ', `ಭಜನೆ ಪದಗಳು' ಎಂಬ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ.
ಚ.ರಾ.ವಡ್ಡನಕೇರಿ
ಹವ್ಯಾಸಿ ಬರಹಗಾರರಾದ ಚ.ರಾ.ವಡ್ಡನಕೇರಿಯವರ ಪೂರ್ಣನಾಮ `ಚನ್ನಬಸವ ರಾಚಪ್ಪ ವಡ್ಡನಕೇರಿ' ಎಂದಾಗಿದೆ. ಇವರು ಹುಮನಾಬಾದ ತಾಲೂಕಿನ ಮೋಳಕೇರಿ ಗ್ರಾಮದಲ್ಲಿ ದಿನಾಂಕ ೨೩-೮-೧೯೫೪ರಲ್ಲಿ ಜನಿಸಿದ್ದಾರೆ. ಮತ್ತು ಬೀದರ ಪ್ರಧಾನ ಅಂಚೆ ಕಚೇರಿಯಲ್ಲಿ ಗ್ರಾಹಕ ಸೌಲಭ್ಯ ವ್ಯವಸ್ಥಾಪಕರಾಗಿ ಕಾರ್ಯನಿರ್ವಹಿಸಿ ಸದ್ಯ ನಿವೃತ್ತರಾಗಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಅನೇಕ ಕವನ, ಲೇಖನ ಆಧುನಿಕ ವಚನಗಳು ಬರೆದಿದ್ದು, ಅವು ಕೆಲವು ಕಡೆ ಪ್ರಕಟವಾಗಿವೆ.
ಗದಗ ಪುಂಡಲೀಕರಾವ
ಹವ್ಯಾಸಿ ಬರಹಗಾರರಾದ ಗದಗ ಪುಂಡಲೀಕರಾವರವರು ಹುಮನಾಬಾದ ತಾಲೂಕಿನ ಅಲ್ಲೂರ್ ಗ್ರಾಮದ ಮರಿಯಪ್ಪ ಮತ್ತು ಮರಿಯಮ್ಮ ದಂಪತಿಗಳಿಗೆ ದಿನಾಂಕ ೪-೩-೧೯೫೧ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ಪ್ರೌಢ ಶಾಲಾ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೧೧ರಲ್ಲಿ ನಿವೃತ್ತರಾಗಿದ್ದಾರೆ. ಕವನ, ಲೇಖನ, ಹಾಡುಗಳನ್ನು ರಚಿಸಿರುವ ಇವರ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರದ ರಾಂಪೂರೆ ಕಾಲೋನಿಯಲ್ಲಿ ವಾಸವಾಗಿದ್ದಾರೆ.
ದಿ.ಕೃಷ್ಣ ಮೂರ್ತಿ ಶಾಸ್ತ್ರಿ
ಕವಿ ಸಾಹಿತಿಯಾದ ದಿ.ಕೃಷ್ಣ ಮೂರ್ತಿ ಶಾಸ್ತ್ರೀಯವರು ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಕಲ್ಲಪ್ಪ ಮತ್ತು ರುದ್ರಮ್ಮ ದಂಪತಿಗಳಿಗೆ ದಿನಾಂಕ ೫-೭-೧೯೩೭ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್. ಬಿ.ಎ. ಬಿ.ಇ.ಡಿ ಪದವಿಧರರಾದ ಇವರು ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಹಾಡು, ತತ್ವಪದ, ಜಾನಪದ, ಮೊದಲಾದವು ರಚಿಸಿದ್ದು, ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ದಿನಾಂಕ ೧೯-೭-೧೯೮೧ರಲ್ಲಿ ನಿಧನರಾಗಿದ್ದಾರೆ.
ದಿ.ತುಕಾರಾಮ ಅಲ್ಲೂರ
ಕಾವ್ಯ, ತತ್ವಪದ, ಮೊಹರಮ್ ಪದಗಳು ರಚನೆ ಮಾಡಿರುವ ಸಾಹಿತಿ ದಿ.ತುಕಾರಾಮ ಅಲ್ಲೂರ್. ಇವರು ಹುಮನಾಬಾದ ತಾಲೂಕಿನ ಅಲ್ಲೂರ್ ಗ್ರಾಮದ ಸಾಯಬಣ್ಣಾ ಮತ್ತು ರೇವಮ್ಮಾ ದಂಪತಿಗಳಿಗೆ ೧೯೩೫ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಆಂಧ್ರಪ್ರದೇಶದ ಪಂಚಾಯತ ರಾಜ್ ಇಲಾಖೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತರಾಗಿ ೧೯೯೦ರಲ್ಲಿ ನಿಧನರಾಗಿದ್ದಾರೆ. ಕನ್ನಡ ಮತ್ತು ತೆಲುಗು ಭಾಷೆಗಳೆರಡರಲ್ಲೂ ಪಾಂಡಿತ್ಯ ಹೊಂದಿದ ಇವರು ಕನ್ನಡದಲ್ಲಿ ತತ್ವಪದ, ಭಜನೆ ಪದ, ಜಾನಪದ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಜ್ಞಾನೇಶ್ವರಿ ಹಳ್ಳಿಖೇಡ
ಯುವ ಕವಯತ್ರಿಯಾದ ಜ್ಞಾನೇಶ್ವರಿ ಹಳ್ಳಿಖೇಡ್ ರವರು ಚಿಟಗುಪ್ಪ ತಾಲೂಕಿನ ಮನ್ನಾಐಖೇಳಿ ಗ್ರಾಮದ ಮಾಣಿಕಪ್ಪ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೧೫-೮-೧೯೯೮ರಲ್ಲಿ ಜನಿಸಿದ್ದಾರೆ. ಬಿ.ಎ. ಎಂ.ಎಸ್ .ಪದವಿ ವಿದ್ಯಾರ್ಥಿನಿಯಾದ ಇವರು ಶಿವಮೊಗ್ಗದ ಬಾಪೂಜಿ ಆಯುರ್ವೇದಿಕ್ ಮೆಡಿಕಲ್ ಕಾಲೇಜಿನ ಅಂತಿಮ ವರ್ಷದ ವಿದ್ಯಾರ್ಥಿನಿಯಾಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕಾಲೇಜು ಸೇರಿದ ನಂತರ ಕತೆ, ಕವನ,ಲೇಖನ, ಹನಿಗವನ ರಚನೆಯಲ್ಲಿ ತೊಡಗಿ ವೈದ್ಯ ಸಾಹಿತ್ಯಕ್ಕೆ ಸಂಬAಧಿಸಿದ ಶಾರೀರಿಕ ಸಮಸ್ಯೆ ಮತ್ತು ಆಹಾರ ಪದ್ದತಿಯ ಕುರಿತಾದ ಲೇಖನಗಳು ಮತ್ತು ಸಾಮಾಜಿಕ ಶೋಷಣೆಯ ವಿರುದ್ಧದ ಕವಿತೆಗಳು ಬರೆಯುತ್ತಿದ್ದಾರೆ. ಮತ್ತು `ಭಾವದಲೆ' ಎಂಬ ಕವನ ಸಂಕಲನವೊAದು ಬರೆದಿದ್ದು ಅದು ಅಪ್ರಕಟಿತವಾಗಿದೆ. ಇವರ ಬರಹಗಳು ಶಿವಮೊಗ್ಗದ `ನಿಮಗಾಗಿ ಆಯುರ್ವೇದ' ಎಂಬ ಮಾಸ ಪತ್ರಿಕೆಯಲ್ಲಿ ಪ್ರಕಟವಾಗಿವೆ. ಇವರು ಹಲವಾರು ವಿವಿಧ ಕವಿಗೋಷ್ಠಿಯಲ್ಲಿ ಕವನ ವಾಚನ ಮಾಡಿದ್ದಾರೆ.
ಶಾಂತಯ್ಯ ಪುರಾಣಿಕ.
ಯುವ ಸಾಹಿತಿ ಶಾಂತಯ್ಯ ಪುರಾಣಿಕ ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಮೀನಕೇರಾ ಗ್ರಾಮದ ರೇವಣಸಿದ್ದಯ್ಯಾ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೨೫-೫-೧೯೮೯ರಲ್ಲಿ ಜನಿಸಿದ್ದಾರೆ. ಎಂ.ಎ.(ಇAಗ್ಲೀಷ) ಸ್ನಾತಕೊತ್ತರ ಪದವಿಧರರಾದ ಇವರು ಶಿಕ್ಷಕ ವೃತ್ತಿಯಲ್ಲಿದ್ದು, ಕೆಲ ಕಾಲ ಕನ್ನಡ ಪ್ರಭ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದಲ್ಲಿಯು ತುಂಬ ಆಸಕ್ತರಾದ ಇವರು ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ಕವನ ಸಂಕಲನವೊAದು ಪ್ರಕಟಣೆಯ ಹಂತದಲ್ಲಿವೆ.
ಸಂಗಮೇಶ ಎನ್.ಜವಾದಿ
ಹವ್ಯಾಸಿ ಬರಹಗಾರ ಸಂಗಮೇಶ ಎನ್.ಜವಾದಿ. ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ನಾಗಶೆಟ್ಟಿ ಹಾಗೂ ಸರಸ್ವತಿ ದಂಪತಿಗಳಿಗೆ ದಿನಾಂಕ ೨-೮-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಎಂ.ಎಸ್ಸಿ. ಎಚ್.ಆರ್.ಎಂ.ಕAಪ್ಯೂಟರ್ ಅಪ್ಲಿಕೇಶನ್ ಡಿಪ್ಲೊಮಾ ಆಗ್ರಿ ಪದವಿಧರರಾದ ಇವರು ಕೃಷಿ ಮತ್ತು ಸಮಾಜ ಸೇವಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ, ಕವನ ಲೇಖನಗಳನ್ನು ಬರೆಯುತ್ತಿದ್ದಾರೆ. ಮತ್ತು ಹಲವಾರು ಸಂಘ ಸಂಸ್ಥೆಗಳ ಅಧ್ಯಕ್ಷರಾಗಿ, ಪದಾಧಿಕಾರಿಯಾಗಿ, ಸೇವೆ ಸಲ್ಲಿಸಿದ್ದು, ನೂರಾರು ಲೇಖನ ಬರಹಗಳನ್ನು ಬರೆದಿದ್ದು, ಅವು ನಾಡಿನ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಚಿಟಗುಪ್ಪ ತಾಲೂಕಿನ ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಬೀದರ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ, ಹಾಗೂ ಜಿಲ್ಲೆಯ ರಾಷ್ಟ್ರೀಯ ದೇಹಾಂಗದಾನ ಜಾಗೃತಿ ಅಭಿಯಾನ ಸಮಿತಿಯ ಅಧ್ಯಕ್ಷರಾಗಿಯು ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದ ಲೇಖನಗಳ ಪುಸ್ತಕವು ಸದ್ಯದಲ್ಲಿಯೆ ಪ್ರಕಟಿಸಲಿದ್ದಾರೆ. ಇವರಿಗೆ ರಾಜ್ಯ ಮಟ್ಟದ ವಿವಿಧ ೨೩ಕ್ಕೂ ಹೆಚ್ಚು ಪ್ರಶಸ್ತಿಗಳು ಹಾಗೂ ೮೦ಕ್ಕೂ ಹೆಚ್ಚು ಬಹುಮಾನಗಳು ಲಭಿಸಿವೆ.
ಪ್ರಶಾಂತ ಹೊಸಮನಿ.
ಪತ್ರಕರ್ತ ಹಾಗೂ ಯುವ ಬರಹಗಾರರಾದ ಪ್ರಶಾಂತ ಹೊಸಮನಿ ಯವರು ಬೀದರ ಜಿಲ್ಲೆ ಚಿಟಗುಪ್ಪಾ ತಾಲೂಕಿನ ಬೋರಾಳ ಗ್ರಾಮದ ಮಾರುತಿರಾವ ಮತ್ತು ಸುಂದ್ರಮ್ಮ ದಂಪತಿಗಳಿಗೆ ದಿನಾಂಕ ೫-೬-೧೯೮೦ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ೨೦೦೨ರಿಂದ ಪತ್ರಕರ್ತರಾಗಿ ವಚನಕ್ರಾಂತಿ, ಬೀದರ ಕ್ರಾಂತಿ, ಸಂಜೆವಾಣಿ, ಜನದನಿ, ವಿಶ್ವವಾಣಿ, ಪ್ರಜಾವಾಣಿ, ಕರ್ನಾಟಕ ಸಂದ್ಯಾ ಕಾಲ ಪತ್ರಿಕೆಗಳ ವರದಿಗಾರರಾಗಿ, ಕಾರ್ಯನಿರತ ಪತ್ರಕರ್ತರ ಸಂಘದ ಕೋಶಾಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಅನೇಕ ಕವನ, ಲೇಖನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಓಂಕಾರ ಎನ್. ಮಠಪತಿ
ಯುವ ಬರಹಗಾರ, ಪತ್ರಕರ್ತರಾದ ಓಂಕಾರ ಮಠಪತಿಯವರು. ಚಿಟಗುಪ್ಪ ತಾಲ್ಲೂಕಿನ ನಿರ್ಣಾ ಗ್ರಾಮದ ವೇದಮೂರ್ತಿ ನಾಗಯ್ಯ ಸ್ವಾಮಿ ಮಠಪತಿ ಮತ್ತು ಸಂಗಮ್ಮ ನಾಗಯ್ಯ ಸ್ವಾಮಿ ಮಠಪತಿ ದಂಪತಿಗಳಿಗೆ ದಿನಾಂಕ ೨೫-.೬-೧೯೭೬ರಲ್ಲಿ ಜನಿಸಿದ್ದಾರೆ. ಡಿ.ಫಾರ್ಮಸಿ, ಎಂ.ಎ ಪತ್ರಿಕೋದ್ಯಮ ಪದವಿಧರರಾದ ಇವರು ಕೆಲ ವರ್ಷ ಸಂಯುಕ್ತ ಕರ್ನಾಟಕ, ಸಂಜೆವಾಣಿ, ಪತ್ರಿಕೆಯ ವರದಿಗಾರರಾಗಿ, ನಂತರ ಸುವರ್ಣ, ಸಮಯ ಚಾನಲ್ಗಳ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿ ಸದ್ಯ ಬಿ.ಟಿವಿಯ ಜಿಲ್ಲಾ ಹಿರಿಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ ಲೇಖನ ಇತ್ಯಾದಿ ಬರಹಗಳು ಬರೆದಿದ್ದು ಅವು ರಾಜ್ಯದ ವಿವಿಧ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರ ಸಾಹಿತ್ಯ ಮತ್ತು ಪತ್ರಿಕಾ ರಂಗದ ಸೇವೆಯನ್ನು ಕಂಡು ರಾಜ್ಯದಾದ್ಯಂತ ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ತೀರ ಸರಳ ಸ್ವಭಾವದ ವ್ಯಕ್ತಿತ್ವ ಹೊಂದಿರುವ ಇವರು ಸುದ್ದಿ ವಿಷಯದಲ್ಲಿ ಎಂದೂ ರಾಜಿಮಾಡಿಕೊಂಡಿಲ್ಲ ಎಂಬುದು ಮೆಚ್ಚುವಂತಹದ್ದು. ಯಾವುದೇ ವಿಷಯ ಇದ್ದರೂ ತೀರ ಹರಿತವಾಗಿ ಬರೆದು ಬಿತ್ತರಿಸುತ್ತಿರುವುದು ರಾಜ್ಯದ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಇವರು ಬರೆದ ಬರಹಗಳು ಪುಸ್ತಕ ರೂಪದಲ್ಲಿ ಹೊರತರುವ ನಿಟ್ಟಿನಲ್ಲಿದ್ದಾರೆ.
ರಮೇಶ ಸಲಗರ
ಉದಯೋನ್ಮುಖ ಬರಹಗಾರ ರಮೇಶ ಸಲಗರ ರವರು ಚಿಟಗುಪ್ಪ ತಾಲೂಕಿನ ಕೊಡಂಬಲ ಗ್ರಾಮದ ಚಂದ್ರಶೆಟ್ಟಿ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧೫-೧೧-೧೯೬೮ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾಗಿರುವ ಇವರು ಮುಸ್ತರಿಯಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮತ್ತು ಕತೆ ಕವನ ಲೇಖನ ಚುಟುಕು ರೂಪಕಗಳನ್ನು ಬರೆದಿದ್ದಾರೆ. `ಶರಣ ಸಂಸ್ಕೃತಿ' ಮತ್ತು `ಕಂದಾಚಾರ' ಎಂಬ ರೂಪಕಗಳನ್ನು ಬರೆದು ನಿರ್ದೇಶಕರಾಗಿ ಬಸವಕಲ್ಯಾಣ ಅನುಭವ ಮಂಟಪದ ಶರಣ ಕಮ್ಮಟದಲ್ಲಿ ಹಾಗೂ ಕೊಡಂಬಲ ಮೊದಲಾದ ಹಳ್ಳಿಗಳಲ್ಲಿ ಪ್ರದರ್ಶಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಆಕಾಶವಾಣಿಯಲ್ಲಿ ಪ್ರಕಟ ಪ್ರಸಾರವಾಗಿವೆ. ಇವರಿಗೆ `ಜನ ಮೆಚ್ಚಿದ ಶಿಕ್ಷಕ', `ಶಿಕ್ಷಕ ರತ್ನ', `ಶಿಕ್ಷಣ ಸಿರಿ' `ಆದರ್ಶ ಶಿಕ್ಷಕ ' ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಇವರು ಚಿಟಗುಪ್ಪ ತಾಲೂಕು ಜಾನಪದ ಪರಿಷತ್ತಿನ ಅಧ್ಯಕ್ಷರಾಗಿ, ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಡಾ.ಎಸ್.ಎಲ್.ದಂಡಿನ್
ಹವ್ಯಾಸಿ ಬರಹಗಾರ ಡಾ.ಎಸ್.ಎಲ್.ದಂಡಿನ್ ರವರು ಚಿಟಗುಪ್ಪ ತಾಲೂಕಿನ ಮನ್ನಾಐಖೇಳಿ ಗ್ರಾಮದ ಲಕ್ಷ್ಮಣ ಮತ್ತು ಸಮವ್ವ ದಂಪತಿಗಳಿಗೆ ದಿನಾಂಕ ೧-೬-೧೯೫೫ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ನಾಟಿ ವೈದ್ಯರಾಗಿ, ಸಮಾಜ ಸೇವಕರಾಗಿ ದುಡಿದಿದ್ದಾರೆ. ಮತ್ತು ೧೯೭೭ರಿಂದ ೧೯೮೧ರ ವರೆಗೆ ಪರಿಶಿಷ್ಟ ಜಾತಿ ಮತ್ತು ಪಂಗಡದ ಸಮನ್ವಯ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ದಲಿತಪರ ಕವನ, ಲೇಖನ, ಚುಟುಕು ಮತ್ತು ಬೀದಿ ನಾಟಕಗಳನ್ನು ರಚಿಸಿದ್ದಾರೆ. ನರಗುಂದದ ಬಂಡಾಯದ ವೇಳೆ ಕೆಲ ನಾಟಕಗಳು ಪ್ರದರ್ಶನ ಮಾಡಿದ್ದಾರೆ.
