ಬೀದರ ಜಿಲ್ಲೆಯ ಸಾಹಿತಿಗಳು
ಹಿರಿ-ಕಿರಿಯ ಸಾಹಿತಿಗಳ ಪರಿಚಯ ಮಾಲೆ
ಗುರುವಾರ, ಫೆಬ್ರವರಿ 13, 2025
ಅಜೇಯ್ ಪಿ ಎಸ್
'ಕವಿ ರಾಕ್ಷಸ' ಎಂಬ ಕಾವ್ಯ ನಾಮದಿಂದ ಬರೆಯುತ್ತಿರುವ ಯುವ ಸಾಹಿತಿ ಅಜೇಯ್ ಪಿ ಎಸ್ (ಎ.ಜೆ) ರವರು ಬೀದರ ಜಿಲ್ಲೆ, ಚಿಟಗುಪ್ಪ ತಾಲೂಕಿನ ಮುತ್ತಂಗಿ ಗ್ರಾಮದವರು.
ತಂದೆ ಪ್ರಭು ತಾಯಿ ಅನೀತಾ ರವರ ಸುಪತ್ರನಾಗಿ ದಿನಾಂಕ 20-7-1998 ರಲ್ಲಿ ಜನಿಸಿದ್ದಾರೆ.
ಇಂಜಿನಿಯರಿಂಗನಲ್ಲಿ ಪದವೀಧರನಾದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಪ್ರಕಟವಾಗಿವೆ. ಮತ್ತು 'ಮೊಗ್ಗು' ಎನ್ನುವ ಕವನ ಸಂಕಲನ ಬಿಡುಗಡೆ ಮಾಡಿದ್ದಾರೆ ' ಅಷ್ಟೇಯಲ್ಲದೇ ಕೆಲ ಕತೆ ಕವನ ಲೇಖನ ಹಾಗೂ ಮಿನಿಕಾದಂಬರಿಗಳು ಬರೆದಿದ್ದು ಅವು ಪ್ರಕಟಣೆಯ ಹಂತದಲ್ಲಿವೆ. ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಸಧ್ಯ ಸಾಫ್ಟವೇರ್ ಇಂಜನಿಯರಾಗಿ ಹೈದರಾಬಾದಿನಲ್ಲಿ ಕೆಲಸ ಮಾಡುತ್ತಿದ್ದಾರೆ
ಕಲ್ಯಾಣ ಸಿರಿಗನ್ನಡ ಸಾಹಿತ್ಯ ತಾಣಕ್ಕೆ ಬೇಟಿ ಕೊಡಿ
ಶನಿವಾರ, ಫೆಬ್ರವರಿ 8, 2025
ಸಿದ್ಧಾರ್ಥ ಟಿ ಮಿತ್ರಾ.
ಉದಯೋನ್ಮುಖ ಯುವ ಕವಿ, ಸಾಹಿತಿ ಹಾಗೂ ಲೇಖಕರಾದ ಸಿದ್ಧಾರ್ಥ ಟಿ.ಮಿತ್ರಾ ರವರು ಬೀದರ ಜಿಲ್ಲೆಯ ಹುಮನಾಬಾದ ತಾಲ್ಲೂಕಿನ ದುಬಲಗುಂಡಿ ಗ್ರಾಮದವರು. 3-11-1989 ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಸ್ನಾತಕೋತ್ತರ ಪದವೀಧರರಾದ ಇವರು ಶಿಕ್ಷಕ ವೃತ್ತಿಯಲ್ಲಿ ತೊಡಗಿದ್ದಾರೆ. ಮತ್ತು ಸಾಹಿತ್ಯ ಕ್ಷೇತ್ರದಲ್ಲಿಯೂ ತುಂಬ ಆಸಕ್ತರಾಗಿ ಕವನ ಲೇಖನ ಮೊದಲಾದ ಬರಹಗಳ ಮೂಲಕ ಸಾಹಿತ್ಯ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಇವರು ಬರೆದ ಹಲವಾರು ಲೇಖನಗಳು ಜನ ಮೆಚ್ಚುಗೆ ಗಳಿಸಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ
'ಕಲ್ಯಾಣದಲ್ಲಿ ಕಾಯಕಯೋಗಿ ನೆಲೆಸಿರಲು ಕಲ್ಲಿಗ್ಯಾಕೆ ಪೂಜೆ, ಲೋಕದ ಡೊಂಕು ತಿದ್ದುವ ಭರದಲ್ಲಿ ಕಾವಿಗೆ ಕಳಂಕ ತಂದ ಕಾವಿಧಾರಿಗಳು, ಕೊರತೆಗಳ ನಡುವೆಯೂ ವಿಶ್ವದ ಗಮನ ತನ್ನತ ಸೆಳೆದ ಈ ನೇಲದ ವೀರ ಮಾತೆಯರು, ಸಾಹೇಬ್ ನಾನು ಬರುತ್ತೆನೆ ನೀಮ್ಮ ಜೊತೆ, ಶೌರ್ಯ ಭೂಮಿ ಭೀಮಾಕೊರೆಗಾಂವ ,
ಬುದ್ದನಷ್ಟೆ ಪರಿಶುದ್ಧ ವ್ಯೆಕ್ತಿ ಅಂಬೇಡ್ಕರ್. ಇತ್ಯಾದಿಗಳಾಗಿವೆ.
ಸಾಹಿತ್ಯ ಕೃಷಿಗೆ ಮೆಚ್ಚಿ
ಜಿಲ್ಲಾ ಮಟ್ಟದ 'ಕನ್ನಡ ಸೇವಾ ರತ್ನ ಪ್ರಶಸ್ತಿ, ರಾಷ್ಟ್ರ ಮಟ್ಟದ ಸಾಹಿತ್ಯ ಸೌರಭ, ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ
ಅಶ್ವಜೀತ ದಂಡಿನ್.
ಉದಯೋನ್ಮುಖ ಯುವ ಬರಹಗಾರರಾದ ಅಶ್ವಜೀತ ದಂಡಿನ ರವರು ಬೀದರ ತಾಲ್ಲೂಕಿನ ಮಾಳೆಗಾಂವ ಗ್ರಾಮದವರು. ತಂದೆ ಬಕ್ಕಪ್ಪ ತಾಯಿ ಪಾರ್ವತಿಯವರ ಸುಪತ್ರನಾಗಿ ದಿನಾಂಕ 5-12-1996 ರಲ್ಲಿ ಜನಿಸಿದ್ದಾರೆ. ಪಿಯುಸಿ ಮತ್ತು ಐಟಿಐ ವರೆಗೆ ಅಧ್ಯಯನ ಮಾಡಿದ ಇವರು ಕತೆ, ಕವನ, ಲೇಖನ ಮತ್ತು ವೈಚಾರಿಕ ಬರಹಗಳನ್ನು ಬರೆಯುತ್ತಿದ್ದಾರೆ.
ಇವರ ಬರಹಗಳು ನಾಡಿನ ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಹಾಗೂ ವಿವಿಧ ಅಂತರ್ಜಾಲ ತಾಣಗಳಲ್ಲಿ ಅವು ಪ್ರಕಟವಾಗಿವೆ. ಅಷ್ಟೇಯಲ್ಲದೇ ಇವರು ಬರೆದ 'ಚಿಮ್ಮಿದ ಬುಗ್ಗೆ, (ಕವನ ಸಂಕಲನ) ಬುದ್ದ ಭೀಮರ ಭಜನೆಹಾಡುಗಳು, ಧರಿನಾಡ ಸಿರಿ, ನೆಲದ ಅಳಲು '' ಎಂಬ ಕೆಲ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ.
ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ನಾಡಿನ ಹಲವಾರು ಕನ್ನಡ ಪರ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ. ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಆದರೆ ಸಾಹಿತಿ ಅಶ್ವಜೀತ ದಂಡಿನ ರವರು ಬಾಲ್ಯದಲ್ಲಿ ಅಪಘಾತಕ್ಕೆ ಈಡಾಗಿ ಕಾಲಿನ ಮೂಳೆ ಮುರಿದಿದಕ್ಕಾಗಿ ಚಿಕಿತ್ಸೆ ಪಡೆದು ಮಾತ್ರೆ ಸೇವಿಸಿದಕ್ಕಾಗಿ ಅದು ಅವರ ಕಿವಿಗಳ ಮೇಲೆ ಅಡ್ಡಪರಿಣಾಮ ಬಿರಿ ಶೇ.೬೯% ಕೇಳುವ ಶಕ್ತಿ ಕಳೆದುಕೊಂಡು ಕೇಳಿಸುವಿಕೆಯ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎನ್ನುವುದು ನೋವಿನ ಸಂಗತಿಯಾಗಿದೆ.
ಮಂಗಳವಾರ, ಜನವರಿ 21, 2025
ಸಂಜೀವ ಪಿ.ಸರ್ಯವಂಶಿ.
ಉದಯೋನ್ಮುಖ ಕವಿ, ಸಾಹಿತಿಗಳಾಗಿ ಗರ್ತಿಸಿಕೊಂಡು ಮರಾಠಿ ಭಾಷೆಯಲ್ಲಿ ಕತೆ,ಕವನ, ಲೇಖನ ಮೊದಲಾದ ತರಹದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಸಂಜೀವ ಪಿ.ಸರ್ಯವಂಶಿ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಭಾಟಸಾಂಗವಿ ಗ್ರಾಮದ ಪುಂಡಲೀಕರಾವ ಮತ್ತು ಕೇರಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೬ ರಲ್ಲಿ ಜನಿಸಿದ್ದಾರೆ. ಎಂ.ಎ. (ಮರಾಠಿ) ಸ್ನಾತಕೋತ್ತರ ಪದವಿಧರರಾದ ಇವರು ಭಾಲ್ಕಿಯ ಅಕ್ಕ ಮಹಾದೇವಿ ಮಹಿಳಾ ಪದವಿ ಪರ್ವ ಮಹಾವಿದ್ಯಾಲಯದಲ್ಲಿ ಮರಾಠಿ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಾತೃಭಾಷೆ ಮರಾಠಿಯಾಗಿದ್ದರು ಕೂಡ ಕನ್ನಡ, ಹಿಂದಿ, ಇಂಗ್ಲೀಷ್, ಭಾಷಾ ಪ್ರಾವೀಣ್ಯತೆಯನ್ನು ಹೊಂದಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಪ್ರಕಾರದ ಕತೆ ಕವನ ಲೇಖನ ಪ್ರಬಂಧ ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ೨೦೧೪ ರಲ್ಲಿ 'ಚಕ್ರ.' ಎಂಬ (ಕವನ ಸಂಕಲನ) ಮರಾಠಿ ಭಾಷೆಯಲ್ಲಿ ಬರೆದು ಪುಸ್ತಕ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರ ಕವನ, ಲೇಖನ,ಪ್ರಬಂಧ, ಹನಿಗವನ, ಬರಹಗಳು 'ಅಸ್ಮೀತಾ' ಮತ್ತು 'ಅನುಬಂಧ' ಎಂಬ ಮರಾಠಿ ತ್ರೈಮಾಸಿಕ ಪತ್ರಿಕೆ ಹಾಗೂ ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿ ಅವು ಪ್ರಕಟವಾಗಿವೆ. ಇವರಿಗೆ ನಾಡಿನಾದ್ಯಂತ ಹಲವಾರು ಪ್ರಶಸ್ತಿ, ಪುರಸ್ಕಾರಗಳು ಲಭಿಸಿವೆ.
ಡಾ.ರಣಧೀರ ಬೇಲೂರ
ಉದಯೋನ್ಮುಖ ಯುವ ಬರಹಗಾರರಲ್ಲಿ ಒಬ್ಬರಾಗಿ ಕಾವ್ಯ ಲೇಖನ, ವಿಮರ್ಶೆ, ಸಂಶೋಧನಾ ಕೃತಿಗಳನ್ನು ಪ್ರಕಟಿಸಿದ ಯುವ ಲೇಖಕರೆಂದರೆ, ಡಾ.ರಣಧೀರ ಬೇಲೂರ. ಇವರು ಬೀದರ ಜಿಲ್ಲೆ ಹುಲಸೂರು ತಾಲೂಕಿನ ಬೇಲೂರು ಗ್ರಾಮದ ಶ್ರೀ ಬಸ್ಸಪ್ಪ ಭರಮಣೆ ಮತ್ತು ಶೋಭಾವತಿ ದಂಪತಿಗಳಿಗೆ ದಿನಾಂಕ 24-6-1990ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.ಪದವಿಧರ
ರಾದ ಇವರು 2018ರಿಂದ ಶಿವಮೊಗ್ಗದ ಡಿ.ವಿ .ಎಸ್.ಅನುದಾನಿತ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಸಹ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕೆಲ ಕೃತಿಗಳು ಹೊರ ತಂದಿದ್ದಾರೆ. ಅವುಗಳೆಂದರೆ 2018ರಲ್ಲಿ 'ಹೊಸ ಹೆಜ್ಜೆ' ಎಂಬ ವಿಮರ್ಶಾ ಕೃತಿ, ಮತ್ತು 'ನವೋದಯ ಕವಿ ಕಾವ್ಯ' ಎಂಬ ಸಂಪಾದಿತ ಕೃತಿಯು ಪ್ರಕಟಿಸಿದರೆ, 2019ರಲ್ಲಿ 'ಶಿವ ನೆನೆ' ಎಂಬ ಮತ್ತೊಂದು ಸಂಶೋಧನಾ ಲೇಖನಗಳ ಕೃತಿಯೂ ಪ್ರಕಟಿಸಿದ್ದಾರೆ. ಮತ್ತು 'ಬಸವ ಮುಖಿ ಪ್ರಜ್ಞೆ' ಹಾಗೂ 'ಬಸವಣ್ಣ' ಎಂಬ ಕೃತಿಗಳು ಪ್ರಕಟಣೆಯ ಹಂತದಲ್ಲಿವೆ. ಇವರ ಲೇಖನ ಬರಹಗಳು ನಾಡಿನ ಪ್ರಮುಖ ಪತ್ರಿಕೆಗಳಾದ ಸ೦ವಾದ,ಅರಹು-ಕುರಹು, ಕವಿಮಾರ್ಗ,ಹೊಸತು, ಲಿಂಗಾಯತ ದರ್ಶನ,ಚಿಂತನಾ,ಶಿಕ್ಷಣ ಸೌಧ ಇತ್ಯಾದಿ ಪತ್ರಿಕೆಗಳಲ್ಲಿ 50ಕ್ಕೂ ಹೆಚ್ಚು ಲೇಖನಗಳು ಪ್ರಕಟವಾಗಿವೆ. ಮತ್ತು ರಾಜ್ಯ, ರಾಷ್ಟ್ರ ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿಯೂ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಸದ್ಯ ಇವರು ಶಿವಮೊಗ್ಗದಲ್ಲಿ ವಾಸವಾಗಿದ್ದು, ತಮ್ಮ ಪ್ರಾಧ್ಯಾಪಕ ವೃತ್ತಿ ಬದುಕಿನೊಂದಿಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಪೂಜ್ಯ. ಶ್ರೀ ಪಂಚಾಕ್ಷರಿ ಉರಿಲಿಂಗಪೆದ್ದಿ ಸ್ವಾಮಿಜಿ.
ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಒಬ್ಬರಾಗಿ ಗುರುತಿಸಿಕೊಂಡು *,ಚಿಂತನ* *ಶರಣ ಸಾಹಿತ್ಯ*, ಸೇರಿದಂತೆ ಮೊದಲಾದ ಬರಹಗಳು ಬರೆದು,ಶರಣರ ವಚನಗಳು ಸಂಗ್ರಹಿಸಿ ಪುಸ್ತಕ ಪ್ರಕಟಿಸಿದ ಲೇಖಕ, ಮಠಾಧೀಶರೆಂದರೆ ಪೂಜ್ಯ. ಶ್ರೀ. ಪಂಚಾಕ್ಷರಿ ಸ್ವಾಮಿಗಳು. ಇವರು ಬೀದರ ಜಿಲ್ಲೆಯ ನೂತನ ಹುಲಸೂರು ತಾಲ್ಲೂಕಿನ ಬೇಲೂರು ಗ್ರಾಮದ ಶಿವಕುಮಾರ ಸ್ವಾಮಿ ಮತ್ತು ಶೇಷಾಬಾಯಿ ದಂಪತಿಗಳಿಗೆ ದಿನಾಂಕ ೯-೯-೧೯೭೩ ರಲ್ಲಿ ಜನಿಸಿದ್ದಾರೆ. ಇವರು ಕಲಿತದ್ದು ಬರಿ ಏಳನೇ ತರಗತಿಯವರೆಗೆ ಮಾತ್ರ. ಚಿಕ್ಕಂದಿನಲ್ಲಿ ಮುಂಬೈ, ಅಹಮದಾಬಾದ ನಗರಗಳಿಗೆ ವಲಸೆ ಹೋಗಿ, ಕೂಲಿ ಕಾರ್ಮಿಕರಾಗಿ ದುಡಿದ ಶ್ರೀಗಳು ಆಕಸ್ಮಿಕ ತಮ್ಮ ತಂದೆಯ ಕಾಲವಾದ ನಂತರ ಮಠದ ಪೀಠಾಧ್ಯಕ್ಷರಾಗಿದ್ದ ಚಿಕ್ಕಪ್ಪ ಬಸವಂತ ಸ್ವಾಮಿಯೂ ಅನಾರೋಗ್ಯದಿಂದ ಇಹಲೋಕ ತ್ಯಜಿಸಿದರು.ಆಗ ಭಕ್ತರ ಆಶಯದಂತೆ ಪಂಚಾಕ್ಷರಿ ಸ್ವಾಮಿಗಳು ಪಟ್ಟಾಧಿಕಾರ ಹೊಂದಿ, ೪೫ ದಿನ ಅನುಷ್ಠಾನ ತಪಗೈದಿದ್ದಾರೆ. ಪ್ರತಿವರ್ಷ ಶ್ರೀ ಶಿವಲಿಂಗೇಶ್ವರ ಪುಣ್ಯಸ್ಮರಣೋತ್ಸವ ಕಾರ್ಯಕ್ರಮದಲ್ಲಿ *ಶರಣ ಸಂಸ್ಕೃತಿ ಉತ್ಸವ, ಉರಿಲಿಂಗ ಪೆದ್ದಿ ಉತ್ಸವ*, ಕಾರ್ಯಕ್ರಮಗಳು ಶ್ರೀಗಳು ಮಾಡುತ್ತಾ ಬರುತ್ತಿದ್ದಾರೆ. ಈ ಉತ್ಸವದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ರಾಜ್ಯ ಮಟ್ಟದ ' *ಉರಿಲಿಂಗ ಪೆದ್ದಿ ಪ್ರಶಸ್ತಿ*' ಯು ನೀಡುತ್ತಿರುವುದು ವಿಶೇಷವಾಗಿದೆ. ಮೊದಲಿಗೆ ೨೦೦೭ರಲ್ಲಿ ಯುವ ಕತೆಗಾರ *ಮಚ್ಚೇಂದ್ರ ಪಿ.ಅಣಕಲ್* ಅವರಿಗೆ ಈ ಪ್ರಶಸ್ತಿಯೊಂದಿಗೆ ನಗದು ಗೌರವ ಧನ ನೀಡಿ ಗೌರವಿಸಿದ್ದಾರೆ. ಈ ಪ್ರಶಸ್ತಿಯು ಪತ್ರಕರ್ತ *ಮಾಣಿಕ ಭುರೆ* ಅವರ ಪ್ರಾಯೋಜಕತ್ವದಲ್ಲಿ ಸ್ಥಾಪಿಸಲಾಗಿದ್ದು, ಇಲ್ಲಿಯವರೆಗೆ ಸುಮಾರು ೩೫ ಜನ ವಿವಿಧ ಗಣ್ಯರಿಗೆ ಈ ಪ್ರಶಸ್ತಿ ಪ್ರಧಾನ ಮಾಡಲಾಗಿದೆ. ಮತ್ತು ೨೦೧೧ರಿಂದ ಸಾಹಿತಿ *ಡಾ.ಗವಿಸಿದ್ದಪ್ಪಾ ಎಚ್.ಪಾಟೀಲ್* ಅವರ ಸಂಚಾಲನೆಯಲ್ಲಿ ೧೨. ವಿವಿಧ ಜಿಲ್ಲಾ, ವಿಭಾಗ, ರಾಜ್ಯ ಮಟ್ಟದ *ಪ್ರಥಮ ಸಾಹಿತ್ಯ ಸಮ್ಮೇಳನಗಳು*' ನಡೆಸಿಕೊಂಡು ಬಂದಿರುವುದು ಮಠದ ಹೆಮ್ಮೆಯ ವಿಷಯವಾಗಿದೆ. ಹೀಗೆ ಸಾಹಿತ್ಯ ಚಟುವಟಿಕೆಗಳನ್ನು ನಡೆಸುತ್ತಾ ಬರುತ್ತಿರುವ ಶ್ರೀಗಳು ಸ್ವತಃ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕೆಲವು ಚಿಂತನ,ಶರಣರ ಕುರಿತಾದ ಸಾಹಿತ್ಯವು ರಚಿಸಿದ್ದಾರೆ . ಮತ್ತು *ಕಾಳವ್ವೆ, ಉರಿಲಿಂಗದೇವ ಮತ್ತು ಶರಣ ಉರಿಲಿಂಗಪೆದ್ದಿ ವಚನಗಳ ಸಂಗ್ರಹ*' ಎಂಬ ಪುಸ್ತಕವು ಸಂಪಾದಿಸಿ ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ *ಶರಣ ಉರಿಲಿಂಗ ಪೆದ್ದಿ ಮಠ ಟ್ರಸ್ಟ್* ವತಿಯಿಂದ ಪ್ರಕಾಶನ ಸಂಸ್ಥೆಯನ್ನು ಹುಟ್ಟು ಹಾಕಿ, ಅದರಡಿಯಲ್ಲಿ ವಿವಿಧ ಲೇಖಕರ ೨೦ ಪುಸ್ತಕಗಳು ಪ್ರಕಟಿಸಿದ್ದಾರೆ. ಇವರ ಕುರಿತು ೨೦೧೦ ರಲ್ಲಿ ಪತ್ರಕರ್ತ,ಸಾಹಿತಿ *ಮಾಣಿಕ ಆರ್. ಭುರೆ*' ಯವರು *ದಲಿತ ಪೀಠಾಧಿಪತಿ*' ಎಂಬ ಪುಸ್ತಕವು ಬರೆದಿದ್ದು, ಆ ಕೃತಿಗೆ ಕನ್ನಡ ಸಾಹಿತ್ಯ ಪರಿಷತ್ತಿನ *ರೇವಯ್ಯ ದತ್ತಿ ಪುಸ್ತಕ ಪ್ರಶಸ್ತಿ* ಯು ಲಭಿಸಿದೆ. ಮತ್ತು ' *ಉರಿಲಿಂಗ ಪೆದ್ದಿ ವಚನಗಳ ಒಳನೊಟ* ' ಎಂಬ ಪುಸ್ತಕವೊಂದು ಇತ್ತಿಚೆಗೆ ಪ್ರಕಟಗೊಂಡಿದೆ. ಅಷ್ಟೇಯಲ್ಲದೆ *ಡಾ.ಸಾಹುಕಾರ ಎಸ್.ಕಾಂಬಳೆ* ಯವರು ಈ ಉರಿಲಿಂಗ ಪೆದ್ದಿ ಮಠಗಳ ಕುರಿತು *ಲಿಂಗಾಯತ ಅಸ್ಪೃಶ್ಯರು ಒಂದು ಅಧ್ಯಯನ* ' ಎಂಬ ವಿಷಯದ ಮೇಲೆ ಪಿ.ಎಚ್.ಡಿ. ಅಧ್ಯಯನ ಮಾಡಿ, ಡಾಕ್ಟರೇಟ್ ಪದವಿಯು ಪಡೆದಿದ್ದಾರೆ. ಸದ್ಯ ಇವರು ಸರಳ ಹಾಗೂ ಸಾದಾ- ಸೀದಾ ಜೀವನದೊಂದಿಗೆ ಬಸವಕಲ್ಯಾಣದ ತ್ರೀಪೂರಾಂತ ಶಾಖಾ ಮಠದಲ್ಲಿ ನೆಲೆಸಿ, ಚಿಂತನ ಹಾಗೂ ಶರಣ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಪೂಜ್ಯ. ಶ್ರೀ. ಸುರೇಶ ಸ್ವಾಮಿ ಹಿರೇಮಠ.
ಬೀದರ ಜಿಲ್ಲೆಯ ಸಾಹಿತ್ಯ ಕ್ಷೇತ್ರದಲ್ಲಿ ಹಿರಿಯ ಬರಹಗಾರರಲ್ಲಿ ಒಬ್ಬರಾಗಿ ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಪುಸ್ತಕಗಳು ಬರೆದು ಎಲೆ ಮರೆಯ ಕಾಯಿಯಂತೆ ಉಳಿದ ಶ್ರೀಗಳು, ಲೇಖಕರೆಂದರೆ ಪರಮ ಪೂಜ್ಯ ಲಿಂಗೈಕ್ಯ *ಸುರೇಶ ಸ್ವಾಮಿ ಹಿರೇಮಠ ಗೋರ್ಟಾ*. ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲುಕಿನ ಐತಿಹಾಸಿಕ ಗ್ರಾಮ ಗೋರ್ಟಾ(ಬಿ)ಯ ಹಿರೇಮಠದ ಶ್ರೀ ವೇದಮೂರ್ತಿ ರೇವಣಸಿದ್ಧ ಸ್ವಾಮಿ ಮತ್ತು ಮಾತೋಶ್ರೀ ಗುರುದೇವಿ ಯವರ ಪುಣ್ಯ ಗರ್ಭದಲ್ಲಿ ಜನಿಸಿದರು.
ಪೂಜ್ಯರು ಬಾಲ್ಯದಿಂದಲೆ ವೇದ , ಉಪನಿಷತ್ತು ಪುರಾಣ, ಪಂಚಾAಗ ಅಧ್ಯಾತ್ಮಿಕದ , ಹಲವಾರು ದರ್ಶನಗಳ ಅಧ್ಯಯನವನ್ನು ಮಾಡಿದವರು. ತ್ರೀಕಾಲ ಲಿಂಗಪೂಜಾ ನಿಷ್ಠರಾದ ಇವರು ಆಧ್ಯಾತ್ಮಿಕ ಕ್ಷೇತ್ರದಲ್ಲಿ ಮಹಾನ ಸಾಧನೆಯನ್ನು ಮಾಡಿ, ದೈಹಿಕ ರೂಪದಲ್ಲಿದ್ದ ೧೦೩ ವರ್ಷಗಳ ಕಾಲ ಸಮಾಜಕ್ಕೆ ಧರ್ಮ ಮಾರ್ಗದಲ್ಲಿ ನಡೆಯಲು ಪ್ರೇರಣೆಯನ್ನು ನೀಡಿದ್ದಾರೆ.
