ಶನಿವಾರ, ಜನವರಿ 11, 2025
ವಿಜಯಕುಮಾರ್ ಎಸ್.ಗೌರೆ
ಸಾಹಿತಿ ವಿಜಯಕುಮಾರ್ ಎಸ್.ಗೌರೆ. ಇವರು ಬೀದರ ಜಿಲ್ಲೆ ಔರಾದ ತಾಲೂಕಿನ ನಿಟ್ಟೂರ ಕೆ ಗ್ರಾಮದ ಶರಣಪ್ಪ ಮತ್ತು ಕಾಶಮ್ಮ ಎಂಬ ದಂಪತಿಗಳಿಗೆ ದಿನಾಂಕ ೦೧-೦೬-೧೯೬೬ರಂದು ಜನ್ಮ ತಳೆದು ಎಂ.ಎ.ಕನ್ನಡ ಹಾಗೂ ಎಂ.ಎ.ಸಮಾಜ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿಧರರಾಗಿ ೧೯೯೬ರಲ್ಲಿ ಸರಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ೨೦೦೬ ರಿಂದ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ೨೦೧೧ ರಲ್ಲಿ `ಆಡದೆ ಉಳಿದ ಮಾತುಗಳು' (ಕವನ ಸಂಕಲನ) ೨೦೧೪ರಲ್ಲಿ `ಬಯಲು ಬಯಲಾಯ್ತು ನೋಡ' (ಆಧುನಿಕ ವಚನ ಸಂಕಲನ) `ಮುಸ್ಸಂಜೆ ರಂಗೇರಿದಾಗ' (ಗಜಲ್) `ಶಿಕ್ಷಣ ಸಿರಿ' (ಸಂಪಾದನೆ) ಎಂಬ ಒಟ್ಟು ನಾಲ್ಕು ಕೃತಿಗಳು ಹೊರತಂದಿದ್ದಾರೆ. ಕಲಬುರಗಿಯ ೮೫ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ತಾಲೂಕು, ಜಿಲ್ಲಾ ಮಟ್ಟದ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಕವನ ವಾಚಿಸಿ ಕೆಲ ಉಪನ್ಯಾಸಗಳನ್ನು ನೀಡಿದ ಇವರು ಸರಕಾರಿ ನೌಕರರ ಕಲಾ ಮತ್ತು ಸಾಂಸ್ಕೃತಿಕ ವೇದಿಕೆಯ ಜಿಲ್ಲಾ ಅಧ್ಯಕ್ಷರಾಗಿ, ಅಖಿಲ ಭಾರತ ವೀರಶೈವ ಮಹಾಸಭಾ ಬೀದರ ತಾಲೂಕು ಅಧ್ಯಕ್ಷರಾಗಿ, ಕರ್ನಾಟಕ ಪರಿಸರ ವೇದಿಕೆಯ ಕಾರ್ಯದರ್ಶಿಯಾಗಿ, ಕೆಲಸಂಘ ಸಂಸ್ಥೆಯ ಪದಾಧಿಕಾರಿಯಾಗಿ, ಸೇವೆ ಸಲ್ಲಿಸಿದ ಇವರಿಗೆ ೨೦೨೦ರ ಬೀದರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಯು ಲಭಿಸಿದೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಕಾಮೆಂಟ್ಗಳನ್ನು ಪೋಸ್ಟ್ ಮಾಡಿ (Atom)
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