ವೀರಭದ್ರಪ್ಪ ಉಪ್ಪಿನ
ಕವಿ, ಕಲಾವಿದ, ನಾಟಕಕಾರಾದ ವೀರಭದ್ರಪ್ಪ ಉಪ್ಪಿನ ರವರು ಬೀದರ ಜಿಲ್ಲೆ ಚಿಟಗುಪ್ಪ ತಾಲೂಕಿನ ಶರಣಪ್ಪ ಮತ್ತು ಸರಸ್ವತಿಬಾಯಿ ದಂಪತಿಗಳಿಗೆ ದಿನಾಂಕ ೫-೯-೧೯೫೬ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಬೀದರದ ಕರ್ನಾಟಕ ಕಾಲೇಜಿನಲ್ಲಿ ಅರೆಕಾಲಿಕ ಉಪನ್ಯಾಸಕರಾಗಿ, ಕಛೇರಿಯ ಅಧಿಕ್ಷಕರಾಗಿ, ಮತ್ತು ಕರ್ನಾಟಕ ಪಶುವೈದ್ಯಕೀಯ ವಿಶ್ವವಿದ್ಯಾಲಯದ ಉಪಹಣಕಾಸು ನಿಯಂತ್ರಣಾಧಿಕಾರಿಯಾಗಿ ಸೇವೆ ಸಲ್ಲಿಸಿ ೨೦೧೬ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಕಲೆ, ಸಾಹಿತ್ಯ ಮತ್ತು ಸಂಗೀತದಲ್ಲಿ ಆಸಕ್ತರಾಗಿ ಬೆಳೆದಂತೆ ಪದ್ಯಗಳನ್ನು ಬರೆದು ರಾಗಬದ್ದವಾಗಿ ಹಾಡುವುದು ಹಾಗೂ ಭಾಷಣ, ಲೇಖನ ಪ್ರಬಂಧಗಳನ್ನು ಬರೆದು ಕವಿ, ಲೇಖಕರಾಗಿ ಗುರುತಿಸಿಕೊಂಡಿದ್ದಾರೆ. ಮತ್ತು ೨೦೨೦ ರಲ್ಲಿ ಕೋರಾನ ಮಹಾಮಾರಿಯ ಕನ್ನಡ ಪ್ರಮುಖ ಪತ್ರಿಕೆಗಳಾದ ಪ್ರಜಾವಾಣಿ,ವಿಜಯಕರ್ನಾಕ,ವಿಜಯವಾಣಿ,ಕನ್ನಡ ಪ್ರಭ,ಉದಯವಾಣಿ ಪತ್ರಿಕಾ ವರದಿಗಳನ್ನು ಸಂಗ್ರಹಿಸಿ `ಕರೋನಾ ಯಮರ್ಜೆನ್ಸಿ ಕೋವಿಡ್-೧೯’ ಎಂಬ ಪುಸ್ತಕ ಪ್ರಕಟಿಸಿದ್ದಾರೆ. ೧೯೯೦ರಿಂದ ನಾಡಿನ ಹಲವಾರು ಪತ್ರಿಕೆಗಳಿಗೆ ಲೇಖನಗಳು ಬರೆದಿದ್ದಾರೆ. ಮತ್ತು ಕಲಬುರಗಿ ಆಕಾಶವಾಣಿಯಿಂದ ಇವರ ಚಿಂತನ, ವೈಚಾರಿಕ ಭಾಷಣ ಬರಹಗಳು ಕೂಡ ಪ್ರಸಾರಗೊಂಡಿವೆ. ಮತ್ತು `ಸಿಂಹಾಸನ ಖಾಲಿ ಇದೆ, ಜಲ, ಯಮನ ದರ್ಬಾರ್' ಎಂಬ ನಾಟಕಗಳಲ್ಲಿಯು ನಟಿಸಿದ್ದಾರೆ. ಅಷ್ಟೇಯಲ್ಲದೆ ೧೯೮೯ ಮತ್ತು ೧೯೯೨ರಲ್ಲಿ ಬೀದರದ ರಂಗ ಮಂದಿರದಲ್ಲಿ ಸುಪ್ರಸಿದ್ಧ ಹಿನ್ನೆಲೆ ಗಾಯಕಿ ಉಷಾ ಮಂಗೇಶ್ಕರ್ ರವರಿಂದ ರಸಮಂಜರಿ ಕಾರ್ಯಕ್ರಮವು ಆಯೋಜಿಸಿದ್ದರು.
ಸಿದ್ರಾಮ ಪಂಡಿತಜಿ
ನಿಜಾಮನ ವಿರುದ್ಧ ಬಂಡಾಯದ ಗೀತೆ ಹಾಡಿದ ಕವಿಯೆಂದರೆ ಸಿದ್ರಾಮ ಪಂಡಿತಜಿ. ಇವರು ಬೀದರ ಜಿಲ್ಲೆ ಚಿಟಗುಪ್ಪಿಯ ಲಾಲಪ್ಪ ಮತ್ತು ರುದ್ರಮ್ಮ ದಂಪತಿಗಳಿಗೆ ೧೯೧೦ರಲ್ಲಿ ಜನಿಸಿದ್ದಾರೆ. ಮೋಡಿ, ಬಾಲಬೇಧ ಮತ್ತು ಹಿಂದಿ ಭಾಷೆ ಅರಿತುಕೊಂಡಿದ್ದರೆAದು ಮತ್ತು ಹಾರ್ಮೋನಿಯಂ ವಾದಕರಾಗಿದ್ದರೆಂದು ತಿಳಿದುಬಂದಿದೆ. ಇವರ ವಿದ್ಯಾರ್ಹತೆ ,ವೃತ್ತಿ, ತಿಳಿದು ಬಂದಿರುವುದಿಲ್ಲ. ಇವರು ನಿಜಾಮರ ವಿರುದ್ಧದ ದಂಗೆಯಲ್ಲಿಯು ಭಾಗವಹಿಸಿದ ಬಂಡಾಯ ಕವಿ ಹೋರಾಟಗಾರರಾಗಿದ್ದು ಇವರ ನಿಧನದ ಬಗ್ಗೆಯೂ ಸ್ಪಷ್ಟ ಪುರಾವೆಗಳು ಲಭ್ಯವಾಗಿಲ್ಲ.
ದೇವಿಂದ್ರ ವೀ. ಬರಗಾಲೆ
ಯುವ ಬರಹಗಾರ ದೇವಿಂದ್ರ ವೀ.ಬರಗಾಲೆ ಯವರು ಹುಲಸೂರು ತಾಲೂಕಿನ ಬೇಲೂರು ಗ್ರಾಮದ ವೀರಣ್ಣ ಮತ್ತು ಚೆನ್ನಮ್ಮ ದಂಪತಿಗಳಿಗೆ ದಿನಾಂಕ ೪-೭-೧೯೮೦ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ ಪದವಿಧರರಾದ ಇವರು ೨೦೦೬ರಲ್ಲಿ ಬಸವಕಲ್ಯಾಣ ತಾಲೂಕಿನ ನಾರಾಯಣಪುರ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆಗೆ ಸೇರಿ, ನಂತರ ೨೦೨೦ರಿಂದ ಕಲಬುರಗಿಯ ಸರ್ಕಾರಿ ಶಿಕ್ಷಕರ ಶಿಕ್ಷಣ ಮಹಾವಿದ್ಯಾಲಯದಲ್ಲಿ ಲೆಕ್ಕ ಅಧಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕತೆ, ಕವನ, ಲೇಖನ, ಹನಿಗವನ, ಆಧುನಿಕ ವಚನ ಮೊದಲಾದವು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಗುರ್ತಿಸಿ ಕೊಂಡಿದ್ದಾರೆ. ಇವರ ಬರಹಗಳು ತುಷಾರ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ೨೦೧೨ರಿಂದ ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ಸಂಸ್ಥಾಪಕ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ಇವರು ೫೦ಕ್ಕೂ ಹೆಚ್ಚು ಉಪನ್ಯಾಸ ಕಾರ್ಯಕ್ರಮಗಳು, ೨ ನಾಟಕ ಪ್ರದರ್ಶನ, ೨ ವಿಚಾರ ಸಂಕಿರಣಗಳನ್ನು ಏರ್ಪಡಿಸಿ ಸಾಹಿತ್ಯಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳು ಮಾಡುತ್ತಿದ್ದಾರೆ. ಮತ್ತು ಬಸವಕಲ್ಯಾಣ ತಾಲೂಕಿನ ಕರ್ನಾಟಕ ಜಾನಪದ ಪರಿಷತ್ತಿನ ಕಾರ್ಯದರ್ಶಿಯಾಗಿ, ಕಸಾಪದ ಗೌರವ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಕೀರ್ತಿಲತಾ ಹೊಸ್ಸಾಳೆ
ಉದಯೋನ್ಮಖ ಬರಹಗಾರ್ತಿಯಾದ ಕೀರ್ತಿಲತಾ ಹೊಸ್ಸಾಳೆ ಯವರು ಹುಲಸೂರ ತಾಲೂಕಿನ ಗಡಿಗೌಡಗಾಂವ ಗ್ರಾಮದ ಈರಣ್ಣಾ ಮತ್ತು ಸರಸ್ವತಿ ದಂಪತಿಗಳಿಗೆ ೧೫-೬-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್ ಪದವಿಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಸದ್ಯ ಬೀದರದ ಕುಂಬಾರವಾಡ ಕ್ಷೇತ್ರದ ಸಮೂಹ ಸಂಪನ್ಮೂಲ ವ್ಯಕ್ತಿಗಳಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡು ಕವಿತೆ, ಲೇಖನ, ಚುಟುಕು ಮೊದಲಾದ ಬರಹಗಳು ಬರೆದಿದ್ದಾರೆ. ಮತ್ತು ೨೦೦ಕಿಂತಲೂ ಹೆಚ್ಚು ಕವಿತೆಗಳು ಬರೆದು ಸಾಹಿತ್ಯ ಕ್ಷೇತ್ರದಲ್ಲಿ ಗುರುತಿಸಿಕೊಂಡಿರುವ ಇವರು ನಾಡಿನ ಹಲವಾರು ಕವಿಗೊಷ್ಠಿಗಳಲ್ಲಿ ಕವನ ವಾಚನೆಯು ಮಾಡಿದ್ದಾರೆ. ಅಷ್ಟೇಯಲ್ಲದೆ ಇವರ ಕವಿತೆಗಳಿಗೆ ವಿವಿಧ ಕಡೆಯಲ್ಲಿ ನಡೆಸಿದ ಕಾವ್ಯ ಸ್ಪರ್ಧೆಯಲ್ಲಿ ಬಹುಮಾನವು ಲಭಿಸಿವೆ. ೨೦೧೮ರಲ್ಲಿ ರಾಷ್ಟ್ರೀಯ ಕವಿ ಸಮ್ಮೇಳನದಲ್ಲಿ ಹಾಗೂ ಶಿಕ್ಷಣ ಇಲಾಖೆಯಲ್ಲಿ ಇವರಿಗೆ ಸತ್ಕರಿಸಲಾಗಿದೆ.
ಡಾ.ಭೀಮಾಶಂಕರ ಬಿರಾದಾರ
ಹವ್ಯಾಸಿ ಬರಹಗಾರ ಡಾ. ಭೀಮಾಶಂಕರ ಬಿರಾದಾರ ರವರು ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಧೂಳಪ್ಪಾ ಮತ್ತು ಸರಸ್ವತಿ ದಂಪತಿಗಳಿಗೆ ದಿನಾಂಕ ೧-೨-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಬಸವಕಲ್ಯಾಣದ ಖಾಸಗಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಸಾಮಾಜಿಕ ಕನ್ನಡ ಸಾಹಿತ್ಯ ವಿಮರ್ಶೆಯ ಗ್ರಹಿಕೆ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ, ಹನಿಗವನ, ಪ್ರಬಂಧ, ಸಂಶೋಧನೆ, ವಿಮರ್ಶೆ, ಮೊದಲಾದವು ಬರೆದಿದ್ದಾರೆ. ಮತ್ತು ಮಯೂರ, ವಿಜಯ ಕರ್ನಾಟಕ, ವಿಜಯವಾಣಿ, ಸಂಗತ, ನ್ಯಾಯಪಥ, ಅರಹು-ಕುರುಹು, ಏನ್ ಸುದ್ಧ, ಬುಕ್ ಬ್ರಹ್ಮ ಮೊದಲಾದ ಅಂತರಜಾಲ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೆ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿರುವ ಇವರು ಅನೇಕ ಕನ್ನಡಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳನ್ನು ನೀಡಿದ್ದಾರೆ. ಬಸವಕಲ್ಯಾಣದ ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ನಿರ್ದೇಶಕರಾಗಿ, ಬಸವಕಲ್ಯಾಣ ಕಸಾಪದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರೂಪಾ ಗಣೇಶ ಗುಡ್ಡಾ
ಕವಯತ್ರಿ ರೂಪ ಗಣೇಶ ಗುಡ್ಡಾ ರವರು ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಕಲ್ಲಪ್ಪ ಮತ್ತು ಶಾಂತಮ್ಮ ದಂಪತಿಗಳಿಗೆ ದಿನಾಂಕ ೧೦-೯-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಪದವಿಧರರಾದ ಇವರು ಬೀದರ ಜಿಲ್ಲೆಯಲ್ಲಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕನ್ನಡ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿಯು ಪ್ರಕಟ, ಪ್ರಸಾರವಾಗಿವೆ. ಅಷ್ಟೇಯಲ್ಲದೆ ಹಲವಾರು ಹೋಬಳಿ, ತಾಲೂಕು, ಜಿಲ್ಲಾ ಮಟ್ಟದ ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮತ್ತು ಉಪನ್ಯಾಸವು ನೀಡಿದ್ದಾರೆ. ಇವರಿಗೆ ಹಲವು ಕನ್ನಡ ಪರ ಸಂಘ ಸಂಸ್ಥೆಗಳಿAದ ಸಾಕಷ್ಟು ಸಲ ಸತ್ಕರಿಸಿ ಗೌರವಿಸಲಾಗಿದೆ.
ಡಾ.ಭೀಮಾಶಂಕರ ಬಿರಾದಾರ
ಹವ್ಯಾಸಿ ಬರಹಗಾರ ಡಾ. ಭೀಮಾಶಂಕರ ಬಿರಾದಾರ ರವರು ಹುಲಸೂರು ತಾಲೂಕಿನ ಗಡಿಗೌಡಗಾಂವ ಗ್ರಾಮದ ಧೂಳಪ್ಪಾ ಮತ್ತು ಸರಸ್ವತಿ ದಂಪತಿಗಳಿಗೆ ದಿನಾಂಕ ೧-೨-೧೯೭೯ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ ಪದವಿಧರರಾದ ಇವರು ಬಸವಕಲ್ಯಾಣದ ಖಾಸಗಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. `ಸಾಮಾಜಿಕ ಕನ್ನಡ ಸಾಹಿತ್ಯ ವಿಮರ್ಶೆಯ ಗ್ರಹಿಕೆ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ವಿದ್ಯಾರ್ಥಿದೆಸೆಯಿಂದಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ, ಹನಿಗವನ, ಪ್ರಬಂಧ, ಸಂಶೋಧನೆ, ವಿಮರ್ಶೆ, ಮೊದಲಾದವು ಬರೆದಿದ್ದಾರೆ. ಮತ್ತು ಮಯೂರ, ವಿಜಯ ಕರ್ನಾಟಕ, ವಿಜಯವಾಣಿ, ಸಂಗತ, ನ್ಯಾಯಪಥ, ಅರಹು-ಕುರುಹು, ಏನ್ ಸುದ್ಧ, ಬುಕ್ ಬ್ರಹ್ಮ ಮೊದಲಾದ ಅಂತರಜಾಲ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೆ ರಾಜ್ಯ ಮಟ್ಟದ ಸಾಹಿತ್ಯ ಸಮ್ಮೇಳನ, ವಿಚಾರ ಸಂಕಿರಣ ಮತ್ತು ಕಮ್ಮಟಗಳಲ್ಲಿ ಭಾಗವಹಿಸಿರುವ ಇವರು ಅನೇಕ ಕನ್ನಡಪರ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳನ್ನು ನೀಡಿದ್ದಾರೆ. ಬಸವಕಲ್ಯಾಣದ ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ನಿರ್ದೇಶಕರಾಗಿ, ಬಸವಕಲ್ಯಾಣ ಕಸಾಪದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಪುಷ್ಪಾವತಿ ಚಿಕುರ್ತೆ
ಉದಯೋನ್ಮಖ ಕವಯತ್ರಿ ಪುಷ್ಪಾವತಿ ಚಿಕುರ್ತೆ ಯವರು ಕಮಲನಗರ ತಾಲೂಕಿನ ಖತಗಾಂವ ಗ್ರಾಮದ ಘಾಳೇಪ್ಪಾ ಮತ್ತು ಶಾಂತಮ್ಮಾ ದಂಪತಿಗಳಿಗೆ ದಿನಾಂಕ ೨೦-೭-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪದವಿಧರರಾದ ಇವರು ಗೋರ್ಟಾ (ಬಿ) ಗ್ರಾಮದ ಅಶೋಕ ಚಿಕುರ್ತೆಯವರ ಧರ್ಮಪತ್ನಿಯಾಗಿದ್ದಾರೆ. ೧೯೯೪ರಲ್ಲಿ ಡೊಣಗಾಂವ(ಎ) ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ನಂತರ ಭಾಲ್ಕಿ ತಾಲೂಕಿನ ವರವಟ್ಟಿ(ಬಿ) ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಕವನ ಸಂಕಲನ, ಸ್ಮರಣೆ ಸಂಚಿಕೆ, ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. `ಜೀವನ ವಿಕಾಸದಲ್ಲಿ ಅನಕ್ಷರಸ್ಥರ ಗೋಳು' `ಅಕ್ಕರೆಯ ಅಕ್ಕ' `ಶಿವಾ-ರೇಖಾ' ಇವು ಅವರ ಪ್ರಮುಖ ಕವನಗಳಾಗಿವೆ. ಇವರಿಗೆ ೨೦೦೩ರಲ್ಲಿ ಜನ ಮೆಚ್ಚಿದ ಶಿಕ್ಷಕಿ ಪ್ರಶಸ್ತಿ, ಮತ್ತು ಉತ್ತಮ ಶಿಕ್ಷಕ ಪ್ರಶಸ್ತಿಗಳು ಲಭಿಸಿವೆ ಸದ್ಯ ಇವರು ಗೋರ್ಟಾ (ಬಿ) ಗ್ರಾಮದ ನಿವಾಸಿಯಾಗಿ ತಮ್ಮ ಶಿಕ್ಷಕ ವೃತ್ತಿಯೊಂದಿಗೆ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
ವೀರಶೇಟ್ಟಿ ವಿ. ಮಲ್ಲಶೇಟ್ಟಿ
ಹವ್ಯಾಸಿ ಬರಹಗಾರ ಹಾಗೂ ಪತ್ರಕರ್ತರಾದ ವೀರಶೆಟ್ಟಿ. ವಿ. ಮಲಶೆಟ್ಟಿ ರವರು ಹುಲಸೂರು ತಾಲೂಕಿನ ಬೇಲೂರು ಗ್ರಾಮದ ವೈಜಿನಾಥ ಮತ್ತು ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೧-೧೧-೧೯೬೬ರಲ್ಲಿ ಜನಿಸಿದ್ದಾರೆ. ಪಿ.ಯುಸಿ ವರೆಗೆ ಅಧ್ಯಯನ ಮಾಡಿದ ಇವರು ಕರ್ನಾಟಕ ಸಂಧ್ಯಕಾಲ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಲೇಖನ ಬರಹಗಳು ಬರೆಯುತ್ತಿರುವ ಇವರು ಕರ್ನಾಟಕ ಸಂಧ್ಯಕಾಲ. ಮಾಹಾಕಯಸ, ಕ್ರಾಂತಿ, ಭಾರತ ವೈಭವ, ಸೇರಿದಂತೆ ಮೊದಲಾದ ಪತ್ರಿಕೆಗಳಲ್ಲಿ ಅವು ಪ್ರಕಟವಾಗಿವೆ. ಇವರಿಗೆ ಬಸವಕಲ್ಯಾಣ ತಾಲೂಕಾ ಆಡಳಿತದಿಂದ `ರಾಜ್ಯೋತ್ಸವ ಪ್ರಶಸ್ತಿ, ಹಾರಕೂಡ ಶ್ರೀಗಳಿಂದ `ಶ್ರೀ ಚನ್ನ ರತ್ನ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ಬಸವಕಲ್ಯಾಣ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರು ಸದ್ಯ ಬಸವಕಲ್ಯಾಣದಲ್ಲಿ ವಾಸವಾಗಿದ್ದು, ತಮ್ಮ ವೃತ್ತಿಯೊಂದಿಗೆ ಬರವಣಿಗೆಯನ್ನು ಮುಂದುವರೆಸಿದ್ದಾರೆ.