ಪೂಜ್ಯರು ತಮ್ಮ ಸಂಪೂರ್ಣ ಜೀವನವನ್ನು ಧರ್ಮ ಮತ್ತು ಸಮಾಜದ ಸೇವೆಗಾಗಿ ಸಮರ್ಪಿಸಿದ್ದವರು. ಮಹಾರಾಷ್ಟ್ರದ ಬೀಡ ಜಿಲ್ಲೆಯ ಎಡಸಿ ಪರ್ವತದಲ್ಲಿ *ಮಾನವ ಧರ್ಮ ಸಂಸ್ಥೆ* ಸ್ಥಾಪಿಸಿ ಸಾವಿರಾರು ಜನರಿಗೆ ವೇದ , ಉಪನಿಷತ್ , ಸಂಗೀತ , ಸಾಹಿತ್ಯದ ಪ್ರಶಿಕ್ಷಣವನ್ನು ನೀಡಿದ್ದಾರೆ . ಹಾಗು ೧೯೪೮ ರ ರಜಾಕಾರರ ಹಾವಳಿಯಲ್ಲಿ ನಿರಾಶ್ರಿತರಾಗಿ ಸ್ವಗ್ರಾಮ ತ್ಯಜಿಸಿದವರಿಗೆ ಆಶ್ರಯವನ್ನು ಕಲ್ಪಿಸಿದ್ದರು , ಎಡಸಿಯಲ್ಲು ಸಹ ರಜಾಕಾರರ ಹಾವಳಿ ಹೆಚ್ಚಾದಾಗ ತಮ್ಮ ಆಶ್ರಮವನ್ನು ಸೊಲ್ಲಾಪುರದ ಸಮೀಪದಲ್ಲಿರುವ ಟಿಕ್ಕೆಕರವಾಡಿಗೆ ಸ್ಥಳಾಂತರಿಸಿ ಅಲ್ಲಿಯೂ ಸಹ ವರ್ಷಾನುಗಟ್ಟಲೆ ನಿರಾಶ್ರಿತರಿಗೆ ಊಟ ಮತ್ತು ವಸತಿ ವ್ಯವಸ್ಥೆಯನ್ನು ಕಲ್ಪಿಸಿದರು.
ಪೂಜ್ಯರು ಜೀವನ ಪರ್ಯಂತರವಾಗಿ ಪರಮ ಪೂಜ್ಯ ಲಿಂಗೈಕ್ಯ ಸದ್ಗುರು ರಾಚೋಟಿಶಿವಾಚಾರ್ಯರ ಜೊತೆ ಗುಡಿ ಜಪಯಜ್ಞ ಕಾರ್ಯಕ್ರಮಗಳ ಮೂಲಕ ಭಕ್ತರಲ್ಲಿ ಆಧ್ಯಾತ್ಮಿಕ ಉನ್ನತಿಗೆ ಶ್ರಮಿಸಿದ್ದಾರೆ. ಅವುಗಳಲ್ಲಿ ಪ್ರಮುಖ ಕಾರ್ಯಕ್ರಮಗಳೆಂದರೆ , ಬಸವಕಲ್ಯಾಣದ ತ್ರೀಪುರಾಂತ , ಮಹಾರಾಷ್ಟ್ರದ ಚಾಕೂರ , ಗೋರ್ಟಾ , ಮೇಹಕರ , ಡೋಣಗಾಪುರ , ಬೀದರನ ಪಾಪನಾಶ ಮುಂತಾದ ಕಡೆಯಲ್ಲಿ ಹಮ್ಮಿಕೊಂಡಿದ್ದ ಜನ-ಜಾಗೃತಿ ಧರ್ಮ ಸಭೆಗಳು.
೧೯೮೨ ರಲ್ಲಿ ವಿಶ್ವ ಶಾಂತಿ ಟ್ರಸ್ಟ್ ಸ್ಥಾಪಿಸಿ ಅದರ ಮುಖಾಂತರ ಧಾರ್ಮಿಕ , ಶೈಕ್ಷಣಿಕ , ಸಾಮಾಜಿಕ , ಸಂಸ್ಕೃತಿಕ , ಸಾಹಿತ್ಯಿಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದು ದೇಶದಾದ್ಯಂತದ ಲಕ್ಷಾಂತರ ಜನರ ಪ್ರೇಮ ಮತ್ತು ಭಕ್ತಿಗೆ ಪಾತ್ರರಾಗಿದ್ದಾರೆ. ಶ್ರೀ ಸುರೇಶ ಸ್ವಾಮಿಗಳು ಬಹುಭಾಷಾ ಪಂಡಿತರಾಗಿದ್ದು ಕನ್ನಡ , ಮರಾಠಿ , ಸಂಸ್ಕೃತ ಮತ್ತು ಹಿಂದಿ ಭಾಷೆಗಳಲ್ಲಿಯೂ ಸಾಹಿತ್ಯ ರಚಿಸಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ *೧.ಮಾನವ ಧರ್ಮ ಶಾಸ್ತ್ರ*. *೨.ಅಸ್ಪರ್ಶರು ಯಾರು ? ೩) ಧರ್ಮ ಮತ್ತು ರಾಷ್ಟ್ರ ೪) ಜಪಯಜ್ಞ ಸಂವಿಧಾನ ೫) ಸ್ವರಾಜ್ಯ ವಿಜ್ಞಾನ ೬) ಶ್ರೀ ರುದ್ರ ಪೂಜಾ , ೭ ಜಪ ಪ್ರಯೋಗ* ಮುಂತಾದವು ಗಳಾಗಿವೆ. ಪರಮ ಪೂಜ್ಯ ಸುರೇಶ ಸ್ವಾಮಿಗಳು ದಿನಾಂಕ ೩೧-೦೫-೨೦೦೮ ರಂದು ತಮ್ಮ ೧೦೩ ನೆ ವಯಸ್ಸಿನಲ್ಲಿ ಲಿಂಗೈಕ್ಯರಾದರು. ಅನ್ನೊದು ನೋವಿನ ಸಂಗತಿಯಾಗಿದೆ. ಅವರ ಕನ್ನಡ , ಮರಾಠಿ , ಹಿಂದಿ ಭಾಷೆಗಳಲ್ಲಿ ರಚಿಸಿದ ಸಾಹಿತ್ಯ ಇಂದಿನ ಆಧುನಿಕ ಯುಗದಲ್ಲಿಯು ಅತ್ಯಂತ ಅವಶ್ಯಕವಾಗಿದೆ.
ಸೋಮವಾರ, ಜನವರಿ 20, 2025
ರಮೇಶ ಸ್ವಾಮಿ ಕನಕಟ್ಟಾ
ಸಾಹಿತಿ ರಮೇಶ ಸ್ವಾಮಿ ಕನಕಟ್ಟಾ, ರವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಕನಕಟ್ಟಾ ಗ್ರಾಮದ ಕಾರ್ತಿಕ ಸ್ವಾಮಿ ಮತ್ತು ಕಮಲಾಬಾಯಿ ದಂಪತಿಗಳಿಗೆ ದಿನಾಂಕ 1-6-1963ರಲ್ಲಿ
ಜನಿಸಿದ್ದಾರೆ. ಡಿಪ್ಲೊಮಾ ಇನ್ ಎಲೆಕ್ನಿಕಲ್ ಇಂಜಿನಿಯರಿಂಗ್, ಮತ್ತು ಎಂ.ಎ.ಪತ್ರಿಕೋದ್ಯಮ ಪದವಿಧರರಾಗಿದ್ದು, 1983ರಲ್ಲಿ ಜೇವರ್ಗಿಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯಲ್ಲಿ ಸೇವೆಗೆ ಸೇರಿದ ಇವರು ಸದ್ಯ ಬೀದರಯ ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆಯ ಉಪನಿರ್ದೇಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕೆಲ ಕೃತಿಗಳು ಪ್ರಕಟಿಸಿದ್ದಾರೆ. ಅವುಗಳೆಂದರೆ, 2011 ರಲ್ಲಿ 'ವಚನಕ್ಕೊಂದು ಕತೆ', 'ಶ್ರಾವಣ ಸಂಪದ', 2014ರಲ್ಲಿ 'ಸಂಸಾರದಲ್ಲಿ ಸದ್ಧತಿ, 'ಅನುಭವ ಮಂಟಪದಲ್ಲಿ ಸಿದ್ದರಾಮ' 2015ರಲ್ಲಿ 'ಗುರು ಕರುಣೆ, `ಅಕ್ಕನ ದರ್ಶನ' 2016ರಲ್ಲಿ 'ಜೀವನ ದರ್ಶನ', 2017ರಲ್ಲಿ 'ಬಸವದರ್ಶನ', 'ವಚನಾಮೃತಧಾರೆ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಹಾಗೂ ಇವರ 'ಬಸವ ದರ್ಶನ' ಕೃತಿಗೆ 2017ರಲ್ಲಿ ಬಸವಕಲ್ಯಾಣದ ಅನುಭವ ಮಂಟಪದ ಉತ್ತಮ ಪುಸ್ತಕ ಪ್ರಶಸ್ತಿಯು ಲಭಿಸಿದೆ.
ಬಿ.ಬಿ.ಪೂಜಾರಿ
`ಕನ್ನಡದ ಪೂಜಾರಿ' ಎಂದು ಕನ್ನಡ ವಿದ್ಯಾರ್ಥಿಗಳಿಗೆ ಅಚ್ಚು ಮೆಚ್ಚಿನ ಪ್ರಾಧ್ಯಾಪಕರಾಗಿ, ಕವಿ,ಸಾಹಿತಿ, ಲೇಖಕರಾಗಿ ಖ್ಯಾತರಾದ ಹಿರಿಯ ಸಾಹಿತಿಯೆಂದರೆ ಡಾ. ಬಿ.ಬಿ.ಪೂಜಾರಿಯವರು. ಇವರು ಬೀದರ ಜಿಲ್ಲೆ ಹುಮನಾಬಾದಿನ ಶ್ರೀ ಬಂಡೆಪ್ಪ ಮತ್ತು ವೀರಮ್ಮ ದಂಪತಿಗಳಿಗೆ ದಿನಾಂಕ 1-8-1959ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ ಪದವಿಧರರಾದ ಇವರು 1986ರಿಂದ ಮಹಾರಾಷ್ಟ್ರ ಸೊಲ್ಲಾಪುರದ ಸಂಗಮೇಶ್ವರ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿ 2019ರಲ್ಲಿ ನಿವೃತ್ತರಾಗಿದ್ದು, ಮತ್ತು 2020ರಿಂದ ಕರ್ನಾಟಕ ಕೇಂದ್ರೀಯ
ವಿಶ್ವವಿದ್ಯಾಲಯದ ಶಾಸ್ತ್ರೀಯ ಕನ್ನಡ ಕೇಂದ್ರದ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕತೆ, ಕವನ, ಹನಿಗವನ, ಲೇಖನ, ಪ್ರಬಂಧ ಮೊದಲಾದ ಬರಹಗಳು ಬರೆದ ಇವರು 'ಮೂರು ಬಣ್ಣ ನೂರು ಕವನ, ನಮ್ಮ ದನಿಗೆ ನಿಮ್ಮ ದನಿ, ಜನಮನ ಗೆದ್ದವರು, ಚಿಟ್ಟೆ ಬಂತು ಚಿಟ್ಟೆ, ಮುಕುಂದೂರು ಸ್ವಾಮಿ, ಕರ್ಮಯೋಗಿ, ಗಂಗಮ್ಮನ ಬೋರ್.' ಎಂಬಿತ್ಯಾದಿ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕನ್ನಡದ ಪ್ರಮುಖ ವಿವಿಧ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು 10ವರ್ಷ ಮಹಾರಾಷ್ಟ್ರ ರಾಜ್ಯದ ಕನ್ನಡ ಪಠ್ಯ ಪುಸ್ತಕ ಮಂಡಳಿಯ ಸದಸ್ಯರಾಗಿ, ಶಿವಾಜಿ ಮತ್ತು ಸೊಲ್ಲಾಪುರ ವಿಶ್ವ ವಿದ್ಯಾಲಯದ ಅಭ್ಯಾಸ ಮಂಡಳಿಯ ಸದಸ್ಯರಾಗಿ, ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಏಳು ವಿದ್ಯಾರ್ಥಿಗಳು ಇವರ ಮಾರ್ಗದರ್ಶನದಲ್ಲಿ ಪಿ.ಎಚ್.ಡಿ.ಪದವಿ ಪಡೆದಿದ್ದಾರೆ. ಇವರಿಗೆ ದರ್ಶನ ರತ್ನ, ಗಡಿ ಕನ್ನಡ ವೀರ, ಮಿನಿ ಕವಿತೆಗಳ ಸರದಾರ.
ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ.
ಸಂಗಮ್ಮ ಚ.ಬಮ್ಮಣಿ
ಸಾಹಿತಿ ಸಂಗಮ್ಮ ಚ. ಬಮ್ಮಣಿ ಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಗ್ರಾಮದ ವಿಠಲರಾವ ಜೂಜಾ ಮತ್ತು ತೋಟಮ್ಮಾ ದಂಪತಿಗಳಿಗೆ ದಿನಾಂಕ 1-6-
1973 ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್, ಎಂ.ಎ. ಸಮಾಜ ಶಾಸ್ತ್ರ, ಎಂ.ಎ. ರಾಜ್ಯ ಶಾಸ್ತ್ರದಲ್ಲಿ ಸ್ನಾತಕೋತ್ತರ ಪದ ವಿಧರರಾದ ಇವರು 1997 ರಲ್ಲಿ ಹುಮನಾಬಾದ ತಾಲೂಕಿನ ಜಲಸಂಗಿ ಗ್ರಾಮದ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ ಹಲವಾರು ವರ್ಷ ಸೇವೆ ಸಲ್ಲಿಸಿದ ಇವರು ಸದ್ಯ ಹಳ್ಳಿಖೇಡ (ಕೆ) ಗ್ರಾಮದ ಪ್ರೌಢ ಶಾಲೆಯ ಉಪಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ವಿದ್ಯಾರ್ಥಿಯಾಗಿದಾಗಲೆ ಕತೆ ಕವನ ಲೇಖನ ಪ್ರಬಂಧ ಚುಟುಕುಗಳನ್ನು ಬರೆಯುವ ಗೀಳು ಬೆಳೆಸಿಕೊಂಡು ಕೆಲವು ಕೃತಿಗಳನ್ನು ರಚಿಸಿದ್ದಾರೆ. ಅವುಗಳೆಂದರೆ, 2015 ರಲ್ಲಿ 'ಅರಳುವ ಪ್ರತಿಭೆ' ಎಂಬ ವ್ಯಕ್ತಿತ್ವ ವಿಕಸನದ ಕೃತಿಯೊಂದು ಹೊರತಂದು 2017 ರಲ್ಲಿ 'ಮಹಾತಾಯಿ' ಎಂಬ ಕವನ ಸಂಕಲನವು ಪ್ರಕಟಿಸಿದ್ದಾರೆ. ಅಷ್ಟೇಯಲ್ಲದೆ ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ 2017ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, 2018 ರಲ್ಲಿ ಪರಿಸರ ವಾಹಿನಿಯಿಂದ ಉತ್ತಮ ಶಿಕ್ಷಕ ಪ್ರಶಸ್ತಿ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಮಹಾನಂದಾ ಬಿರಾದಾರ
ಯುವ ಕವಯತ್ರಿಯಾದ ಮಹಾನಂದಾ ಬಿರಾದಾರ ರವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಚಿನಕೇರಾ ಗ್ರಾಮದ ಜಗನ್ನಾಥ ಮತ್ತು ಗೌರಮ್ಮ ದಂಪತಿಗಳ ಪುತ್ರಿಯಾಗಿದ್ದು ಇವರು ಅಫಜಲಪೂರದ ಪ್ರಕಾಶ ಜೈನರವರ ಧರ್ಮಪತ್ನಿಯಾಗಿದ್ದಾರೆ. ಬಿ.ಎ., ಡಿ.ಎಡ್ ಪದವಿಧರರಾದ ಇವರು 'ಹೊಂಗಿರಣ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಸದ್ಯ ಇವರು ಅಫಜಲಪೂರದಲ್ಲಿ ವಾಸವಾಗಿದ್ದಾರೆ.
ಸಂಗಪ್ಪಾ ತೌಡಿ
ಯುವ ಸಾಹಿತಿ ಸಂಗಪ್ಪಾ ತೌಡಿಯವರು ಬೀದರ ಜಿಲ್ಲೆ ಹುಮನಾಬಾದ ತಾಲ್ಲೂಕಿನ ಮೀನಕೇರಾ ಗ್ರಾಮದ ಚಂದ್ರಪ್ಪ ತೌಡಿ ಮತ್ತು ಭಾರತಿ ತೌಡಿ ದಂಪತಿಗಳಿಗೆ ದಿನಾಂಕ ೧-೬-೧೯೯೨ರಲ್ಲಿ ಜನಿಸಿದ್ದಾರೆ. ಎಂ,ಎ, ಸ್ನಾತಕೊತ್ತರ ಪದವಿ ಪಡೆದ ಇವರು ಪಿ.ಎಚ್,ಡಿ ಅಧ್ಯಯನ ಮಾಡುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತೊಡಗಿಸಿಕೊಂಡ ಇವರು `ಭಾವ ಚಿಗುರು' ಮತ್ತು `ಅವ್ವನಿಗೆ' ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ. ಮತ್ತು ಇವರ ಲೇಖನ ಸಂಶೋಧನಾ ಬರಹಗಳು ಕೆಲ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ `ಮನೆಗೊಂದು ಗೊಂದಲದ ಹಾಡು' ಎಂಬ ಕತೆ ಕ್ರೈಸ್ತ ಟು ಬಿ ಯುನಿವರ್ಸಿಟಿಯಿಂದ ಅ.ನ.ಕೃ. ಪ್ರಶಸ್ತಿ ಪಡೆದಿದೆ. ಮತ್ತು ದ.ರಾ ಬೇಂದ್ರೆ ಶೃತಿ ಅಂತರರಾಜ್ಯ ಮಟ್ಟದ ಕಾಲೇಜು ಕಾವ್ಯ ಸ್ವರ್ಧೆಯಲ್ಲಿ ಎರಡು ಬಾರಿ ಬಹುಮಾನ ಪಡೆದಿದ್ದಾರೆ. ಹಾಗೂ ಕೇಂದ್ರೀಯ ವಿಶ್ವವಿದ್ಯಾಲಯ ಕಲಬುರಗಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪಡೆದಿದ್ದಾರೆ. ಮತ್ತು ರಾಜ್ಯ, ರಾಷ್ಟ್ರೀಯ ಅಂತರಾಷ್ಟ್ರೀಯ ವಿಚಾರ ಸಂಕಿರಣಗಳಲ್ಲಿ ಪ್ರಬಂಧಗಳನ್ನು ಮಂಡಿಸಿದ್ದು, ಮತ್ತು ರಾಜ್ಯ ಮಟ್ಟದ ಕಥೆ, ಕಾವ್ಯ, ಗಜಲ್, ಕಾದಂಬರಿ ಕಮ್ಮಟಗಳಲ್ಲಿಯೂ ಪಾಲ್ಗೊಂಡಿದ್ದಾರೆ.
ಪ್ರಿಯಾ ಲಂಜವಾಡಕರ್
ಉದಯೋನ್ಮುಖ ಕಾದಂಬರಿಗಾರ್ತಿ ಪ್ರಿಯಾ ಲಂಜವಾಡಕರ್. ಇವರು ಬೀದರ ಜಿಲ್ಲೆ ಹುಮನಾಬಾದಿನ ಮಾರುತಿರಾವ ಮತ್ತು ಸುಮಂಗಲಾ ದಂಪತಿಗಳಿಗೆ ದಿನಾಂಕ ೧-೪-೧೯೮೫ರಲ್ಲಿ ಜನಿಸಿದ್ದಾರೆ. ಆಂಗ್ಲ ಭಾಷೆಯಲ್ಲಿ ಎಂ.ಎ. ಬಿ,ಇಡಿ ಸ್ನಾತಕೋತ್ತರ ಪದವಿ ಪಡೆದ ಇವರು ಹುಮನಾಬಾದ ತಾಲೂಕಿನ ಬೇಮಳಖೇಡ ಗ್ರಾಮದ ಸರಕಾರಿ ಪ್ರೌಢ ಶಾಲೆಯಲ್ಲಿ ಆಂಗ್ಲ ಭಾಷಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕಾದಂಬರಿ ಓದುವ ಅಭ್ಯಾಸ ಬೆಳೆಸಿಕೊಂಡಿದ್ದ ಇವರು ಮುಂದೆ ಸ್ವತಃ ಕಾದಂಬರಿ ಬರೆದು ೨೦೧೫ರಲ್ಲಿ `ತಲ್ಲಣಿಸದಿರು...’ ಎಂಬ ಕಾದಂಬರಿ ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಬರಹಗಳು ಬೀದರದ `ಸಾಹಿತ್ಯ ಸಿಂಚನ’ ಎಂಬ ತ್ರೈಮಾಸಿಕ ಸೇರಿದಂತೆ ಕನ್ನಡದ ಕೆಲ ಸ್ಥಳಿಯ ಪತ್ರಿಕೆಗಳಲ್ಲಿ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ಹುಮನಾಬಾದಿನ ಸಾಕ್ಷಿ ಪ್ರತಿಷ್ಠಾನದ ವತಿಯಿಂದ ಸಿದ್ಧಾರ್ಥ ಪ್ರಶಸ್ತಿಯು ನೀಡಿ ಗೌರವಿಸಿದ್ದಾರೆ.
ಭಾನುವಾರ, ಜನವರಿ 19, 2025
ಜಗನ್ನಾಥ ಕಮಲಾಪೂರೆ
ಸಾಹಿತಿ ಜಗನ್ನಾಥ ಕಮಲಾಪೂರೆ ಯವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಶರಣಪ್ಪ ಮತ್ತು ಸರಸ್ವತಿ ದಂಪತಿ ಗಳಿಗೆ ದಿನಾಂಕ 1-6-1970 ರಲ್ಲಿ ಜನಿಸಿದ್ದಾರೆ. ಎಂ.ಎ.ಎಂ.ಎಡ್.
ಎಂ.ಫಿಲ್, ಪಿ.ಜಿ.ಬಿ. ಎಚ್.ಇ.ಪದವೀಧರರಾದ ಇವರು ಬೀದರದ ಕರ್ನಾಟಕ ಬಿ.ಇಡಿ.ಮಹಾವಿದ್ಯಾಲಯದಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತಮ್ಮ ವೃತ್ತಿ ಬದುಕಿನೊಂದಿಗೆ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಪುಸ್ತಕಗಳು ಹೊರ ತಂದಿದ್ದಾರೆ. 'ಬುಲಾಯಿ ಹಾಡುಗಳು ಒಂದು ಅಧ್ಯಯನ' ಎಂಬುದು ಇವರ ಎಂ.ಫಿಲ್. ಪ್ರಬಂಧವಾಗಿದೆ. ಮತ್ತು 2017 ರಲ್ಲಿ 'ಅಕ್ಷರ ಕಾರಂಜಿ', 2018 ರಲ್ಲಿ 'ದಾಂಪತ್ಯ ಗೀತೆ,' (ಸಂಪಾದನೆ) 2019 ರಲ್ಲಿ 'ಡಾ.ರಾಜೇಂದ್ರ ಯರನಾಳೆ' (ಬದುಕು ಬರಹ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಕವನ, ಲೇಖನ, ಪ್ರಬಂಧ, ಸೇರಿದಂತೆ ಮೊದಲಾದ ಬರಹಗಳು ನಾಡಿನ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ವಿನೋದಕುಮಾರ ಹೊನ್ನಾ
ಯುವ ಸಾಹಿತಿ ವಿನೋದಕುಮಾರ ಹೊನ್ನಾ ರವರು ಬೀದರ ತಾಲೂಕಿನ ಬಗದಲ್ ಗ್ರಾಮದ ಪ್ರಭುರಾವ ಹೊನ್ನಾ ಮತ್ತು ಚಿನ್ನಮ್ಮ ದಂಪತಿಗಳಿಗೆ ದಿನಾಂಕ 18-8-1981ರಲ್ಲಿ ಜನಿಸಿದ್ದಾರೆ.
ಬಿ.ಎ.ಪದವಿಧರರಾದ ಇವರು ಕಲಬುರಗಿ ಖಾಸಗಿ ಕಂಪನಿಯೊಂದರಲ್ಲಿ ಕಾರ್ಯ ನಿರ್ವಹಿಸುತ್ತಿದ್ದು 2021ರಲ್ಲಿ 'ಕಂಡದ್ದು ಕೈ ಬರಹದಲ್ಲಿ' ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ.