ಅಂಬರೀಶ್ ಎಂ.ಭಿಮಾಣಿ
ಹವ್ಯಾಸಿ ಬರಹಗಾರ ಅಂಬರೀಶ್ ಎನ್.ಭಿಮಾಣಿ ರವರು ಬಸವಕಲ್ಯಾಣ ತಾಲೂಕಿನ ಚಿತ್ತಕೊಟಾ (ಕೆ) ಗ್ರಾಮದ ಸುಬ್ಬಣ್ಣ ಮತ್ತು ರಾಚಮ್ಮ ದಂಪತಿಗಳಿಗೆ ದಿನಾಂಕ ೨೨-೬-೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಪದವಿಧರರಾದ ಇವರು ಬಸವಕಲ್ಯಾಣದ ಖಾಸಗಿ ಕಾಲೇಜಿನಲ್ಲಿ ಕನ್ನಡ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ, ಲೇಖನ, ಗಜಲ್ ಮೊದಲಾದವು ರಚಿಸುತ್ತಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಅನೇಕ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನಗಳ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಇವರಿಗೆ ೨೦೧೯ರಲ್ಲಿ ಬಸವಕಲ್ಯಾಣ ತಾಲೂಕಾ ಕನ್ನಡ ರಾಜೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಶ್ರೀದೇವಿ ಎಂ.ಖಂಡಾಳೆ.
ಉದಯೋನ್ಮುಖ ಕವಯತ್ರಿಯಾದ ಶ್ರೀದೇವಿ ಎಂ.ಖAಡಾಳೆಯವರು ಬಸವಕಲ್ಯಾಣ ತಾಲೂಕಿನ ಮಹಾದಪ್ಪ ಖಂಡಾಳೆ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೪-೧೧-೧೯೮೪ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ ಪದವಿಧರರಾದ ಇವರು ಬೀದರ ತಾಲೂಕಿನ ಸರ್ಕಾರಿ ಪ್ರೌಢ ಶಾಲೆ ಮನ್ನಳಿಯಲ್ಲಿ ಕನ್ನಡ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕಲೆ ಸಾಹಿತ್ಯದಲ್ಲಿ ಆಸಕ್ತರಾಗಿ ಅನೇಕ ಕವನ,ಲೇಖನ ಹನಿಗವನಗಳನ್ನು ಬರೆದಿದ್ದು,ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಹಲವಾರು ಸಾಹಿತ್ಯ ಸಮ್ಮೇಳನಗಳಲ್ಲಿ ಪಾಲ್ಗೊಂಡು ಕವನ ವಾಚನ ಮತ್ತು ಉಪನ್ಯಾಸವು ನೀಡಿ ಸುಮಧುರ ಕಂಠದಿAದ ಗಾಯನ ಮಾಡಿ ಕೇಳುಗರ ಮನಸೂರೆಗೊಳಿಸಿದ್ದಾರೆ.
ನಾಗೇಂದ್ರ ಎಲ್.ಗಾಯಕವಾಡ
ಉದಯೋನ್ಮುಖ ಕಾದಂಬರಿಕಾರ ನಾಗೇಂದ್ರ ಎಲ್.ಗಾಯಕವಾಡ ರವರು ಬಸವಕಲ್ಯಾಣ ತಾಲೂಕಿನ ಧನ್ನೂರ್ (ಆರ್) ಗ್ರಾಮದ ಲಾಲಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೧-೬-೧೯೮೪ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬಡತನದಲ್ಲಿ ಮುಂದೆ ಕಲಿಯಲು ಆಗದೆ ಹೊಲದಲ್ಲಿ ಎತ್ತುಗಳು ಕಾಯುವುದು, ಕೃಷಿ ಕೆಲಸ ಮಾಡುವುದರೊಂದಿಗೆ ಸುಮಾರು ೪೬ಕ್ಕೂ ಹೆಚ್ಚು ಕಾದಂಬರಿಗಳು ಬರೆದಿದ್ದಾರೆ. ಅವುಗಳಲ್ಲಿ ಕೆಲ ಕಾದಂಬರಿಗಳು ರಾಗಸಂಗಮ, ನವರಾಗಸಂಗಮ, ಥ್ರೀಲ್ ಮಾಸಪತ್ರಿಕೆಗಳಲ್ಲಿ `ಖ್ಯಾತ ಕಾದಂಬರಿಕಾರ ನಾಗೇಂದ್ರ ಗಾಯಕವಾಡ’ ಎಂಬ ಮುಖಪುಟದ ಶೀರೊನಾಮೆಯಲ್ಲಿ ಪ್ರಕಟವಾಗಿವೆ. ಅವುಗಳಲ್ಲಿ ಮುಖ್ಯವಾಗಿ `ನಾ ನಿನ್ನ ಕ್ಷೇಮಿಸಿದ್ದೇನೆ', `ಭ್ರಮೆ', `ಅಮರ ಜ್ಯೋತಿ', `ಪ್ರೇಮ', `ವಿಷಕನ್ಯೆ', `ಸಮಯ', `ವಿಲಕ್ಷಣ', `ರಕ್ತ ದಾಹದ ನಾಗ', `ಸೈಕೊ ಕಿಲ್ಲರ್', `ಅನುರಾಗ ಅಳಿಸದು', `ನನ್ನನ್ನು ಕ್ಷಮಿಸು',. `ಬಾಡಿದ ಹೂ', `ದಡ ಸೇರದ ನೌಕೆ', `ಪವಿತ್ರ', `ಇಂಚರ', `ನಿನ್ನ ಪ್ರೀತಿಗಾಗಿ', `ಕಗ್ಗತ್ತಲೆ ಕರಗಿಸಿದ ಸೂರ್ಯ', `ಮೊಡ ಸರಿದ ರವಿ', `ಭ್ರಮೆ ಬದುಕು', `ವಿಪರ್ಯಾಸ' `ನಿಕೃತಿ', `ತೆರೆ ಮರೆಯ ಹಿಂದೆ'. ಹೀಗೆ ಇವರ ಕಾದಂಬರಿ ಪಟ್ಟಿ ಬಹುದೊಡ್ಡದಿದೆ. ಇಲ್ಲಿಯ ಬಹುತೇಕ ಕಾದಂಬರಿಗಳು ರಾಗ ಸಂಗಮ, ನವರಾಗ ಸಂಗಮ, ಥ್ರೀಲ್ ಪತ್ರಿಕೆಗಳಲ್ಲಿ ಪ್ರಕಟವಾಗಿ ಜನಪ್ರಿಯತೆ ಗಳಿಸಿವೆ. ಇವರ `ವಿಷಕನ್ಯೆ' ಮತ್ತು `ಸಮಯ ' ಕಾದಂಬರಿಗಳು ಥ್ರೀಲ್ ಮಾಸಪತ್ರಿಕೆಯ ೧೦೬ನೇ ಸಂಚಿಕೆಯಲ್ಲಿ `ಖ್ಯಾತ ಕಾದಂಬರಿಕಾರ ನಾಗೇಶ ಗಾಯಕವಾಡ ಅವರ ಎರಡು ಕಾದಂಬರಿಗಳು' ಎಂಬ ಶಿರೋನಾಮೆಯಲ್ಲಿ ಪ್ರಕಟವಾಗಿ ಇವರಿಗೆ ಕಾದಂಬರಿಕಾರರಾಗಿ ಹೆಸರು ತರಲು ಕಾರಣವಾಗಿವೆ. ಮತ್ತು ಇವರು ಎರಡು ಕಥಾಸಂಕಲನಗಳು ಹಾಗೂ ಒಂದು ಸತ್ಯ ಘಟಕಗಳ ಕಥಾಸಂಕಲನ ಬರೆದಿದ್ದಾರೆ. ಇಷ್ಟು ಕಾದಂಬರಿ ಬರೆದು ಪತ್ರಿಕೆಯಲ್ಲಿ ಪ್ರಕಟಿಸಿ ಪುಸ್ತಕ ಮಾಡದೆ ಹಳ್ಳಿಯಲ್ಲಿ ಉಳಿದ ಇವರು ಎಲೆಮರೆಯ ಬಲಿತ ಕಾಯಿಯಾಗಿ ಕಂಡು ಬರುತ್ತಾರೆ. ಇವರ ಕುರಿತು ೨೦೧೦ರಲ್ಲಿ ಸಂಯುಕ್ತ ಕರ್ನಾಟಕದ ಮುಡಬಿ ವರದಿಗಾರರಾಗಿದ್ದ ಮಚ್ಚೇಂದ್ರ ಪಿ ಅಣಕಲ್ ರವರು `ಕಲ್ಯಾಣ ಕರ್ನಾಟಕ' ಪುರಾವಣಿಯಲ್ಲಿ ವ್ಯಕ್ತಿ ಪರಿಚಯ ಬರೆದಾಗ ಬಸವಕಲ್ಯಾಣ ತಾಲೂಕಿನ ಆಡಳಿತ ಮಂಡಳಿಯವರು ತಾಲೂಕು ಮಟ್ಟದ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಹಾಗೂ ಬೇಲೂರಿನ ಉರಿಲಿಂಗಪೆದ್ದಿ ಮಠದ ಪಂಚಾಕ್ಷರಿ ಸ್ವಾಮಿಗಳು ಇವರಿಗೆ ಉರಿಲಿಂಗಪೆದ್ದಿ ಉತ್ಸವದಲ್ಲಿ ಸನ್ಮಾನಿಸಿದ್ದಾರೆ.
ಶಾಂತಕುಮಾರ ಹಡಪದ
ಉದಯೋನ್ಮುಖ ಬರಹಗಾರ ಶಾಂತಕುಮಾರ ಹಡಪದ ರವರು ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದ ಶಿವಲಿಂಗಪ್ಪ ಮತ್ತು ಮಹಾದೇವಿ ದಂಪತಿಗಳಿಗೆ ದಿನಾಂಕ ೫-೧೦-೧೯೮೩ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ ವರೆಗೆ ಅಧ್ಯಯನ ಮಾಡಿದ ಇವರು ಸ್ವಯಂ ವೃತ್ತಿಯಿಂದ ಜೀವನ ಸಾಗಿಸುತ್ತಿದ್ದಾರೆ. ಮತ್ತು ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಆಧುನಿಕ ವಚನ, ಭಜನೆ ಹಾಡು, ತತ್ವ ಪದಗಳನ್ನು ಬರೆದು `ನನ್ನವ್ವ' ಎಂಬ ಕವನ ಸಂಕಲನವು ಪ್ರಕಟಿಸುವ ಹಂತದಲ್ಲಿದ್ದಾರೆ. ನೂರಾರು ಕವನ, ಆಧುನಿಕ ವಚನಗಳು ಬರೆದಿದ್ದು, ಅವುಗಳಲ್ಲಿ ಕೆಲವು ವಿಜಯವಾಣಿ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಇವರು ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಯಾಗಿ, ಮತ್ತು ಹೀರೆನಾಗಾಂವ ಗ್ರಾಮದಲ್ಲಿ ನಡೆದ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ ಇವರಿಗೆ ಬಸವಕಲ್ಯಾಣದ ಹಡಪದ ಸಮಾಜದ ವತಿಯಿಂದ ಹಡಪದ ಅಪ್ಪಣ್ಣ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ.
ಶಾಂತಕುಮಾರ ಮಾಲಿ ಪಾಟೀಲ್.
ಉದಯೋನ್ಮುಖ ಯುವ ಬರಹಗಾರರಾದ ಶಾಂತಕುಮಾರ ಮಾಲಿ ಪಾಟೀಲ್ ರವರು ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಬಸವರಾಜ ಮಾಲಿ ಪಾಟೀಲ್ ಮತ್ತು ವಸಂತಾಬಾಯಿ ದಂಪತಿಗಳಿಗೆ ದಿನಾಂಕ ೨೭-೧೨-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಮತ್ತು ಚಲನಚಿತ್ರದಲ್ಲಿ ಡಿಪ್ಲೋಮಾ ಪದವಿ ಪಡೆದು, ಮುಡಬಿಯಲ್ಲಿ ಸ್ವಯಂ ವೃತ್ತಿಯಲ್ಲಿ ತೊಡಗಿದ್ದಾರೆ. ಹಾಗೂ `ಜೀವದ ಗೇಳೆಯ’ ಮತ್ತು `ಅಲರ್ಟ’ ಮತ್ತಿತರ ಕಿರುಚಿತ್ರಗಳಲ್ಲಿ ನಟಿಸಿ ಸಂಭಾಷಣೆಕಾರರಾಗಿಯು ಕಾರ್ಯನಿರ್ವಹಿಸಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ, ಲೇಖನ, ಹನಿಗವನಗಳು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಕವನ ಸಂಕಲನವೊAದು ಮುದ್ರಿಸುವ ಹಂತದಲ್ಲಿದ್ದಾರೆ.
ಗೌಸೋದಿನ್ ಪಠಾಣ.
ಉದಯೋನ್ಮುಖ ಹವ್ಯಾಸಿ ಬರಹಗಾರರಾದ ಗೌಸೋದಿನ್ ಪಠಾಣ ರವರು ಬಸವಕಲ್ಯಾಣ ತಾಲೂಕಿನ ಕಿಟ್ಟಾ ಗ್ರಾಮದ ಕಮಲೋದಿನ್ ಮತ್ತು ದಿಲ್ದಾರ ಬಿ ದಂಪತಿಗಳಿಗೆ ದಿನಾಂಕ ೧-೬-೧೯೮೨ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬೆಂಗಳೂರಿನ ಖಾಸಗಿ ಸಂಸ್ಥೆಯೊAದರಲ್ಲಿ ಕಂಪ್ಯೂಟರ್ ಆಪರೇಟರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ, ಲೇಖನ, ಹನಿಗವನಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಜಗದೇವಿ ಡಿ.ಜವಳಗಿಕರ್
ಉದಯೋನ್ಮುಖ ಕವಯತ್ರಿಯಾದ ಜಗದೇವಿ ಡಿ.ಜವಳಗಿಕರ್ ರವರು ಹುಲಸೂರು ತಾಲೂಕಿನ ಗೋರ್ಟಾ (ಬಿ) ಗ್ರಾಮದ ರಾಮಶೆಟ್ಟಿ ಮತ್ತು ಶಾರದಾಬಾಯಿ ದಂಪತಿಗಳಿಗೆ ದಿನಾಂಕ ೧-೧೨-೧೯೮೧ರಂದು ಜನ್ಮ ತಳೆದು ಬಿ.ಎ.ಬಿ.ಎಡ್. ಮತ್ತು ಎಂ.ಎ.ಕನ್ನಡ ಸ್ನಾತಕೋತ್ತರ ಪದವಿಧರರಾಗಿ ವಿವಿಧ ಖಾಸಗಿ ಶಾಲಾ ಕಾಲೇಜುಗಳಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ರಾಜೇಶ್ವರದ ದತ್ತಾತ್ರಿ ಜವಳಗಿಕರ್ ರವರ ಧರ್ಮ ಪತ್ನಿಯಾಗಿದ್ದು, ಹಲವಾರು ಕವನ, ಲೇಖನ, ಹನಿಗವನಗಳು ಬರೆಯುತ್ತಿದ್ದಾರೆ. ಇವರ ಬರಹಗಳು ವಿಜಯವಾಣಿ ಸೇರಿದಂತೆ ಕೆಲ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೩ರಲ್ಲಿ ಕನ್ನಡ ರತ್ನ ಶಿಕ್ಷಕ ಪ್ರಶಸ್ತಿ, ಮತ್ತು ವಿವಿಧ ಕನ್ನಡಪರ ಸಂಘ ಸಂಸ್ಥೆಗಳಿAದ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಇವರು ಬರೆದ ಪುಸ್ತಕವೊಂದು ಮುದ್ರಣದ ಹಂತದಲ್ಲಿದೆ. ಸದ್ಯ ಇವರು ಬಸವಕಲ್ಯಾಣದಲ್ಲಿ ನೆಲೆಸಿದ್ದಾರೆ.
ಮಧುಕರ ಎನ್.ಘೋಡಕೆ
ಕವಿ, ಕಲಾವಿದ ಮಧುಕರ ಎನ್.ಘೋಡಕೆ ರವರು. ಬಸವಕಲ್ಯಾಣ ತಾಲೂಕಿನ ಬಟಗೇರಾ ಗ್ರಾಮದ ನರಸಿಂಗರಾವ ಮತ್ತು ಸುಗಂಧಬಾಯಿ ದಂಪತಿಗಳಿಗೆ ದಿನಾಂಕ. ೮-೬-೧೯೭೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ಮತ್ತು ವಿಶೇಷ ಸಂಗೀತ, ನೃತ್ಯ, ತಾಳವಾದ್ಯ ಪರೀಕ್ಷೆಯಲ್ಲಿ ತೇರ್ಗಡೆಯಾದ ಇವರು ವೃತ್ತಿಪರ ಕಲಾವಿದರಾಗಿದ್ದಾರೆ. ಕವನ, ತತ್ವಪದ, ಜಾನಪದ, ಭಜನೆ ಗೀತೆಗಳು ಬರೆದು ಸ್ವತಃ ರಾಗ ಸಂಯೋಜನೆಯಲ್ಲಿ ಹಾಡುವ ಇವರು ವಾರ್ತಾ ಇಲಾಖೆಯ ಸರ್ಕಾರಿ ಯೋಜನೆಯ ಕುರಿತು ಬೀದಿ ನಾಟಕ, ರೂಪಕಗಳನ್ನು ರಚಿಸಿ ನೂರಾರು ವೇದಿಕೆಯಲ್ಲಿ ಅವು ಪ್ರದರ್ಶಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಕಲಾವಿದರಾಗಿ ಗುರುತಿಸಿಕೊಂಡ್ಡಿದ್ದು, ಬೀದರ ಜಿಲ್ಲಾ ವಿಭಾಗ ಮಟ್ಟದಲ್ಲಿ ಗ್ರಾಹಕರ ವ್ಯಾಜ್ಯ, ಸಕಾಲ ಮಾಹಿತಿ, ಭಾನಾಮತಿ ನಿರ್ಮೂಲನ ಜನಾಂದೊಲನ, ಸರ್ವ ಶಿಕ್ಷಣ ಅಭಿಯಾನ ಸೇರಿದಂತೆ ಇತ್ಯಾದಿ ಸರ್ಕಾರಿ ಕಾರ್ಯಕ್ರಮಗಳು ಪಡೆದು, ಜನಸಾಮಾನ್ಯರಿಗೆ ಅರಿವು ಮೂಡಿಸುವ ಕಲಾವಿದರಾಗಿ ಹೆಸರುವಾಸಿಯಾಗಿದ್ದಾರೆ. ಅಷ್ಟೇಯಲ್ಲದೆ ತಾವೆ ಬರೆದ ಹಾಡುಗಳನ್ನು ಹಾಡಿ ಜನಜಾಗೃತಿ ಮೂಡಿಸುತ್ತಾರೆ. .
ಶಿವಕುಮಾರ ಸ್ವಾಮಿ ಯರಬಾಗ
ಸೃಜನಶೀಲ ಬರಹಗಾರ ಶಿವಕುಮಾರ ಸ್ವಾಮಿ ಯರಬಾಗ ರವರು ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ಚನ್ನವಿರಯ್ಯಾ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಪತ್ರಿಕೋದ್ಯಮ, ವಾಣಿ ಸರ್ಟಿಫಿಕೇಟ್ ಕೋರ್ಸ್, ಮತ್ತು `ಜ್ಯೋತಿಷ್ಯ ಆಚಾರ್ಯ ಕೋರ್ಸ್' ಅಧ್ಯಯನ ಮಾಡಿದ ಇವರು ೨೦೦೪ರಿಂದ ೨೦೦೮ರ ವರೆಗೆ ಕಲಬುರಗಿ ಆಕಾಶವಾಣಿಯಲ್ಲಿ ನಿರೂಪಕ, ವಾರ್ತಾ ವಾಚಕರಾಗಿ ಸೇವೆ ಸಲ್ಲಿಸಿ, ೯೩.೫ ರೆಡ್ ಎಫ್.ಎಂ.ನಲ್ಲಿಯು ಸೇವೆ ಸಲ್ಲಿಸಿದ ಇವರು ಸದ್ಯ ಬಸವಕಲ್ಯಾಣದ ಎಲ್.ಐ.ಸಿ. ಪ್ರತಿನಿಧಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಬರಹ ರೂಪಕಗಳು ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನ, ಮತ್ತು ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ. ೨೦೧೦ರಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಅಕಾಡೆಮಿಯವರು ಏರ್ಪಡಿಸಿದ ವಿಜ್ಞಾನ ಬರಹ ಶಿಬಿರ, ಮತ್ತು ಕಲಬುರಗಿಯಲ್ಲಿ ಕಸಾಪದವರು ಏರ್ಪಡಿಸಿದ ಕನ್ನಡ ಸಾಹಿತ್ಯ ಪರಿಚಯಿಸುವ ವ್ಯಾಖ್ಯಾನ ಶಿಬಿರ, ಹಾಗೂ ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆಯವರು ಏರ್ಪಡಿಸಿದ ಯುವ ಸಂವಹನ ತರಬೇತಿ ಶಿಬಿರಗಳಲ್ಲಿ ಪಾಲ್ಗೊಂಡಿದ್ದಾರೆ. ಇವರು ಸಾಹಿತ್ಯ ರಚನೆಯೊಂದಿಗೆ ವಾಸ್ತು ಶಾಸ್ತ್ರದ ಕುರಿತು ವೈಚಾರಿಕ ಬರಹಗಳು ಬರೆದಿದ್ದು, ಅವು ಪುಸ್ತಕ ರೂಪದಲ್ಲಿ ಪ್ರಕಟಿಸುವ ಹಂತದಲ್ಲಿದ್ದಾರೆ. ಮತ್ತು ಶ್ರೀ ಸದ್ಗುರು ಚೆನ್ನವೀರ ಶಿವಾಚಾರ್ಯ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾಗಿ ೨೦೧೨ರಿಂದ ಶ್ರೀ ಸದ್ಗುರು ಚೆನ್ನವೀರ ಶಿವಾಚಾರ್ಯ ಹಿರಿಯ ಪ್ರಾಥಮಿಕ ಶಾಲೆ ನಡೆಸುವುದರೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಕರಬಸಯ್ಯ ಚನ್ನವೀರಯ್ಯ ಸ್ವಾಮಿ
ಹವ್ಯಾಸಿ ಬರಹಗಾರ ಕರಬಸಯ್ಯ ಸಿ. ಸ್ವಾಮಿ. ರವರು ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಚೆನ್ನವೀರಯ್ಯ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೪-೧೯೭೭ರಲ್ಲಿ ಜನಿಸಿದ್ದಾರೆ. ಏಳನೇ ತರಗತಿಯ ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಕೃಷಿ ಜೀವನದೊಂದಿಗೆ ಕವನ, ತತ್ವಪದ, ಭಜನೆ ಗೀತೆಗಳು ಬರೆದು ಹಾಡುತ್ತಾರೆ.ಮತ್ತು ಅನೇಕ ರಾಜ್ಯ ಮಟ್ಟದ ಜಾನಪದ ಮೇಳ, ಸಮ್ಮೇಳನಗಳಲ್ಲಿ ತಮ್ಮ ಸಾಹಿತ್ಯ ಪ್ರಚುರ ಪಡಿಸಿದ್ದಾರೆ. ಹಾಗೂ ಹುಟ್ಟೂರಿನಲ್ಲಿ ಶ್ರೀ ಚನ್ನಮಲ್ಲೇಶ್ವರ ಭಜನಾ ಸಂಘದ ಮೂಲಕ ತಮ್ಮ ಸಾಹಿತ್ಯ ಪ್ರಸಾರ ಗೈಯುತ್ತಿದ್ದಾರೆ. ಇವರ ತತ್ವಪದ ಹಾಡುಗಳು ಹಾರಕೂಡ ಹಿರೇಮಠ ಸಂಸ್ಥಾನ ವತಿಯಿಂದ ಪ್ರಕಟವಾದ `ಕೋಹಿನೂರು ಕುಸುಮ' ಎಂಬ ಪ್ರಾತಿನಿಧಿಕ ಸಂಕಲನ ಸೇರಿದಂತೆ ಮೊದಲಾದವುಗಳಲ್ಲಿ ಪ್ರಕಟವಾಗಿವೆ. ಇವರಿಗೆ ಕರ್ನಾಟಕ ಜಾನಪದ ಅಕಾಡೆಮಿ ಏರ್ಪಡಿಸಿದ ಚರ್ಮವಾದ್ಯಗಳ ಸಮಾವೇಶ ಹಾಗೂ ಹಂಪಿ ಉತ್ಸವದಲ್ಲಿ ಪ್ರಶಸ್ತಿ ಪತ್ರ ನೀಡಿ ಗೌರವಿಸಿದೆ.
ಸೂರ್ಯಕಾಂತ ಕೆ.ಪಾಟೀಲ್.
ಹವ್ಯಾಸಿ ಬರಹಗಾರರಾದ ಸೂರ್ಯಕಾಂತ ಕೆ.ಪಾಟೀಲ್ ರವರು ಬಸವಕಲ್ಯಾಣ ತಾಲೂಕಿನ ಖೇಡಾ (ಕೆ) ಗ್ರಾಮದ ಕಂಟೆಪ್ಪಾ ಪಾಟೀಲ್ ಮತ್ತು ಸುಜ್ಞಾನಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೭೬ ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಎಡ್. ಕೆ.ಇ.ಎಸ್. ಪದವಿಧರರಾದ ಇವರು ಭಾಲ್ಕಿ ತಾಲೂಕು ಪಂಚಾಯತ, ಅಕ್ಷರ ದಾಸೋಹ ಯೋಜನೆಯ ಸಹಾಯಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬರೆದ ಕವನ, ಲೇಖನ, ಹನಿಗವನಗಳು ಬರೆದಿದ್ದು, ಅವು ಶಿಕ್ಷಣ ವಾರ್ತೆ ಸೇರಿದಂತೆ ಮೊದಲಾದ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೦೩ರಲ್ಲಿ 'ಜನ ಮೆಚ್ಚಿದ ಶಿಕ್ಷಕ', ೨೦೧೨ ರಲ್ಲಿ ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘ ಬೀದರ ವತಿಯಿಂದ 'ಪ್ರತಿಭಾ ಪುರಸ್ಕಾರ' ನೀಡಿ ಗೌರವಿಸಿದ್ದಾರೆ.
ಕಲ್ಯಾಣರಾವ ಮದರಗಾಂವಕರ್
ಯುವ ಬರಹಗಾರ ಪತ್ರಕರ್ತ ಕಲ್ಯಾಣಿ ಮದರಗಾಂವಕರ್ ರವರು ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ರಾಮಣ್ಣ ಮತ್ತು ಬಸ್ಸಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೬ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ ಪದವಿಧರರಾದ ಇವರು ಸುಮಾರು ಇಪ್ಪತ್ತು ವರ್ಷಗಳಿಂದ ಕಾರಂಜಾ ಎಕ್ಷಪ್ರೇಸ್, ಕನ್ನಡಪ್ರಭ, ವಿಶ್ವವಾಣಿ, ದಿನಪತ್ರಿಕೆಗಳಲ್ಲಿ ಸೇವೆ ಸಲ್ಲಿಸಿ ಸದ್ಯ ಉದಯಕಾಲ ಪತ್ರಿಕೆಯ ವರದಿಗಾರರಾಗಿದ್ದಾರೆ ಇವರ ಬರಹಗಳು ನಾಡಿನ ವಿವಿಧ ಪತ್ರಿಕೆ ಮತ್ತು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೨ರಲ್ಲಿ ರಾಜ್ಯ ಮಟ್ಟದ ಕಲಾಂಜಲಿ ಸಾಹಿತ್ಯ ಪ್ರಶಸ್ತಿ, ಕನ್ನಡ ಕಾವ್ಯ ರತ್ನ ಪ್ರಶಸ್ತಿ, ದೇಶಪಾಂಡೆ ಪ್ರತಿಷ್ಠಾನದ ಸಮಾಜರತ್ನ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ರಾಜ್ಯ ಮಟ್ಟದ ಪತ್ರಿಕೆಗಳ ವಿವಿಧ ವರದಿಗಾರರ ಸಂಘದ ಬಸವಕಲ್ಯಾಣ ತಾಲೂಕಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರೇಣುಕಾದೇವಿ ದಿಲೀಪಕುಮಾರ ಸ್ವಾಮಿ
ಕವಯತ್ರಿ ರೇಣುಕಾದೇವಿ ಯವರು ಬಸವಕಲ್ಯಾಣ ತಾಲೂಕಿನ ಮೈಸಲಗಾ ಗ್ರಾಮದ ಶ್ರೀ ಶಿವಶರಣಯ್ಯಾ ಮತ್ತು ಶ್ರೀಮತಿ ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೫-೧೯೭೬ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಬಿ.ಎ (ಹಿಂದಿ) ಪದವಿ ಪಡೆದ ಇವರು ರಾಜೇಶ್ವರದ ಶ್ರೀ ದಿಲೀಪಕುಮಾರ ಸ್ವಾಮಿಯವರ ಧರ್ಮಪತ್ನಿಯಾಗಿದ್ದು, ಬಾಲ್ಯದಿಂದಲೂ ಹಾರಕೂಡ ಶ್ರೀಗಳ ಪ್ರವಚನದ ಪ್ರಭಾವದಿಂದ ಬರವಣಿಗೆಯಲ್ಲಿ ತೊಡಗಿಸಿಕೊಂಡು ಕವನ, ಲೇಖನ, ಮೊದಲಾದವು ಬರೆದು ಕವಯತ್ರಿಯಾಗಿ ಗುರ್ತಿಸಿಕೊಂಡಿದ್ದಾರೆ. ಹಾರಕೂಡ ಹಿರೇಮಠ ಸಂಸ್ಥಾನದ ಆರಾಧ್ಯ ದೈವ ಭಕ್ತರಾದ ಇವರು ಬರೆದ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ಇವರ ಸಾಹಿತ್ಯ ಸಾಧನೆಗೆ ಹಾರಕೂಡದ ಪೂಜ್ಯ. ಶ್ರೀ. ಡಾ.ಚೆನ್ನವೀರ ಶಿವಾಚಾರ್ಯರು ವಿಶೇಷ ದಂಪತಿ ಸಹಿತವಾಗಿ ಸನ್ಮಾನಿಸಿ ಸತ್ಕಾರಿಸಿದ್ದಾರೆ.
ರೇವಣಸಿದ್ದಪ್ಪ ಸೂಗೂರೆ
ಹವ್ಯಾಸಿ ಬರಹಗಾರ ರೇವಣಸಿದ್ದಪ್ಪ ಸೂಗೂರೆ ಯವರು. ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಗುರುಲಿಂಗಪ್ಪ ಮತ್ತು ಸುಗಲಾಬಾಯಿ ದಂಪತಿಗಳಿಗೆ ದಿನಾಂಕ ೧-೮-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಕೃಷಿಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕವನ, ಲೇಖನ, ಬರಹಗಳು ಬರೆಯುತ್ತಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆಗಳಲ್ಲಿ ಹಾಗೂ ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಹೊರತಂದ `ಚೆನ್ನ ಸಂಭ್ರಮ-೫೭.’ ಮತ್ತು `ಕೊಹಿನೂರು ಕುಸುಮ' ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹಾರಕೂಡದ ಪೂಜ್ಯ. ಶ್ರೀ. ಡಾ.ಚೆನ್ನವೀರ ಶಿವಾಚಾರ್ಯರ ೫೫ನೇ ಹುಟ್ಟು ಹಬ್ಬದ ನಿಮಿತ್ತವಾಗಿ ಶ್ರೀ ಚೆನ್ನ ರತ್ನ ಪ್ರಶಸ್ತಿ, ನೀಡಿ ಗೌರವಿಸಲಾಗಿದೆ. ಮತ್ತು ಇವರಿಗೆ ಬಸವಕಲ್ಯಾಣ ತಾಲೂಕಾ ಪ್ರಥಮ ಜಾನಪದ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆ ಮಾಡಿ ಗೌರವಿಸಲಾಗಿದೆ.
ಅಂಬಾರಾವ ಉಗಾಜಿ
ಹವ್ಯಾಸಿ ಬರಹಗಾರ ಅಂಬಾರಾಯ ಉಗಾಜಿಯವರು. ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಸಾಯಬಣ್ಣ ಮತ್ತು ರುಕ್ಮಿಣಿಬಾಯಿ ದಂಪತಿಗಳಿಗೆ ದಿನಾಂಕ ೨೨-೭-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ. ಪದವಿಧರರಾದ ಇವರು ಬೊಸಗಾ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಶಿಕ್ಷಕ ವೃತ್ತಿಗೆ ಸೇರಿದ ನಂತರ ಸಾಹಿತ್ಯ ರಚನೆಯ ಗೀಳು ಬೆಳೆಸಿಕೊಂಡ ಕವನ, ಲೇಖನ, ಹನಿಗವನ, ಚುಟುಕು, ಆಧುನಿಕ ವಚನಗಳನ್ನು ಬರೆದಿದ್ದಾರೆ. ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಸಾಹಿತ್ಯಿಕ ಸಂಘಟಕರು ಆಗಿರುವುದರಿಂದ ಕನ್ನಡ ಸಾಹಿತ್ಯ ಪರಿಷತ್ತಿಗೆ ಎರಡು ಅವಧಿ ಕೊಹಿನೂರು ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ `ಜನ ಮೆಚ್ಚಿದ ಉತ್ತಮ ಶಿಕ್ಷಕ ಪ್ರಶಸ್ತಿ, ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ `ಶ್ರೀ ಚೆನ್ನರತ್ನ ಪ್ರಶಸ್ತಿ, ಕಸಾಪದ ಸಮಾಜ ರತ್ನ ಪ್ರಶಸ್ತಿ, ಎಸ್ಸಿ, ಎಸ್ಟಿ, ಶಿಕ್ಷಕರ ಸಂಘದ ಉತ್ತಮ ಶಿಕ್ಷಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಹಾಗೂ ಅಜಿಂ ಪ್ರೇಮಂ ಜಿ ಫೌಂಡೇಶನ್ ವತಿಯಿಂದ ಇವರಿಗೆ ಅಭಿನಂದನಾ ಪತ್ರವು ನೀಡಿ ಗೌರವಿಸಿದ್ದಾರೆ.
ನಾಗಪ್ಪ ನಿಣ್ಣೆ
ಪತ್ರಕರ್ತ ನಾಗಪ್ಪ ನಿಣ್ಣೆಯವರು ಬಹುಮುಖ ಪ್ರತಿಭೆಯ ವ್ಯಕ್ತಿತ್ವವುಳ್ಳ ಉದಯೋನ್ಮುಖ ಹವ್ಯಾಸಿ ಬರಹಗಾರರು. ಇವರು ಬೀದರ ಜಿಲ್ಲೆ ಬಸವಕಲ್ಯಾಣ ಶಹಾಪುರ ಓಣಿಯ ಬಸಪ್ಪಾ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೬೯ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. (ಹಿಂದಿ) ಪದವಿಧರರಾದ ಇವರು ಕೆಲ ವರ್ಷ ಖಾಸಗಿ ಶಾಲಾ ಶಿಕ್ಷಕರಾಗಿ, ಗ್ರೀನೋಬಲ್ಸ ಪತ್ರಿಕೆಯ ವರದಿಗಾರರಾಗಿ ಸೇವೆ ಸಲ್ಲಿಸಿ ೧೯೯೭ರಿಂದ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ೨೦೦೯ರಲ್ಲಿ ಬಡ್ತಿ ಹೊಂದಿ ಸರಕಾರಿ ಪ್ರೌಢ ಶಾಲೆ ಬೆಟಗೇರಾ ಗ್ರಾಮದಲ್ಲಿ ಹಿಂದಿ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರ ಕನ್ನಡ ಹಿಂದಿ ಉರ್ದು ಭಾಷೆಗಳಲ್ಲಿ ಪಾಂಡಿತ್ಯ ಹೊಂದಿದ್ದು ಕೆಲ ಬರಹಗಳು ಬಹಿರಂಗ ಸುದ್ದಿ, ಉತ್ತರ ಕರ್ನಾಟಕ, ಸಂಯುಕ್ತ ಕರ್ನಾಟಕ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಉರ್ದುವಿನಲ್ಲಿ ಶಾಹಿರಿ, ಕನ್ನಡದಲ್ಲಿ ನಗೆಹನಿ ಬರೆದ ಹಾಸ್ಯ ಬರಹಗಾರರು. ಹಿಂದಿ ಚಿತ್ರನಟ ಖಾದರಖಾನ್ ಅವರ ಅಭಿಮಾನಿಯಾದ ಇವರು, ಅವರ ಕುರಿತು ಉರ್ದು, ಕನ್ನಡ ಪತ್ರಿಕೆಯಲ್ಲಿ ಲೇಖನಗಳನ್ನು ಬರೆದು ಪ್ರಚುರಪಡಿಸಿದ್ದಾರೆ. ಇವರಿಗೆ ಪತ್ರಿಕಾ ರತ್ನ, ಉತ್ತಮ ವರದಿಗಾರ ಪ್ರಶಸ್ತಿ, ಶಿಕ್ಷಣ ಕ್ಷೇತ್ರದಲ್ಲಿ ಆದರ್ಶ ಶಿಕ್ಷಕ ಪ್ರಶಸ್ತಿಯು ಪಡೆದಿದ್ದಾರೆ. ಇವರು ಕಾರ್ಯನಿರತ ಪತ್ರಕರ್ತರ ಸಂಘದ ಉಪಾಧ್ಯಕ್ಷರಾಗಿ, ಕ್ರಾಂತಿ ಯುವ ಪರಿಷತ್ತಿನ ಅಧ್ಯಕ್ಷರಾಗಿ, ಕಲ್ಯಾಣ ಕಲಾ ಪ್ರತಿಭೆಯ ಸಂಪಾದಕರಾಗಿ, ಮತ್ತು ಬಸವಕಲ್ಯಾಣ ತಾಲೂಕಾ ಗೌರವ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ರಾಜ್ಯ ಮಟ್ಟದ ಪತ್ರಿಕಾ ಅಕಾಡೆಮಿ ವತಿಯಿಂದ ಹಮ್ಮಿಕೊಂಡ ಕಾರ್ಯಗಾರ ಸೇರಿದಂತೆ ವಿವಿಧ ಕಮ್ಮಟಗಳಲ್ಲಿ ಭಾಗವಹಿಸಿದ್ದಾರೆ.
ಶ್ರೀದೇವಿ ಬಿ.ಹಿರೇಮಠ
ಅಧ್ಯಾತ್ಮಿಕ ದೃಷ್ಟಿಕೋನದಿಂದ ತತ್ವಪದ ಜಾನಪದ ಹಾಡುಗಳು ರಚಿಸಿ ಕವಯತ್ರಿಯರಾಗಿ ಗುರುತಿಸಿಕೊಂಡಿರುವ ಶ್ರೀದೇವಿ ಬಿ.ಹಿರೇಮಠ ರವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಆಳಂದಿ ಗ್ರಾಮದ ಸಿದ್ದಯ್ಯಾ ಸ್ವಾಮಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೨೭-೧-೧೯೬೬ರಲ್ಲಿ ಜನಿಸಿದ್ದಾರೆ. ಇವರು ಹಾರಕೂಡ ಶ್ರೀಗಳ ಸಹೋದರರಾದ ಶ್ರೀ ಬಸವರಾಜ ತಂದೆ ಕರಿಬಸಯ್ಯನವರ ಧರ್ಮ ಪತ್ನಿಯಾದ ಇವರು ಓದಿದ್ದು ಬರಿ ಏಳನೇ ತರಗತಿಯವರೆಗೆ ಮಾತ್ರ. ಅದು ಮರಾಠಿ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ಕನ್ನಡ ಕಲಿತದ್ದು ತಮ್ಮ ಮೈದುನ ಮಲ್ಲಿನಾಥ ಹಿರೇಮಠ ಅವರಿಂದ. ಕನ್ನಡ ಲಿಪಿ, ಅಕ್ಷರ ಕಲಿತು ಕನ್ನಡ ಭಾಷೆಯು ಸರಳ ಹಾಗೂ ಸಲಿಲವಾಗಿ ಮಾತನಾಡುವುದು ಕಲಿತು, ಕನ್ನಡ ಸಾಹಿತ್ಯ ರಚಿಸುವಷ್ಟು ಪ್ರಬುದ್ಧತೆ ಹೊಂದಿರುವುದು ನೋಡಿದರೆ ನಿಜಕ್ಕೂ ಹೆಮ್ಮೆ ಪಡುವ ವಿಷಯವಾಗಿದೆ.