ಇವರ ಕವನ ಲೇಖನ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಡಾ.ವಿಜಯಲಕ್ಷ್ಮೀ ಗಡ್ಡೆ
ಸಾಹಿತಿ ಡಾ.ವಿಜಯಲಕ್ಷ್ಮೀ ಗಡ್ಡೆ ಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಮರೂರು ಗ್ರಾಮದ ದೇಶಮುಖಪ್ಪಾ ಪಾಟೀಲ್ ಮತ್ತು ಸುಶೀಲಾ ಪಾಟೀಲ್ ದಂಪತಿಗಳಿಗೆ ದಿನಾಂಕ ೧೩-೩-೧೯೬೪ ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಬಿ.ಇಡಿ ಪದವಿಧರರಾದ ಇವರು ಸಾಹಿತಿ ಹಾಗೂ ಪತ್ರಕರ್ತರಾದ ಬಸವಕಲ್ಯಾಣದ ಗುರುನಾಥ ಗಡ್ಡೆಯವರ ಧರ್ಮ ಪತ್ನಿಯಾಗಿದ್ದು, ಭಾಲ್ಕಿಯ ಶ್ರೀ ಚನ್ನಬಸವೇಶ್ವರ ಪದವಿ ಮಹಾವಿದ್ಯಾಲಯ ಗಣಿತ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬಾ ಆಸಕ್ತರಾಗಿ, `ಉರಿಲಿಂಗ ಪೆದ್ದಿ ವಚನಗಳಿಗೆ ಭಾವಾರ್ಥ, ಚನ್ನಬಸವ ಪಟ್ಟದೇವರ ಜೀವನ ಚರೀತ್ರೆ,’ ಎಂಬ ಕೃತಿಗಳು ರಚಿಸಿದ್ದಾರೆ. ಮತ್ತು ಹಲವಾರು ಕವನ ಲೇಖನ ಪ್ರಬಂಧಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಹಲವಾರು ನಾಡಿನ ವಿವಿಧ ಸಾಹಿತ್ಯ ಸಮ್ಮೇಳನ ಹಾಗೂ ವಿಚಾರ ಗೋಷ್ಠಿಗಳಲ್ಲಿ ಪಾಲ್ಗೊಂಡು ಉಪನ್ಯಾಸಗಳು, ೩೦೦ಕ್ಕೂ ಅಧಿಕ ಭಾಷಣಗಳು ಮಾಡಿರುತ್ತಾರೆ. ಭಾಲ್ಕಿ ಮತ್ತು ಬೀದರ ಹಿರೇಮಠಗಳಲ್ಲಿ ಶ್ರಾವಣ ಮಾಸದ ಪ್ರಯುಕ್ತ ಪ್ರವಚನವು ನೀಡಿದ್ದಾರೆ. ಇವರು ಬಸವಕಲ್ಯಾಣದ ಬಸವೇಶ್ವರ ದೇವಸ್ಥಾನ ಪಂಚ ಕಮೀಟಿ ನಿರ್ದೇಶಕರಾಗಿ, ಹಲವಾರು ಸಂಘ ಸಂಸ್ಥೆಗಳ ಸದಸ್ಯರಾಗಿ ಸೇವೆ ಸಲ್ಲಿಸಿ ಸದ್ಯ ಬೀದರ ಜಿಲ್ಲಾ ಜನವಾದಿ ಮಹಿಳಾ ಸಂಘಟನೆಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಶ್ರೀನಿವಾಸ ಕುಲಕಣಿ೯
ಕವಿ ಸಾಹಿತಿಯಾದ ಶ್ರೀನಿವಾಸ ಕುಲಕಣಿ೯ಯವರು ಬೀದರ ಕೈಲಾಸನಗರದ ನಾರಾಯನರಾವ ಮತ್ತು ಅಂಬಾಬಾಯಿ ದಂಪತಿಗಳಿಗೆ ದಿನಾಂಕ ೯-೪-೧೯೬೧ರಲ್ಲಿ ಜನಿಸಿದ್ದಾರೆ.ಬಿ.ಎಸ್ಸಿ.ಪದವಿಧರರಾದ ಇವರು ಭಾರತೀಯ ಜೀವ ವಿಮಾ ನಿಗಮದ ಉದ್ಯೋಗಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರು ೧೯೮೭ರಲ್ಲಿ ಸಂಚಯನ ಮತ್ತು ೧೯೯೩ರಲ್ಲಿ ಸಂತೋಷ ಎಂಬ ಕವನ ಸಂಕಲನಗಳು ಪ್ರಕಟಿಸಿದ್ದಾರೆ.ಇವರಿಗೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ಡಾ.ಜಗದೇವಿ ತಿಬಶೆಟ್ಟಿ.
ಸಾಹಿತಿ ಡಾ.ಜಗದೇವಿ ತಿಬಶೆಟ್ಟಿ ಯವರು ಬೀದರ ಜಿಲ್ಲೆ ಹುಮನಾಬಾದ ತಾಲೂಕಿನ ಹಳ್ಳಿಖೇಡ (ಬಿ) ಪಟ್ಟಣದ ಬಸವಣಪ್ಪ ಮತ್ತು ಗೋದಾವರಿ ದಂಪತಿಗಳಿಗೆ ದಿನಾಂಕ ೧೭-೯-೧೯೭೨ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್. ಪಿ.ಎಚ್.ಡಿ. ನೆಟ್. ಪದವಿಧರರಾದ ಇವರು ಹಾಲಹಳ್ಳಿ ಜ್ನಾನ ಕಾರಂಜಿ ಪಿ.ಜಿ.ಸೆಂಟರ್ ನಲ್ಲಿ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ವಿದ್ಯಾರ್ಥಿಯಾಗಿರುವಾಗಲೇ ಸಾಹಿತ್ಯದಲ್ಲಿ ಆಸಕ್ತರಾಗಿ ಕೆಲ ಕೃತಿಗಳು ರಚಿಸಿದ್ದಾರೆ. ಅವುಗಳೆಂದರೆ `ಅನರ್ಘ್ಯ ರತ್ನ' (ಲೇಖನ ಸಂಕಲನ) `ಸೋಮನಾಥ ಯಾಳವಾರ' ( ಚರಿತ್ರೆ) ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಶರಣರ ದಾಂಪತ್ಯ ದರ್ಶನ' ಎಂಬುದು ಇವರ ಪಿ.ಎಚ್.ಡಿ.ಪ್ರಬಂಧವಾಗಿದೆ. ಇವರ ಬರಹಗಳು ಬಸವಪಥ, ಲೋಕಸಿರಿ, ಶರಣರ ದರ್ಶನ, ವಚನ ಚಂದ್ರಿಕೆ, ಬಸವ ಪರಿಶೋಧ, ಶರಣ ಸೌರಭ, ಮೊದಲಾದ ಮಾಸಪತ್ರಿಕೆ ಹಾಗೂ ಸ್ಮರಣ ಸಂಚಿಕೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣ ಹಾಗೂ ಕಸಾಪ ಸಮ್ಮೇಳನಗಳಲ್ಲಿ ಪಾಲ್ಗೊಂಡು ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಚೇತನ ಪ್ರಕಾಶನ ಬೆಂಗಳೂರಿನಿAದ `ಸರೋಜಿನಿ ಚವಲಾರ' ರಾಜ್ಯ ಪ್ರಶಸ್ತಿ, ಹಾಗೂ ಸ್ನೇಹ ಯುವ ಸಾಂಸ್ಕೃತಿಕ ಸಂಘ ಬೆಂಗಳೂರಿನಿAದ ಕರ್ನಾಟಕ ಶಿಕ್ಷಣ ರತ್ನ ಪ್ರಶಸ್ತಿ, ಮತ್ತು ೨೦೧೯ರಲ್ಲಿ ಹಾಸ್ಯ ತರಂಗ ಕಲಾ ಸಂಸ್ಥೆ ಬೆಂಗಳೂರಿನಿAದ ಕಾವ್ಯ ಶಾರದೆ ರಾಜ್ಯ ಪ್ರಶಸ್ತಿ, ೨೦೧೮ರಲ್ಲಿ ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಸಮಾಜ ಕಲಾ ರತ್ನ' ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಡಾ.ಸಿ.ಎಸ್.ಪಾಟೀಲ್.
ಸಾಹಿತಿ ಡಾ.ಸಿ.ಎಸ್.ಪಾಟೀಲ್ ರವರ ಪೂರ್ಣನಾಮ 'ಚಂದ್ರಕಾAತ ಸಂಗಶೆಟ್ಟಿ ಪಾಟೀಲ್ ' ಎಂದಾಗಿದೆ. ಇವರು ಬೀದರ ತಾಲ್ಲೂಕಿನ ಕಂಗನಕೋಟೆ ಗ್ರಾಮದ ಸಂಗಶೆಟ್ಟಿ ಪಾಟೀಲ್ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೨೯-೨-೧೯೬೦ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಪಿ.ಎಚ್.ಡಿ.ಪದವಿ ಪಡೆದು ೧೯೮೪ರಲ್ಲಿ ಸುರಪುರದ ಪ್ರಭು ಕಾಲೇಜಿನಲ್ಲಿ ಸಸ್ಯಶಾಸ್ತ್ರ ಉಪನ್ಯಾಸಕರಾಗಿ ಸೇವೆಗೆ ಸೇರಿ ನಂತರ ಬೆಂಗಳೂರಿನ ವೀರೇಂದ್ರ ಪಾಟೀಲ್ ಪದವಿ ಮಹಾವಿದ್ಯಾಲಯದಲ್ಲಿ ೧೦ವರ್ಷ ಬೀದರದ ಬಿ.ವಿ.ಬಿ. ಕಾಲೇಜಿನಲ್ಲಿ ೫ವರ್ಷ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ ೧೦ ವರ್ಷ ಸಸ್ಯಶಾಸ್ತ್ರ ವಿಭಾಗದ ಮುಖ್ಯಸ್ಥರಾಗಿ, ಪ್ರಾಂಶುಪಾಲರಾಗಿ, ೩ ವರ್ಷ ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯ ಮಾಪನ ಕುಲಸಚಿವರಾಗಿ ಸೇವೆ ಸಲ್ಲಿಸಿ ನಂತರ ಗುಲ್ಬರ್ಗ ವಿಶ್ವವಿದ್ಯಾಲಯದ ಎಂ.ಎಸ್.ಐ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿ ೨೦೧೯ರಲ್ಲಿ ನಿವೃತ್ತರಾಗಿದ್ದಾರೆ. ಮತ್ತು ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ೧೯೯೫ರಲ್ಲಿ `ಹೊಂಗಿರಣ' (ಕವನ ಸಂಕಲನ) ೨೦೦೨ರಲ್ಲಿ `ತಳಿ ತಂತ್ರಜ್ಞಾನ' (ವೈಜ್ಞಾನಿಕ ಬರಹಗಳ ಸಂಕಲನ) `ವಚನಗಳಲ್ಲಿ ವಿಜ್ಞಾನ' ಮತ್ತು 'ಅಕ್ಕನ ವಚನಗಳಲ್ಲಿ ಪರಿಸರ' ಎಂಬ ಕನ್ನಡ ಕೃತಿಗಳು ಪ್ರಕಟಿಸಿದರೆ ೨೦೦೮ರಲ್ಲಿ `ಬಯ ಟಿಕ್ನಾಲಜಿ, ಮತ್ತು ಮಲೆಕ್ವಲೋಡ್ ಬಯೊಲಜಿ’ ಎಂಬ ಕೃತಿಗಳು ಹೊರತಂದು ೨೦೧೦ರಲ್ಲಿ `ಸೆಲ್ ಬಯೋಲಜಿ’ ೨೦೧೨ರಲ್ಲಿ `ಬಯೋ ಇನ್ ಫಾರ್ಮೆಟಿಕ್' ಮತ್ತು ೨೦೧೪ರಲ್ಲಿ `ಮೈಟೊಕಾಂಡ್ರಿಯಲ್ ಇಂಜಿನಿಯರಿAಗ್' ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಪ್ರಜಾವಾಣಿ, ವಿಜಯ ಕರ್ನಾಟಕ, ತರಂಗ, ಮೊದಲಾದ ಪತ್ರಿಕೆಗಳಲ್ಲಿ ಹಾಗೂ ಆಕಾಶವಾಣಿಯಲ್ಲಿಯೂ ಪ್ರಸಾರವಾಗಿವೆ. ಅಷ್ಟೇಯಲ್ಲದೆ ಇವರು ೬ ವರ್ಷ ಬೀದರ ಜಿಲ್ಲೆಯ ವಿಜ್ಞಾನ ಶಿಕ್ಷಣ ಸಮಿತಿಯ ಅಧ್ಯಕ್ಷರಾಗಿ, ವಿಜ್ಞಾನ ಪರಿಷತ್ತಿನ ಸದಸ್ಯರಾಗಿ ಸೇವೆ ಸಲ್ಲಿಸಿ ಐದಾರು ದೇಶ ವಿದೇಶಗಳಿಗೆ ಸುತ್ತಾಡಿ ರಾಷ್ಟ್ರೀಯ ಅಂತರಾಷ್ಟ್ರೀಯ ಮಟ್ಟದ ವಿಜ್ಞಾನ ಸಮಾವೇಶದಲ್ಲಿ ಭಾಗಿಯಾಗಿದ್ದರಿಂದ. ೨೦೧೧ರಲ್ಲಿ ದೆಹಲಿಯಿಂದ ಅಂತರಾಷ್ಟ್ರೀಯ ಭಾರತ ಸೇವಾ ಪ್ರಶಸ್ತಿ, ೨೦೧೩ರಲ್ಲಿ ಮಲ್ಲೆಷಿಯಾದಿಂದ 'ಜೈವಿಕ ತಂತ್ರಜ್ಞಾನದ ಫೆಲೋಷಿಪ್ ಪ್ರಶಸ್ತಿ, ಪಡೆದು ಬೀದರ ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಸದ್ಯ ಇವರು ಕಲಬುರಗಿಯಲ್ಲಿ ವಾಸವಾಗಿದ್ದು ತಮ್ಮ ವಿಶ್ರಾಂತಿ ಬದುಕಿನೊಂದಿಗೆ ಸಾಹಿತ್ಯ ಕೃಷಿಯು ಮುಂದುವರೆಸಿದ್ದಾರೆ.
ವಿದ್ಯಾವತಿ. ಎಸ್. ಹಿರೇಮಠ
ಸಾಹಿತಿ ವಿದ್ಯಾವತಿ. ಎಸ್. ಹಿರೇಮಠ ರವರು ಬೀದರ ಜಿಲ್ಲೆ ಲಾಡಗೇರಿ ಗ್ರಾಮದ ಪೂಜ್ಯ. ಶ್ರೀ. ವೇ.ಶಾಂತಲಿAಗಯ್ಯಾ ಸ್ವಾಮಿ ಮತ್ತು ಸುಭದ್ರಾದೇವಿ ದಂಪತಿಗಳಿಗೆ ದಿನಾಂಕ ೪-೯-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎ.ಎA. ಎಂ. ಫೀಲ್. ಎಂ.ಎಡ್.ಪದವಿಧರರಾದ ಇವರು ರಾಯಚೂರ ಜಿಲ್ಲೆಯಲ್ಲಿ ಸರ್ಕಾರಿ ಪ.ಪೂ.ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ತಮ್ಮ ತಂದೆಯ ಸಾಹಿತ್ಯದ ಪ್ರಭಾವದಿಂದಾಗಿ ಸಾಹಿತ್ಯದಲ್ಲಿ ತೊಡಗಿಸಿಕೊಂಡು `ಮನೆಮದ್ದು' ಎಂಬ ಪುಸ್ತಕ ಪ್ರಕಟಿಸಿದ್ದಾರೆ. ಇವರಿಗೆ ಐದು ವರ್ಷವಿರುವಾಗ ಜ್ವರದ ಚುಚ್ಚು ಮದ್ದು ಕೊಡಿಸಿದ್ದರಿಂದ ಅವರ ಎಡಗೈ ನಿಷ್ಕ್ರಿಯ ಗೊಂಡಿದೆ. ಆದರೂ ಛಲ ಬಿಡದ ಇವರು ಆತ್ಮ ಸ್ಥೈರ್ಯದಿಂದ ಮುಂದೆ ಪ್ಯಾರಾ ಒಲಂಪಿಕ್ ನಲ್ಲಿ ಚಿನ್ನದ ಪದಕ ಪಡೆದು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಮೈಸೂರು, ಬೆಂಗಳೂರು, ಧಾರವಾಡ ರಾಜ್ಯ ಮಟ್ಟದ, ೧೭ನೇ ೧೮ನೇ ರಾಷ್ಟ್ರೀಯ ಕ್ರೀಡಾ ಕೂಟದಲ್ಲಿ ಮತ್ತು ೨೦೧೭ರಲ್ಲಿ, ೨೦೧೮ರಲ್ಲಿ ನೇಪಾಳದಲ್ಲಿ ಅಂತರರಾಷ್ಟ್ರೀಯ ಪ್ಯಾರಾ ಸ್ಪೋರ್ಟ್ಸ್ ನಲ್ಲಿ ಭಾಗವಹಿಸಿ ಚಿನ್ನ, ಬೆಳ್ಳಿ ಪದಕ ಪಡೆದು ರಾಷ್ಟ್ರ, ರಾಜ್ಯ, ಜಿಲ್ಲೆಗೆ ಕೀರ್ತಿ ತಂದಿದ್ದಾರೆ.೨೦೧೯ರಲ್ಲಿ ಶ್ರೀಲಂಕಾದಲ್ಲಿ ಭಾಗವಹಿಸಿ ಚಿನ್ನದ ಪದಕ ಪಡೆದಿದ್ದಾರೆ. ಮತ್ತು ತಮ್ಮ ತಂದೆಯವರು ಬರೆದ ೨೩ ಕೃತಿಗಳ ಸಂಪಾದಕರಾಗಿ ಪುಸ್ತಕ ಪ್ರಕಟಿಸಿದ್ದಾರೆ. ಮತ್ತು `ಶ್ರೀ ಶಾಂತ ವಚನಗಳು’ ಎಂಬ ೧ ಸಾವಿರ ಆಧುನಿಕ ವಚನಗಳು `ಶಿವ ಶಿವಾ’ ಎಂಬ ಅಂಕಿತ ನಾಮದಲ್ಲಿ ಬರೆದ ಇವರು ರಾಜ್ಯ, ರಾಷ್ಟ್ರೀಯ ಮಟ್ಟದ ವಿಚಾರ ಸಂಕಿರ್ಣಗಳಲ್ಲಿ ಭಾಗವಹಿಸಿ ಹಲವಾರು ಪ್ರಬಂಧಗಳನ್ನು ಮಂಡಿಸಿದ್ದಾರೆ. `ಡಾನಬಾಸ್ಕೋ’ ಹೊರತರುವ `ಬಾಸ್ಕೋ - ಬಾಂಧವ್ಯ' ಕ್ಕೆ ೫ವರ್ಷದಿಂದ ಅಂಕಣಕಾರರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಮತ್ತು ಗುಲ್ಬರ್ಗಾದ ಕ್ರೈಸ್ತ ಧರ್ಮ ಕ್ಷೇತ್ರದವರು ಮುದ್ರಿಸುವ ಸ್ಪಂದನ ಪತ್ರಿಕೆ ಸೇರಿದಂತೆ ಹಲವಾರು ಕಡೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಇವರು ಬೀದರದ ಶಾಂತಿ ಧಾಮ ಟ್ರಸ್ಟ್ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ೨೦೧೯ರಲ್ಲಿ ಬೀದರ ಜಿಲ್ಲಾ ಮಟ್ಟದ ರಾಜೋತ್ಸವ ಪ್ರಶಸ್ತಿ, ೨೦೨೦ರಲ್ಲಿ ಕರ್ನಾಟಕ ಸರ್ಕಾರ ನೀಡುವ ಕಿತ್ತೂರು ಚನ್ನಮ್ಮ ಪ್ರಶಸ್ತಿ, ೨೫ ಸಾವಿರ ನಗದು ಗೌರವಧನ ಪುರಸ್ಕಾರ, ೨೦೧೮ರಲ್ಲಿ ನವಚೇತನ ಚಾರಿಟಬಲ್ ಟ್ರಸ್ಟ ರಾಮನಗರದಿಂದ ಸಾಹಿತ್ಯಶ್ರೀ ಪ್ರಶಸ್ತಿ, ೧೦ ಸಾವಿರ ನಗದು ಗೌರವ ಧನವು ನೀಡಿ ಗೌರವಿಸಿದ್ದಾರೆ. ಮತ್ತು ೨೦೧೮ರಲ್ಲಿ ಬೀದರದ ದೇಶಪಾಂಡೆ ಪ್ರತಿಷ್ಠನದ ವತಿಯಿಂದ ಕಾವ್ಯ ಕುಸುಮಾಂಜಲಿ ರತ್ನ ಪ್ರಶಸ್ತಿ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಗಂಧರ್ವ ಸೇನಾ
ಪತ್ರಕರ್ತ ಹಾಗೂ ಸಾಹಿತಿಗಳಾದ ಗಂಧರ್ವ ಸೇನಾ ಇವರು ಬೀದರದ ಗಂಗಾಧರ ಮತ್ತು ಚಂದ್ರಕಲಾಬಾಯಿ ದಂಪತಿಗಳಿಗೆ ದಿನಾಂಕ ೧೬-೭-೧೯೫೭ರಲ್ಲಿ ಜನಿಸಿದ್ದಾರೆ. ಇವರು ೧೯೯೬ರಲ್ಲಿ `ಬಿಗಿ ಬಂದೋಬಸ್ತಿನಲ್ಲಿ ಪ್ರಜಾಪ್ರಭುತ್ವ' ಎಂಬ ಕೃತಿ ರಚಿಸಿ ಪ್ರಕಟಿಸಿದ್ದಾರೆ. ಮತ್ತು ಇವರಿಗೆ ೧೯೯೬ರಲ್ಲಿ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿಗಿದೆ..
ಮೇನಕಾ ಪಾಟೀಲ್.
ಬೀದರ ಜಿಲ್ಲೆಯ ಉದಯೋನ್ಮುಖ ಯುವ ಮಹಿಳಾ ಬರಹಗಾರ್ತಿಯರಲ್ಲಿ ಒಬ್ಬರಾಗಿ ಕವನ,ಲೇಖನ, ಆಧುನಿಕ ವಚನ,ಚುಟುಕು, ಹನಿಗವನ ಸೇರಿದಂತೆ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿ ಪುಸ್ತಕ ಪ್ರಕಟಿಸಿದ ಕವಯತ್ರಿಯೆಂದರೆ, *ಮೇನಕಾ ಪಾಟೀಲ್*.ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ತಡೋಳಾ ಗ್ರಾಮದ ಶರಣಪ್ಪ ನಂದಿ ಮತ್ತು ಜೈ ಶ್ರೀ ದಂಪತಿಗಳಿಗೆ ದಿನಾಂಕ ೧೮-೮-೧೯೮೫ ರಲ್ಲಿ ಜನಿಸಿದ್ದಾರೆ. ಆಂಗ್ಲ ಮಾಧ್ಯಮದಲ್ಲಿ ಅಧ್ಯಯನ ಮಾಡಿದ ಇವರು ಪಿ.ಯು.ಸಿ ವಿಜ್ಞಾನ ವಿಷಯದಲ್ಲಿ ತೇರ್ಗಡೆಯಾದ ನಂತರ ಒಂದು ವರ್ಷದ *ಪತ್ರಿಕೋದ್ಯಮ* ವಿಷಯದಲ್ಲಿ ಡಿಪ್ಲೊಮಾ ಪದವಿಯನ್ನು ಪಡೆದು ಎರಡು ವರ್ಷ ಮಂಗಳೂರಿನಿAದ ಪ್ರಕಟವಾಗುವ ' *ಸ್ತ್ರೀ ಶಕ್ತಿ*' ಎಂಬ ಮಾಸ ಪತ್ರಿಕೆಯಲ್ಲಿ ಬೀದರ ಜಿಲ್ಲಾ ವರದಿಗಾರರಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಆ ಪತ್ರಿಕೆಯಲ್ಲಿ ಲೇಖನ, ಅಂಕಣ ಬರಹಗಳು ಬರೆದ ಇವರು ಪ್ರಜಾವಾಣಿ, ಉದಯವಾಣಿ, ವಿಜಯವಾಣಿ,ಸೇರಿದಂತೆ ಮೊದಲಾದ ಪತ್ರಿಕೆಗಳಲ್ಲಿ ಹಾಗೂ *ಬಸವ ಟಿವಿ* ಯಲ್ಲಿಯೂ ಇವರ ಸಾಹಿತ್ಯದ ಕುರಿತಾದ ಕಾರ್ಯಕ್ರಮಗಳು ಪ್ರಸಾರವಾಗಿವೆ. ಹುಟ್ಟಿದ ವರ್ಷವೇ ಹಸುಳೆಯಾದಾಗಲೆ ತಂದೆಯನ್ನು ಕಳೆದುಕೊಂಡ ಇವರು ದೊಡ್ಡವರಾದಂತೆ ಅವರ ತಂದೆ ಬರೆದು ಇಟ್ಟಿದ ದಿನಚರಿ ಸಾಹಿತ್ಯವನ್ನು ಓದಿ, ಅಪ್ಪಾಜಿಯ ಸಾಹಿತ್ಯಕ್ಕೆ ಮಾರುಹೋಗಿ ಬರವಣಿಗೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ಕಲಿತದ್ದು ಆಂಗ್ಲ ಮಾಧ್ಯಮದಲ್ಲಿ ಆದರೂ ಬರೆಯುವುದೆಲ್ಲ *ಕನ್ನಡ ಸಾಹಿತ್ಯ* ಎನ್ನುವುದು ಹೆಮ್ಮೆಯ ವಿಷಯವಾಗಿದೆ. ಇವರು ೨೦೧೮ ರಲ್ಲಿ ' *ಬಸವ ರಕ್ಷಾ*' ಎಂಬ ಒಂದು ಕವನ ಸಂಕಲನ, ಹಾಗೂ ೨೦೧೯ ರಲ್ಲಿ ಹುಲಸೂರು ಶ್ರೀಗಳ ಕುರಿತು ' *ಒಂದು ಜೀವನ ಚರಿತ್ರೆ*' ಎಂಬ ಪುಸ್ತಕ ಬರೆದು ಪ್ರಕಟಿಸಿದ್ದಾರೆ. ಮತ್ತು ನೂರಾರು ಕವನ,ಲೇಖನ, ಹನಿಗವನಗಳು ಬರೆದ ಇವರು ಬೀದರ ಜಿಲ್ಲೆಯಲ್ಲದೆ ರಾಜ್ಯ ಮಟ್ಟದ ಸಾಹಿತ್ಯ ಕ್ಷೇತ್ರದಲ್ಲಿಯೂ ಗುರುತಿಸಿಕೊಂಡಿದ್ದಾರೆ. ಇವರ ಲೇಖನ ಉದಯವಾಣಿ ಸಂಪಾದಕೀಯ ಪುಟದಲ್ಲೂ ಪ್ರಕಟವಾಗಿವೆ ಅನ್ನೊದು ತುಂಬ ಖುಷಿಯ ವಿಷಯವಾಗಿದೆ. ಆದ್ದರಿಂದ ಇವರ ಸಾಹಿತ್ಯ ಸಾಧನೆಗೆ ಮೆಚ್ಚಿ ಬೀದರದ ಹಲವಾರು ಕನ್ನಡ ಪರ ಸಾಹಿತ್ಯ ಸಂಘಟನೆಯವರು ಮತ್ತು ಕನ್ನಡ ಸಾಹಿತ್ಯ ಪರಿಷತ್ತಿನವರು ಕೂಡ ಹಲವಾರು ಸಲ ಸತ್ಕರಿ ಗೌರವಿಸಿದ್ದಾರೆ. ಸದ್ಯ ಇವರು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಹಿಳಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುವುದರೊಂದಿಗೆ, ಕೌಟುಂಬಿಕ ಜೀವನದಲ್ಲಿ ಗೃಹಿಣಿಯಾಗಿದ್ದುಕೊಂಡು ಸಾಹಿತ್ಯ ರಚನೆಯಲ್ಲಿ ನಿರತರಾಗಿದ್ದಾರೆ.