ಇವರು ಬಾಲ್ಯದಲ್ಲಿ ತಮ್ಮ ದೊಡ್ಡಪ್ಪನವರ ಮನೆಯಲ್ಲಿ ಪ್ರತಿ ಸೋಮವಾರ ಭಜನೆ ಮಾಡುವುದು, ಹಾರಕೂಡ ಶ್ರೀಗಳ ಕುರಿತು ಹಾಡು ಹಾಡುವುದು. ಶರಣ - ಶರಣೆಯರ ವಚನಗಳನ್ನು ಕಂಠಪಾಠ ಮಾಡಿ ಹಾಡುವುದನ್ನು ರೂಢಿಸಿಕೊಂಡು ಸಂಗೀತದಲ್ಲಿಯು ತುಂಬ ಆಸಕ್ತಿ ಬೆಳೆಸಿಕೊಂಡು ಬೆಳೆದವರು. ಮುಂದೆ ಇವರು ಹಾರಕೂಡ ಶ್ರೀಗಳ ಕುಟುಂಬದಲ್ಲಿ ನಾಲ್ಕು ಜನ ಭಾವ-ಮೈದುನ ನಾದಿನಿಯರು ಹಾಗೂ ಮಾವ ವೇ.ಮೂ. ಕರಿಬಸವಯ್ಯ ಅತ್ತೆ ಸುಭದ್ರಾಬಾಯಿಯವರೊಂದಿಗೆ ತುಂಬ ಅನ್ಯೋನ್ಯತೆಯಿಂದ ಬಾಳ್ವೆ ನಡೆಸುವುದರೊಂದಿಗೆ ಕನ್ನಡದಲ್ಲಿ ಕವನಗಳು, ಆಧುನಿಕ ವಚನಗಳು, ಬರೆದಿದ್ದಾರೆ. ಅವು ಎಂ.ಎಸ್.ಲಠ್ಠೆ ಸಂಪಾದಿಸಿರುವ `ಕಲ್ಯಾಣನಾಡಿನ ಪರಂ ಜ್ಯೋತಿ’ ಎಂಬ ಪುಸ್ತಕದಲ್ಲಿ ಇವರು ಬರೆದ ಹತ್ತಾರು ಹಾಡುಗಳು ಪ್ರಕಟವಾಗಿವೆ. ಮತ್ತು ಕಲಬುರಗಿ ಆಕಾಶವಾಣಿಯಿಂದಲೂ ಇವರ ಕವನಗಳು ಪ್ರಸಾರವಾಗಿವೆ. ಗದಲೇಗಾಂವ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಸಾಹಿತ್ಯ ಸಮ್ಮೇಳನದಲ್ಲಿ ಇವರು ಕವನ ವಾಚನವು ಮಾಡಿದ್ದಾರೆ. ಇವರಿಗೆ ೨೦೧೦ರಲ್ಲಿ ಕಲಬುರ್ಗಿಯ ಜಯನಗರ ಅನುಭವ ಮಂಟಪದಲ್ಲಿ ಜರುಗಿದ ಅಕ್ಕಗಳ ಸಮ್ಮೇಳನದಲ್ಲಿ ಪಾಲ್ಗೊಂಡು ವಚನ ಸ್ಪರ್ಧೆ, ವಚನ ರೂಪಕದಲ್ಲಿ ಆಯ್ದಕ್ಕಿ ಲಕ್ಕಮ್ಮನ ಪಾತ್ರ ಮಾಡಿದ್ದರಿಂದ ಅಂದಿನ ಮಂತ್ರಿಗಳಾದ ಶ್ರೀಮತಿ ಲೀಲಾವತಿ ಆರ್ ಪ್ರಸಾದ, ಅರವಿಂದ ಜತ್ತಿ, ವಿಲಾಸವತಿ ಖೂಭಾ ಅವರ ಸಮ್ಮುಖದಲ್ಲಿ ವಿಶೇಷ ಪುರಸ್ಕಾರವು ಲಭಿಸಿದೆ. ಕಲಬುರ್ಗಿಯ ಆಕಾಶವಾಣಿಯವರು ಏರ್ಪಡಿಸಿದ ನಾಗರ ಪಂಚಮಿ ಹಬ್ಬದ ಕಾರ್ಯಕ್ರಮದಲ್ಲಿಯು ಪಾಲ್ಗೊಂಡು ಕಾರ್ಯಕ್ರಮ ನೀಡಿ ಹಲವಾರು ಸಂಪ್ರದಾಯ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ಅಷ್ಟೇಯಲ್ಲದೆ ಚನ್ನಬಸವ ಶಿವಯೋಗಿಗಳ ಕುರಿತು ಹಾಡುಗಳು ಮತ್ತು ವಚನಗಳು ಬರೆದಿದ್ದರಿಂದ ಮುಂಬರುವ ದಿನಗಳಲ್ಲಿ ಅವು ಪ್ರಕಟಿಸುವ ಹಂತದಲ್ಲಿದ್ದಾರೆ. ಇವರು ಪೂಜ್ಯ ಡಾ.ಚನ್ನವೀರ ಶಿವಾಚಾರ್ಯರು ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ ಶ್ರೀ ಹಾರಕೂಡ ಚನ್ನಬಸವೇಶ್ವರ ಶಿಕ್ಷಣ ಪ್ರತಿಷ್ಠಾನದ ಸದಸ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಇವರಿಗೆ ಹಾರಕೂಡ ಶ್ರೀಗಳು ದಸರಾ ಮಹೋತ್ಸವದ ಮಹಾನವಮಿಯ ಬ್ರಹತ್ ಸಭೆಯಲ್ಲಿ ಇವರ ಯಜಮಾನರಾದ ಬಿ.ಕೆ.ಹಿರೇಮಠ ದಂಪತಿಸಹಿತ ಸತ್ಕರಿಸಿ ಆರ್ಶಿವದಿಸಿದ್ದಾರೆ. ಅಷ್ಟೇಯಲ್ಲದೆ ಕನ್ನಡ ಸಾಹಿತ್ಯ ಪರಿಷತ್ತಿನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ದಿ. ಡಾ.ಅಮರನಾಥ ನಾಯಕ
ಸಾಹಿತಿ ಡಾ.ಅಮರನಾಥ ನಾಯಕ ರವರು ಬಸವಕಲ್ಯಾಣ ತಾಲೂಕಿನ ಕೊಹಿನೂರು ಗ್ರಾಮದ ಮದರಶಾ ಮತ್ತು ತಿಪ್ಪವ್ವಾ ದಂಪತಿಗಳಿಗೆ ದಿನಾಂಕ ೧೫-೩-೧೯೬೨ರಲ್ಲಿ ಜನಿಸಿದರು. ಬಿ.ಎಸ್ಸಿ. ಬಿ.ಇ.ಎಂ.ಎಸ್. ಪದವಿ ಪಡೆದು ಖಾಸಗಿ ವೈದ್ಯರಾಗಿ ಸೇವೆ ಸಲ್ಲಿಸಿ, ದಿನಾಂಕ ೨೮-೧೦-೨೦೨೦ರಲ್ಲಿ ನಿಧನರಾಗಿದ್ದಾರೆ. ತತ್ವಪದ, ಜಾನಪದ, ಮೊಹರಮ್ ಪದ, ಭಜನೆ ಗೀತೆ, ಹಂತಿ ಹಾಡುಗಳು ಪರಿಚಿತರಾದವರು. ಇವರು ೧೯೯೩ರಿಂದ ೧೯೯೭ರ ವರೆಗೆ ಕೊಹಿನೂರು ಗ್ರಾಂ.ಪA. ಅಧ್ಯಕ್ಷರಾಗಿ, ೨೦೦೦ರಿಂದ ೨೦೦೫ರ ವರೆಗೆ ತಾ. ಪಂ. ಸದಸ್ಯರಾಗಿ, ಸಾಮಾಜಿಕ ಸೇವೆ ಸಲ್ಲಿಸಿದ್ದಾರೆ. ಇವರ ಬರಹಗಳು ಹಾರಕೂಡ ಹಿರೇಮಠ ಸಂಸ್ಥಾನದ ವತಿಯಿಂದ ಪ್ರಕಟವಾದ `ಕೋಹಿನೂರು ಕುಸುಮ'ಎಂಬ ಪ್ರಾತಿನಿಧಿಕ ಸಂಕಲನದಲ್ಲಿ ಪ್ರಕಟವಾಗಿವೆ.
ಕೆ.ಎಸ್.ರಾಮಬಾಣ
ಸಾಹಿತಿ ಕೆ.ಎಸ್.ರಾಮಬಾಣ ರವರ ಪೂರ್ಣನಾಮ ಕಾಶಪ್ಪ ತಂದೆ ಶರಣಪ್ಪಾ ರಾಮಬಾಣ ಎಂದಾಗಿದೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹೀರೆನಾಗಾಂವ ಗ್ರಾಮದ ಶ್ರೀ ಶರಣಪ್ಪ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೨೬-೬-೧೯೫೫ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ೧೯೮೫ರಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ, ಭಾಲ್ಕಿ ಕ್ಷೇತ್ರ ಶಿಕ್ಷಣಾಧಿಕಾರಿ ಕಾರ್ಯಲಯದ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸಿ ೨೦೧೫ರಲ್ಲಿ ನಿವೃತ್ತರಾಗಿದ್ದಾರೆ. ವಿದ್ಯಾರ್ಥಿಯಾಗಿದಾಗಲೇ ಸಾಹಿತ್ಯದ ಆಸಕ್ತಿಯನ್ನು ಬೆಳೆಸಿಕೊಂಡು ೨೦೦೪ರಲ್ಲಿ ಹತ್ತು ಜನ ಲೇಖಕರ ಜತೆಗೂಡಿ `ನೂರು ಭಾವಗಳು ಹತ್ತು ಮುಖಗಳು' ಎಂಬ ಪ್ರಾತಿನಿಧಿಕ ಸಂಕಲನದಲ್ಲಿ ೧೦ ಕವನಗಳು ಪ್ರಕಟಿಸಿದ್ದಾರೆ. `ಒಂದಾಗಿ ಬಾಳೋಣ' (ನಾಟಕ) `ಮೊಸರು ಮಾರುವವನು' (ಕತೆ) ಬರೆದಿದ್ದು, ಅವು ಅಪ್ರಕಟಿತವಾಗಿವೆ. ಇವರಿಗೆ ಭಾಲ್ಕಿ ತಾಲೂಕಾ ರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ.
ಮಿಲಿಂದ ಗುರೂಜಿ
`ಮಿಲಿಂದ ಗುರೂಜೆ' ಎಂದೇ ಖ್ಯಾತರಾದ ಕವಿ, ಸಾಹಿತಿ, ಧರ್ಮ ಪ್ರಚಾರಕರಾದ ಮಿಲಿಂದ ಗುರೂಜಿ ರವರು. ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಉಮ್ಮಾಪುರ ಗ್ರಾಮದ ಕಿಶನರಾವ ಮತ್ತು ಸಾಕರಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೫೫ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೂ ಬುದ್ಧ, ಅಂಬೇಡ್ಕರ್ ರವರ ಅನುಯಾಯಿಗಳಾಗಿ ಬೌದ್ಧ ಧಮ್ಮ ಪ್ರಚಾರಕ್ಕಾಗಿ ಶ್ರಮಿಸುತ್ತಿದ್ದಾರೆ. ಮತು ಅನೇಕ ಹಾಡುಗಳು ರಚಿಸಿ ಸ್ವತಃ ಸುಮಧುರ ಕಂಠದಿAದ ಕನ್ನಡ, ಹಿಂದಿ, ಮರಾಠಿ, ತೆಲುಗು ನಾಲ್ಕು ಭಾಷೆಗಳಲ್ಲಿ ಹಾಡುತ್ತಾರೆ. ಕರ್ನಾಟಕ, ಆಂಧ್ರ, ತೆಲಂಗಾಣ, ಮತ್ತು ಮಹಾರಾಷ್ಟ್ರ, ರಾಜ್ಯಗಳಲ್ಲಿ ಇವರು ಬೌದ್ಧ ಧಮ್ಮ ಪ್ರಚಾರಕ್ಕಾಗಿ ಅನೇಕ ಉಪನ್ಯಾಸಗಳನ್ನು ನೀಡಿ ಖ್ಯಾತರಾಗಿದ್ದಾರೆ. ಮತ್ತು ಕರ್ನಾಟಕ ರಾಜ್ಯದ ಬಿ.ಎಸ್.ಐ. ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ಮಹಮದ್ ಜಾನಿಮಿಯಾ
ನಾಟಕಕಾರ, ಮಹಮ್ಮದ್ ಜಾನಿಮಿಯಾ ರವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಧನ್ನೂರಾ (ಆರ್) ಗ್ರಾಮದ ವಜಿರಸಾಹೇಬ್ ಮವಜನ್ ಮತ್ತು ಸಜನ್ಬೀ ದಂಪತಿಗಳಿಗೆ ದಿನಾಂಕ ೧-೧-೧೯೫೧ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಮಾತ್ರ ಅಧ್ಯಯನ ಮಾಡಿದ ಇವರು ಹವ್ಯಾಸಿ ಚಿತ್ರ ಕಲಾವಿದರಾಗಿ ಸಾಹಿತಿ, ಲೇಖಕ, ನಾಟಕಕಾರರಾಗಿ ಗುರ್ತಿಸಿಕೊಂಡು ವೃತ್ತಿ ಕಲಾವಿದರಾಗಿ ಬದುಕು ಕಟ್ಟಿಕೊಂಡವರು. ಚಿತ್ರ ಕಲೆಯನ್ನು ಹವ್ಯಾಸಿಯಾಗಿ ಕಲಿತುಕೊಂಡು ಉತ್ತಮ ತೈಲ ವರ್ಣ, ಲೈಪ್ ಪೆಟಿಂಗ್ ಮತ್ತು ಪೊಟ್ರೇಟ್ ಚಿತ್ರ ಬಿಡಿಸಿ ಉಪಜೀವನ ನಡೆಸುತ್ತಾರೆ. ಇವರು ಬಿಡಿಸಿದ ಚಿತ್ರಗಳು ಲಾಲಧರಿ ಮಠ ಸೇರಿದಂತೆ ಮೊದಲಾದ ಊರುಗಳ ದೇವಸ್ಥಾನಗಳಲ್ಲಿ ಇಂದಿಗೂ ತೈಲ ವರ್ಣಗಳಿಂದ ರಾರಾಜಿಸುತ್ತವೆ. ನಾಟಕ ಮಂಡಳಿಗಳಿಗೆ ಚಿತ್ರ ಪರದೆ ಬಿಡಿಸಿ ಕೊಡುತ್ತಿದ್ದ ಇವರು ಸ್ವತಃ ನಾಟಕ ರಚನೆಯಲ್ಲಿ ತೊಡಗಿ ಹಲವು ನಾಟಕಗಳು ಬರೆದಿದ್ದಾರೆ. ಅವುಗಳೆಂದರೆ, ೧೯೭೫ರಲ್ಲಿ `ತಾಯಿಯ ಆತ್ಮ ಅರ್ಥಾತ್ ಕಂದನ ಗಿಲಿಗಿಲಿ,' ೧೯೭೬ರಲ್ಲಿ `ಸತ್ತವನು ಎದ್ದ' ೧೯೭೮ರಲ್ಲಿ 'ಮಕ್ಕಳು ಸಾಕೋ ಮಹಾದೇವ' ೧೯೮೦ರಲ್ಲಿ 'ಗೆಳೆಯ ಕೊಟ್ಟ ಜ್ಞಾನ' ೧೯೮೧ರಲ್ಲಿ 'ತಾಯಿ ಗಂಡ ಅರ್ಥಾತ್ ದೈವಿ ಮದುವೆ' ೧೯೮೨ರಲ್ಲಿ 'ಕೋಟಿ ವಿದ್ಯೆಗಿಂತಲೂ ಮೇಟಿ ವಿದ್ಯೆ ಮೇಲು. ಅರ್ಥಾತ್ ನೇಗಿಲು ಯೋಗಿ' ೧೯೮೪ರಲ್ಲಿ 'ತಥ್ ! ನೀ ಎಂಥಹ ಗಂಡಸ ರೀ, !' ೧೯೮೫ರಲ್ಲಿ `ರಂಜಾನ ಕಾ ಚಾಂದ,' (ಹಿಂದಿ) ೧೯೮೬ ರಲ್ಲಿ 'ಗಂಗಾ ಬಂದಳು ಹೊಲದಾಗ' ಎಂಬ ಕನ್ನಡ ಹಿಂದಿ ಭಾಷೆಯಲ್ಲಿ ನಾಟಕಗಳನ್ನು ರಚಿಸಿದರೆ, 'ಜಾನಪದ ಪದ್ಯಗಳು' ಎಂಬ ಮೊಹರಮ್ ಪದಗಳು ಬರೆದಿದ್ದಾರೆ. ಮತ್ತು ಉರ್ದುವಿನಲ್ಲಿಯು ಭಜನೆ, ರಿಯಾಯಿತಿಗಳು ಬರೆದ ಇವರು ಕನ್ನಡ, ಹಿಂದಿ, ಉರ್ದು ತ್ರೈಭಾಷಾ ಕವಿಯಾಗಿದ್ದಾರೆ. ಇವರ `ಮಕ್ಕಳು ಸಾಕೋ ಮಹಾದೇವ' ಎಂಬ ನಾಟಕ ೧೯೭೮ರಲ್ಲಿ ಕಲಬುರಗಿ ಆಕಾಶವಾಣಿಯಿಂದ ಜಿ.ಎಂ.ಶಿರಹಟ್ಟಿಯವರ ನಿರ್ದೇಶನದಲ್ಲಿ ಪ್ರಸಾರವಾಗಿದೆ. ಮತ್ತು `ಕೋಟಿಗಿಂತ ಮೇಟಿ ವಿದ್ಯೆ ಮೇಲು' ಎಂಬ ನಾಟಕ ೧೯೮೨ರಲ್ಲಿ ಸರ್ಕಾರಿ ಪ್ರೌಢಶಾಲೆ ಹಳ್ಳಿಖೇಡ (ಬಿ) ಗ್ರಾಮದ ಮಕ್ಕಳೊಂದಿಗೆ ನಾಟಕ ಪ್ರದರ್ಶನವು ಆಗಿದೆ. ಇದು ಶ್ರೀ ರೇಣುಕಾಚಾರ್ಯ ನಾಟ್ಯ ಸಂಘ ಮೈಂದರ್ಗಿಯವರು ಹಲವಾರು ಕಡೆ ಪ್ರದರ್ಶನವು ಮಾಡಿದ್ದಾರೆ. ಆದರೆ ಹಣಕಾಸಿನ ತೊಂದರೆಯಿAದ ಈ ಲೇಖಕರ ಎಲ್ಲ ಕೃತಿಗಳು ಅಪ್ರಕಟಿತವಾಗಿ ಉಳಿದಿವೆ.
ಬಕ್ಕಯ್ಯ ಸ್ವಾಮಿ
ಸಾಹಿತಿ ಬಕ್ಕಯ್ಯ ಸ್ವಾಮಿಯವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತ್ರಿಪೂರಾಂತದ ಶ್ರೀ.ವೇ.ಮೂ. ಬಸ್ಸಯ್ಯಾ ಸ್ವಾಮಿ ಮತ್ತು ನಿಂಬೆವ್ವ ದಂಪತಿಗಳಿಗೆ ದಿನಾಂಕ ೧-೩-೧೯೪೯ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್ ಪದವಿಧರರಾದ ಇವರು ಪ್ರಾಥಮಿಕ ಶಿಕ್ಷಕರಾಗಿ, ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದು, ಕವನ, ಲೇಖನ, ಚಿಂತನಗಳು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಕಸಾಪ, ಜಾನಪದ, ಶರಣ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳಾಗಿ ಸೇವೆ ಸಲ್ಲಿಸಿದ ಇವರು ಡಾ.ಜಯದೇವಿ ತಾಯಿ ಲಿಗಾಡೆ ಪ್ರತಿಷ್ಠಾನದ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಜಿಲ್ಲಾ ಆದರ್ಶ ಶಿಕ್ಷಕ ಪ್ರಶಸ್ತಿ ಲಭೀಸಿದೆ.
ನಭೀಲಾಲ್ ಮುಲ್ಲಾ
ಅನುಭಾವ ಸಾಹಿತ್ಯದೊಂದಿಗೆ ಭಜನೆ ಗೀತೆಗಳು, ಮೊಹರಮ್ ಪದಗಳು, ಗೀ ಗೀ ಪದಗಳು ಭಾವ ಗೀತೆ, ಭಕ್ತಿ ಗೀತೆ, ಜಾನಪದ ಇತ್ಯಾದಿ ಗೇಯತೆಯಿಂದ ಕೂಡಿದ ಹಾಡುಗಳು ಬರೆದು `ನಭೀಲಾಲ್ ಕವಿ' ಎಂದೇ ಖ್ಯಾತರಾದ ನಭೀಲಾಲ್ ಮುಲ್ಲಾ ರವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ಹಿಪ್ಪರಗಾ ಭಾಗ ಗ್ರಾಮದ ಗುಡುಸಾಬ ಮತ್ತು ಮಹಿಬುಬಿ ಶೇಕ್ ದಂಪತಿಗಳಿಗೆ ೧೯೪೫ರಲ್ಲಿ ಜನಿಸಿದ್ದಾರೆ. ಕನ್ನಡ, ಮರಾಠಿ, ಮೋಡಿ,ಹಿಂದಿ, ಉರ್ದು ಭಾಷಾ ಪಾಂಡಿತ್ಯ ಹೊಂದಿದ ಇವರು ೧೧-೬-೨೦೧೭ರಲ್ಲಿ ಇಹಲೋಕ ತ್ಯಜಿಸಿದ್ದಾರೆ. ಶಿವಲಿಂಗೇಶ್ವರ ಸಾವಳಗಿ ಇವರ ಗುರುಗಳಾಗಿದ್ದು . ಅವರ ಮಾರ್ಗದರ್ಶನದಲ್ಲಿ ಸಾಹಿತ್ಯ ರಚಿಸಿದ್ದಾರೆ. ಇವರಿಗೆ ೨೦೦೪ರಲ್ಲಿ ಕರ್ನಾಟಕ ಸರ್ಕಾರ ಜಾನಪದ ಮತ್ತು ಅಕಾಡೆಮಿ ವತಿಯಿಂದ `ಜಾನಪದ ಯಕ್ಷಗಾನ ಸಾಧನಾ ಪ್ರಶಸ್ತಿ, ೨೦೧೧ರಲ್ಲಿ ಅಖಿಲ ಭಾರತ ಶರಣ ಸಂಸ್ಕೃತಿ ಉತ್ಸವ ಸಮಿತಿ ಮತ್ತು ವಿಜ್ಞಾನ ಮಟ್ಟದ ಗೀ ಗೀ ಪದಕಾರರ ಸಮ್ಮೇಳನದ ಪ್ರಶಸ್ತಿ, ಹಾರಕೂಡದ `ಶ್ರೀಚನ್ನ ರತ್ನ ಪ್ರಶಸ್ತಿ, ಪುರಸ್ಕಾರಗಳು ಪಡೆದಿದ್ದಾರೆ. ಇವರ ವಿರಚಿತ ಹಾಡುಗಳು ಆಕಾಶವಾಣಿ ದೂರದರ್ಶನಗಳಲ್ಲಿ ಪ್ರಸಾರವಾಗಿವೆ.
ಶ್ರೀದೇವಿ ರಾಜಕುಮಾರ
ಹವ್ಯಾಸಿ ಬರಹಗಾರ್ತಿ ಶ್ರೀದೇವಿ ರಾಜಕುಮಾರ ರವರು ಔರಾದ ತಾಲೂಕಿನ ವಡಗಾಂವದ ಗುರುನಾಥ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ ೧-೧-೧೯೮೨ರಲ್ಲಿ ಜನಿಸಿದ್ದಾರೆ. ಡಿ.ಇಡಿ. ಬಿ.ಎ. ಬಿ.ಇಡಿ.ಪದವೀಧರರಾದ ಇವರು ಹೊಳಸಮುದ್ರದ ರಾಜಕುಮಾರ ಖಡ್ಕೆಯವರ ಧರ್ಮಪತ್ನಿಯಾಗಿದ್ದು. ಬೀದರಿನ ಮದರ ತೇರೆಸಾ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಕವನ, ಲೇಖನ, ಹನಿಗವನ ಮೊದಲಾದ ಬರಹಗಳು ಬರೆದಿದ್ದಾರೆ. ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ಕವಿಗೋಷ್ಠಿಗಳಲ್ಲಿಯು ಕವನ ವಾಚನ ಮಾಡಿದ್ದಾರೆ. ಇವರಿಗೆ ಹಲವು ಕನ್ನಡ ಪರ ಸಾಹಿತ್ಯ ಸಂಘ ಸಂಸ್ಥೆಗಳಿAದ ಸತ್ಕಾರಿಸಿ ಗೌರವಿಸಲಾಗಿದೆ.
ಶಿವಾಜಿರಾವ ಕಾಳೆ
ಹವ್ಯಾಸಿ ಬರಹಗಾರರಾದ ಶಿವಾಜಿರಾವ ಕಾಳೆ ಯವರು. ಕಮಲನಗರ ತಾಲೂಕಿನ ಹೊಳಸಮುದ್ರ ಗ್ರಾಮದ ಯಾದವರಾವ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೧-೧-೧೯೪೮ರಲ್ಲಿ ಜನಿಸಿದ್ದಾರೆ. ಇವರು ಮರಾಠಿ ಮಾತೃಭಾಷೆಯಲ್ಲಿ ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿ, ಮರಾಠಿ ಮತ್ತು ಹಿಂದಿಯಲ್ಲಿ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ ಹಿಂದಿಯಲ್ಲಿ `ಬೀದರ ಕಾ ಇತಿಹಾಸ', `ಬಿಜಲಿ ಕಿ ಕರಾಮತ್', `ಸ್ಟೇಟ್ ಕಾಂಗ್ರೆಸ್ ಹೈದರಾಬಾದ್', ಎಂಬ (ಐತಿಹಾಸಿಕ ಕೃತಿಗಳು) `ಸತಿ ಜಾತೆ ಹೈ ಕ್ಯಾ, ಸತಿ ದಿಲಾತೆ ಹೈ', `ಜಾನೆ ಹೇ ರಾಮಘಾಟ್'. (ಕವನ ಸಂಕಲನಗಳು) `ಉಗಡಾ ಬಾಳಾ', `ಮಾಹೇರ್ ಮರಾಠಿ', `ಆಯಿ ಹಂಬರಡಾ', `ಆವಾ ಚಾಲೇಲಿ ಪಂಡರಾಪುರ', `ಮೀ ತಯಾರ್ ಆಯೆ', `ಲಗ್ನಾ ಚೆ ಪಂಚಿನ್ ವರ್ಷಾ', `ಬದಲ್ ಚಾಲತ್ ನಾಯಿ', `ಭೂಮಿಗೀತ ಕ್ರಾಂತಿ ಕಾರಕ್ ಹೈದರಾಬಾದ್ ಸತ್ಯಾಗ್ರಹ', `ಕಾಗದಾಳಿ ನ್ಯಾಯ ಸಾಬಡ್ಲಾ ಹಾ ದೇಹ', `ಸಾಹಸಿ ವೀರ ಹೋಳಸಮುದ್ರ ಚೆ', `ಗುರು ಮಹಿವi '. (ಮರಾಠಿ ಕವನ ಸಂಕಲನಗಳು) ಎಂಬ ಕೃತಿಗಳು ಮರಾಠಿ ಮತ್ತು ಹಿಂದಿಯಲ್ಲಿ ಬರೆದಿದ್ದಾರೆ. ಆದರೆ ಅವು ಅಪ್ರಕಟಿತವಾಗಿವೆ. ಇವರ ಬರೆಹಗಳು ಹೈದರಾಬಾದಿನ `ಸ್ವಾತಂತ್ರ್ಯ ವಾರ್ತೆ' ಎಂಬ ಹಿಂದಿ ವಾರಪತ್ರಿಕೆ, `ಬೀದರ ಕಿ ಅವಾಜ್’ ಎಂಬ ದೈನಿಕದಲ್ಲಿ ಪ್ರಕಟವಾಗಿವೆ. ಮತ್ತು ಇವರ ಮರಾಠಿ ಬರಹಗಳು ಪುಣೆಯಿಂದ ಪ್ರಕಟವಾಗುವ `ಪುಣ್ಯ ನಗರಿ’ ಲಾತೂರದ `ಏಕ್ ಜೂಟ್' ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೧೦ರಲ್ಲಿ ಅಂದಿನ ಜಿಲ್ಲಾಧಿಕಾರಿ ಹರ್ಷಗುಪ್ತರವರು ಬೀದರ ಜಿಲ್ಲಾ ಗಣರಾಜ್ಯೋತ್ಸವ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ. ಹಾಗೂ ನಿಜಾಮ ಸರ್ಕಾರದ ರಜಾಕಾರರ ಹಾವಳಿಯಲ್ಲಿ ನಡೆದ ಬಾಳುರು ಹತ್ಯಾಕಾಂಡದ ಕುರಿತು ಮರಾಠಿಯಲ್ಲಿ ಲೇಖನ ಬರೆದಿದ್ದರಿಂದ ಅಂದಿನ ಮಹಾರಾಷ್ಟ್ರ ಮುಖ್ಯ ಮಂತ್ರಿ ವಿಲಾಸರಾವ ದೇಶಮುಖ ರವರು ಇವರ ಸಾಹಿತ್ಯಕ್ಕೆ ಮೆಚ್ಚಿ ಸತ್ಕರಿಸಿದ್ದಾರೆ. ಇವರು ಕೆಲವರ್ಷ ಗ್ರಾಮ ಪಂಚಾಯತ್ ಅಧ್ಯಕ್ಷರಾಗಿ, ಮತ್ತು ಸಾಹಿತಿಯಾಗಿ ಮಾಡಿದ ಕಾರ್ಯ ಸಾಧನೆ ಕಂಡು ಮಾಜಿ ಸಚಿವ ಗುರುಪಾದಪ್ಪಾ ನಾಗಮಾರಪಳ್ಳಿಯವರು ಇವರಿಗೆ ಪ್ರೀತಿಯಿಂದ `ಸುಧಾಮ' ಎಂದು ನಾಮಕರಣ ಮಾಡಿರುವುದು ತಿಳಿದು ಬರುತ್ತದೆ.
ಸಂಗೀತಾ ಎನ್.ಕಲಬುರ್ಗೆ
ಉದಯೋನ್ಮುಖ ಕವಯತ್ರಿ ಸಂಗೀತಾ ಎನ್.ಕಲಬುರ್ಗೆ ರವರು ಔರಾದ ತಾಲೂಕಿನ ಕರಕ್ಯಾಳ ಗ್ರಾಮದ ಸಿದ್ರಾಮ ಮತ್ತು ಕಲಾವತಿ ದಂಪತಿಗಳಿಗೆ ದಿನಾಂಕ ೮-೯-೨೦೦೬ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲ್ಲಿಯೇ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು ಎಸ್.ಎಸ್.ಎಲ್.ಸಿ ಅಧ್ಯಯನ ಮಾಡುತ್ತಿದ್ದಾರೆ. ಸದಾ ಒಂದಿಲ್ಲೊAದು ಪತ್ರಿಕೆ ಅಂತರಜಾಲ ತಾಣಗಳಲ್ಲಿ ಕವನ, ಲೇಖನ, ಹನಿಗವನಗಳನ್ನು ರಚನೆ ಮಾಡುತ್ತಿರುವ ಇವರು ಕನ್ನಡ ಮತ್ತು ಹಿಂದಿ ಭಾಷೆಗಳಲ್ಲಿ ಮಕ್ಕಳ ಸಾಹಿತ್ಯ, ಕತೆ, ಕವನ, ಲೇಖನ ಬರಹಗಳು ರಚಿಸುತ್ತಿದ್ದಾರೆ. ಇವರ ಬರಹಗಳಿಗೆ ಅನೇಕ ಕಡೆಯ ವಿವಿಧ ಸ್ಪರ್ಧೆಗಳಲ್ಲಿ ಬಹುಮಾನಗಳು ಲಭಿಸಿವೆ. ಮತ್ತು ಕೆಲ ಪತ್ರಿಕೆ ಹಾಗೂ `ಸಂಪಿಗೆ’ ಸೇರಿದಂತೆ ಮತ್ತಿತರ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟಗೊಂಡಿವೆ.
ಪೂಜಾ ಪಟ್ನೆ
ಯುವ ಕವಯತ್ರಿ ಪೂಜಾ ಪಟ್ನೆ ರವರು. ಔರಾದ ತಾಲೂಕಿನ ವಡಗಾಂವ (ದೇ) ಗ್ರಾಮದ ಶಂಕರರಾವ ಮತ್ತು ಶೋಭಾವತಿ ದಂಪತಿಗಳಿಗೆ ದಿನಾಂಕ ೩೧-೭-೧೯೯೭ರಲ್ಲಿ ಜನಿಸಿದ್ದಾರೆ. ಸಿವಿಲ್ ಇಂಜಿನಿಯರಿAಗ್ ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯದ ಆಸಕ್ತಿ ಬೆಳೆಸಿಕೊಂಡು ಮುನ್ನೂರಕ್ಕೂ ಅಧಿಕ ಕವಿತೆಗಳು ಬರೆದಿದ್ದಾರೆ. ಇವರ ಕೆಲ ಬರಹಗಳು ರಾಜ್ಯ ಮಟ್ಟದ ಸ್ಪರ್ಧೆಯಲ್ಲಿ ಬಹುಮಾನಗಳು ಪಡೆದಿವೆ. ಮತ್ತು ಇವರಿಗೆ `ಕಾವ್ಯ ಚೂಡಾಮಣಿ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿಗಳು ಲಭಿಸಿವೆ. ಇವರು ಕನ್ನಡ ಸಾಹಿತ್ಯ ಪರಿಷತ್ತಿನ ಹಲವರು ಹೊಬಳಿ, ತಾಲೂಕು, ಜಿಲ್ಲಾ ಮಟ್ಟದ ಸಮ್ಮೇಳನದಲ್ಲಿ ಪಾಲ್ಗೊಂಡು ಕವನ ವಾಚನವು ಮಾಡಿದ್ದಾರೆ. ಸದ್ಯ ಇವರು ಬೀದರದ ಕೆ.ಬಿ.ಕಾಲೋನಿಯ ನಿವಾಸಿಯಾಗಿ ಸಾಹಿತ್ಯ ರಚನೆಯನ್ನು ಮುಂದುವರೆಸಿದ್ದಾರೆ.
ಪರಮೇಶ್ವರ ಬಿ.ಬಿರಾದಾರ
ಯುವ ಬರಹಗಾರ ಪರಮೇಶ್ವರ ಬಿ.ಬಿರಾದಾರ ರವರು ಔರಾದ ತಾಲೂಕಿನ ನಾರಾಯಣಪುರ ಗ್ರಾಮದ ಶ್ರೀ ಬಸವರಾಜ ಬಿರಾದಾರ ಮತ್ತು ಇಂದುಮತಿ ದಂಪತಿಗಳಿಗೆ ದಿನಾಂಕ ೧೬-೧-೧೯೯೩ರಲ್ಲಿ ಜನಿಸಿದ್ದಾರೆ. ಎಂ.ಎ. ಪತ್ರಿಕೋದ್ಯಮ ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯ ಮತ್ತು ಪತ್ರಿಕೋದ್ಯಮದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ, ಪ್ರಬಂಧ ಮೊದಲಾದವು ಬರೆದಿದ್ದು, ಅವು ವಿಜಯ ಕರ್ನಾಟಕ, ವಿಜಯ ವಾಣಿ, ಸಂಯುಕ್ತ ಕರ್ನಾಟಕ, ಉದಯಕಾಲ ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಸಂಪಾದಕರಾಗಿ `ನಿನ್ನಂತರAಗ' ಹಾಗೂ `ಅನನ್ಯ' ಎಂಬ ನಿಯತಕಾಲಿಕೆಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಪ್ರಬಂಧಗಳಿಗೆ ನಾಡಿನ ವಿವಿಧ ಸ್ಪರ್ಧೆಯಲ್ಲಿ ಬಹುಮಾನ, ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಮತ್ತು ಬೀದರ ಜಿಲ್ಲೆಗೆ ಸಂಬAಧಿಸಿದ ಕೆಲ ಸಾಕ್ಷ್ಯಚಿತ್ರಗಳು ಕೂಡ ತಯಾರಿಸಿದ್ದು ಅವು ತುಮಕೂರಿನ ಸಿದ್ಧಾರ್ಥ್ ಟಿ.ವಿ.ಚಾನಲ್ನಲ್ಲಿ ಇವರ ಸಂದರ್ಶನದೊAದಿಗೆ ಪ್ರಸಾರವಾಗಿವೆ. ಹಾಗೂ ೯೦.೮. ಎಫ್.ಎಂ. ರೇಡಿಯೋ ನಲ್ಲಿಯೂ ಇವರ ಕೆಲ ಕಾರ್ಯಕ್ರಮಗಳು ಬಿತ್ತರಗೊಂಡಿವೆ.
ಡಾ.ಸುರೇಖಾ ಪಾಟೀಲ್
ಕವಯತ್ರಿ ಡಾ.ಸುರೇಖಾ ಪಾಟೀಲ್ ರವರು ಔರಾದ ತಾಲೂಕಿನ ಲಾಧಾ ಗ್ರಾಮದ ಅಂಬಾದಾಸರಾವ ಮತ್ತು ಪರೇಗಬಾಯಿ ದಂಪತಿಗಳಿಗೆ ದಿನಾಂಕ ೧-೯-೧೯೮೮ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್, ಪಿ.ಎಚ್.ಡಿ.ಪದವಿಧರರಾದ ಇವರು ಕಾಲೇಜು ದಿನಗಳಿಂದಲೆ ಕತೆ, ಕವನ, ಲೇಖನ, ಹನಿಗವನ, ಪ್ರಬಂಧಗಳು ಬರೆದಿದ್ದು, ಅವು ಕೆಲ ಪತ್ರಿಕೆ, ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಹಲವಾರು ವಿಚಾರ ಸಂಕಿರಣ. ಸಭೆ ಸಮಾರಂಭಗಳಲ್ಲಿ ಉಪನ್ಯಾಸ, ಪ್ರಬಂಧ ಮಂಡಿಸಿದ್ದಾರೆ. ಮತ್ತು ಮಹಿಳೆಯರ `ಜನಪದ' ಗೀತೆಗಳನ್ನು ಸಂಗ್ರಹಿಸಿ ಪುಸ್ತಕ ಪ್ರಕಟಿಸುವ ನಿಟ್ಟಿನಲ್ಲಿದ್ದಾರೆ. ಹಲವಾರು ಮಹಿಳಾ ಜಾನಪದ ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನಗಳಲ್ಲಿ ಪಾಲ್ಗೊಂಡು, ಕವನ ವಾಚನ ಮಾಡಿದ್ದಾರೆ. ಇವರಿಗೆ ಬೀದರ ಕರ್ನಾಟಕ ಕಾಲೇಜಿನ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ನೀಡಿ ಗೌರವಿಸಿದ್ದಾರೆ.