ಎಂ.ಆರ್.ಶ್ರೀಕಾಂತ
ಬೀದರ ಜಿಲ್ಲೆಯ ಉದಯೋನ್ಮುಖ ಬರಹಗಾರರ ಬಳಗದಲ್ಲಿ ಎಲೆ ಮರೆಯ ಕಾಯಿಯಂತೆ ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿರುವ ಸೃಜನಶೀಲ ಕವಿ,ಸಾಹಿತಿಯೆಂದರೆ ಶ್ರೀಕಾಂತ ಮದರಗಾಂವಕರ್.ಇವರು ಬೀದರ ಜಿಲ್ಲೆಯ ಬಸವಕಲ್ಯಾಣ ತಾಲೂಕಿನ ಯರಬಾಗ ಗ್ರಾಮದ ರಾಮಣ್ಣ ಮತ್ತು ಬಸಮ್ಮಾ ದಂಪತಿಗಳಿಗೆ ದಿನಾಂಕ ೧೫-೨-೧೯೭೯ ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಎಡ್ ಪದವಿಧರರಾದ ಇವರು ಖಾಸಗಿ ಶಾಲೆಯೊಂದರಲ್ಲಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ಕ್ಷೇತ್ರದಲ್ಲಿ ತುಂಬಾ ಆಸಕ್ತರಾಗಿದ್ದರಿಂದ ಇವರು ಕವನ, ಆಧುನಿಕ ವಚನ, ಚುಟುಕು, ಹನಿಗವನ, ಲೇಖನ ಮೊದಲಾದ ಬರಹಗಳನ್ನು ಬರೆಯುವುದರಲ್ಲಿ ತೊಡಗಿಸಿಕೊಂಡಿದ್ದಾರೆ. ಇವರು ' ಕಾಲಜ್ಞಾನ' ಎಂಬ ಕವನಸಂಕಲನ ಮತ್ತು ' ಶುಭೋದಯ' ಎಂಬ ಸಂಪಾದಿತ ಕೃತಿಯೊಂದು ಪ್ರಕಟಿಸಿದ್ದಾರೆ. ಹಾಗೂ ' ಶಬ್ದಗಳ ಸುಳಿಯಲ್ಲಿ' ಎಂಬ ವಿಮರ್ಶೆ ಕೃತಿ, 'ಕಾಲಜ್ಞಾನ' ಎಂಬ ಕವನಸಂಕಲನ, 'ವ್ಯಾಕರಣ ದರ್ಪಣ' ಎಂಬ ವ್ಯಾಕರಣ ಕೃತಿ, 'ಗಣಕ ರಹಸ್ಯ' ಎಂಬ ಕಂಪ್ಯೂಟರ್ ಶಿಕ್ಷಣ ಕೃತಿ, ಮತ್ತು' ಸಾಹಿತ್ಯ ಸಾಗರ' ಎಂಬ ಕನ್ನಡ ಸಾಹಿತ್ಯ ಕುರಿತಾದ ಲೇಖನಗಳ ಕೃತಿಗಳು ಬರೆದಿದ್ದು ಅವು ಅಪ್ರಕಟಿತವಾಗಿವೆ. ಇವರ ಕವನ, ಚುಟುಕು, ಲೇಖನಗಳು ಕನ್ನಡದ ಪ್ರಮುಖ ಪತ್ರಿಕೆಗಳಾದ ಸಂಯುಕ್ತ ಕರ್ನಾಟಕ,ವಿಜಯಕರ್ನಾಟಕ ವಿಜಯವಾಣಿ,ಜನಪರ, ಮಯೂರ, ಮಲ್ಲಿಗೆ,ಕರವೇ ನಲ್ನುಡಿ, ಧೀನರ ಧ್ವನಿ, ಮೊದಲಾದ ಪತ್ರಿಕೆಗಳಲ್ಲಿ ಮತ್ತು ಪ್ರಾತಿನಿಧಿಕ ಕವನಸಂಕಲನಗಳಲ್ಲಿ ಹಾಗೂ ಕೆಲವು ಅಭಿನಂದನಾ ಗ್ರಂಥಗಳಲ್ಲಿ ಇವರ ಕವನ ಲೇಖನಗಳು ಪ್ರಕಟವಾಗಿವೆ. ಮತ್ತು ಕಲಬುರಗಿ ಆಕಾಶವಾಣಿಯಿಂದಲೂ ಇವರ ೧೦ ಕವನಗಳು ಪ್ರಸಾರವಗಿವೆ. ಹಾಗೂ ೨೦೦೨ ರಲ್ಲಿ ಬಸವಕಲ್ಯಾಣ ತಾಲೂಕಿನ ಶರಣನಗರ (ಕಿಣ್ಣಿ) ಗ್ರಾಮದ ಜ್ಞಾನಸೂರ್ಯ ತರುಣ ಸಂಘದವರು ಏರ್ಪಡಿಸಿದ ರಾಜ್ಯ ಮಟ್ಟದ ಕವನಸ್ಪರ್ಧೆಯಲ್ಲಿ ಇವರಿಗೆ ಪ್ರಥಮ ಬಹುಮಾನವು ಬಂದಿರುತ್ತದೆ. ಹಾಗೂ ೨೦೦೩ ರಲ್ಲಿ ಕಲಬುರಗಿಯ ಆಜಾದ್ ವಿಚಾರ ವೇದಿಕೆಯವರು ನಡೆಸಿದ ರಾಜ್ಯ ಮಟ್ಟದ ಕವನ ಸ್ಪರ್ಧೆಯಲ್ಲಿ, ಮತ್ತು ಗದಗದ ಗಂಗಮ್ಮ ಪ್ರಕಾಶನದಿಂದ ಏರ್ಪಡಿಸಿದ ಕವನ ಸ್ಪರ್ಧೆಗಳಲ್ಲಿ ಇವರಿಗೆ ಪ್ರೋತ್ಸಾಹಕ ಬಹುಮನವು ಲಭಿಸಿವೆ. ಹೀಗೆ ಇವರ ಸಾಹಿತ್ಯ ಸೇವೆಯನ್ನು ಕಂಡು ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ 'ಕವಿರತ್ನ ಶ್ರೀ ಪ್ರಶಸ್ತಿ' ಮತ್ತು ೨೦೧೫ ರಲ್ಲಿ ಕನ್ನಡ 'ಕಾವ್ಯರತ್ನ ಪ್ರಶಸ್ತಿ ' ನೀಡಿದ್ದಾರೆ. ೨೦೧೬ ರಲ್ಲಿ ಕನ್ನಡ ಜಾನಪದ ಪರಿಷತ್ತು ಹಾಗೂ ದಲಿತ ಸಾಹಿತ್ಯ ಪರಿಷತ್ತು, ಧರಿನಾಡು ಕನ್ನಡ ಸಂಘದ ವತಿಯಿಂದ 'ಕನ್ನಡ ಸೇವಾ ರತ್ನ' ಹಾಗೂ ೨೦೧೭ ರಲ್ಲಿ ವಚನ ಸಾಹಿತ್ಯ ಅಕಾಡೆಮಿ ಮತ್ತು ಚುಟುಕು ಸಾಹಿತ್ಯ ಪರಿಷತ್ತಿನಿಂದ 'ಕನಕ ಶ್ರೀ' ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಪ್ರಭುಲಿಂಗಯ್ಯಾ ಬಿ.ಟಂಕಸಾಲಿಮಠ
ಚಿತ್ರಕಲಾವಿದ, ಸಾಹಿತಿ, ಪತ್ರಕರ್ತರಾಗಿ ಪುಸ್ತಕ ಪ್ರಕಟಿಸಿದ ಲೇಖಕರೆಂದರೆ ಪ್ರಭುಲಿಂಗಯ್ಯಾ ಟಂಕಸಾಲಿಮಠ ಇವರು ಬೀದರ ಜಿಲ್ಲೆ ಹುಮನಾಬಾದಿನ ಬಸಯ್ಯಾ ಮತ್ತು ವಿದ್ಯಾವತಿ ದಂಪತಿಗಳಿಗೆ ದಿನಾಂಕ ೧೯-೯-೧೯೭೩ರಲ್ಲಿ ಜನಿಸಿದ್ದಾರೆ. ಚಿತ್ರಕಲೆಯಲ್ಲಿ ಸ್ನಾತಕೋತರ ಪದವಿಧರರಾದ ಇವರು ೨೫ವರ್ಷಗಳಿಂದ ಬಸವಕಲ್ಯಾಣದಲ್ಲಿ ಶ್ರೀ ಬಸವೇಶ್ವರ ಚಿತ್ರಕಲಾ ಮಹಾವಿದ್ಯಾಲಯ ಸ್ಥಾಪಿಸಿ ಅದರ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕಲೆ ಸಾಹಿತ್ಯದಲ್ಲಿ ಆಸಕ್ತರಾದ ಇವರು `ಚಿತ್ರ-ಚಿತ್ತ', `ಕಲ್ಯಾಣ ಕಲಾಶ್ರೀ', `ಚಿಣ್ಣರ ಚುಟುಕು', `ಕಲ್ಯಾಣದ ಕಲಾ ಪ್ರತಿಭೆ', `ಹತ್ತು ಮುಖಗಳ ನೂರು ಭಾವಗಳು', `ಸಾಲು- ದೀಪ' ಎಂಬ ಕೃತಿಗಳು ತಮ್ಮ ಕಲಾನಿಕೇತನ ಪ್ರಕಾಶನದಿಂದ ಸಂಪಾದಿಸಿ ಪ್ರಕಟಿಸಿದ್ದಾರೆ. ೨೦೦೭ರಿಂದ ೨೦೧೦ ರವರೆಗೆ ಬಸವಕಲ್ಯಾಣ ಕಸಾಪ ಅಧ್ಯಕ್ಷರಾಗಿ, ಉತ್ತರ ಕರ್ನಾಟಕ ಪತ್ರಿಕೆಯ ವರದಿಗಾರರಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಕಲಬುರಗಿಯ ಮಹಾನ್ ಚಿತ್ರಕಲಾವಿದ `ಡಾ.ಜೆ.ಎಸ್.ಖಂಡೇರಾವ ಪ್ರಶಸ್ತಿ, ಭಾಲ್ಕಿ ಮಠದಿಂದ ಡಾ.ಚನ್ನಬಸವ ಪಟ್ಟದೇವರ ಪ್ರಶಸ್ತಿ, ಹಾರಕೂಡ ಮಠದಿಂದ `ಶ್ರೀಚನ್ನ ರತ್ನ ಪ್ರಶಸ್ತಿ, ಹುಲಸೂರು ಮಠದಿಂದ `ಕಲಾ ಪ್ರೇಮಿ' ಭಾತಂಬ್ರಾ ಮಠದಿಂದ `ಕಲಾ ರತ್ನ' ಮತ್ತು ಬಸವಕಲ್ಯಾಣ ತಾಲೂಕಾ `ಗಣರಾಜ್ಯೋತ್ಸವ' ಮತ್ತು ರಾಜ್ಯೋತ್ಸವ ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ. ಸದ್ಯ ಇವರು ಬಸವಕಲ್ಯಾಣದಲ್ಲಿ ವಾಸವಾಗಿದ್ದು, ಅಪಾರ ಅಂಚೆ ಚೀಟಿ ಮತ್ತು ನಾಣ್ಯ ಸಂಗ್ರಹ ಮಾಡಿರುವುದರೊಂದಿಗೆ ಸೃಜನಶೀಲ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಮಾತೆ ಸುಜ್ಞಾನಿದೇವಿ
ಬಸವಕಲ್ಯಾಣದ ಮಾತೆ ಸುಜ್ಞಾನಿದೇವಿ ಇವರು ಓಬಯ್ಯ ಮತ್ತು ಗೌರಮ್ಮ ದಂಪತಿಗಳಿಗೆ ದಿನಾಂಕ ೧೧-೧೨-೧೯೪೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವೀಧರರಾದ ಇವರು ಧರ್ಮ ಪ್ರಚಾರಕರಾಗಿ ೧೯೮೧ರಲ್ಲಿ `ಶರಣ ಶಕ್ತಿಯ ಸಂದೇಶ ಭಾಗ- ೧.೨.೩.೪.೫. ಎಂಬ ಕೃತಿ ಐದು ಸಂಪುಟಗಳಲ್ಲಿ ಪ್ರಕಟಿಸಿದ್ದಾರೆ.
ಗುರುವಾರ, ಜನವರಿ 16, 2025
ಪಂಚಾಕ್ಷರಿ ಪುಣ್ಯಶೆಟ್ಟಿ
ಹಿರಿಯ ಸಾಹಿತಿಯಾದ ಪಂಚಾಕ್ಷರಿ ಪುಣ್ಯಶೆಟ್ಟಿಯವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನೋಳ್ಳಿ ಗ್ರಾಮದ ಶಿವರುದ್ರಪ್ಪ ಮತ್ತು ನೀಲಮ್ಮ ದಂಪತಿಗಳಿಗೆ ದಿನಾಂಕ ೩-೨-೧೯೩೫ರಲ್ಲಿ ಜನಿಸಿದ್ದಾರೆ. ೮ನೇ ತರಗತಿಯವರೆಗೆ ಉರ್ದು ಮಾಧ್ಯಮದಲ್ಲಿ ಅಧ್ಯಯನ ಮಾಡಿ ನಂತರ ಕನ್ನಡ ಮಾಧ್ಯಮದಲ್ಲಿ ಎಚ್.ಎಸ್.ಸಿ. ಟಿ.ಸಿ.ಎಚ್. ಸಿ.ಪಿ.ಎಡ್. ಬಿ.ಪಿ.ಎಡ್. ಶಿಕ್ಷಣ ಪಡೆದು ೧೯೫೩ರಲ್ಲಿ ಹುಮನಾಬಾದ ತಾಲೂಕಿನ ದುಮ್ಮನಸೂರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಶಿಕ್ಷಕರಾಗಿ, ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ, ೧೯೯೩ರಲ್ಲಿ ನಿವೃತ್ತರಾಗಿದ್ದಾರೆ.
ಕಲ್ಯಾಣ ಸಿರಿಗನ್ನಡ ತಾಣಕ್ಕೆ ಬೇಟಿ ಕೊಡಿ
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾದ ಇವರು ೧೯೬೩ರಲ್ಲಿ `ಅಜಾದ್ ಚಂದ್ರಶೇಖರ’ (ನಾಟಕ) `ಶಿವಶರಣ ರೇವಪ್ಪಯ್ಯನವರು' `ಸಮಾಜವಾದಿ ಹೋರಾಟಗಾರ ವೈಜಿನಾಥ ಪಾಟೀಲ್'. `ಮಹಾಯೋಗಿಣಿ ಚಕ್ರಕೋಟೆ ಬಾಯವ್ವ' `ಡಾ.ಚನ್ನಬಸವ ಪಟ್ಟದ್ದೆವರ ಹೋರಾಟದ ಬದುಕು' `ಮಹಾದೇವಪ್ಪಾ ಮಿಸೆ' `ಹುತಾತ್ಮ ಬಸವರಾಜ ಹುಡಗಿ'. `ಬಿಜಪಾಲ್ ಸಿಂಗ ಸ್ವತಂತ್ರ ಹೋರಾಟಗಾರ' `ಬಿ.ಟಿ.ಸಾಸನೂರ' `ವಿರೂಪಾಕ್ಷಯ್ಯಾ ಸ್ವಾಮಿ ಐನ್ನೋಳ್ಳಿ’ `ಹುಟ್ಟು ಹೋರಾಟಗಾರ ಪಿ.ಎನ್.ಪಾಟೀಲ್'. (ಚರಿತ್ರೆಗಳು) `ಸಜ್ಜನರ ಸಂಘದಲ್ಲಿ' (ವ್ಯಕ್ತಿ ಚಿತ್ರಣ) `ಬೀದರದಿಂದ ಸಿಂಗಾಪುರಕ್ಕೆ' `ಕಲ್ಯಾಣದಿಂದ ಕಾಶ್ಮೀರಕ್ಕೆ’ (ಪ್ರವಾಸ ಕಥನಗಳು) ಎಂಬ ಕೃತಿಗಳು ಪ್ರಕಟಿಸಿದ್ದಾರೆ. ಇವರು ಚಿಂಚೋಳಿ ತಾಲೂಕಿನ ಪ್ರಥಮ ಕಸಾಪ ಅಧ್ಯಕ್ಷರಾಗಿ, ಎರಡು ಅವಧಿಗೆ ಬೀದರ ಜಿಲ್ಲಾ ಕಸಾಪ ಅಧ್ಯಕ್ಷರಾಗಿ, ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ತಿನ ಜಿಲ್ಲಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಇವರಿಗೆ ಭಾಲ್ಕಿ ಮಠದಿಂದ ಉತ್ತಮ ಲೇಖಕ ಪ್ರಶಸ್ತಿ, ಹಾರಕೂಡ ಹಿರೇಮಠ ಸಂಸ್ಥಾನದಿAದ ಚನ್ನಶ್ರೀ ಪ್ರಶಸ್ತಿ, ಬಸವಕಲ್ಯಾಣ ಅನುಭವ ಮಂಟಪದಿAದ ಜಯದೇವಿ ತಾಯಿ ಲಿಗಾಡೆಯವರ ಸ್ಮರಣಾರ್ಥ ರಾಷ್ಟ್ರೀಯ ಪುರಸ್ಕಾರ, ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಕವನ, ಲೇಖನ, ಬರಹಗಳು ಭಾಲ್ಕಿಯ ಶಾಂತಿ ಕಿರಣ ದ್ವೆöÊಮಾಸಿಕ ಹಾಗೂ ಉತ್ತರ ಕರ್ನಾಟಕ ದಿನಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರದ ಖಾಯಂ ನಿವಾಸಿಯಾಗಿ ಸಾಹಿತ್ಯ ಕೃಷಿಯಲ್ಲಿ ತೊಡಗಿದ್ದಾರೆ.
ಕಲಬುರಗಿ ಜಿಲ್ಲಾ ಸಾಹಿತಿಗಳ ಪರಿಚಯ ಓದಿರಿ
ಮಂಗಳವಾರ, ಜನವರಿ 14, 2025
ಡಾ.ಬಂಡೆಪ್ಪಾ ಕಾಳಗಿ.
ಹಿರಿಯ ತಲೆಮಾರಿನ ಸಾಹಿತಿಗಳಲ್ಲಿ ಒಬ್ಬರಾಗಿ ಕೆಲ ಪುಸ್ತಕಗಳು ಪ್ರಕಟಿಸಿದ ಲೇಖಕರೆಂದರೆ, ಡಾ.ಬಂಡೆಪ್ಪಾ ಕಾಳಗಿ. ಇವರು ಬೀದರ ಜಿಲ್ಲೆಯ ಹುಮನಾಬಾದ ತಾಲೂಕಿನ ನಂದಗಾAವ ಗ್ರಾಮದ ಶ್ರೀ ಭೀಮಣ್ಣಾ ಮತ್ತು ಶರಣಮ್ಮಾ ದಂಪತಿಗಳಿಗೆ ದಿನಾಂಕ ೪-೪-೧೯೫೪ ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವಿಧರರಾಗಿ ೧೯೮೨ ರಿಂದ ೧೯೮೭ ರವರೆಗೆ ಬೀದರದ ಅಂಬೇಡ್ಕರ ಪ.ಪೂ.ಕಾಲೇಜು, ಬಿ.ವಿ.ಬಿ ಕಾಲೇಜುಗಳಲ್ಲಿ ಸೇವೆ ಸಲ್ಲಿಸಿ ನಂತರ ೧೯೮೭ ರಲ್ಲಿ ಬಸವಕಲ್ಯಾಣದ ಎಸ್.ಎಸ್.ಕೆ.ಬಿ.ಕಾಲೇಜಿನ ಸಮಾಜ ಶಾಸ್ತ್ರದ ಪ್ರಾಧ್ಯಾಪಕರಾಗಿ, ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ ೨೦೧೪ರಲ್ಲಿ ನಿವೃತ್ತರಾಗಿದ್ದಾರೆ.
ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ, ಹನಿಗವನ,ಲೇಖನ ಬರಹಗಳು ಬರೆದು ೧೯೯೪ರಲ್ಲಿ `ಸಂಘಟನೆಯ ಸಾಫಲ್ಯ’ ಎಂಬ ಲೇಖನ ಸಂಕಲನ ೨೦೦೪ರಲ್ಲಿ `ವೃಕ್ಷ ಗಂಗಾ' ಎಂಬ ಕವನ ಸಂಕಲನ, ಮತ್ತು ೨೦೦೭ರಲ್ಲಿ `ದಿ.ಶೇಡ್ಯೂಲ್ಡ ಟ್ರಬ್ಸ ಇನ್ ಟ್ರಾನಸಿಷನ್’ ಎಂಬ ಮೂರು ಕೃತಿಗಳು ಪ್ರಕಟಿಸಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಇತರರು ಪ್ರಕಟಿಸಿದ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ೨೦೦೪ರಲ್ಲಿ ಬಸವಕಲ್ಯಾಣದ ಕಸಾಪ ಪದಾಧಿಕಾರಿಯಾಗಿ ಲಾಯನ್ಸ ಕ್ಲಬನ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ. ಸದ್ಯ ಇವರು ಬಸವಕಲ್ಯಾಣದ ತ್ರೀಪೂರಾಂತದಲ್ಲಿ ತಮ್ಮ ವಿಶ್ರಾಂತಿ ಜೀವನದೊಂದಿಗೆ ಸಾಹಿತ್ಯ ಕೃಷಿಯನ್ನು ಮುಂದುವರೆಸಿದ್ದಾರೆ. ಇವರ ಕುರಿತು ೨೦೧೭ರಲ್ಲಿ ಕನ್ನಡ ಮತ್ತು ಸಾಂಸ್ಕಿçತಿಕ ಇಲಾಖೆ ಬೀದರ ರವರು `ಕವಿ ಮನಸ್ಸಿನ ಸಮಾಜ ಶಾಸ್ತçಜ್ಞ ಡಾ.ಬಂಡಪ್ಪ ಭೀಮಣ್ಣ ಕಾಳಗಿ’ ಎಂಬ ಸಾಕ್ಷö್ಯ ಚಿತ್ರವು ನಿರ್ಮಿಸಿದ್ದಾರೆ.
ಸೂರ್ಯಕಾಂತ ಸಸಾನೆ.
ಕನ್ನಡ, ಮರಾಠಿಯಲ್ಲಿ ಸಾಹಿತ್ಯ ರಚಿಸಿದ ಲೇಖಕರೆಂದರೆ ಸೂರ್ಯಕಾಂತ ಸಸಾನೆ. ಇವರು ಬೀದರ ಜಿಲ್ಲೆ ಬಸವಕಲ್ಯಾಣ ತಾಲೂಕಿನ ತಳಬೋಗ ಗ್ರಾಮದ ಸಂಭಾಜಿ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧೫-೧೦-೧೯೭೩ ಜನಿಸಿದ್ದಾರೆ. ಬಿ.ಎಸ್ಸಿ.ಬಿ.ಇಡಿ. ಪದವಿಧರರಾದ ಇವರು ಭಾಲ್ಕಿಯ ಡಾವರಗಾಂವದ ಅನುದಾನಿತ ವಸಂತ ಪ್ರೌಢ ಶಾಲೆಯಲ್ಲಿ ಮರಾಠಿ ಮಾಧ್ಯಮದ ವಿಜ್ಞಾನ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರ ಮಾತೃಭಾಷೆ ಮರಾಠಿಯಾದರು ವ್ಯವಹಾರಿಕ ಭಾಷೆ ಕನ್ನಡವಾಗಿದೆ. ಇವರು ಕನ್ನಡದಲ್ಲಿ ಶಿಕ್ಷಣ ಕಲಿಯದೆ `ಅಂಕಲಿಪಿ' ಮೂಲಕ ಅಕ್ಷರ ಕಲಿತು ದ್ವಿ ಭಾಷಾ ಕವಿಯಾಗಿ ಹೊರಹೊಮ್ಮಿದ್ದಾರೆ.
ಇವರು ಮರಾಠಿಯಲ್ಲಿ `ಅಣ್ಣಾ ಭಾವು ಸಾಠೆ’ ಎಂಬ ಜೀವನ ಚರಿತ್ರೆ, `ವಿನಯ’ ಎಂಬ ಕವನಸಂಕಲನ ಪ್ರಕಟಿಸಿದ್ದು ಮತ್ತು `ಏಕ ಸೇ ಏಕ್ ಜ್ಞಾನಿಚಾ ಪರಿಚಯ ಆಣಿ ಸಂದೇಶ' ಹಾಗೂ `ಜ್ಣಾನ ದೀಪ' ಎಂಬ ಕೃತಿಗಳು ಸಂಪಾದಿಸಿದ್ದಾರೆ. ಹಾಗೂ ಕನ್ನಡದಲ್ಲಿ `ಕ್ರಾಂತಿ ಗುರು ಲಹುಜಿ ಸಾಳವೆ’ ಎಂಬ ಕೃತಿ ಪ್ರಕಟಿಸಿ `ಅಣ್ಣಾ ಬಾವು ಸಾಠೆ’ ಜೀವನ ಚರಿತ್ರೆಯು ಕನ್ನಡಕ್ಕೆ ಅನುವಾದಿಸಿದ್ದಾರೆ. ಮತ್ತು ಅಣ್ಣಾಭಾವು ಸಾಠೆಯವರ ಹುಟ್ಟು ಹಬ್ಬವನ್ನು ೧೯೯೪ರಿಂದ ಕರ್ನಾಟಕದಲ್ಲಿ ಮೊದಲು ಪ್ರಾರಂಭ ಮಾಡಿದ ಇವರು ತಮ್ಮ ಹುಟ್ಟೂರಿನಲ್ಲಿ ಪ್ರತಿವರ್ಷ ಜಯಂತಿ ಆಚರಿಸುತ್ತಾರೆ. ಇವರಿಗೆ ೨೦೦೪ರಲ್ಲಿ ಬೀದರ ಜಿಲ್ಲಾ `ರಾಜ್ಯೋತ್ಸವ ಪ್ರಶಸ್ತಿ, ೨೦೧೨ರಲ್ಲಿ ವೀರಶೈವ ಮಹಾಸಭಾ ಬೆಂಗಳೂರಿನಿAದ `ಬಸವಶ್ರೀ ಪ್ರಶಸ್ತಿ' ೨೦೨೦ರಲ್ಲಿ ಹುಮನಾಬಾದಿನ ಎಕ್ಸಿಲೆಂಟ್ ಶಿಕ್ಷಣ ಸಂಸ್ಥೆಯಿAದ `ಅಣ್ಣಾ ಭಾವು ಸಾಠೆ' ಕೃತಿ ಕನ್ನಡಕ್ಕೆ ಅನುವಾದಿಸಿದ್ದರಿಂದ `ಕಾರಂಜಾ ರತ್ನ' ಪ್ರಶಸ್ತಿಯು ನೀಡಿ ಸತ್ಕರಿಸಿದ್ದಾರೆ.