ಲಕ್ಷೀ ತನಯ ಗಂಜೆ
`ಲಕ್ಷ್ಮೀತನಯ ಎಂಬ ಕಾವ್ಯನಾಮ ಹೊಂದಿರುವ ಶಿವರಾಜ ಗಂಜೆ ಯವರು ಔರಾದ ತಾಲೂಕಿನ ಹೆಡಗಾಪೂರ ಗ್ರಾಮದವರಾಗಿದು, ಕತೆ ಕವನ, ಲೇಖನ, ಹನಿಗವನ ಮೊದಲಾದ ಪ್ರಕಾರದ ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಇವರ `ಸಂಬಂಧ’ ಎಂಬ ಕತೆ ಹಂಶಕವಿಯವರು ಸಂಪಾದಿಸಿರುವ `ಬೀದರ ಜಿಲ್ಲೆಯ ಆಯ್ದ ಕತೆಗಳು’ ಎಂಬ ಪ್ರಾತಿನಿಧಿಕ ಕಥಾ ಸಂಕಲನ ಸೇರಿದಂತೆ ಮೊದಲಾದ ಪತ್ರಿಕೆ ಹಾಗೂ ಇತರರು ಸಂಪಾದಿಸಿ ಪ್ರಕಟಿಸಿರುವ ಕೃತಿಗಳಲ್ಲಿ ಪ್ರಕಟವಾಗಿವೆ.
ನಿತ್ಯಾನಂದ ಘೂಳೆ
ಮೂಲತಃ ಬೀದರ ಜಿಲ್ಲೆ ಔರಾದನವರಾದ ಇವರು ಹಲವಾರು ಕವನ, ಲೇಖನ, ಆಧುನಿಕ ವಚನಗಳನ್ನು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಜಯದೇವಿ ಯದಲಾಪುರೆ
ಹವ್ಯಾಸಿ ಬರಹಗಾರ್ತಿಯಾದ ಜಯದೇವಿ ಯದಲಾಪುರೆಯವರು ಔರಾದ ತಾಲೂಕಿನ ಸುಂದಾಳ ಗ್ರಾಮದವರು. ಬೀದರಿನ ಖಾಸಗಿ ಕಾಲೇಜೊಂದರಲ್ಲಿ ಸೇವೆ ಸಲ್ಲಿಸುವುದರೊಂದಿಗೆ ಅನೇಕ ಕವನ, ಲೇಖನ, ಆಧುನಿಕ ವಚನ ಮೊದಲಾದವು ಬರೆದಿದ್ದಾರೆ. ಮತ್ತು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯು ಅವು ಪ್ರಕಟವಾಗಿವೆ.
ಜೈ ಸಮೀನಾ. (ಜಯರಾಜ .ಎಸ್.)
ಹವ್ಯಾಸಿ ಬರಹಗಾರರಾದ ಇವರು ಔರಾದ ತಾಲೂಕಿನ ನಾಗೂರ (ಬಿ) ಗ್ರಾಮವರು. ಎಂ.ಎ. ಎಂ.ಪೀಲ್.ಪದವಿಧರರಾದ ಇವರು ಅನೇಕ ಕತೆ. ಕವನ ಲೇಖನ, ಆಧುನಿಕ ವಚನ ಮೊದಲಾದವು ರಚಿಸಿದ್ದು ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ.
ಗುರುಶಾಂತಪ್ಪ ನಿಂಗದಳ್ಳಿ
`ಬಸವ ಪ್ರಿಯ ಮಿತ್ರ' ಎಂಬ ಅಂಕಿತನಾಮದಿAದ ಆಧುನಿಕ ವಚನಗಳು ಬರೆಯುತ್ತಿರುವ ಇವರು ಬೀದರ ಕೃಷಿ ಕಾಲೋನಿ ನಿವಾಸಿಯಾಗಿದ್ದಾರೆ. ಸದ್ಯ ಇವರು ವಿಜಯಪುರದ ಕೃಷಿ ಇಲಾಖೆಯಲ್ಲಿ ಆಡಳಿತಾಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕವನ, ಲೇಖನ, ಆಧುನಿಕ ವಚನ ಮೊದಲಾದವು ಬರೆದಿದ್ದು ,ಅವು ಕೆಲವು ಕಡೆ ಪ್ರಕಟವಾಗಿವೆ.
ಚಿದಾನಂದ ತಾಳಮಡಗೆ
`ಸಚ್ಚಿದಾನಂದ' ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ಬರೆಯುತ್ತಿರುವ ಇವರು ಮೂಲತಃ ಔರಾದ ತಾಲೂಕಿನ ಸಿರ್ಸಿ ಗ್ರಾಮದವರಾಗಿದ್ದು ಅನೇಕ ಕವನ, ಲೇಖನ, ಬರಹಗಳು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಬೇಬಿರಾಣಿ ಬಡಿಗೇರ
ಕವಯತ್ರಿ ಬೇಬಿರಾಣಿ ಬಡಿಗೇರ ರವರು ಔರಾದ ತಾಲೂಕಿನ ಬಲ್ಲೂರ್ ಗ್ರಾಮದ. ದಶರಥ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೪-೭-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಮೈಲೂರದ ಅಭಿಮನ್ಯು ಬಡಿಗೇರ ರವರ ಧರ್ಮಪತ್ನಿಯಾಗಿದ್ದು, ಜನಪದ ಗೀತೆಗಳನ್ನು ಹಾಡುವುದಷ್ಟೆಯಲ್ಲದೆ ಸ್ವತಃ ಬರೆದು ಹಾಡುವುದು ಹೇಗೆ ಎಂದು ಇತರರಿಗೆ ಸ್ಪೂರ್ತಿ ನೀಡುತ್ತಾರೆ. ವಿದ್ಯಾನಗರದಲ್ಲಿ ರಮಾಬಾಯಿ ಸಂಗೀತ ಕಲಾ ಮಂಡಳಿಯ ಮೂಲಕ ಗಾಯನ ಮತ್ತು ಪದ್ಯ ಬರೆಯುವುದರಲ್ಲಿ ಸಿದ್ದಹಸ್ತರು. ಇವರ ಪುಸ್ತಕವೊಂದು ಪ್ರಕಟಣೆಯ ಹಂತದಲ್ಲಿದೆ.
ದಶವಂತ ಬಂಡೆ
ಯುವ ಬರಹಗಾರ ದಶವಂತ ಬಂಡೆಯವರು ಔರಾದ ತಾಲೂಕಿನ ಹಿಪ್ಪಳಗಾಂವ ಗ್ರಾಮದ ಮಾರುತಿ ಮತ್ತು ಖಂಡೋಬಾಯಿ ದಂಪತಿಗಳಿಗೆ ದಿನಾಂಕ ೨೫-೫-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ ಪದವಿಧರರಾದ ಇವರು ೨೦೦೯ರಿಂದ ಬಸವಕಲ್ಯಾಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಇತಿಹಾಸ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ಲೇಖನ, ಹನಿಗವನ, ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. `ಕಲ್ಲುಬಂಡೆ' ಎಂಬುದು ಇವರ ವಚನಾಂಕಿತವಾಗಿದೆ. ಉತ್ತಮ ವಾಗ್ಮಿಗಳಾಗಿರುವ ಇವರು ಅನೇಕ ಕಡೆ ಉಪನ್ಯಾಸಗಳನ್ನು ನೀಡಿದ್ದಾರೆ. ಅಷ್ಟೇಯಲ್ಲದೆ ಇವರು ಬಸವಕಲ್ಯಾಣದ ಚುಟುಕು ಕನ್ನಡ ಸಾಹಿತ್ಯ ಪರಿಷತ್ತು, ಧರಿನಾಡು ಕನ್ನಡ ಸಂಘ, ಲೋಹಿಯ ಪ್ರತಿಷ್ಠಾನ, ದಲಿತ ಸಾಹಿತ್ಯ ಪರಿಷತ್ತು ಮೊದಲಾದ ಸಂಘ ಸಂಸ್ಥೆಗಳ ಸಂಚಾಲಕರಾಗಿ, ಗಮಕಕಲಾ ಪರಿಷತ್ತಿನ ಬಸವಕಲ್ಯಾಣ ತಾಲೂಕಾ ಅಧ್ಯಕ್ಷರಾಗಿದ್ದಾರೆ.
ಶೋಭಾವತಿ ಸೋಮರೆ
ಕವಯತ್ರಿ ಶೋಭಾವತಿ ಸೋಮರೆ ಯವರು. ಇವರು ಔರಾದ (ಬಿ) ತಾಲೂಕಿನ ಸಂಗಪ್ಪಾ ಮತ್ತು ಸಂಗಮ್ಮ ದಂಪತಿಗಳಿಗೆ ದಿನಾಂಕ ೨-೨-೧೯೭೧ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿ ಪಡೆದ ಇವರು ನರ್ಸರಿ ಶಿಕ್ಷಕಿಯರ ತರಬೇತಿಯನ್ನು ಪಡೆದು ಸುಮಾರು ೧೩ ವರ್ಷಗಳ ಕಾಲ ಬಸವಮುಕ್ತಿ ಮಂದಿರದ ಗುರುಕುಲದಲ್ಲಿ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದಾರೆ.
ಬೆಂಗಳೂರಿನ ನಾರಾಯಣರಾವ ಅವರೊಂದಿಗೆ ವಿವಾಹವಾದ ಇವರು ಸುಖ ದಾಂಪತ್ಯದ ಜೀವನದಲ್ಲಿಯೆ ಗಂಡನನ್ನು ಮತ್ತು ಐದಾರು ವರ್ಷದ ಮಗಳನ್ನು ಕಳೆದುಕೊಂಡು ಒಂಟಿ ಜೀವನದಲ್ಲಿ ನೊಂದು, ಬೆಂದು, ಶೋಕ ಸಾಗರದಲ್ಲಿ ಮುಳುಗಿ ಸಾಹಿತ್ಯ ರಚಿಸಿದ್ದಾರೆ. ತಮ್ಮ ಮಗಳು `ಚೈತನ್ಯ'ಳ ಕುರಿತಾದ ೫೦ಪುಟದ ನೋವಿನ ಕತೆಯೊಂದು ಬರೆದಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಚೈತನ್ಯ ಸಿರಿ ಪ್ರಾತಿನಿಧಿಕ ಕವನಸಂಕಲನದಲ್ಲಿ ಪ್ರಕಟವಾಗಿವೆ. ಬೀದರ ಲೇಖಕಿಯರ ಬಳಗದ ಸದಸ್ಯರಾಗಿ ಸೇವೆ ಸಲ್ಲಿಸಿದ ಇವರಿಗೆ ಉತ್ತಮ ಶಿಕ್ಷಕಿ, ಮಾನವತಾವಾದಿ ಪ್ರಶಸ್ತಿ ಗಳು ನೀಡಿ ಗೌರವಿಸಿದ್ದಾರೆ.
ಸಿದ್ದಮ್ಮಾ ಹಳಕಾಯಿ
ಕವಯತ್ರಿ ಸಿದ್ದಮ್ಮಾ ಹಳಕಾಯಿ ರವರು ಔರಾದ ತಾಲೂಕಿನ ಮುಧೋಳ ಗ್ರಾಮದ ಧನರಾಜ ಮತ್ತು ಕಸ್ತೂರಿ ದಂಪತಿಗಳಿಗೆ ದಿನಾಂಕ ೫-೬-೧೯೬೯ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಸ್ನಾತಕೋತ್ತರ ಪದವಿಧರರಾದ ಇವರು ಕೊಳ್ಳುರ ಗ್ರಾಮದ ಸರ್ಕಾರಿ ಪ್ರೌಢಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಕವನ, ಲೇಖನ, ಬುಲಾಯಿ ಪದ, ಹನಿಗವನಗಳು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ಕವಿಗೋಷ್ಠಿಗಳಲ್ಲಿಯೂ ಕವನ ವಾಚನ ಮಾಡಿದ್ದಾರೆ. ಕೆಲ ಕಾಲ ಶಿಕ್ಷಣ ಇಲಾಖೆಯಲ್ಲಿ ಸಿ.ಆರ್.ಪಿಯಾಗಿ ಸೇವೆ ಸಲ್ಲಿಸಿದ ಇವರು ಉತ್ತಮ ಶಿಕ್ಷಕ ಪ್ರಶಸ್ತಿ ಪಡೆದಿದ್ದಾರೆ. ಮತ್ತು ಬೀದರ ಜಿಲ್ಲಾ ಜಾನಪದ ಪರಿಷತ್ತಿನ ಸದಸ್ಯರಾಗಿ, ಕದಳಿ ವೇದಿಕೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಮುಕುಂದರಾವ ಖಾನಾಪುರ
ಸಾಹಿತಿ ಮುಕುಂದರಾವ ಖಾನಾಪುರ ರವರು ಔರಾದ ತಾಲೂಕಿನ ಖಾನಾಪುರ ಗ್ರಾಮದ ಪುಂಡಲೀಕರಾವ ಮತ್ತು ವಿಠಾಬಾಯಿ ದಂಪತಿಗಳಿಗೆ ದಿನಾಂಕ ೫-೩-೧೯೩೫ರಲ್ಲಿ ಜನಿಸಿದ್ದಾರೆ. ಎಚ್.ಎಸ್.ಸಿ. ಬಿ.ಎ.ಎಲ್.ಎಲ್.ಬಿ. ಪದವಿಧರರಾದ ಇವರು ಬಿ.ಶ್ಯಾಮಸುಂದರ ಅವರ ಅನುಯಾಯಿಗಳಾಗಿದರು. ಮತ್ತು ನಾಂದೇಡದಲ್ಲಿ ಬಿ.ಶ್ಯಾಮಸುಂದರ ಹೆಸರಿನಲ್ಲಿ ಶಾಲೆ ತೆರೆದು ಶಿಕ್ಷಣ ಕ್ಷೇತ್ರದಲ್ಲಿ ದುಡಿದಿದ್ದಾರೆ. ಅದು ಇಂದಿಗೂ ಕಾರ್ಯರಂಭ ಮಾಡುತ್ತಿದೆ. ತಮ್ಮ ವೃತ್ತಿಯೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಕತೆ ಕವನ ಲೇಖನಗಳು ಬರೆದಿದ್ದಾರೆ. ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ. ಇವರು ೧೯೮೯ರಲ್ಲಿ ಬೀದರ ಸಂಸದ ಸ್ಥಾನಕ್ಕೆ ಸ್ವತಂತ್ರ ಅಭ್ಯಾರ್ಥಿಯಾಗಿ ಸ್ಪರ್ಧಿಸಿ ಪರಾಭವಗೊಂಡಿದ್ದರು.
ರತ್ನಪ್ಪ ಜೀರ್ಗಾ
ಅನುಭಾವಿ ಕವಿ, ತತ್ವಪದಕಾರರಾದ ರತ್ನಪ್ಪ ಜೀರ್ಗಾರವರು ಔರಾದ ತಾಲೂಕಿನ ಜೀರ್ಗಾ (ಕೆ) ಗ್ರಾಮದ ಘಾಳೆಪ್ಪಾ ಮತ್ತು ತುಳಜಮ್ಮಾ ದಂಪತಿಗಳಿಗೆ ೧೯೩೨ರಲ್ಲಿ ಜನಿಸಿದ್ದಾರೆ. ಕಡು ಬಡತನದಲ್ಲಿ ಜೀವನ ಸಾಗಿಸಿದ ಇವರು ಹಲವಾರು ತತ್ವಪದ, ಭಜನೆ ಪದ, ಮೊಹರಮ್ ಪದಗಳನ್ನು ರಚಿಸಿದ್ದಾರೆ. ಇವರ ಬರಹಗಳು ಅನೇಕ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಪೂಜ್ಯ. ಶ್ರೀ. ಬಸವಪ್ರಭು ಸ್ವಾಮಿಗಳು
ಸಾಹಿತಿಗಳಾದ ಪೂಜ್ಯ. ಶ್ರೀ. ಬಸವಪ್ರಭು ಸ್ವಾಮಿಗಳು. ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಉಳೆನೂರು ಗ್ರಾಮದ ದರಗಪ್ಪ ಮತ್ತು ಈರಮ್ಮ ದಂಪತಿಗಳ ಉದರಲ್ಲಿ ದಿನಾಂಕ ೧-೬-೧೯೮೬ರಲ್ಲಿ ಜನಿಸಿದ್ದಾರೆ. ಎಂ.ಎ ಸ್ನಾತಕೋತ್ತರ ಪದವಿಧರರಾದ ಇವರು ಪಿಹೆಚ್.ಡಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಬಸವಣ್ಣ, ಬುದ್ದ,ಅಂಬೇಡ್ಕರರ ವಿಚಾರಧಾರೆಗೆ ಮಾರುಹೋಗಿ, ಶರಣರ ತತ್ವನಿಷ್ಠೆಯ ಅಧ್ಯಾತ್ಮಿಕ ವೈಚಾರಿಕ ನೆಲೆಗಟ್ಟಿನಲ್ಲಿ, ವಚನ ಸಾಹಿತ್ಯ ಅಧ್ಯಯನ ಮಾಡಿದ ಇವರು ಲಿಂ. ಡಾ.ಮಾತೆ ಮಹಾದೇವಿಯವರಿಂದ ಲಿಂಗದೀಕ್ಷೆ ಮತ್ತು ಜಂಗಮ ದೀಕ್ಷೆ ಪಡೆದು ಬಸವಕಲ್ಯಾಣದ ಬಸವಧರ್ಮ ಪೀಠದ ಬಸವ ಮಹಾಮನೆಯಿಂದ ನಾಡಿನಾದ್ಯಂತ ಬಸವತತ್ವ ಪ್ರಚಾರದಲ್ಲಿ ತೊಡಗಿದ್ದಾರೆ. ಮತ್ತು ಮಾತಾಜಿಯವರ ಸಾಹಿತ್ಯ ಸೇರಿದಂತೆ ಕಲ್ಯಾಣದ ಶರಣರ ವಚನಗಳನ್ನು ಅಧ್ಯಯನ ಮಾಡಿದ ಇವರು `ಚಿಂತನ ತವನಿಧಿ' (ಚಿಂತನ) `ಶೋಧಿಸಿ ನೋಡು' (ಕವನ ಸಂಕಲನ) `ದಾಂಪತ್ಯ ಧರ್ಮ' (ಲೇಖನ ಸಂಕಲನ) `ಮೂಕ ಯೋಗಿ' (ಆತ್ಮಕತೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ.