ವಿಜಯಲಕ್ಷ್ಮಿ ಕೌಟಗೆ
ಸಾಹಿತಿ ವಿಜಯಲಕ್ಷ್ಮಿ ಕೌಟಗೆ ಯವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಡೊಣಗಾವ ಗ್ರಾಮದ ವಿಶ್ವನಾಥ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧೧-೬-೧೯೭೮ರಲ್ಲಿ ಪಶ್ಚಿಮ ಬಂಗಾಳದ ಕಲ್ಕತ್ತಾ ನಗರದಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಶಿವಕುಮಾರ ಕೌಟಗೆಯವರ ಧರ್ಮಪತ್ನಿಯಾಗಿದ್ದು ೨೦೧೪ರಿಂದ ಸಾಹಿತ್ಯದಲ್ಲಿ ಆಸಕ್ತರಾಗಿ `ಪ್ರೀತಿ ಒಂದೆಯಿರಲಿ ' (ಕವನಸಂಕಲನ) `ವಿಶ್ವ ವಿಜಯ', `ಕ್ರಾಂತಿ ಮಾತೆ ಅಕ್ಕನಾಗಮ್ಮ', `ಬಲ್ಲಾಳದ ರಾಣಿ ಅಬ್ಬಕ್ಕ' (ಕಾದಂಬರಿಗಳು) `ಕದಳಿ ಬೆಳಕು' (ಮಹಾಕಾವ್ಯ) `ಅಕ್ಕ ಮಹಾದೇವಿ', `ಆಯ್ದಕ್ಕಿ ಲಕ್ಕಮ್ಮ', `ಕದಳಿ ಕೊಗೀಲೆ' (ಚರಿತ್ರೆಗಳು) ಮತ್ತು `ಹನ್ನೆರಡನೆ ಶತಮಾನದ ಶರಣೆಯರ ಜೀವನ ಚರಿತ್ರೆ', `ಶರಣ ಸಂಕುಲ', `ಲಿಂಗಾರಾಧನೆ ಭವಕ್ಕೆ ಬೀಜ', `ಶರಣೆಯರ ಸಮಗ್ರ ಬದುಕು ಬರಹ' ಎಂಬ ಕೃತಿಗಳು ಪ್ರಕಟಿಸಿದ್ದಾರೆ. `ಡಾ.ಚನ್ನಬಸವ ಪಟ್ಟದ್ದೆವರು' ಎಂಬ ಕೃತಿಯು ಮುದ್ರಣದಲ್ಲಿದೆ. ಇವರಿಗೆ ಬಸವ ಮಹಾಮಠ ನಿಡವಂಚ ಮನ್ನಾಐಖೇಳಿಯಿಂದ ಅಕ್ಕ ಮಹಾದೇವಿ ಪ್ರಶಸ್ತಿ, ಬೀದರದ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕಾವ್ಯ ಸಿಂಧು ಪ್ರಶಸ್ತಿ, ಮತ್ತು ಶರಣ ಕುಸುಮಾಂಜಲಿ ಪ್ರಶಸ್ತಿ, ಇಳಕಲ್ ಮಠದಿಂದ ಬಸವಗುರು ಕಾರುಣ್ಯ ಪ್ರಶಸ್ತಿ, ಬೆಂಗಳೂರಿನ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ನೀಲಗಂಗಾ ದತ್ತಿ ಪ್ರಶಸ್ತಿ, ಭಾಲ್ಕಿ ಮಠದಿಂದ ಕಲ್ಯಾಣ ಕದಳಿ ಕೃತಿಗೆ ಬೀದರ ಜಿಲ್ಲೆಯ ಉತ್ತಮ ಗ್ರಂಥ ಪ್ರಶಸ್ತಿ, ಗುಲ್ಬರ್ಗ ವಿಶ್ವವಿದ್ಯಾಲಯದಿಂದ ರಾಜ್ಯೋತ್ಸವ ಪ್ರಶಸ್ತಿ, ಹುಲಸೂರು ಮಠದಿಂದ ಸಾಹಿತ್ಯ ರತ್ನ ಪ್ರಶಸ್ತಿ, ಬೆಂಗಳೂರಿನ ಅಖಿಲ ಭಾರತ ವಚನ ಸಾಹಿತ್ಯ ಪರಿಷತ್ತಿನಿಂದ ವಚನ ಶ್ರೀ ಪ್ರಶಸ್ತಿ, ೬ನೇ ಅಖಿಲ ಭಾರತ ಸಾಹಿತ್ಯ ಸಮ್ಮೇಳನದ ವತಿಯಿಂದ ಸಾಹಿತ್ಯ ಸೇವಾ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ಡಾ.ಮಹಾನಂದಾ ಮಡಕೆ
ಉದಯೋನ್ಮುಖ ಬರಹಗಾರ್ತಿಯಾದ ಡಾ.ಮಹಾನಂದಾ ಮಡಕೆ ಯವರು ಕಲಬುರಗಿಯ ಶಿವಶರಣಪ್ಪ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೯-೯-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ.ಎA.ಇಡಿ. ಎಂ.ಫೀಲ್. ಪಿಎಚ್.ಡಿ ಪದವಿಧರರಾದ ಇವರು ಬೀದರದ ಕರ್ನಾಟಕ ಪದವಿ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕವನ, ಲೇಖನ, ಹನಿಗವನಗಳು ಬರೆದು ಕವಯತ್ರಿಯಾಗಿ ಗುರುತಿಸಿಕೊಂಡಿದ್ದಾರೆ. `ಜಾನಪದ ಮಹಿಳೆ', `ಪ್ರೊ.ವೀರೇಂದ್ರ ಸಿಂಪಿ’, `ಬೆಳ್ಳಿ ದಾಂಪತ್ಯ.'. ಎಂಬ ಕೃತಿಗಳು ರಚಿಸಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳು ಮಂಡಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಶ್ರೀ ಮುರುಘರಾಜೇಂದ್ರ ಮಠದಿಂದ ಶಿಕ್ಷಣ ಶ್ರೀ ಪ್ರಶಸ್ತಿ, ಶಿಕ್ಷಣ ರತ್ನ ಪ್ರಶಸ್ತಿ, ಕಮಲಾಪೂರದಿಂದ ಮನುಕುಲ ರತ್ನ ಪ್ರಶಸ್ತಿ, ಗುಲಬರ್ಗಾ ವಿಶ್ವವಿದ್ಯಾಲಯದಿಂದ ಪಿ.ಕೆ.ಖಂಡೊಬಾ ಪ್ರಶಸ್ತಿ, ಮತ್ತು ಚಿನ್ನದ ಪದಕ, ಮತ್ತು ಎಂ.ಎ. ಸ್ನಾತಕ್ಕೊತ್ತರ ಪದವಿಯಲ್ಲಿ ಚಿನ್ನದ ಪದಕ ಪಡೆದ ಇವರು ಅಣ್ಣಾ ಹಜಾರೆ ರಾಷ್ಟ್ರೀಯ ಪ್ರಶಸ್ತಿ. ಆರ್.ವಿ.ಬಿಡಪ್ ಶಿಷ್ಯ ವೇತನ ಪ್ರಶಸ್ತಿಗಳು ಪಡೆದಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿದ್ದು, ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ವೀರಂತರೆಡ್ಡಿ ಜಂಪಾ
ಉದಯೋನ್ಮುಖ ಬರಹಗಾರರಾದ ವೀರಂತರೆಡ್ಡಿ ಜಂಪಾ ರವರು ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಐನಾಪೂರ ಗ್ರಾಮದ ಗುಂಡಾರೆಡ್ಡಿ ಮತ್ತು ಬಕ್ಕಮ್ಮಾ ದಂಪತಿಗಳಿಗೆ ದಿನಾಂಕ ೫-೭-೧೯೬೯ರಲ್ಲಿ ಜನಿಸಿದ್ದಾರೆ. ಟಿ.ಸಿ.ಎಚ್.ಎಂ.ಎ.ಬಿ.ಎಡ್.ಪದವಿಧರರಾದ ಇವರು ೧೯೮೯ರಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸೇರಿ ವಿವಿಧ ಹುದ್ದೆಗಳನ್ನು ನಿರ್ವಹಿಸಿ ಸದ್ಯ ಹುಮನಾಬಾದ ತಾಲೂಕಿನ ಕನಕಟ್ಟಾ ಸರ್ಕಾರಿ ಪ್ರೌಢ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಹನಿಗವನ, ಲೇಖನಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ೧೯೮೭ರಲ್ಲಿ ಪಿ.ಯು. ವಿದ್ಯಾರ್ಥಿಯಾಗಿದಾಗ ಬೆಂಗಳೂರಿನ ರಾಜ್ಯ ಮಟ್ಟದ ಪರ-ವಿರೋಧ ಚರ್ಚೆ, ಭಾಷಣ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದಿದ್ದಾರೆ. ಸಾಹಿತ್ಯದೊಂದಿಗೆ ಉತ್ತಮ ಸಂಘಟಕರು ಆಗಿರುವ ಇವರು ೨೦೦೧ ರಿಂದ ೨೦೦೪. ೨೦೦೮ ರಿಂದ ೨೦೧೧ ರವರೆಗೆ ಹುಮನಾಬಾದ ತಾಲೂಕಾ ಕಸಾಪ ಅಧ್ಯಕ್ಷರಾಗಿ, ೨೦೦೫ ರಿಂದ ೨೦೦೮ ರವರೆಗೆ ನೃಪತುಂಗ ಕನ್ನಡ ಬಳಗದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಚಿತ್ರದುರ್ಗದ ಸಿರಿಗನ್ನಡ ಪ್ರಕಾಶನದಿಂದ ಶಿಕ್ಷಕ ರತ್ನ ಪ್ರಶಸ್ತಿ, ಹಾರಕೂಡ ಮಠದಿಂದ ಚನ್ನಶ್ರೀ ಪ್ರಶಸ್ತಿ, ಹಿಂದಿ ಪ್ರತಿಷ್ಠಾನ ಧಾರವಾಡದಿಂದ ಶಿಕ್ಷಕ ಸಾಹಿತ್ಯ ರತ್ನ ಪ್ರಶಸ್ತಿ, ಹುಮನಾಬಾದ ತಾಲೂಕಿನ ಆದರ್ಶ ಶಿಕ್ಷಕ ಪ್ರಶಸ್ತಿ, ಬೀದರ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ, ತಾಲೂಕಾ ರಾಜ್ಯೋತ್ಸವ ಪ್ರಶಸಿ, ಪುರಸ್ಕಾರಗಳು ಪಡೆದಿದ್ದಾರೆ.
ಎಚ್.ಬಿ.ಪ್ರಿಯಾಂಕಾ
ಹೊರನಾಡಿನಲ್ಲಿರುವ ಕವಯತ್ರಿ ಎಚ್.ಬಿ.ಪ್ರಿಯಾಂಕಾ ರವರು ಮೂಲತಃ ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ತರನಳ್ಳಿ ಗ್ರಾಮದ ಎಚ್.ಬಿ.ಜೀತಪ್ಪ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೧೭-೧-೧೯೯೧ರಲ್ಲಿ ಜನಿಸಿದ್ದಾರೆ. ಡಿಪ್ಲೊಮಾ ಇನ್ ಹೆಲ್ತ್ ಇನ್ಸ್ಪೆಕ್ಟರ್ ಶಿಕ್ಷಣವನ್ನು ಪಡೆದು ಹೈದರಾಬಾದ್ ನಲ್ಲಿ ಹೋಮಿಯೋಕೇರ್ ಇಂಟರ್ ನ್ಯಾಷನಲ್ ಎಕ್ಸಿಕ್ಯುಟಿವ್ ಆಗಿ ಕೆಲಸ ಮಾಡುತ್ತಿದ್ದಾರೆ. ಇವರ ವೃತ್ತಿ ವೈದ್ಯಕೀಯ ಕ್ಷೇತ್ರದಲ್ಲಿದ್ದರು ಕೂಡ ಪ್ರವೃತ್ತಿ ಸಾಹಿತ್ಯ ಕ್ಷೇತ್ರದ ಕಡೆಗೆ ಎಳೆದು ತಂದಿದೆ. ಇವರು ಈಗಾಗಲೇ ಕತೆ, ಕವನ, ಲೇಖನ, ಚುಟುಕು, ಪ್ರಬಂಧ ಮೊದಲಾದ ಪ್ರಕಾರದ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ಇವರ ಬರಹಗಳು ನಾಡಿನ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ ಮತ್ತು ಇವರು ತಾಲೂಕು, ಜಿಲ್ಲೆ ,ಮೊದಲಾದ ಕಡೆಗಳಲ್ಲಿ ನಡೆಯುವ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಪಾಲ್ಗೊಂಡು ಕವನವಾಚನವು ಮಾಡಿದ್ದಾರೆ. ಮತ್ತು ಸದ್ಯದಲ್ಲಿಯೇ ಒಂದು ಕವನ ಸಂಕಲನವು ಪ್ರಕಟಿಸುವ ತವಕದಲ್ಲಿದ್ದಾರೆ. ಸದ್ಯ ಇವರು ಹೈದರಾಬಾದ್ ನಲ್ಲಿ ನೆಲೆಸಿದ್ದಾರೆ.
ಪ್ರದೀಪರೆಡ್ಡಿ ಚಿನಕೇರಾ
ಹೊರ ನಾಡಿನಲ್ಲಿದ್ದುಕೊಂಡು ಸಾಹಿತ್ಯ ರಚಿಸುತ್ತಿರುವ ಉದಯೋನ್ಮುಖ ಬರಹಗಾರ ಪ್ರದೀಪರೆಡ್ಡಿ ಚಿನಕೇರಾ. ರವರು ಹುಮನಾಬಾದ ತಾಲೂಕಿನ ಚಿನಕೇರಾ ಗ್ರಾಮದ ನರಸಾರೆಡ್ಡಿ ಮತ್ತು ಈರಮ್ಮ ದಂಪತಿಗಳಿಗೆ ದಿನಾಂಕ ೧-೧೨.-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಪದವಿಧರರಾದ ಇವರು ಹೈದ್ರಾಬಾದಿನ ಕಂಪನಿಯೊAದರ ಉದ್ಯೋಗಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಚುಟುಕು, ಲೇಖನ ಬರಹಗಳು ಬರೆದಿದ್ದು, ಅವು ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಯರಬಾಗಿನಲ್ಲಿ ಶಾಯಿರೆಡ್ಡಿ ಸಾಹಿತ್ಯ ಬಳಗವನ್ನು ಸ್ಥಾಪಿಸಿ ಅದರ ಮೂಲಕ ರಾಜ್ಯಮಟ್ಟದ ಸಾಹಿತ್ಯ ಸ್ಪರ್ಧೆಯನ್ನು ಏರ್ಪಡಿಸುವುದರೊಂದಿಗೆ ಸಹೋದರ ದಯಾನಂದ ರೆಡ್ಡಿಯವರು ಪ್ರಾರಂಭಿಸಿದ `ಸತ್ಯ ಮಾತು' ಮಾಸ ಪತ್ರಿಕೆಯ ಪ್ರಸಾರಾಣಾಧಿಕಾರಿಯಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಬೀದರದ ದೇಶಪಾಂಡೆ ಪ್ರತಿಷ್ಠಾನದಿಂದ ಸಾಹಿತ್ಯ ರತ್ನ ಪ್ರಶಸ್ತಿ, ಸಿರಿಗನ್ನಡ ವೇದಿಕೆಯಿಂದ ಕನ್ನಡ ಕಾವ್ಯ ಪ್ರಶಸ್ತಿ, ಕರ್ನಾಟಕ ಜಾನಪದ ಪರಿಷತ್ತಿನಿಂದ ಕನ್ನಡ ಸೇವಾ ರತ್ನ ಸೇರಿದಂತೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ದಯಾನಂದ ರೆಡ್ಡಿ.
ಯುವ ಸಾಹಿತಿ ದಯಾನಂದ ರೆಡ್ಡಿ ಯವರು ಹುಮನಾಬಾದ ತಾಲೂಕಿನ ಚೀನಕೇರಾ ಗ್ರಾಮದ ನರಸಾರೆಡ್ಡಿ ಮತ್ತು ಈರಮ್ಮಾ ದಂಪತಿಗಳಿಗೆ ದಿನಾಂಕ ೩-೭-೧೯೮೧ರಲ್ಲಿ ಜನಿಸಿದ್ದಾರೆ. ಎಂ.ಎ. ಮತ್ತು ಡಿಪ್ಲೋಮಾ ಇನ್ ಪೆಂಟಿAಗ್ ಪದವಿಧರರಾದ ಇವರು ದುಬೈ, ಕುವೈತ್ ನಲ್ಲಿ ಪೇಟಿಂಗ್ ಸುಪರ ವೈಜರ್ ರಾಗಿ ಹಲವಾರು ವರ್ಷ ಕಾರ್ಯನಿರ್ವಹಿಸಿದ ಇವರು ಸದ್ಯ ತಮಿಳುನಾಡಿನ ಚನೈಯ ಕಂಪನಿಯೊAದರಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕತೆ, ಕವನ, ಲೇಖನ ಮೊದಲಾದ ಬರಹಗಳು ಬರೆದಿದ್ದು, ಅವು ಕೆಲ ಪ್ರಾಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು `ಬ್ಲಾಸ್ಟಿಂಗ್ ಪೆಂಟಿAಗ್ ಮಾಡುವುದು ಹೇಗೆ ?’ (ಲೇಖನ) `ಬೀದರ ಜಲ ಸಿರಿ’ (ಸಂಶೋಧನೆ) ಎಂಬ ಕೃತಿಗಳು ರಚಿಸಿದ್ದು, ಅವು ಅಪ್ರಕಟಿತವಾಗಿವೆ. ಇವರು ೨೦೦೧ರಲ್ಲಿ `ಸತ್ಯ ಮಾತು’ ಎಂಬ ಮಾಸಪತ್ರಿಕೆಯನ್ನು ತೆಗೆದು ಕೆಲಕಾಲ ಸಂಪಾದಕರಾಗಿ ಸೇವೆ ಸಲ್ಲಿಸಿದ್ದಾರೆ.
ಡಾ.ಚಂದ್ರಕಾಂತ ಮೇತ್ರೆ
ಉದಯೋನ್ಮಖ ಬರಹಗಾರರಾದ ಡಾ.ಚಂದ್ರಕಾಂತ ಮೇತ್ರೆಯವರು ಔರಾದ ತಾಲೂಕಿನ ಶೇಂಬೆಳ್ಳಿ ಗ್ರಾಮದ ಮಾರುತಿ ಮತ್ತು ಪದ್ಮಾವತಿ ದಂಪತಿಗಳಿಗೆ ದಿನಾಂಕ ೧-೬-೧೯೮೫ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ.ಪಿ.ಎಚ್.ಡಿ. ಪದವಿಧರರಾದ ಇವರು ಉದಯಗಿರಿ ಪದವಿ ಮಹಾವಿದ್ಯಾಲಯದಲ್ಲಿ ಕನ್ನಡ ಅತಿಥಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೇ ಸಾಹಿತ್ಯದಲ್ಲಿ ಆಸಕ್ತರಾದ ಇವರು ಕತೆ, ಕವನ, ಲೇಖನ, ಹನಿಗವನ, ಪ್ರಬಂಧಗಳನ್ನು ಬರೆಯುವ ಪ್ರವೃತ್ತಿ ಹೊಂದಿದ್ದಾರೆ `ಪಿ.ಕೆ.ಖಂಡೋಬಾ ರವರ ಬದುಕು ಬರಹ ಒಂದು ಅಧ್ಯಯನ' ಎಂಬುದು ಇವರ ಪಿ.ಎಚ್.ಡಿ.ಮಹಾಪ್ರಬಂಧವಾಗಿದೆ. ಮತ್ತು `ಬಸವಣ್ಣನ ವಚನಗಳಲ್ಲಿ ಆಧ್ಯಾರ ಸ್ಮರಣೆ' `ಆದರ್ಶ ಶರಣೆ ದುಗ್ಗಾಳೆ, ಪ್ರಸ್ತುತ ಬುಡಕಟ್ಟು ಜನಾಂಗದ ಸ್ಥಿತಿ-ಗತಿ, ಜಾನಪದ ಮತ್ತು ಆಧುನಿಕ ಬದುಕು, ಕನ್ನಡ ಸಾಹಿತ್ಯದಲ್ಲಿ ವೈಜ್ಞಾನಿಕತೆ, ಪಿ.ಕೆ.ಖಂಡೋಭಾ ರವರ ಸಂಸ್ಕೃತಿ ಶೋಧ' ಬಸವಣ್ಣನವರ ಆದರ್ಶ ತತ್ವ, ವಿರಕ್ತ ಸಂಪ್ರದಾಯ ಮೂಲ ಒಂದು ಇಣುಕು ನೋಟ, ರನ್ನ ಮತ್ತು ಗದಾಯುದ್ಧ ಒಂದು ಇಣುಕು ನೋಟ ಇತ್ಯಾದಿ ಬರಹಗಳು ಬರೆದಿದ್ದಾರೆ. ಅವು ಕೆಲ ಪತ್ರಿಕೆಗಳಲ್ಲಿ ಹಾಗೂ ಡಾ.ರಮೇಶ ಮೂಲಗೆಯವರ ಸಂಪಾದಿತ ಕೃತಿಗಳಲ್ಲಿ ಪ್ರಕಟವಾಗಿವೆ.
ಪಂಕಜಾ ಸುಂಟೆ.
ಸಾಹಿತಿ ಪಂಕಜಾ ಸುಂಟೆ ಯವರು ಭಾಲ್ಕಿನಗರದ ಚಾವಡಿಗಲ್ಲಿ ನಿವಾಸಿಯಾಗಿದ್ದು, ಇವರು ಅನೇಕ ಕತೆ ಕವನ, ಲೇಖನ, ಹನಿಗವನ ಮೊದಲಾದ ಪ್ರಕಾರದ ಸಾಹಿತ್ಯ ರಚಿಸಿದ್ದಾರೆ. ಇವರ `ಪ್ರೇಮ ಕಾವ್ಯ’ ಎಂಬ ಕತೆ ಹಂಶಕವಿಯವರು ಸಂಪಾದಿಸಿರುವ `ಬೀದರ ಜಿಲ್ಲೆಯ ಆಯ್ದ ಕತೆಗಳು’ ಎಂಬ ಪ್ರಾತಿನಿಧಿಕ ಕಥಾ ಸಂಕಲನ ಸೇರಿದಂತೆ ಮೊದಲಾದ ಪತ್ರಿಕೆ ಹಾಗೂ ಇತರರು ಸಂಪಾದಿಸಿ ಪ್ರಕಟಿಸಿರುವ ಕೃತಿಗಳಲ್ಲಿ ಪ್ರಕಟವಾಗಿವೆ.
ಗೀತಾ ಎಸ್.ಪಾಟೀಲ್
ಹವ್ಯಾಸಿ ಬರಹಗಾರ್ತಿ ಗೀತಾ ಎಸ್.ಪಾಟೀಲ್ ರವರು ಭಾಲ್ಕಿ ತಾಲೂಕಿನ ನೀಲಮನಳ್ಳಿಯವರು .ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಕತೆ, ಕವನ, ಲೇಖನ, ಆಧುನಿಕ ವಚನ ಮೊದಲಾದವು ಬರೆದಿದ್ದಾರೆ. ಮತ್ತು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಅವು ಪ್ರಕಟವಾಗಿವೆ.
ವೀರಶೆಟ್ಟಿ ಶಹಾಪುರೆ
`ವಿಶ್ವಗುರು ಸಂಗನ ಬಸವ' ಎಂಬ ಅಂಕಿತನಾಮದಲ್ಲಿ ಆಧುನಿಕ ವಚನಗಳು ಬರೆಯುತ್ತಿರುವ ಇವರು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿ ಗ್ರಾಮದವರು. ಇವರು ಹವ್ಯಾಸಿ ಬರಹಗಾರರಾಗಿ ಕವನ, ಲೇಖನ, ಬರಹಗಳು ಬರೆದಿದ್ದು, ಅವು ಕೆಲವು ಕಡೆ ಪ್ರಕಟವಾಗಿವೆ.
ದಿ.ರುದ್ರಪ್ಪ ಕುರನೆ
ಕವಿ, ಕಲಾವಿದ, ನಾಟಕಕಾರರಾದ ದಿ. ರುದ್ರಪ್ಪ ಕುರನೆ ಯವರು ಭಾಲ್ಕಿ ತಾಲೂಕಿನ ಕುರುಬಖೇಳಗಿ ಗ್ರಾಮದ ಸಂಬಣ್ಣ ಮತ್ತು ಸಮವ್ವ ದಂಪತಿಗಳಿಗೆ ಜನಿಸಿದ್ದಾರೆ. ಇವರ ಜನ್ಮ ದಿನಾಂಕ, ವಿದ್ಯಾರ್ಹತೆ ತಿಳಿದು ಬಂದಿಲ್ಲ. ಆದರೆ ಇವರು ಸಾಹಿತಿ ತಿಪರಂತಿ ಮಾಸ್ತರ ಅವರ ವಿದ್ಯಾರ್ಥಿಯಾಗಿದ್ದು, ಮತ್ತು ಅಣದೂರಿನ ಮೊನಪ್ಪ ಮಾಸ್ತರ ಅವರ ಸಹಪಾಠಿ ಸ್ನೇಹಿತರಾಗಿದ್ದರೆಂದು ತಿಳಿದು ಬರುತ್ತದೆ. ಕವಿ ಸಾಹಿತಿಯಾಗಿ ಗುರ್ತಿಸಿಕೊಂಡ ಇವರು ಮಹಾಭಾರತ, ಪಾಂಡವ ಪ್ತತಾಪ, ರಾಮಾಯಣ' ಎಂಬ ನಾಟಕಗಳು ಹಾಗೂ ಮೊಹರಮ್ ಪದ, ಭಕ್ತಿ ಗೀತೆ, ಭಜನೆ ಪದಗಳು ಬರೆದಿದ್ದಾರೆ.
ಕೆ.ಎಸ್.ಕರಂಜೆ
ಹವ್ಯಾಸಿ ಬರಹಗಾರರಾದ ಇವರ ಮೂಲ ನಾಮ ಕಾಶಿನಾಥ ಕರಂಜೆಯಾಗಿದೆ. ಇವರು ಬೀದರ ಜಿಲ್ಲೆ ಭಾಲ್ಕಿ ತಾಲೂಕಿನ ಬಾಳೂರು ಗ್ರಾಮದವರಾಗಿದ್ದು `ಗುಪ್ತಲಿಂಗ' ಎಂಬ ಅಂಕಿತನಾಮದಲ್ಲಿ ಹಲವಾರು ಅಧ್ಯಾತ್ಮೀಕ ವಚನಗಳು ಬರೆದು ಕೆಲವು ಕಡೆ ಪ್ರಕಟಿಸಿದ್ದಾರೆ.
ಚಂದ್ರಮ್ಮಾ ಬಬಚೌಡಿ
ಹಿರಿಯ ಕವಯತ್ರಿ ಚಂದ್ರಮ್ಮಾ ಬಬಚೌಡಿ ರವರು ಭಾಲ್ಕಿ ತಾಲೂಕಿನ ರುದನೂರು ಗ್ರಾಮದ ತುಳಜಪ್ಪಾ ಮತ್ತು ಶಿವಮ್ಮ ದಂಪತಿಗಳ ಜೇಷ್ಠ ಪುತ್ರಿಯಾಗಿ ಜನಿಸಿದರು. ಇವರು ಬೀದರ ತಾಲೂಕಿನ ಬಬಚೌಡಿಯ ಸಂಬಣ್ಣ ತಂದೆ ತಿಪ್ಪಣ್ಣ ರವರ ಧರ್ಮ ಪತ್ನಿಯಾಗಿದ್ದು. ಇವರ ಮಾವ ತಿಪ್ಪಣ್ಣ ಚಿಡಗುಪ್ಪಿ ತಿಪರಂತಿ ಮಾಸ್ತರ ರವರ ಶಿಷ್ಯರಾಗಿದ್ದರು. ಅವರಿಂದ ಅನೇಕ ಹಾಡುಗಳನ್ನು ಕಲಿತು ಸ್ವತಃ ಹಾಡು, ಪದ್ಯ, ಭಜನೆ ಪದಗಳನ್ನು ಬರೆದಿದ್ದಾರೆ. ಇವರ ಕಲೆ ಸಾಹಿತ್ಯಕ್ಕೆ ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಭಾರತ ಜ್ಞಾನ ಸಮಿತಿ, ಹಾಗೂ ಸಾಕ್ಷರತಾ ಸಮಿತಿಯವರು ಪ್ರಶಸ್ತಿಗಳನ್ನು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಮೈಲಾರ (ಖಾನಾಪುರ) ದಲ್ಲಿ ವಾಸವಾಗಿದ್ದಾರೆ.
ಗೀತಾ ಪಾಟೀಲ್
ಹವ್ಯಾಸಿ ಬರಹಗಾರ್ತಿ ಗೀತಾ ಪಾಟೀಲ್ ರವರು ಭಾಲ್ಕಿಯ ರಾಮಲಿಂಗೇಶ್ವರ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೪-೩-೧೯೯೧ರಲ್ಲಿ ಜನಿಸಿದ್ದಾರೆ. ಇವರು ಹಲವಾರು ಕವನ ಲೇಖನಗಳು ಬರೆದಿದ್ದು ಅವು ಕೆಲಪತ್ರಿಕೆ ಹಾಗೂ ವಿವಿಧ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಸಂಗಮೇಶ ಜ್ಯಾಂತೆ
ಯುವ ಸಾಹಿತಿ ಸಂಗಮೇಶ ಜ್ಯಾಂತೆ ಯವರು ಬೀದರ ಜಿಲ್ಲೆಯ ಭಾಲ್ಕಿ ತಾಲೂಕಿನ ಜೈನಾಪೂರ ಗ್ರಾಮದ ಬಾಬುರಾವ ಮತ್ತು ಭಾಗೀರಥಿ ದಂಪತಿಗಳಿಗೆ ದಿನಾಂಕ ೧೪-೧೧-೧೯೮೮ರಲ್ಲಿ ಜನಿಸಿದ್ದಾರೆ. ಪದವಿಧರರಾದ ಇವರು ಸಾಹಿತ್ಯ ರಚನೆಯಲ್ಲಿ ತೊಡಗಿ ನೂರಾರು ಕವನ ಲೇಖನಗಳನ್ನು ಬರೆದು ಪರಿಚಿತರಾಗಿದ್ದಾರೆ. ಮತ್ತು ಕವನ ಸಂಕಲನವು ಕೂಡ ಮುದ್ರಿಸುವ ತವಕದಲ್ಲಿದ್ದಾರೆ. ಇವರು ಬೀದರ ಜಿಲ್ಲಾ ಕನ್ನಡ ಸಾಹಿತ್ಯ ವೇದಿಕೆಯ ಅಧ್ಯಕ್ಷರಾಗಿ, ಹಾಗೂ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ, ಭಾಲ್ಕಿ ತಾಲೂಕಿನ ಮಕ್ಕಳ ಸಾಹಿತ್ಯ ಪರಿಷತ್ತು ಸೇರಿದಂತೆ ವಿವಿಧ ಆರೇಳು ಸಂಘ ಸಂಸ್ಥೆಗಳಲ್ಲಿ ಕಾರ್ಯದರ್ಶಿ, ಪ್ರಧಾನ ಕಾರ್ಯದರ್ಶಿ ಹಾಗೂ ಪದಾಧಿಕಾರಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಸಾಹಿತ್ಯ ಚಟುವಟಿಕೆಗಳನ್ನು ಗುರುತಿಸಿ ಕೆರಳದ ಕಾಸರಗೋಡಿನಿಂದ 'ಕಾಯಕ ರತ್ನ ಪ್ರಶಸ್ತಿ' ಮತ್ತು ಹಾಸನದ ಕವಿ ಸಮ್ಮೇಳನದ ರಾಜ್ಯ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿ ಸ್ವಯಂ ವೃತ್ತಿಯಲ್ಲಿ ತೊಡಗಿದ್ದಾರೆ.
ಅಂಬಿಕಾ ಠಮಕೆ
ಯುವ ಕವಯತ್ರಿಯಾದ ಅಂಬಿಕಾ ಠಮಕೆಯವರು ಭಾಲ್ಕಿಯ ಬಸವರಾಜ ಮತ್ತು ಸುನಂದಾ ದಂಪತಿಗಳಿಗೆ ದಿನಾಂಕ ೨೫-೩-೧೯೮೮ರಲ್ಲಿ ಜನಿಸಿದ್ದಾರೆ. ಪದವಿಧರರಾದ ಇವರು ಕವನ, ಲೇಖನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಮಂಜುನಾಥ ಬೆಳಕೆರೆ
ಹವ್ಯಾಸಿ ಬರಹಗಾರ ಮಂಜುನಾಥ ಬೆಳಕೆರೆ ಯವರು. ಭಾಲ್ಕಿಯ ಪ್ರಭಾಕರ ಮತ್ತು ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೫-೫-೧೯೮೭ರಲ್ಲಿ ಜನಿಸಿದ್ದಾರೆ. ವಿದ್ಯಾರ್ಥಿ ಜೀವನದಲ್ಲಿಯೇ ಸೃಜನಶೀಲ ಬರವಣಿಗೆಯಲ್ಲಿ ತೊಡಗಿ ಅನೇಕ ಕತೆ, ಕವನ, ಲೇಖನ, ಹನಿಗವನ ಮತ್ತು ವಿಜ್ಞಾನ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ವಿವಿಧ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.
ವಿನೋದ ಬ್ಯಾಲಹಳ್ಳಿ
ಹವ್ಯಾಸಿ ಬರಹಗಾರ ವಿನೋದ ಬ್ಯಾಲಹಳ್ಳಿ ಯವರು ಭಾಲ್ಕಿ ತಾಲೂಕಿನ ಕಟ್ಟಿತೂಗಾಂವ ಗ್ರಾಮದ ನಾಗಶೆಟ್ಟಿ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೮೫ರಲ್ಲಿ ಜನಿಸಿದ್ದಾರೆ. ಐಟಿಐ ಮತ್ತು ಪಿ.ಜಿ.ಡಿ.ಸಿ.ಎ. ಅಧ್ಯಯನ ಮಾಡಿದ ಇವರು ವೃತ್ತಿಪರ ಫೋಟೋಗ್ರಾಫರ್ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ಆಸಕ್ತರಾಗಿ ಕವನ, ಲೇಖನ, ಹನಿಗವನ, ಆಧುನಿಕ ವಚನ ಮೊದಲಾದವು ರಚಿಸಿದ್ದಾರೆ. ಇವರ ಬರಹಗಳು ಕನ್ನಡದ ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಹಲವಾರು ಕನ್ನಡ ಸಾಹಿತ್ಯ ಸಮ್ಮೇಳನದ ಕವಿಗೋಷ್ಠಿಗಳಲ್ಲಿ ಕವನ ವಾಚನ ಮಾಡಿದ್ದಾರೆ. ಮತ್ತು ಹಲವಾರು ಕನ್ನಡಪರ ಸಾಹಿತ್ಯ ಸಂಘ ಸಂಸ್ಥೆಗಳಿAದ ಇವರಿಗೆ ಸತ್ಕರಿಸಿ ಗೌರವಿಸಲಾಗಿದೆ.
ಸಂಜೀವಕುಮಾರ ವೈ. ಕಂಟೆ
ಯುವ ಬರಹಗಾರ ಸಂಜೀವಕುಮಾರ ವೈ.ಕಂಟೆ. ರವರು ಭಾಲ್ಕಿ ತಾಲೂಕಿನ ಖಟಕಚಿಂಚೋಳಿ ಗ್ರಾಮದ ವೈಜಿನಾಥ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೪-೪-೧೯೮೪ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಬಳ್ಳಾರಿ ಜಿಲ್ಲೆಯ ಸಂಡೂರಿನಲ್ಲಿ ಸ್ವಯಂ ವೃತ್ತಿಯಲ್ಲಿ ತೊಡಗಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿದ ಇವರು ಸುಮಾರು ಐವತ್ತಕ್ಕೂ ಹೆಚ್ಚು ಕವನಗಳನ್ನು ಬರೆದಿದ್ದು, ಅವು ಕೆಲ ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ. ಮತ್ತು ಹಲವಾರು ಕವಿಗೋಷ್ಠಿಗಳಲ್ಲಿಯು ಕವನ ವಾಚನ ಮಾಡಿದ ಇವರು ಇತ್ತೀಚೆಗೆ ಕನ್ನಡ ಚಲನ ಚಿತ್ರವೊಂದರಲ್ಲಿ ಕೂಡ ನಟಿಸಿದ್ದಾರೆ. ಇವರು ಬರೆದ ಚೊಚ್ಚಲ ಕೃತಿ `ನನ್ನ ಮುತ್ತುಗಳು' ಕವನಸಂಕಲನ ಪ್ರಕಟಣೆಯ ಹಂತದಲ್ಲಿದೆ. ೨೦೦೪ರಲ್ಲಿ ಅಂದಿನ ತಾಲೂಕಾ ಕಸಾಪ ಅಧ್ಯಕ್ಷರು ಇವರನ್ನು ಖಟಕಚಿಂಚೋಳಿ ಹೊಬಳಿ ಕಸಾಪ ಅಧ್ಯಕ್ಷರನ್ನಾಗಿ ನೇಮಕ ಮಾಡಿದ್ದರಿಂದ ನಿರುದ್ಯೋಗಿಯಾಗಿದ್ದ ಇವರು ಕಸಾಪ ಕಾರ್ಯಕ್ರಮ ಉದ್ಘಾಟನಾ ಸಮಾರಂಭಕ್ಕೆ ಹಣಕಾಸಿನ ತೊಂದರೆ ಎದುರಾದಾಗ ಬೆರಳಿಗೆ ಅಪ್ಪ ತೊಡಿಸಿದ ಅರ್ಧತೊಲೆ ಚಿನ್ನದುಂಗುರ ಮಾರಿ ಕಾರ್ಯಕ್ರಮ ಮಾಡಿ ಕನ್ನಡಾಭಿಮಾನ ಮೆರದಿದ್ದಾರೆ. ಇವರ ಅವಧಿಯಲ್ಲಿ `ಶಾಲೆಗೊಂದು ಕನ್ನಡ ಕಾರ್ಯಕ್ರಮ' ಎಂಬ ವಿನೂತನ ಸಾಹಿತ್ಯ ಕಾರ್ಯಕ್ರಮವು ಮಾಡಿದ್ದರಿಂದ ಇವರಗೆ ಕೆಲ ಕನ್ನಡಪರ ಸಂಘ-ಸAಸ್ಥೆಯವರು ಹಲವಾರು ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ.ಮತ್ತು ಕ್ರಾಂತಿ ಗಣೇಶ ಯುವಕ ಸಂಘವು ಅತ್ಯುತ್ತಮ ಸೇವಾ ಸಾಧಕ ಪ್ರಶಸ್ತಿ ನೀಡಿ ಗೌರವಿಸಿದೆ.
ಡಾ. ರವೀಂದ್ರ ಲಂಜವಾಡಕರ್
ಹವ್ಯಾಸಿ ಬರಹಗಾರ ಡಾ.ರವೀಂದ್ರ ಲಂಜವಾಡಕರ್ ರವರು ಭಾಲ್ಕಿ ತಾಲೂಕಿನ ಲಂಜವಾಡ ಗ್ರಾಮದ ವಿಲಾಸರಾವ ಮತ್ತು ಅಂಜನಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೦ರಲ್ಲಿ ಜನಿಸಿದ್ದಾರೆ. ಎಂ.ಎ. ಪದವಿಧರರಾದ ಇವರು ಬೀದರ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕರ ಕಛೇರಿಯಲ್ಲಿ ಪ್ರಥಮ ದರ್ಜೆ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಅನುಭಾವ ಸಾಹಿತ್ಯ ಪ್ರಚಾರ ಮತ್ತು ದಾಸ ಸಾಹಿತ್ಯದ ಹೊಸ ಆಯಾಮಗಳ ಚಿಂತನೆ ಹಾಗೂ ದಾಸರ ಕ್ಷೇತ್ರ ದರ್ಶನಗಳ ಸಂಶೋಧನೆಯಲ್ಲಿ ತೊಡಗಿಸಿಕೊಂಡಿರುವ ಇವರು ಅಮೆರಿಕಾದ ಯುಗಾ ಯುನಿವರ್ಸಿಟಿಯ ಹುಬ್ಬಳ್ಳಿ ಶಾಖೆಯಲ್ಲಿ `ದಾಸ ಸಾಹಿತ್ಯದ ಮಹತ್ವ ಮತ್ತು ಪ್ರಸ್ತುತತೆ’ ಎಂಬ ವಿಷಯದಲ್ಲಿ ಪಿ.ಎಚ್.ಡಿ.ಅಧ್ಯಯನ ಮಾಡುತ್ತಿದ್ದಾರೆ. `ಕನಕದಾಸರ ಪ್ರತಿಮಾ ಲೋಕ' ಎಂಬುದು ಇವರು ರಚಿಸಿದ ಕೃತಿಯಾಗಿದ್ದು ಅದು ಅಪ್ರಕಟಿತವಾಗಿದೆ. ಅಷ್ಟೇಯಲ್ಲದೆ ಕೆಲ ಅನುಭಾವ ಲೇಖನಗಳು ಇತರರು ಸಂಪಾದಿಸಿದ ಸ್ಮರಣ ಸಂಚಿಕೆ, ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. `ಸಮಾಜ ಮುಖಿ ಕೀರ್ತನೆಗಳು' ಎಂಬ ನಾಲ್ಕು ಸಂಪುಟಗಳ ಸಂಪಾದಕೀಯ ಮಂಡಳಿಯ ಸದಸ್ಯರಾಗಿರುವ ಇವರು ಬೀದರದಿಂದ ಪ್ರಕಟವಾಗುತ್ತಿರುವ `ಸಾಹಿತ್ಯ ಸಿಂಚನ' ತ್ರೈಮಾಸಿಕ ಪತ್ರಿಕೆಯ ಗೌರವ ಸಲಹೆಗಾರರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ. ಜನಿವಾದ ವರ್ಚುವಲ್ ಯುನಿವರ್ಸಿಟಿ ವತಿಯಿಂದ ಮೈಸೂರಿನಲ್ಲಿ ನಡೆದ ಆ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಪದವಿ ನೀಡಿ ಸತ್ಕರಿಸಿದ್ದಾರೆ. ಸದ್ಯ ಇವರು ಬೀದರದ ನಿವಾಸಿಯಾಗಿದ್ದು, ಅಖಿಲ ಭಾರತ ದಾಸ ಸಾಹಿತ್ಯ ಪರಿಷತ್ತಿನ ರಾಷ್ಟ್ರೀಯ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ರಾಜೇಂದ್ರ ಎಲ್. ಗೋಖಲೆ.
ಪತ್ರಕರ್ತ ಹಾಗೂ ಯುವ ಬರಹಗಾರರಾದ ರಾಜೇಂದ್ರ ಎಲ್. ಗೋಖಲೆ ಯವರು ಭಾಲ್ಕಿ ತಾಲೂಕಿನ ವರವಟ್ಟಿ ಗ್ರಾಮದ ಲಕ್ಷö್ಮಣ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೧೦-೮-೧೯೭೦ರಲ್ಲಿ ಜನಿಸಿದ್ದಾರೆ. ಬಿ.ಎಫ್.ಎ. ಚಿತ್ರಕಲಾ ಪದವಿಯನ್ನು ಪಡೆದ ಇವರು ೨೦೦೨ರಿಂದ ಬಸವಕಲ್ಯಾಣದಲ್ಲಿ ಪತ್ರಕರ್ತರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅಶೋಕಾ ಕೋಟೆ, ಕ್ರಾಂತಿ, ಯುವರಂಗ, ಸಂಜೆವಾಣಿ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸಿದ ಇವರು ಸದ್ಯ `ಕಲ್ಯಾಣ ಜಂಗ’ ಪತ್ರಿಕೆಯ ಸಂಪಾದಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಮತ್ತು ಅನೇಕ ಲೇಖನಗಳು ತಮ್ಮ ಪತ್ರಿಕೆಗಳಲ್ಲಿ ಬರೆದು ಲೇಖಕರಾಗಿಯು ಗುರ್ತಿಸಿಕೊಂಡಿದ್ದಾರೆ. ಮತ್ತು ಸಾಹಿತಿ `ಮಚ್ಚೇಂದ್ರ ಅಣಕಲ್ ರವರ ದಲಿತ ಸಂವೇದನಿಯ ಕತೆಗಳು’ ಎಂಬ ಕೃತಿಯು ಸಂಪಾದಿಸಿ ಪ್ರಕಟಿಸುತ್ತಿದ್ದಾರೆ. ಇವರು ೨೦೧೪ ರಿಂದ ೨೦೧೮ ರ ವರೆಗೆ ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಇವರಿಗೆ ಹಲವಾರು ಪ್ರಶಸ್ತಿ ಪುರಸ್ಕಾರಗಳು ಲಭೀಸಿವೆ.
ಪರಮೇಶ್ವರಯ್ಯ
`ನಿತ್ಯ ನಿರಂಜನ ಮೃತ್ಯುಂಜಯ' ಎಂಬ ಕಾವ್ಯನಾಮದಿಂದ ಸಾಹಿತ್ಯ ರಚಿಸುತ್ತಿರುವ ಕವಿ ಸಾಹಿತಿಯೆಂದರೆ ಪರಮೇಶ್ವರಯ್ಯನವರು. ಇವರು ಭಾಲ್ಕಿ ತಾಲೂಕಿನ ಶರಣಯ್ಯ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೯-೧೧-೧೯೭೭ ರಲ್ಲಿ ಜನಿಸಿದ್ದಾರೆ. ಇವರು ೧೯೯೯ರಿಂದ ಕವನ, ಲೇಖನ, ಹನಿಗವನ, ಆಧುನಿಕ ವಚನಗಳು ಬರೆದಿದ್ದಾರೆ. ಮತ್ತು ಅವು
ಕೆಲವು ಕಡೆ ಪ್ರಕಟವಾಗಿವೆ.
ವಿಜಯಲಕ್ಷ್ಮಿ ಹೂಗಾರ
ಕವಯತ್ರಿ ವಿಜಯಲಕ್ಷ್ಮಿ ಹೂಗಾರ. ರವರು ಭಾಲ್ಕಿ ತಾಲೂಕಿನ ಭಾತಂಬ್ರಾ ಗ್ರಾಮದ ಮಾರುತಿರಾವ ಮತ್ತು ಚಂದ್ರಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೫ರಲ್ಲಿ ಜನಿಸಿದ್ದಾರೆ. ಎಂ.ಎ. ಎಲ್.ಎಲ್.ಬಿ ಪದವಿಧರರಾದ ಇವರು ಸಂಗೀತ ಶಿಕ್ಷಕರಾದ ರಾಜಕುಮಾರ ಮದಕಟ್ಟಿಯವರ ಧರ್ಮ ಪತ್ನಿಯಾಗಿದ್ದು, ಕೆಲ ವರ್ಷ ಬಸವಕಲ್ಯಾಣದ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿದ ಇವರು ಸದ್ಯ ಬಸವಕಲ್ಯಾಣದಲ್ಲಿ ವಕೀಲ ವೃತ್ತಿ ಮಾಡುತ್ತಿದ್ದಾರೆ. ಕಾನೂನು ವ್ಯಾಜ್ಯಗಳ ಜಂಜಡದಲ್ಲಿಯೂ ಕೆಲ ಸಮಯ ಕವಿ ಸಮಯವಾಗಿ ಉಳಿತಾಯ ಮಾಡಿ ಕವಿತೆಗಳನ್ನು ಬರೆಯುವ ಗೀಳು ಬೆಳೆಸಿಕೊಂಡಿದ್ದಾರೆ. ಅಷ್ಟೇಯಲ್ಲದೆ ಇವರು ಉತ್ತಮ ವಾಗ್ಮಿಗಳು ಆಗಿದ್ದು ಹಲವು ಕಡೆಗಳಲ್ಲಿ ಸಾಹಿತ್ಯ ಮತ್ತು ಕಾನೂನು ಉಪನ್ಯಾಸಗಳನ್ನು ನೀಡಿದ್ದಾರೆ. ಇವರ ಬರಹಗಳು ಉತ್ತರ ಕರ್ನಾಟಕ' ಪತ್ರಿಕೆಯಲ್ಲಿ ಪ್ರಕಟವಾಗಿವೆ.
ಅಶೋಕ ಸಿಂಧೆ
ಚಿತ್ರ ಕಲಾವಿದರು ಹಾಗೂ ಹವ್ಯಾಸಿ ಬರಹಗಾರರಾದ ಅಶೋಕ ಸಿಂಧೆಯವರು. ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದ ಲಕ್ಷ್ಮಣ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೩-೭-೧೯೭೦ರಲ್ಲಿ ಜನಿಸಿದ್ದಾರೆ. ಚಿತ್ರಕಲೆಯಲ್ಲಿ ಡಿ.ಎಂ.ಸಿ. ಮತ್ತು ಎ.ಎಂ.ಸಿ. ಶಿಕ್ಷಣ ಪಡೆದು ಭಾಲ್ಕಿ ತಾಲೂಕಿನ ಬಾಳೂರಿನ ಸರ್ಕಾರಿ ಪ್ರೌಢ ಶಾಲಾ ಚಿತ್ರಕಲಾ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಕಲೆ, ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ಹನಿಗವನ ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ಕಸಾಪದ ವಿವಿಧ ಸಮ್ಮೇಳನಗಳ ಕವಿಗೋಷ್ಠಿಯಲ್ಲಿ ಕವನ ವಾಚನ ಮತ್ತು ಉಪನ್ಯಾಸವು ನೀಡಿದ್ದಾರೆ. ಇವರಿಗೆ ೨೦೧೧ರಲ್ಲಿ ಭಾಲ್ಕಿ ತಾಲೂಕಾ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೩ರಲ್ಲಿ ಜಿಲ್ಲಾ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೧೪ರಲ್ಲಿ ರಾಜ್ಯ ಕಲಾ ರತ್ನ ಮಾರ್ಗದರ್ಶನ ಪ್ರಶಸ್ತಿ, ಹಾಗೂ ಆದರ್ಶ ಶಿಕ್ಷಕ ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ.
ಬಾಲಾಜಿ ತಾಡಮಲ್ಲೆ
ಹವ್ಯಾಸಿ ಬರಹಗಾರ ಬಾಲಾಜಿ ತಾಡಮಲ್ಲೆಯವರು ಭಾಲ್ಕಿಯ ಪಂಡರಿನಾಥ ಮತ್ತು ಗಂಗಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೦ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಅನೇಕ ಕವನ ಲೇಖನ ಬರಹಗಳು ಬರೆದಿದ್ದಾರೆ. ಇವರಿಗೆ ಚಿತ್ರದುರ್ಗದ ಮುರುಘರಾಜೇಂದ್ರ ಮಠದಿಂದ ಶಿಕ್ಷಕ ಶ್ರೀ ಪ್ರಶಸ್ತಿ, ಮತ್ತು ಶಿಕ್ಷಕ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಚಂದ್ರಕಾಂತ ಎಸ್. ಬಿರಾದಾರ.