ಶ್ರೀಗಳು ಧಾರ್ಮಿಕ ಸಾಮಾಜಿಕ ಸಂಘಟಕರು ಆಗಿರುವುದರಿಂದ ಅನ್ಯಾಯ ಅಪಪ್ರಚಾರದ ವಿರುದ್ಧ ಲೇಖನಗಳು ಬರೆದು ಆ ಮೂಲಕ ಹೋರಾಟಗಳನ್ನು ಮಾಡುತ್ತಾ ಬಂದಿದ್ದಾರೆ. ನಾಡಿನಾದ್ಯಂತ ರಾಷ್ಟ್ರೀಯ ಬಸವದಳದ ಶಾಖೆಗಳನ್ನು ತೆರೆದು ಹಳ್ಳಿಗಳಲ್ಲಿ ಬಸವತತ್ವ ಪ್ರಚಾರೋಪನ್ಯಾಸ ಮಾಡುವುದರೊಂದಿಗೆ ಅನಾಥ ಮಕ್ಕಳಿಗೆ ಉಚಿತ ಆಶ್ರಯ ನೀಡಿ `ಬಸವ ಮಹಾಮನೆ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ಥಾಪಿಸಲ್ಪಟ್ಟ ಅಕ್ಕನಾಗಲಾಂಬಿಕ ಮಕ್ಕಳ ಮಹಾಮನೆ' ಎಂಬ ಅನಾಥ, ನಿರ್ಗತಿಕ,ಎಚ್.ಐ.ವಿ.ಪೀಡಿತ ಮಕ್ಕಳಿಗೆ ಸುಮಾರು ೧೫ವರ್ಷಗಳಿಂದ ಶ್ರಮಿಸುತ್ತಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ವಿಜಯವಾಣಿ, ಕನ್ನಡ ಪ್ರಭ, ಸಂಯುಕ್ತ ಕರ್ನಾಟಕ, ಉದಯವಾಣಿ, ವಿಶ್ವವಾಣಿ, ಹೊಸ ದಿಂಗತ, ದಿ.ಹಿಂದೂ, ಕಲ್ಯಾಣ ಕಿರಣ, ಶೋಧವಾಣಿ ಇತ್ಯಾದಿ ಪತ್ರಿಕೆಗಳು ಹಾಗೂ ಆಕಾಶವಾಣಿ, ದೂರದರ್ಶನಗಳಲ್ಲಿ ಪ್ರಕಟ, ಪ್ರಸಾರವಾಗಿವೆ.
ಡಾ.ಶ್ರೇಯಾ ಯಶಪಾಲ್ ಮಹಿಂದ್ರಕರ್
ಕವಯತ್ರಿ ಡಾ. ಶ್ರೇಯಾ ಯಶಪಾಲ್ ಮಹಿಂದ್ರಕರ್ ರವರು ಬಳ್ಳಾರಿ ಜಿಲ್ಲೆ ಹೂವಿನಹಡಗಲಿ ತಾಲೂಕಿನ ಹೊಳಲು ಗ್ರಾಮದ ಪಾಂಡುರAಗರಾವ ಮತ್ತು ನಾಗರತ್ನ ದಂಪತಿಗಳಿಗೆ ದಿನಾಂಕ ೧-೪-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎ.ಎಂ.ಎಸ್.ಡಿ.ಎನ್.ಎಚ್.ಇ. ಎಂ.ಎಸ್.ಡೆಬ್ಲು ಸ್ನಾತಕೋತ್ತರ ಪದರವಿಧರರಾದ ಇವರು ಕೆಲ ವರ್ಷ ಬೆಂಗಳೂರಿನ ಗ್ರಾಮಾಂತರ ಜಿಲ್ಲೆಯ ಬೆಂಡಿಗಾನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಆಯುಷ್ಯ ಮೆಡಿಕಲ್ ಆಫಿಸರ್ ಆಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ವಿವಾಹವಾದ ನಂತರ ಪತಿ ಡಾ. ಯಶಪಾಲ್ ಮಹಿಂದ್ರಕರ್ ರವರೊಂದಿಗೆ ಬೀದರಗೆ ಬಂದು ಇಲ್ಲಿಯು ಕೆಲವರ್ಷ ದಿಲ್ಲಿ ಪ್ಯಾರಾ ಮೇಡಿಕಲ್ ಇನ್ಸ್ಟಿಟ್ಯೂಟ್ನ ಪ್ರಿನ್ಸಿಪಾಲ್ರಾಗಿ ಸೇವೆ ಸಲ್ಲಿಸಿದ್ದಾರೆ. ವೃತ್ತಿಯಲ್ಲಿ ವೈದ್ಯರಾದರೂ ಪ್ರವೃತ್ತಿಯಲ್ಲಿ ಕವಯತ್ರಿಯಾಗಿ ಗುರುತಿಸಿಕೊಂಡ ಇವರು ತಮ್ಮ ಪತಿ ಬ್ರೀಮ್ಸ್ ಸರ್ಕಾರಿ ಆಸ್ಪತ್ರೆಯಲ್ಲಿ ೧೫ ವರ್ಷಗಳಿಂದ ವೈದ್ಯರಾಗಿ ಸೇವೆ ಸಲ್ಲಿಸುತ್ತಿರುವುದರಿಂದ ಗೃಹಿಣಿಯಾಗಿದ್ದುಕೊಂಡು ೨೦೨೦ರಲ್ಲಿ `ಚೈತ್ರದ ಚಿಗುರು' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಇವರಿಗೆ ಬೀದರದ ಮಂದಾರ ಕಲಾವಿದರ ವೇದಿಕೆ ಹಾಗೂ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾವ್ಯ ರತ್ನ, ಇತ್ಯಾದಿ ಪ್ರಶಸ್ತಿಗಳು ಲಭಿಸಿವೆ. ಇವರು ಕವನ ಲೇಖನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಉಮೇಶ ಬಾಬು ಮಠದ
`ಉಬಾಮ' ಎಂಬ ಕಾವ್ಯನಾಮದ ಕವಿ ಉಮೇಶ ಬಾಬು ಮಠದ್ ರವರು ಮೂಲತಃ ಬಳ್ಳಾರಿ ಜಿಲ್ಲೆ ಕೂಡ್ಲಿಗಿ ತಾಲೂಕಿನ ಹಲ್ಲಹಳ್ಳಿ ಗ್ರಾಮದ ಬಸ್ಸಯ್ಯಾ ಮತ್ತು ಏಕಾಂತಮ್ಮ ದಂಪತಿಗಳಿಗೆ ದಿನಾಂಕ ೨೩-೬-೧೯೮೩ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್. ಪದವಿಧರಾದ ಇವರು ಹುಮನಾಬಾದ ನ್ಯಾಯಾಲಯದ ಡಿ.ದರ್ಜೆಯ ನೌಕರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬೀದರ ಜಿಲ್ಲೆ ಸಾಹಿತಿಗಳ ಒಡನಾಟದಿಂದಲೇ ಸಾಹಿತ್ಯ ರಚಿಸಿ, ಪುಸ್ತಕ ಪ್ರಕಟಿಸಿ ಲೇಖಕರಾಗಿ ಹೊರಹೊಮ್ಮಿದರಿಂದ "ನಾನು ಸಾಹಿತಿಯಾಗಬೇಕಾದರೆ ಬೀದರ ಜಿಲ್ಲೆಯ ಪರಿಸರವೆ ಕಾರಣ ’’ ಎಂದು ಹೇಳುತ್ತಾರೆ. ಮತ್ತು `ವಸುಧೆಯೊಳಗಿನ ಅರ್ಭಟ' (ಕವನಸಂಕಲನ) `ಚಿಗುರೆಲೆಗಳು ' (ಚುಟುಕು ಸಂಕಲನ) `ಸೋತ ಮನಸ್ಸಿಗೆ ಸಮಾಧಾನ' (ಕಥಾಸಂಕಲನ) `ಬೆವರ್ಸಿ ಬದುಕಿನ ಬರಹಗಳು' (ಲೇಖನ ಸಂಕಲನ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಮತ್ತು `ನಿತ್ಯ ಸಂಜೀವಿನಿ ಮಂಗಳಾರತಿ' ಎಂಬ ಸಂಪಾದಿತ ಕೃತಿ ಮುದ್ರಣದ ಹಂತದಲ್ಲಿದೆ. ಇವರ ಬರಹಗಳು ನಾಡಿನ ಹಲವು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಹುಮನಾಬಾದನಲ್ಲಿ ವಾಸವಾಗಿದ್ದಾರೆ.
ಡಾ. ನಿಜಲಿಂಗ ಆರ್ ರಗಟೆ
ಸಾಹಿತಿ ನಿಜಲಿಂಗ ಆರ್.ರಗಟೆ ಯವರು. ಮೂಲತಃ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಚುಮ್ಮನಚೋಡ ಗ್ರಾಮದ ರಾಜಗುರು ಮತ್ತು ಇರಮ್ಮಾ ದಂಪತಿಗಳಿಗೆ ದಿನಾಂಕ ೪-೧೧-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಬಿ.ಎ.ಮತ್ತು ಡಿ.ಸಿ.ಎ.ಪದವಿ ಪಡೆದ ಇವರು ಭಾಲ್ಕಿಯ ಡಿ.ಸಿ.ಸಿ ಬ್ಯಾಂಕ್ ಸಿಬ್ಬಂದಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು `ಕನ್ನಡ ಒಡಲು', `ಕನ್ನಡ ಕಣಜ', `ನನ್ನ ಕವನ' (ಕವನ ಸಂಕಲನಗಳು) `ಕಥಾಗುಚ್ಚ' (ಕಥಾ ಸಂಕಲನ) `ಸಿರಿವಂತನ ದರ್ಪ' (ನಾಟಕ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಸಂಯುಕ್ತ ಕರ್ನಾಟಕ, ಬೀದರ ರಹಸ್ಯ, ಮೊದಲಾದ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ೨೦೦೧ರಿಂದ ೨೦೦೫ರವರೆಗೆ ಚಿಂಚೋಳಿ ತಾಲೂಕಿನ ಚಿಮ್ಮನಚೋಡ್ ವಲಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಸಾಹಿತ್ಯ ಸಿಂಚನ ಬೆಂಗಳೂರು ಮತ್ತು ಬಿಜಾಪುರ ಲೇಖಕರ ಬಳಗದಿಂದ ರಾಜ್ಯ ಮಟ್ಟದ ಪ್ರಶಸ್ತಿ, ಶಹಾಪೂರ ಸಾಗರದ ಕಲಾನಿಕೇತನ ಟ್ರಸ್ಟ್ ವತಿಯಿಂದ ರಾಜ್ಯೋತ್ಸವ ಪ್ರಶಸ್ತಿ, ಕಾಸರಗೋಡಿನ ರಾಜ್ಯಮಟ್ಟದ ಕವಿ ಸಮ್ಮೇಳನದಲ್ಲಿ ಕವಿರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಅಷ್ಟೇಯಲ್ಲದೆ ಇವರಿಗೆ ನ್ಯಾಷನಲ್ ವರ್ಚುಲ್ ಯೂನಿವರ್ಸಿಟಿಯಿಂದ ಗೌರವ ಡಾಕ್ಟರೇಟ್ ಪದವಿಯು ನೀಡಿ ಗೌರವಿಸಲಾಗಿದೆ. ಹಾಗೂ ನೈಜದೀಪ ಸಾಹಿತ್ಯಿಕ ಮತ್ತು ಸಾಂಸ್ಕೃತಿಕ ಪ್ರತಿಷ್ಠಾನ ಬೀದರ ಹಾಗೂ ಚಿಂಚೋಳಿ ತಾಲೂಕಿನ ಚಿಮ್ಮನಚೋಡದಲ್ಲಿ ಕೆಲವು ಕಾರ್ಯಕ್ರಮಗಳು ಮಾಡಿ ಸಾಹಿತಿ, ಕಲಾವಿದರಿಗೆ ಪ್ರಶಸ್ತಿ ಪುರಸ್ಕಾರಗಳು ನೀಡಿ ಪ್ರೊತ್ಸಾಹಿಸುತ್ತಿದ್ದಾರೆ. ಇವರಿಗೆ ೨೦೨೧ ಜನೆವರಿ ೨೧ ರಂದು ಬೀದರ ತಾಲೂಕಾ ೨ನೇ ತಾಲೂಕಾ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ಡಾ.ರಾಮಚಂದ್ರ ಗಣಾಪೂರ
ಸಾಹಿತಿ ಡಾ.ರಾಮಚಂದ್ರ ಗಣಾಪೂರ. ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಸುಲೆಪೇಟ್ ಗ್ರಾಮದ ಭೀಮಣ್ಣ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧೫-೦೨-೧೯೭೫ರಲ್ಲಿ ತನ್ನ ತಾಯಿ ತವರುಮನೆ ಹುಮನಾಬಾದ ತಾಲೂಕಿನ ಹುಡಗಿ ಗ್ರಾಮದಲ್ಲಿ ಜನಿಸಿದ್ದಾರೆ. ಎಂ.ಎ. ಎಂ. ಫೀüಲ್., ಪಿ.ಹೆಚ್.ಡಿ. ಪದವಿಧರರಾದ ಇವರು ಬೀದರದ ಜ್ಞಾನಕಾರಂಜಿ ಹಾಲಹಳ್ಳಿ ಸ್ನಾತಕೋತ್ತರ ಕೇಂದ್ರದಲ್ಲಿ ಎಂಟು ವರುಷಗಳಿಂದ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು `ನಿಮ್ಮೊಡನಿದ್ದೂ ನಿಮ್ಮಂತಾಗದೆ', `ತನುವೆಂಬ ಮನೆಯೊಳಗೆ,' `ಸಾಹಿತ್ಯ ಸಮೀಕ್ಷೆ,' `ಶಿಷ್ಯನೆಂಬಾ ವನಕ್ಕೆ', `ನಿತ್ಯೋತ್ಸವದ ಕವಿ ನಿಸಾರ್ ಅಹಮದ್', `ನಾಗಾರ್ಜುನ ಕಾಳಗ', `ಗುಲಬರ್ಗಾ ಜಿಲ್ಲೆಯ ಆಧುನಿಕ ವಚನ ಸಾಹಿತ್ಯ', `ಸುವರ್ಣ ದಾಂಪತ್ಯ', `ಕ್ವಾಟಿ ಜಾನಪದ', `ಸೌಮ್ಯ ಸಿರಿ.’ ಇತ್ಯಾದಿ ೧೪ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕಲಬುರಗಿ ಹಾಗೂ ರಾಯಚೂರು ಆಕಾಶವಾಣಿಯಿಂದ ಅನೇಕ ಕಾರ್ಯಕ್ರಮಗಳು ಬಿತ್ತರಗೊಂಡಿವೆ. ಮತ್ತು ರಾಷ್ಟಿçÃಯ ಅಂತರರಾಷ್ಟ್ರೀಯ ವಿಚಾರ ಸಂಕಿರಣಗಳು ಸೇರಿದಂತೆ ಹಲವಾರು ರಾಜ್ಯ ಮಟ್ಟದ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಇವರಿಗೆ ಭಾರತೀಯ ದಲಿತ ಸಾಹಿತ್ಯ ಅಕಾಡೆಮಿ ದೆಹಲಿಯ ವತಿಯಿಂದ ಡಾ. ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ, ಕವಿ ಸೂರ್ಯ ಪ್ರಶಸ್ತಿ, ಕಲ್ಯಾಣ ಚನ್ನಶ್ರೀ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಮತ್ತು `ಸ್ನೇಹಗಂಗಾ' ಮಾಸಪತ್ರಿಕೆಯ ಸಂಪಾದಕರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ.
ಡಾ. ಗವಿಸಿದ್ದಪ್ಪ ಎಚ್.ಪಾಟೀಲ್.
`ಗವೀಶ್’ ಎಂಬ ಕಾವ್ಯನಾಮ ಮತ್ತು `ಪಾಟೀಲ ಗವಿಸಿದ್ಧ' ಎಂಬ ವಚನಾಂಕಿತದಿAದ ಬರೆಯುತ್ತಿರುವ ಸಾಹಿತಿ ಡಾ.ಗವಿಸಿದ್ದಪ್ಪ ಎಚ್.ಪಾಟೀಲ್ ರವರು ಮೂಲತಃ ಕೊಪ್ಪಳ ಜಿಲ್ಲೆ ಬಿಸರಹಳ್ಳಿ ಗ್ರಾಮದ ಹನುಮಂತಗೌಡ ಪಾಟೀಲ ಮತ್ತು ಶಾರದಾ ದಂಪತಿಗಳಿಗೆ ದಿನಾಂಕ ೧೬-೬-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ.ಪದವಿಧರರಾದ ಇವರು ೨೦೦೭ರಿಂದ ಬಸವಕಲ್ಯಾಣ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸಹಾಯಕ ಕನ್ನಡ ಪ್ರಾಧ್ಯಾಪಕರಾಗಿ, ಪ್ರಭಾರಿ ಪ್ರಾಂಶುಪಾಲರಾಗಿ, ಸೇವೆ ಸಲ್ಲಿಸಿ, ೨೦೧೭ರಿಂದ ಹುಮನಾಬಾದ ಕಾಲೇಜಿನ ಪಿಜಿ ಸಂಯೋಜಕರಾಗಿ ಸೇವೆ ಸಲ್ಲಿಸಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದ ಆಸಕ್ತರಾದ ಇವರು `ಕನಸುಗಣ್ಣಿನ ಹುಡುಗಿ' (ಕವನಸಂಕಲನ) `ಕಾಗದದ ಚೂರು' (ಕಥಾಸಂಕಲನ). `ಜನಜಾನಪದ', `ಹೊತ್ತರಳಿ', `ಜಾನಪದ ಕೈದೀವಿಗೆ', `ರಂಗ ಸಿರಿ', `ವಚನ ಸಿರಿ’, `ಶಿವದಾಸ ಚಿಂತನೆ', `ಅರಿವಿನ ಬೆಳಕಲ್ಲಿ' ಇವು ಅವರ ಪ್ರಮುಖ ಕೃತಿಗಳಾಗಿವೆ. ಮತ್ತು ವ್ಯಕ್ತಿ ಚಿತ್ರಣ, ಜೀವನ ಚರಿತ್ರೆ, ವಿಮರ್ಶೆ, ,ಪಠ್ಯ ಪುಸ್ತಕ, ಅಭಿನಂದನಾ ಗ್ರಂಥ, ಸ್ಮರಣ ಸಂಚಿಕೆ, ದಾಸ ಸಾಹಿತ್ಯ, ಸಂಪಾದನೆ ಸೇರಿ ಒಟ್ಟು ೯೪ಕೃತಿಗಳಲ್ಲಿ ೫೨ಸೃಜನಶೀಲ ಮತ್ತು ೪೨ಸಂಪಾದಿತ ಕೃತಿಗಳು ಪ್ರಕಟಿಸಿದ್ದಾರೆ. ೫೦ಕ್ಕೂ ಹೆಚ್ಚು ಅಭಿನಂದನ ಗ್ರಂಥ ೧೦೦ಕ್ಕೂ ಹೆಚ್ಚು ಪ್ರಾತಿನಿಧಿಕ ಸಂಕಲನಗಳಲ್ಲಿ ಹಾಗೂ ಆಕಾಶವಾಣಿ ದೂರದರ್ಶನಗಳಲ್ಲಿ ಇವರ ಬರಹಗಳು ಪ್ರಕಟ, ಪ್ರಸಾರವಾಗಿವೆ. ಇವರಿಗೆ ಕರ್ನಾಟಕ ಸರಕಾರದ ಕನಕ ಯುವ ಪುರಸ್ಕಾರ, ಹಾರಕೂಡ ಮಠದಿಂದ ಚನ್ನಶ್ರೀ ಪ್ರಶಸ್ತಿ ಸೇರಿದಂತೆ ಮೊದಲಾದ ೪೦ಕ್ಕೂ ಹೆಚ್ಚು ಪ್ರಶಸ್ತಿಗಳು ಲಭಿಸಿವೆ. ಮತ್ತು ಇವರಿಗೆ ಬೇಲೂರಿನಲ್ಲಿ ಜರುಗಿದ `ಹೈದರಾಬಾದ ಕರ್ನಾಟಕ ಪ್ರಥಮ ಯುವ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಗೌರವಿಸಲಾಗಿದೆ ಇವರು ಧರಿನಾಡು ಕನ್ನಡ ಸಂಘ, ದಾಸ ಸಾಹಿತ್ಯ ಪರಿಷತ್ತು, ಲೋಹಿಯಾ ಪ್ರತಿಷ್ಠಾನ, ಬೀದರ ಜಿಲ್ಲಾ ಶರಣು ವಿಶ್ವ ವಚನ ಫೌಂಡೇಷನ್ ಅಧ್ಯಕ್ಷರಾಗಿದ್ದಾರೆ. ಮತ್ತು ಸಾಕ್ಷಿ ಪ್ರತಿಷ್ಠಾನದ ಮೂಲಕ ಅನೇಕ ಸಾಹಿತಿಗಳಿಗೆ ಪ್ರಶಸ್ತಿ ಪುರಸ್ಕಾರವು ನೀಡುತ್ತಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)