ಹವ್ಯಾಸಿ ಬರಹಗಾರರಾದ ಚಂದ್ರಕಾAತ ಎಸ್.ಬಿರಾದಾರ ರವರು ಭಾಲ್ಕಿ ತಾಲೂಕಿನ ಹೊನ್ನಳ್ಳಿ ಗ್ರಾಮದ ಶರಣಪ್ಪಾ ಬಿರಾದಾರ ಮತ್ತು ಪ್ರಯಾಗಬಾಯಿ ದಂಪತಿಗಳಿಗೆ ದಿನಾಂಕ ೧೫-೭-೧೯೬೫ರಲ್ಲಿ ಜನಿಸಿದ್ದಾರೆ. ಎಂ.ಎ.ಕನ್ನಡ ಮತ್ತು ಎಂ.ಎ.ಪತ್ರಿಕೊದ್ಯಮದಲ್ಲಿ ಸ್ನಾತಕೊತ್ತರ ಪದವಿಧರರಾದ ಇವರು ಭಾಲ್ಕಿಯ ಶಿವಾಜಿ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ೧೯೯೩ರಿಂದ ಪತ್ರಕರ್ತರಾಗಿ ಸೇವೆ ಪ್ರಾರಂಭಿಸಿ ಬೀದರದ ಉತ್ತರ ಕರ್ನಾಟಕ, ವಿಜಯ ಕರ್ನಾಟಕ, ವಿಜಯವಾಣಿ, ಮೊದಲಾದ ಪತ್ರಿಕೆಗಳಲ್ಲಿ ೧೨ ವರ್ಷಗಳ ಕಾಲ ವರದಿಗಾರರಾಗಿ ಸೇವೆ ಸಲ್ಲಿಸಿದ ಇವರು `ಕಾರ್ಯ ಪ್ರೇಮಿ’ ಎಂಬ ವಾರ ಪತ್ರಿಕೆಯ ಸಂಪಾದಕರಾಗಿ, ೧೫ವರ್ಷ ಕರ್ನಾಟಕ ಪತ್ರಕರ್ತರ ಸಂಘದ ಭಾಲ್ಕಿ ತಾಲೂಕಾ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ. ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ, ಲೇಖನ, ಬರಹಗಳು ಬರೆದಿದ್ದು, ಅವು ಹಲವಾರು ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರಿಗೆ ೨೦೨೦ರಲ್ಲಿ ಬೆಂಗಳೂರಿನ ಸಂಸ್ಥೆಯೊAದರಿAದ `ಹೆಮ್ಮಯ ಕನ್ನಡಿಗ’ ಎಂಬ ಪ್ರಶಸ್ತಿ ಸೇರಿದಂತೆ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ.
ಗಣಪತಿ ಕಲ್ಲೂರೆ
ಸಾಕ್ಷರ ಗೀತೆಗಳನ್ನು ರಚಿಸಿದ ಸಾಹಿತಿ ಗಣಪತಿ ಕಲ್ಲೂರೆ ರವರು ಭಾಲ್ಕಿ ತಾಲೂಕಿನ ಕಟ್ಟಿ ತೂಗಾಂವ ಗ್ರಾಮದ ಸಂಬಾಜಿ ಮತ್ತು ಚಂದ್ರಮ ದಂಪತಿಗಳಿಗೆ ದಿನಾಂಕ ೧೧-೩-೧೯೬೪ರಲ್ಲಿ ಜನಿಸಿದ್ದಾರೆ. ಬಿ.ಎ.ಬಿ.ಇಡಿ. ಪದವಿಧರರಾದ ಇವರು ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸದ್ಯ ಭಾಲ್ಕಿ ತಾಲೂಕಿನ ಸಾಕ್ಷರತಾ ಸಂಯೋಜಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಭಾರತೀಯ ದಲಿತ ಮಹಾಸಭಾದ ತಾಲೂಕು ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರು ಈಗಾಗಲೇ ಕವನ, ಲೇಖನ ಹನಿಗವನಗಳು ರಚಿಸಿದ್ದು ಅವು ಅಪ್ರಕಟಿತವಾಗಿವೆ.
ಡಾ.ಸುರೇಶ ಮುಳೆ
ಕನ್ನಡ ಮತ್ತು ಹಿಂದಿ ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸಿರುವ ಡಾ.ಸುರೇಶ ಮುಳೆ. ಭಾಲ್ಕಿ ತಾಲೂಕಿನ ಅಂಬೆಸಾAಗವಿ ಗ್ರಾಮದ ಮಾರುತಿರಾವ ಮತ್ತು ಪಾರ್ವತಿಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೬೩ರಲ್ಲಿ ಜನಿಸಿದ್ದಾರೆ. ಎಂ.ಎ. ಪಿ.ಎಚ್.ಡಿ.(ಹಿಂದಿ) ಪದವೀಧರರಾದ ಇವರು ಧಾರವಾಡದ ವಿದ್ಯಾರಣ್ಯ ಪದವಿ ಪೂರ್ವ ಪದವಿ ಪೂರ್ವ ಕಾಲೇಜಿನಲ್ಲಿ ಹಿಂದಿ ಭಾಷಾ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ `ಕಚ್ಚಿದಿವಾರ, ನಯಾಡ್ರೆಸ್, ಏಕಬುನೌತಿ ಚುನೌತಿ, ಗುರುದೇವೋ ಭವ, ದುಸರಿ ಶಾದಿ' ಎಂಬ ಕತೆಗಳು ಬರೆದಿದ್ದಾರೆ. ಇವರ ಬರಹಗಳು ಅನೇಕ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರವಾಗಿವೆ. ಇವರಿಗೆ ದೆಹಲಿಯಿಂದ ಡಾ.ಅಂಬೇಡ್ಕರ್ ಫೆಲೋಶಿಪ್ ಪ್ರಶಸ್ತಿ, ಬೂಸಾವಳದ ವತಿಯಿಂದ ರವೀಂದ್ರನಾಥ ಟ್ಯಾಗೋರ್ ಲೇಖಕ ಪ್ರಶಸ್ತಿ, ದೆಹಲಿಯ ದಲಿತ ಸಾಹಿತ್ಯ ಅಕಾದೆಮಿ ವತಿಯಿಂದ ಮಹಾತ್ಮ ಜ್ಯೋತಿಬಾ ಫುಲೆ ಪ್ರಶಸ್ತಿಗಳು ಲಭೀಸಿವೆ.
ವಿ.ಎಂ.ಡಾಕುಳಗಿ
`ಕವಿಮಡಾ' ಎಂಬ ಕಾವ್ಯನಾಮ ಹೊಂದಿದವರು ವಿ.ಎಂ.ಡಾಕುಳಗಿಯವರು. ಇವರು ಭಾಲ್ಕಿ ತಾಲೂಕಿನ ಕಟಕ ಚಿಂಚೋಳಿ ಗ್ರಾಮದ ಮಹಾರುದ್ರಯ್ಯ ಮತ್ತು ಪಾರ್ವತಿದೇವಿ ದಂಪತಿಗಳಿಗೆ ೫-೩-೧೯೫೫ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಎಡ್.ಪದವಿಧರರಾದ ಇವರು ೧೯೮೩ರಿಂದ ಪ್ರೌಢ ಶಾಲಾ ಶಿಕ್ಷಕರಾಗಿ, ಪ್ರಾಂಶುಪಾಲರಾಗಿ ಸೇವೆಸಲ್ಲಿಸಿದ್ದಾರೆ. ಕವನ, ಲೇಖನ, ಆಧುನಿಕ ವಚನ, ಚಿಂತನ, ವಿಮರ್ಶೆ, ಚರಿತ್ರೆ ಮೊದಲಾದ ಬರಹಗಳು ಬರೆದಿದ್ದು ಅವು ಕೆಲ ಪತ್ರಿಕೆ ಹಾಗೂ ಆಕಾಶವಾಣಿಯಲ್ಲಿ ಪ್ರಕಟ, ಪ್ರಸಾರಗೊಂಡಿವೆ. ಇವರು ೪೦ಕಿಂತ ಹೆಚ್ಚು ವ್ಯಕ್ತಿಚಿತ್ರ ಲೇಖನಗಳು, ೧೦೦ಕಿಂತ ಹೆಚ್ಚು ಚರಿತ್ರೆ ಹೇಳುವ ಕವಿತೆಗಳು, ೨೦೦ಕಿಂತ ಹೆಚ್ಚು ಆಧುನಿಕ ವಚನಗಳು, ಹತ್ತಾರು ಕತೆಗಳು ೫೦೦ಕಿಂತ ಹೆಚ್ಚು ಕವನಗಳನ್ನು ರಚಿಸಿದ್ದು, ಅವು ಅಪ್ರಕಟಿತವಾಗಿವೆ. ಇವರ `ಮುದ್ದು ಕೊಟ್ಟ ತಪ್ಪು', `ಸಂಚಲನಾ ' ಎಂಬ ಕತೆಗಳು ಕಮಲಾಕರ್ ಜೋಶಿ ರವರು ಹಿಂದಿಗೆ ಅನುವಾಸಿದ್ದಾರೆ. ಇವರ ಕರಾಳ ದಿನ ಕಾವ್ಯಕ್ಕೆ ರಾಜ್ಯ ಪ್ರಶಸ್ತಿ. ಮಂತ್ರ ಸ್ವಾತಂತ್ರ್ಯ ಕಾವ್ಯಕ್ಕೆ ವಿಭಾಗಿಯ ಪ್ರಶಸ್ತಿ, ಹಾಗೂ ಗದಗದಿಂದ ಸಾಹಿತ್ಯ ಸೇವಾ ರತ್ನ ಪ್ರಶಸ್ತಿ ಮೊದಲಾದವು ಪಡೆದಿದ್ದಾರೆ. ಯುನೆಸ್ಕೋ ಸಮಿತಿಯ ನಿರ್ದೇಶಕರಾಗಿ, ಜಿಲ್ಲಾ ಪಂಚಾಯತ್ ನಾಮನಿರ್ದೇಶನ ಸದಸ್ಯರಾಗಿ, ಜಿಲ್ಲಾ ಕಸಾಪ ಕಾರ್ಯದರ್ಶಿಯಾಗಿ, ಜಿಲ್ಲಾ ಕನ್ನಡ ಚಳುವಳಿಗಾರರ ಸಂಸ್ಥಾಪಕ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಗುರುಲಿಂಗಪ್ಪ ಜೈರಾಮಕರ್
ಕನ್ನಡ ಮತ್ತು ಮರಾಠಿ ಭಾಷೆಗಳೆರಡರಲ್ಲೂ ಸಾಹಿತ್ಯ ರಚಿಸಿದ ಕವಿಯೆಂದರೆ ಗುರುಲಿಂಗಪ್ಪ ಜೈರಾಮಕರ್. ಇವರು ಭಾಲ್ಕಿ ತಾಲೂಕಿನ ಧನ್ನೂರಾ ಗ್ರಾಮದ ರುದ್ರಪ್ಪ ಮತ್ತು ಮಲ್ಲಮ್ಮ ದಂಪತಿಗಳಿಗೆ ದಿನಾಂಕ ೧೫-೮-೧೯೩೫ರಲ್ಲಿ ಜನಿಸಿದ್ದಾರೆ. ಏಳನೇ ತರಗತಿಯವರೆಗೆ ಶಿಕ್ಷಣ ಪಡೆದ ಇವರು ಬಾಲ್ಯದಿಂದಲೇ ಹಾಡುವ ಕಲೆಯನ್ನು ಕರಗತ ಮಾಡಿಕೊಂಡು ಸ್ವತಃ ಹಾಡು ಪದ್ಯ ಭಜನೆ ಗೀತೆಗಳನ್ನು ರಚಿಸಿದ್ದಾರೆ.
ನೀಲಕಂಠ ಕಾಂಬಳೆ
ಕವನ, ಹಾಡು, ಪದ್ಯಗಳನ್ನು ರಚಿಸಿರುವ ನೀಲಕಂಠ ಕಾಂಬಳೆಯವರು. ಭಾಲ್ಕಿ ತಾಲೂಕಿನ ಕುರುಬಖೇಳಗಿ ಗ್ರಾಮದ ಬಸಪ್ಪ ಮತ್ತು ಕಾಶೇಮ್ಮ ದಂಪತಿಗಳಿಗೆ ದಿನಾಂಕ ೧೬-೮-೧೯೪೯ರಲ್ಲಿ ಜನಿಸಿದ್ದಾರೆ. ಪಿ.ಯು.ಸಿವರೆಗೆ ಅಧ್ಯಯನ ಮಾಡಿದ ಇವರು ಸುಮಾರು ೨೫೦ಕ್ಕೂ ಹೆಚ್ಚು ಕವನ, ಹಾಡುಗಳು ಬರೆದಿದ್ದಾರೆ. ಪಂಚಶೀಲ ಗವಾಯಿಯವರ ಮಾರ್ಗದಲ್ಲಿ ಸಾಹಿತ್ಯ ರಚಿಸಿ ಅವರನ್ನು ಗುರುಗಳೆಂದು ಹೇಳಿಕೊಳ್ಳುವ ಇವರು ಜ್ಯಾಂತಿ ಗ್ರಾಮದಲ್ಲಿ ವಾಸವಾಗಿದ್ದಾರೆ.
ಮಾಣಿಕರಾವ ಕರಡ್ಯಾಳ
ತತ್ವಪದ, ಹಾಡು, ಪದ್ಯಗಳನ್ನು ರಚನೆ ಮಾಡಿರುವ ಕವಿ ಮಾಣಿಕರಾವ ಕರಡ್ಯಾಳ ರವರು ಭಾಲ್ಕಿ ತಾಲೂಕಿನ ಕರಡ್ಯಾಳ ಗ್ರಾಮದ ತುಕಾರಾಮ ಮತ್ತು ರತ್ನಮ್ಮ ದಂಪತಿಗಳಿಗೆ ದಿನಾಂಕ ೪-೨-೧೯೩೫ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ. ಟಿ.ಸಿ.ಎಚ್. ವರೆಗೆ ಶಿಕ್ಷಣ ಪಡೆದು ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಬೀದರ ತಾಲೂಕಿನ ಚಿಲ್ಲರ್ಗಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾಗಿ ಸೇವೆ ಸಲ್ಲಿಸಿ ೧೯೯೩ರಲ್ಲಿ ನಿವೃತ್ತರಾಗಿ ಅನೇಕ ತತ್ವಪದ ಹಾಡು ಪದ್ಯಗಳನ್ನು ಬರೆದಿದ್ದಾರೆ. ಅವು ಕೆಲ ಪುಸ್ತಕಗಳಲ್ಲಿಯೂ ಪ್ರಕಟವಾಗಿವೆ.
ಮಾಣಿಕಪ್ಪಾ ಏಣಕೂರ
ನಾಟಕ ಮಾಸ್ತರೆಂದೆ ಖ್ಯಾತರಾದ ಕವಿ, ಕಲಾವಿದ, ಸಂಗೀತ ಸಾಹಿತಿಯೆಂದರೆ ಮಾಣಿಕಪ್ಪ ಏಣಕೂರ. ಇವರು ಭಾಲ್ಕಿ ತಾಲೂಕಿನ ಏಣಕೂರ ಗ್ರಾಮದ ರುದ್ರಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ೧೯೨೯ರಲ್ಲಿ ಜನಿಸಿದ್ದಾರೆ. ತತ್ವಪದಗಳು ಬರೆದು ನಾಟಕ ನಿರ್ದೇಶಕರಾಗಿ ಹಲವಾರು ಕಡೆ ಅವು ಪ್ರದರ್ಶನ ಮಾಡಿದ್ದಾರೆ. ಮತ್ತು ಉತ್ತಮ ಹಾಡುಗಾರರು, ತಬಲವಾದಕರು, ಡೊಳ್ಳು ಕುಣಿತ ಜಾನಪದ ಕಲಾವಿದರಾಗಿಯು ಗುರ್ತಿಸಿಕೊಂಡಿದ್ದಾರೆ.
ಚಂದ್ರಪ್ಪ ಭಾವಿಕಟ್ಟಿ
ಅಧ್ಯಾತ್ಮಿಕ ಭಕ್ತಿ, ಭಾವಗೀತೆಗಳನ್ನು ಬರೆದಿರುವ ಇವರು ಭಾಲ್ಕಿ ತಾಲೂಕಿನ ಧನ್ನೂರಾ ಗ್ರಾಮದ ರುದ್ರಪ್ಪ ಮತ್ತು ಸಮವ್ವ ದಂಪತಿಗಳಿಗೆ ೧೯೨೭ರಲ್ಲಿ ಜನಿಸಿದ್ದಾರೆ. ಇವರ ವಿದ್ಯಾರ್ಹತೆ ವೃತ್ತಿ ಮತ್ತಿತರ ವಿವರ ತಿಳಿದು ಬಂದಿಲ್ಲ ಆದರೆ ಸಾಹಿತ್ಯ ರಚನೆಯಲ್ಲಿ ಇವರು ಬರೆದ ಹಾಡು ಭಜನೆ ಗೀತೆಗಳು ಇಂದು ಜನರ ನಾಲಿಗೆಯ ಮೇಲೆ ಹರಿದಾಡುತ್ತಿವೆ. ಸಮಾಜದಲ್ಲಿ ಶಾಂತಿ ಸಾಮರಸ್ಯ ಮೂಡಿಸಬೇಕೆಂಬ ಉದ್ದೇಶದಿಂದ ಹಲವಾರು ಭಾವ ಭಂಗಿಗಳೊಡನೆ ಕೀರ್ತನೆಗಳನ್ನು ಹೇಳುತ್ತಿದ್ದರು.
ದಿ.ಶಾಂತಪ್ಪಾ ಸೊನಾರೆ
ತತ್ವ ಪದ, ಭಜನೆ ಗೀತೆಗಳನ್ನು ಬರೆದಿರುವ ಇವರು ಭಾಲ್ಕಿ ತಾಲೂಕಿನ ಖಟಕ ಚಿಂಚೋಳಿಯ ಶ್ರೀ ನಿಂಗಪ ಮತ್ತು ಶ್ರೀಮತಿ ದ್ರೌಪದಿ ದಂಪತಿಗಳಿಗೆ ೧೯೦೬ರಲ್ಲಿ ಜನಿಸಿದ್ದಾರೆ. ಮತ್ತು ನೂರಾರು ತತ್ವ ಪದಗಳನ್ನು ರಚಿಸಿ ಖ್ಯಾತರಾಗಿದ್ದಾರೆ. `ಲಂಕ ಹಾರಿದನೆ ಹನುಮಂತ, ಭಜಿಸಣ್ಣ ಭಜಿಸಣ್ಣ, ಗಜಮುಖನೆ ! ಝನನನನ ನಾದ ನೋಡಣ್ಣಾ ! ' ಎಂಬ ಮೊದಲಾದ ಹಾಡುಗಳು ಜನಪ್ರಿಯವಾಗಿವೆ. ಇವರು ದಿನಾಂಕ ೨೪-೫-೧೯೮೯ರಲ್ಲಿ ನಿಧನಹೊಂದಿದ್ದು, ಇವರ ಶವವನ್ನು ಊರೆಲ್ಲ ಮೆರವಣಿಗೆ ತೆಗೆದು ಜನ ಅವರ ಮನೆಯಲ್ಲಿಯೇ ಸಮಾಧಿ ಮಾಡಿದ್ದಾರೆಂದು ಹೇಳಲಾಗುತ್ತಿದೆ. .
ಕೇಶವ ದಡ್ಡೆ
ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಸಾಹಿತಿ ಓಂಪ್ರಕಾಶ ದಡ್ಡೆ ಮತ್ತು ರೇಣುಕಾ ದಡ್ಡೆ ದಂಪತಿಗಳಿಗೆ ದಿನಾಂಕ ೪-೮-೨೦೧೨ರಲ್ಲಿ ಜನಿಸಿದ ಇವರು ಬಾಲಕರಾದರು ಕನ್ನಡ, ಹಿಂದಿ, ಇಂಗ್ಲೀಷ್ ಭಾಷೆಯಲ್ಲಿ ಭಾಷಣ ಮಾಡುತ್ತ ಜನರ ಪ್ರೀತಿಗೆ ಪಾತ್ರವಾಗಿದ್ದು ಶಾಲೆಯಲ್ಲಿ ಪ್ರತಿಭಾವಂತ ಮಗುವಾಗಿ ಸುಮಾರು ಇಪ್ಪತ್ತು ಕವಿತೆಗಳು ಬರೆದಿದ್ದು ಅವು ಕೆಲ ಕನ್ನಡ ಸಾಹಿತ್ಯ ಕಾರ್ಯಕ್ರಮದಲ್ಲಿ ಕವನ ವಾಚನ ಮಾಡಿದ್ದಾನೆ . ಸಾಮಾಜಿಕ ಜಾಲತಾಣಗಳಲ್ಲಿಯು ಅವು ಪ್ರಕಟ ಮಾಡಲಾಗಿದೆ. ಮೂರನೆಯ ತರಗತಿಯಲ್ಲಿ ಅಧ್ಯಯನ ಮಾಡುತ್ತಿರುವ ಈತನ ಪ್ರತಿಭೆ ಮೆಚ್ಚುವಂತಹದಾಗಿದೆ.
ಅಭಯಕುಮಾರ
ಹವ್ಯಾಸಿ ಯುವ ಬರಹಗಾರರಾದ ಅಭಯಕುಮಾರ ರವರು ಪಿ.ಯು.ಸಿ ವಿದ್ಯಾರ್ಥಿಯಾಗಿದ್ದು, ಬೀದರದ ಜಗನ್ನಾಥ ಮತ್ತು ಶ್ರೀದೇವಿ ದಂಪತಿಗಳಿಗೆ ದಿನಾಂಕ ೩-೨-೨೦೦೩ರಲ್ಲಿ ಜನಿಸಿದ್ದಾರೆ. ಮತ್ತು ಅನೇಕ ಕವನ, ಲೇಖನ ಬರಹಗಳನ್ನು ಬರೆಯುತ್ತಿರುವ ಇವರು ಕೆಲ ಪತ್ರಿಕೆ ಹಾಗೂ ವಿದ್ಯುನ್ಮಾನ ಮಾಧ್ಯಮಗಳಲ್ಲಿಯು ಬರದು ಪ್ರಕಟಿಸುತ್ತಿದ್ದಾರೆ. ಮತ್ತು ಹಲವು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನೆ ಮಾಡಿದ್ದಾರೆ.
ವೈಭವ ದಡ್ಡೆ
ಉದಯೋನ್ಮುಖ ಯುವ ಬರಹಗಾರ ವೈಭವ ದಡ್ಡೆ. ರವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಸಾಹಿತಿ ಓಂಪ್ರಕಾಶ ದಡ್ಡೆ ಮತ್ತು ರೇಣುಕಾ ದಡ್ಡೆ ದಂಪತಿಗಳಿಗೆ ದಿನಾಂಕ ೧-೪-೧೯೯೯ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್;ಸಿ ಪರೀಕ್ಷೆಯಲ್ಲಿ ರಾಜ್ಯಕ್ಕೆ ೮ನೇ ಸ್ಥಾನ ಪಡೆದ ಪ್ರತಿಭಾವಂತರು. ಸಾಹಿತ್ಯದಲ್ಲಿಯು ತುಂಬ ಆಸಕ್ತರಾಗಿ ಕವನ ಲೇಖನ ಪ್ರಬಂಧಗಳು ಬರೆಯುವ ಕಲೆಯನ್ನು ಕರಗತ ಮಾಡಿಕೊಂಡಿದ್ದಾರೆ. `ಗೀತೋಪಾಸಕ' `ಅಪ್ಪನ ಕೀರ್ತಿ’ `ಬಿಸಿಲು ನಾಡಿನಿಂದ ಹಸಿರು ನಾಡಿಗೆ.' ಎಂಬ ಲೇಖನಗಳು ಬಾಲ್ಯದ ವಿದ್ಯಾರ್ಥಿಯಾಗಿರುವಾಗಲೇ ಬರೆದಿದ್ದು, ಅವು `ಸತ್ಯ ಜ್ಯೋತಿ' ಮೊದಲಾದ ಪ್ರಾತಿನೀಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಪಿಯುಸಿ ಓದುತ್ತಿದ್ದಾಗ ವಾಲಿಬಾಲ್ ಚೆಸ್ ಟೂರ್ನಿಯಲ್ಲಿ ಪ್ರಶಸ್ತಿ ಪಡೆದ ಇವರು ಪಿಯುಸಿಯಲ್ಲಿ ಶೇ.೯೮./. ರಷ್ಟು ಅಂಕಗಳು ಪಡೆದು ಸದ್ಯ ಸರಕಾರಿ ಕಾಲೇಜು ಬೆಳಗಾವಿಯಲ್ಲಿ ಎಂ.ಬಿ.ಬಿ.ಎಸ್ ಅಧ್ಯಯನ ಮಾಡುತ್ತಿದ್ದಾರೆ. ಇವರು ಸಂಗಿತ, ನೃತ್ಯ, ಭಾಷಣಕಾರರಾಗಿ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ.
ಸುನೀತಾ ಬಿಕ್ಲೆ
ಯುವ ಕಲಾವಿದೆ ಹಾಗೂ ಕವಯತ್ರಿಯಾದ ಸುನೀತಾ ಬಿಕ್ಲೆ ರವರು ಬೀದರ ತಾಲೂಕಿನ ಮರಖಲ್ ಗ್ರಾಮದ ಬಸವರಾಜ ಮತ್ತು ಜಗದೇವಿ ದಂಪತಿಗಳಿಗೆ ದಿನಾಂಕ ೧-೮-೧೯೯೨ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಇಡಿ ಪದವಿ ಪಡೆದು ವೃತ್ತಿಪರ ಕಲಾವಿದರಾಗಿ ಬದುಕು ಸಾಗಿಸುತ್ತಿದ್ದಾರೆ. ಮತ್ತು ಕತೆ, ಕವನ, ಲೇಖನ, ಹಾಡುಗಳನ್ನು ಬರೆದಿರುವ ಇವರು ಗಾಯಕರಾಗಿ ಹಲವಾರು ವೃತ್ತಿಪರ ಕಾರ್ಯಕ್ರಮಗಳು ನೀಡುತ್ತಾರೆ. ಇವರಿಗೆ ಕೆಲ ಪ್ರಶಸ್ತಿ ಪುರಸ್ಕಾರಗಳು ಲಭಿಸಿವೆ.
ವೀರಶೆಟ್ಟಿ ವ್ಹಿ ಹಳ್ಳಿ
ಹವ್ಯಾಸಿ ಬರಹಗಾರರಾದ ಇವರು ಬಿ.ಎ.ಬಿ.ಇಡಿ. ಎಂ.ಎ. ಪತ್ರಿಕೋದ್ಯಮ ಪದವಿಧರರಾಗಿ ಬೀದರದ ನೈಟಿಂಗೇಲ್ ಪಬ್ಲಿಕ್ ಶಾಲೆಯ ಪ್ರಾಚಾರ್ಯರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾದ ಇವರು ಅನೇಕ ಕವನ, ಲೇಖನ, ಆಧುನಿಕ ವಚನಗಳು ರಚಿಸಿದ್ದು, ಅವು ಅನೇಕ ಕಡೆಗಳಲ್ಲಿ ಪ್ರಕಟವಾಗಿವೆ.
ಸುಪ್ರೀತಾ ಎಸ್.ಶೀಲವಂತ
ಉದಯೋನ್ಮುಖ ಕವಯತ್ರಿ ಸುಪ್ರೀತಾ ಎಸ್.ಶೀಲವಂತ ರವರು ಮಹಾರಾಷ್ಟ್ರದ ಸೋಲಾಪುರ ಜಿಲ್ಲೆ ಅಕ್ಕಲಕೋಟ ತಾಲೂಕಿನ ಮೈಂದರ್ಗಿ ಗ್ರಾಮದ ಭದ್ರಪ್ಪಾ ಶೀಲವಂತ ಮತ್ತು ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೬-೩-೧೯೯೦ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ.ವರೆಗೆ ಅಧ್ಯಯನ ಮಾಡಿದ ಇವರು ಬಾಹ್ಯವಾಗಿ ಬಿ.ಎ.ಪದವಿ ಅಧ್ಯಯನ ಮಾಡುತ್ತಿದ್ದು, ಬೀದರದ ಶ್ರೀ ಸಪಾನಿ ಶಂಕ್ರೇಪ್ಪಾ ಶೀಲವಂತ ಅವರ ಧರ್ಮ ಪತ್ನಿಯಾಗಿಯಾಗಿದ್ದಾರೆ. ಡಾ.ಜಯದೇವಿ ತಾಯಿ ಲಿಗಾಡೆಯವರಂತೆ ಮರಾಠಿಗಿಂತ ಹೆಚ್ಚು ಕನ್ನಡ ಸಾಹಿತ್ಯದ ಕಡೆಗೆ ಒಲವು ಹೊಂದಿ ಕತೆ, ಕವನ, ಲೇಖನ ಸೇರಿದಂತೆ ೩೦೦ಕ್ಕೂ ಹೆಚ್ಚು ಬರಹಗಳು ಬರೆದಿದ್ದಾರೆ. ಅವುಗಳಲ್ಲಿ ಕೆಲವು ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಹಲವಾರು ವಿದ್ಯೂನ್ಮಾನ ಸ್ಪರ್ಧೆಗಳಲ್ಲಿ ಪಾಲ್ಗೊಂಡ ಇವರಿಗೆ ಕೆಲ ಪ್ರಶಸ್ತಿ ಬಹುಮಾನವು ಲಭಿಸಿವೆ. ಸದ್ಯ ಇವರು `ಭಾವ ಸಮರ್ಪಣೆ' ಎಂಬ ಕವನ ಸಂಕಲನ ಹೊರ ತರುತ್ತಿದ್ದಾರೆ.
ಜೈ.ಶ್ರೀ. ಮೇತ್ರೆ
ಯುವ ಕವಯತ್ರಿಯಾದ ಜೈ ಶ್ರೀ ಮೇತ್ರೆಯವರು ಬೀದರ ತಾಲೂಕಿನ ಗುನ್ನಳ್ಳಿ ಗ್ರಾಮದ ಶಿವರಾಜ ಮತ್ತು ಶಶಿಕಲಾ ದಂಪತಿಗಳಿಗೆ ದಿನಾಂಕ ೫-೫-೧೯೮೯ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಇಡಿ. ಪದವಿಧರರಾದ ಇವರು ಬೀದರದ ಯುವ ಸ್ಪಂದನ ಕೇಂದ್ರದ ಯುವ ಪರಿವರ್ತಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯ ರಚನೆಯಲ್ಲಿ ತೊಡಗಿ ಕವನ, ಲೇಖನ ಬರಹಗಳು ಬರೆದಿದ್ದು, ಅವು ಕೆಲವು ಕಡೆಗಳಲ್ಲಿ ಪ್ರಕಟವಾಗಿವೆ. ಮತ್ತು ಇವರ ಸಾಹಿತ್ಯ ಹಾಗೂ ಸಮಾಜ ಸೇವೆಗೆ ಸಾವಿತ್ರಿ ಬಾಯಿ ಪುಲೆ ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪೂಜ್ಯ. ಶ್ರೀ. ಗಣೇಶ್ವರ ಆವಧೂತರು
ಅಧ್ಯಾತ್ಮಿಕ ದೃಷ್ಟಿಕೋನದಿಂದ ಸಾಹಿತ್ಯ ರಚಿಸಿದ ಪೂಜ್ಯ. ಶ್ರೀ. ಗಣೇಶ್ವರ ಅವಧೂತರು. ಬೀದರ ಹತ್ತಿರದ ನೌಬಾದಿನ ಚವಳಿ ಗ್ರಾಮದ ಗಣೇಶ್ವರ ಸುಕ್ಷೇತ್ರದ ಪೀಠಾಧ್ಯಕ್ಷರಾಗಿದ್ದು ಅನೇಕ ಹಾಡು ತತ್ವಪದ ಆಧುನಿಕ ವಚನಗಳನ್ನು ಬರೆದಿದ್ದಾರೆ . ಮತ್ತು ಅವು ಅನೇಕ ಕಡೆಗಳಲ್ಲಿ ಪ್ರಕಟವಾಗಿವೆ.
ಪೂಜ್ಯ. ಶ್ರೀ. ಶಿವಶಂಕರ ಶಿವಾಚಾರ್ಯರು
ಅಧ್ಯಾತ್ಮಿಕ ದೃಷ್ಟಿಕೋನದಿಂದ ಹಲವಾರು ಪ್ರಕಾರದ ಸಾಹಿತ್ಯ ರಚಿಸುತ್ತಿರುವ ಪೂಜ್ಯ. ಶ್ರೀ. ಶಿವಶಂಕರ ಶಿವಾಚಾರ್ಯರು ಬೀದರ ಸಮೀಪದ ಯದಲಾಪುರ ಮತ್ತು ಮಹಾರಾಷ್ಟ್ರದ ತೋಳನೂರು ಮಠಗಳ ಪೀಠಾಧ್ಯಕ್ಷರಾಗಿದ್ದು ಇವರು ಅನೇಕ ತ್ರಿಪದಿಗಳಲ್ಲಿ ಹಾಗೂ ಬಹುಪಾದಗಳಲ್ಲಿ ವಚನಗಳು ಬರೆದಿದ್ದಾರೆ. `ತೋಳನೂರು ಶ್ರೀ ಯದಲಾಪುರ' ಎಂಬ ವಚನಾಂಕಿತದಲ್ಲಿ ಆಧುನಿಕ ವಚನಗಳು ಬರೆದಿದ್ದಾರೆ. ಮತ್ತು ಅವು ಕೆಲ ಪ್ರಾತಿನಿಧಿಕ ಆಧುನಿಕ ವಚನ ಸಂಕಲನಗಳಲ್ಲಿ ಪ್ರಕಟವಾಗಿವೆ.
ಅವಿನಾಶ ಸೋನೆ
ಯುವ ಬರಹಗಾರ ಅವಿನಾಶ ಸೋನೆ ರವರು ಬೀದರದ ಅಮೃತರಾವ ಮತ್ತು ಪದ್ಮಿನಿ ದಂಪತಿಗಳಿಗೆ ದಿನಾಂಕ ೩೦-೧-೧೯೮೯ರಲ್ಲಿ ಜನಿಸಿದ್ದಾರೆ. ಎಂ.ಎ.ಬಿ.ಇಡಿ. ಸ್ನಾತಕೋತ್ತರ ಪದವಿಧರರಾದ ಇವರು ಕವನ, ಲೇಖನ, ಹನಿಗವನ, ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಇವರು ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನದ ಹಲವಾರು ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ. ವ ಇವರಿಗೆ ಕೆಲ ಕನ್ನಡ ಪರ ಸಂಘ ಸಂಸ್ಥೆಗಳ ವತಿಯಿಂದ ಸತ್ಕರಿಸಿ ಗೌರವಿಸಲಾಗಿದೆ.
ವಿದ್ಯಾ ಸಾಗರ
ಯುವ ಬರಹಗಾರ ವಿದ್ಯಾಸಾಗರ ರವರು ಬೀದರ ತಾಲೂಕಿನ ಮರಖಲ ಗ್ರಾಮದ ಶರಣಪ್ಪಾ ಮತ್ತು ಕಸ್ತೂರಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೮೮ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ಸ್ವಯಂ ವೃತ್ತಿಯೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿ ಅನೇಕ ಕವನ, ಲೇಖನ, ಹನಿಗವನ, ಚುಟುಕು ಮೊದಲಾದವು ಬರೆದಿದ್ದಾರೆ. ಮತ್ತು ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರು ಬೀದರ ಜಿಲ್ಲೆಯ ವಿವಿಧ ಕನ್ನಡ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕವಿಗೋಷ್ಠಿಗಳಲ್ಲಿ ಪಾಲ್ಗೊಂಡು ಕವನ ವಾಚನ ಮಾಡಿದ್ದಾರೆ.
ಪರಮೇಶ್ವರ ಸಂಗ್ರಾಮ್
ಯುವ ಬರಹಗಾರ, ಕಲಾವಿದರೆಂದರೆ ಪರಮೇಶ್ವರ ಸಂಗ್ರಾಮ್ ರವರು ಬೀದರ ತಾಲೂಕಿನ ಮಂದಕನಳ್ಳಿ ಗ್ರಾಮದ ಸಂಗ್ರಾಮ್ ಗಿರಣಿ ಮತ್ತು ಕಸ್ತೂರಿಬಾಯಿ ದಂಪತಿಗಳಿಗೆ ದಿನಾಂಕ ೧೧-೧-೧೯೮೮ ರಲ್ಲಿ ಜನಿಸಿದ್ದಾರೆ. ಬಿ.ಎ. ಮತ್ತು ಚಲನಚಿತ್ರ ನಿರ್ದೇಶನದಲ್ಲಿ ಡಿಪ್ಲೊಮಾ ಪದವಿ ಪಡೆದ ಇವರು ಬೆಂಗಳೂರಿನಲ್ಲಿ ಸಿನಿಮಾ ನಿರ್ದೇಶಕರಾಗಿ, ಚಲನಚಿತ್ರ ಸಂಭಾಷಣಕಾರರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಮಾಜದ ಅಹಿತಕರ ಘಟನೆಗಳನ್ನು ಕಂಡು ಸಮಾಜಕ್ಕೆ ಸರಿ ತಪ್ಪುಗಳ ಅರಿವು ಮೂಡಿಸಿ ಬದಲಾವಣೆ ತರುವಲ್ಲಿ ಸಿನಿಮಾ ಮಾಧ್ಯಮವೇ ಸರಿ ಎಂದು ತಿಳಿದು ಚಲನಚಿತ್ರ ರಂಗಕ್ಕೆ ಪಾದರ್ಪಣೆ ಮಾಡಿ ಕಥೆಗಾರ, ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ೬ನೇ ತರಗತಿಯಲ್ಲಿರುವಾಗಲೇ ಸಾಹಿತ್ಯ ರಚನೆಯಲ್ಲಿ ತೊಡಗಿ `ಪರಮೇಶ್ವರ ಸಂಗ್ರಾಮ್.' ಎಂಬ ಅಂಕಿತನಾಮದಲ್ಲಿ ೩೦೦ಕ್ಕೂ ಅಧಿಕ ಆಧುನಿಕ ವಚನಗಳು ಬರೆದಿದ್ದಾರೆ. `ಹೃದಯ ಸಾಕ್ಷಿ, ಹಾಗೂ `ಕುಂತಿ’ ಧಾರಾವಾಹಿಗಳಿಗೆ ಮೊದಲ ಬಾರಿಗೆ ಸಹಾಯಕ ನಿರ್ದೇಶನ ಕೆಲಸಕ್ಕೆ ಸೇರಿ ನಂತರ ಕೆಲ ಧಾರಾವಾಹಿಗಳಲ್ಲಿ ಮತ್ತು ಸೇವಂತಿ ಸೇವಂತಿ, ಆಟೊ, ಜಾಜಿಮಲ್ಲಿಗೆ, ಶಿವ, ಹೀಗೆ ಕೆಲ ಚಲನಚಿತ್ರಗಳಿಗೂ ಸಹಾಯಕ ಹಾಗೂ ಸಹ ನಿರ್ದೇಶನ ಮಾಡಿದ್ದಾರೆ. ಪೌರಾಣಿಕ ಮಹಾಕಾವ್ಯ `ಮಾಹಾಭಾರತ' ಎಂಬ ಕನ್ನಡ ಧಾರವಾಹಿಯಲ್ಲಿಯೂ ಸಹ ನಿರ್ದೇಶಕರಾಗಿ ಕಾರ್ಯ ನಿರ್ವಾಹಿಸಿದ್ದಾರೆ. ಮತ್ತು ಝೀ ಕನ್ನಡ, ಸುರ್ಣ, ಈ ಟಿವಿ ವಾಹಿನಿಗಳಲ್ಲಿ ಕೆಲ ರಿಯಾಲಿಟಿ ಶೋಗಳಿಗೆ ಪ್ರೊಡ್ಯುಸರ್ ಆಗಿ ಕಾರ್ಯನಿರ್ವಹಿಸಿದಲ್ಲದೆ, `ಉದಯ ಕಾಮಿಡಿ’ ವಾಹಿನಿಯಲ್ಲಿ ಬರುತಿದ್ದ ಕಥೆ ಅಲ್ಲ ಕಾಮಿಡಿ. ೧೦೦ನೇ ಸಂಚಿಕೆ ಹಾಗೂ `ಡುಬಾಕ್ ಜೋಡಿ’ ೫೦೦ನೇ ಸಂಚಿಕೆಗಳಿಗೆ ಕಾಮಿಡಿ ಡೈಲಾಗ್ ಬರೆದು ನಿರ್ದೇಶನ ಮಾಡಿ, ಕೇಂದ್ರ ಸರ್ಕಾರದ ೫ ಜಾಹಿರಾತುಗಳಿಗೆ ನಿರ್ದೇಶನ ಮಾಡಿದ್ದಾರೆ. ಹಾಗೂ ೯೧.೧. ಎಫ್.ಎಂ. ರೇಡಿಯೋ ಕೇಂದ್ರದ ಕೆಲ ಕಾರ್ಯಕ್ರಮಗಳಿಗೆ ಹಿನ್ನೆಲೆ ಧ್ವನಿಯು ನೀಡಿದ್ದಾರೆ. ಸದ್ಯದಲ್ಲಿಯೆ ಇವರು ಬರೆದ ಬರಹಗಳು ಪುಸ್ತಕ ರೂಪದಲ್ಲಿ ಪ್ರಕಟಿಸಲಿದ್ದಾರೆ.
ಮಾರುತಿ ಮಾಸ್ಟರ್
ಯುವ ಬರಹಗಾರ ಮಾರುತಿ ಮಾಸ್ಟರ್ ರವರು ಬೀದರ ತಾಲೂಕಿನ ಸಿರ್ಸಿ ಗ್ರಾಮದ ಶಿವರಾಜ ಮತ್ತು ಲಕ್ಷ್ಮೀ ದಂಪತಿಗಳಿಗೆ ದಿನಾಂಕ ೧-೭-೧೯೮೨ರಲ್ಲಿ ಜನಿಸಿದ್ದಾರೆ. ಬಿ.ಎ. ಬಿ.ಪಿ.ಇಡಿ. ಪದವಿಧರರಾದ ಇವರು ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ವಚನ ಹನಿಗವನ, ಮೊದಲಾದವು ಸಾಹಿತ್ಯ ರಚಿಸಿ `ಹಡೆದವ್ವ' (ಕವನ ಸಂಕಲನ) `ಅಂಬಿಗರ ಚೌಡಯ್ಯ' (ಚರಿತ್ರೆ) `ಆಧುನಿಕ ವಚನಗಳು' (ವಚನ ಸಂಕಲನ) ಎಂಬ ಕೃತಿಗಳು ಬರೆದಿದ್ದು ಅವು ಮುದ್ರಣದ ಹಂತದಲ್ಲಿವೆ. ಇವರ ಬರಹಗಳು ಉತ್ತರ ಕರ್ನಾಟಕ, ಬಿಂದಾಸ್, ಶ್ರೀ ಶಕ್ತಿ ಇತ್ಯಾದಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಕಮಠಾಣ, ಬಗದಲ್, ಹೋಬಳಿಗಳ ಕಸಾಪ ಅಧ್ಯಕ್ಷರಾಗಿ, ಸಿರ್ಸಿ ಗ್ರಾಂ.ಪA. ಸದಸ್ಯರಾಗಿ ಸೇವೆ ಸಲ್ಲಿಸಿ, ಸದ್ಯ ಔರಾದ (ಎಸ್) ಹೋಬಳಿಯ ಕಸಾಪ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಮತ್ತು ತಮ್ಮ ಹುಟ್ಟೂರಲ್ಲಿ ಮಾರುತಿ ಮಾಸ್ಟರ್ ಶಿಕ್ಷಣ ಸಂಸ್ಥೆಯ ಮೂಲಕ ಸಿರ್ಸಿ, ಕಾಡವಾದಗಳಲ್ಲಿ ವಿದ್ಯಾ ಪ್ರಾಥಮಿಕ ಶಾಲೆಗಳನ್ನು ತೆರೆದು ಶಿಕ್ಷಣ ನೀಡುತ್ತಿದ್ದಾರೆ.
ನಾಗಪ್ಪ ಚಿಟ್ಟಾ
ಜಾನಪದ ಕವಿ ಕಲಾವಿದರಾದ ನಾಗಪ್ಪ ಚಿಟ್ಟಾ. ರವರು ಬೀದರ ತಾಲೂಕಿನ ಚಿಟ್ಟಾ ಗ್ರಾಮದ ಶೇಷಪ್ಪ ಮತ್ತು ನಾಗಮ್ಮ ದಂಪತಿಗಳಿಗೆ ದಿನಾಂಕ ೮-೧೦-೧೯೮೦ರಲ್ಲಿ ಜನಿಸಿದ್ದಾರೆ. ೭ನೇ ತರಗತಿವರೆಗೆ ಅಧ್ಯಯನ ಮಾಡಿದ ಇವರು ೧೯೬೪ರಲ್ಲಿ ಪೋಲಿಸ್ ಪೇದೆಯಾಗಿ ನೇಮಕಗೊಂಡು ೧೯೯೮ರಲ್ಲಿ ನಿವೃತ್ತರಾಗಿದ್ದಾರೆ. ಬಾಲ್ಯದಿಂದಲೂ ಭಜನೆ ಪದ, ಮೊಹರಮ್ ಪದ, ತತ್ವಪದ, ಜಾನಪದ, ಕೋಲಾಟ ಪದ ಮೊದಲಾದವು ಬರೆದಿದ್ದು, ಅವು ಕೆಲವು ಕಡೆ ಪ್ರಕಟವಾಗಿವೆ.
ಮಾಣಿಕಾದೇವಿ ಪಾಟೀಲ್
ಉದಯೋನ್ಮುಖ ಕವಯತ್ರಿ ಮಾಣಿಕಾದೇವಿ ಎಂ.ಪಾಟೀಲ್ ರವರು ಬೀದರ ತಾಲೂಕಿನ ಯರನಳ್ಳಿ ಗ್ರಾಮದ ಶರಣಪ್ಪಾ ಮತ್ತು ಬಂಡೆಮ್ಮಾ ದಂಪತಿಗಳಿಗೆ ದಿನಾಂಕ ೧-೬-೧೯೭೯ರಲ್ಲಿ ಜನಿಸಿದ್ದಾರೆ. ಬಾಲ್ಯದಿಂದಲೂ ಪ್ರತಿಭಾವಂತರಾದ ಇವರು ಡಿ.ಇಡಿ.ಬಿ.ಇಡಿ ಎಂ.ಎ. ಪದವಿ ಪಡೆದು ಕಪಲಾಪೂರ (ತಿ) ಶಾಲೆಯ ಶಿಕ್ಷಕರಾಗಿ ಸೇವೆ ಸಲ್ಲಿಸಿ, ಸದ್ಯ ಮಾಡ್ಯೂಲ್ ಕ್ಲಸ್ಟರ್ನ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಇವರು ಸಾಹಿತ್ಯದಲ್ಲಿ ಆಸಕ್ತರಾಗಿ ಹಲವಾರು ಕವಿತೆಗಳನ್ನು ಬರೆದು ಪುಸ್ತಕವೊಂದು ಹೊರ ತರುವ ನಿಟ್ಟಿನಲ್ಲಿದ್ದಾರೆ. ಅಷ್ಟೇಯಲ್ಲದೆ ಇವರ ಕವನ ಚುಟುಕು ಲೇಖನ ಮೊದಲಾದ ಬರಹಗಳು ವಿವಿಧ ಪತ್ರಿಕೆ ಹಾಗೂ ಪ್ರತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರಿಗೆ ವಿವಿಧ ಸಂಘ ಸಂಸ್ಥೆಯವರು ಕೆಲ ಪ್ರಶಸ್ತಿ, ಪುರಸ್ಕಾರಗಳನ್ನು ನೀಡಿ ಗೌರವಿಸಿದ್ದಾರೆ. ಸದ್ಯ ಇವರು ಎನ್.ಪಿ.ಇ.ಜಿ.ಇ.ಎಲ್.ಯೋಜನೆಯಡಿಯಲ್ಲಿ ಬೀದರ ತಾಲೂಕಿನ ಜಂಡರ್ ಕೋ.ಆರ್ಡಿನರಾಗಿ ಪ್ರಾಥಮಿಕ ಶಾಲಾ ಮಕ್ಕಳ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುವುದರೊಂದಿಗೆ ಸೃಜನಾತ್ಮಕ ಸಾಹಿತ್ಯ ರಚನೆಯಲ್ಲಿ ತೊಡಗಿಸಿಕೊಂಡಿದ್ದಾರೆ.
ಡಾ. ಸುನೀತಾ ಕೂಡ್ಲಿಕರ್
ಉದಯೋನ್ಮುಖ ಕವಯತ್ರಿ ಡಾ.ಸುನೀತಾ ಕೂಡ್ಲಿಕರ್ ರವರು ಬೀದರದ ಬಾಬುರಾವ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೬-೬-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ. ಎಂ.ಫೀಲ್. ಪಿ.ಎಚ್.ಡಿ. ಪದವಿಧರರಾಗಿದ್ದು, `ಬೋಮ್ಮಗೊಂಡೆಶ್ವರ ಒಂದು ಅಧ್ಯಯನ' ಎಂಬುದು ಎಂ.ಫೀಲ್ ಪ್ರಬಂಧವಾದರೆ, `ತಾಯ್ತನದ ವಿಭಿನ್ನ ಗ್ರಹಿಕೆಗಳು' ಪಿ.ಎಚ್.ಡಿ. ಮಹಾಪ್ರಬಂಧವಾಗಿದೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ಆಸಕ್ತರಾಗಿ ಕವನ, ಲೇಖನ, ಪ್ರಬಂಧ, ಹನಿಗವನಗಳು ಬರೆಯುತ್ತಿದ್ದಾರೆ. ಇವರ ಬರಹಗಳು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಮತ್ತು ಇವರು ರಾಜ್ಯ, ರಾಷ್ಟ್ರೀಯ, ಅಂತರಾಷ್ಟ್ರೀಯ ಮಟ್ಟದಲ್ಲಿ ನಡೆದ ವಿವಿಧ ವಿಚಾರ ಸಂಕಿರಣಗಳಲ್ಲಿ ಅನೇಕ ಪ್ರಬಂಧಗಳು ಮಂಡನೆ ಮಾಡಿದ್ದಾರೆ. ಇವರಿಗೆ ಮಾತೃಶ್ರೀ ಪ್ರಶಸ್ತಿ, ಅಣ್ಣಾ ಹಜಾರೆ ರಾಷ್ಟ್ರೀಯ ಪ್ರಶಸ್ತಿ, ೨೦೧೮ರಲ್ಲಿ ಆರ್ ವಿ.ಬಿಡಪ್ ಶಿಷ್ಯ ವೇತನ ಪ್ರಶಸ್ತಿ, ಸೇರಿದಂತೆ ಮೊದಲಾದವು ಪಡೆದಿದ್ದಾರೆ. ಇವರು ಬೀದರ ಜಿಲ್ಲಾ ಕರ್ನಾಟಕ ಜಾನಪದ ಪರಿಷತ್ತು ಮತ್ತು ಕರ್ನಾಟಕ ಲೇಖಕಿಯರ ಸಂಘದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ನಾಗಮ್ಮ ಎಚ್. ಭಂಗರಗಿ
ಕವಯತ್ರಿ ನಾಗಮ್ಮ ಎಚ್. ಭಂಗರಗಿ ರವರು ಕಲಬುರ್ಗಿ ತಾಲೂಕಿನ ಸಾವಳಗಿ (ಬಿ) ಗ್ರಾಮದ ಹುಲೆಪ್ಪ ಮತ್ತು ಶಿವಮ್ಮ ದಂಪತಿಗಳಿಗೆ ದಿನಾಂಕ ೦೯-೦೭-೧೯೭೮ರಲ್ಲಿ ಜನಿಸಿದ್ದಾರೆ. ಎಂ.ಎ. ಬಿ.ಎಡ್, ಎಂ, ಫೀಲ್ ಪದವಿದರರಾದ ಇವರು ೨೦೦೯ರಿಂದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಕನ್ನಡ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.
ಇವರು ಹುಮನಾಬಾದ ತಾಲೂಕಿನ ಮನ್ನಾಏಖೇಳಿಯ ಮಲ್ಲಿಕಾರ್ಜುನ ಅಮಗೊಂಡ ರವರ ಧರ್ಮ ಪತ್ನಿಯಾಗಿದ್ದು, ಬಾಲ್ಯದಿಂದಲೇ ತಮ್ಮ ತಂದೆ ಲೇಖಕರು, ಆಧ್ಯಾತ್ಮವಾದಿಗಳು, ಸಮಾಜ ಸೇವಕರು ಆಗಿದ್ದರಿಂದ ಅವರ ಪ್ರೇರಣೆಯಿಂದ ಕವನ, ಲೇಖನ, ಪ್ರಬಂಧ, ಹನಿಗವನ ಮೊದಲಾದ ಬರಹಗಳು ಬರೆಯುತ್ತಿದ್ದಾರೆ. `ಬೀದರ ಜಿಲ್ಲೆಯ ಮಹಿಳಾ ಕಾವ್ಯಗಳ ಒಂದು ಅಧ್ಯಯನ’ ಎಂಬ ಕಿರುಸಂಶೋಧನೆಯನ್ನು ಪೂರ್ಣಗೊಳಿಸಿ ಮಹಿಳಾ ಕವಯತ್ರಿಯರನ್ನು ಒಗ್ಗೂಡಿಸಿದ್ದಾರೆ. ಇವರ ಬರಹಗಳು `ಸಾಹಿತ್ಯ ಸಿಂಚನ’ ತ್ರೆöÊಮಾಸಿಕ, `ಅಚಲ’ ಮಾಸಪತ್ರಿಕೆ, ಹಾಗೂ ಕೆಲ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿಯೂ ಪ್ರಕಟವಾಗಿವೆ. ಮತ್ತು ಕಸಾಪದ ವಿವಿಧ ಸಾಹಿತ್ಯ ಸಮ್ಮೇಳನ ಹಾಗೂ ಕವಿಗೋಷ್ಠಿಯಲ್ಲಿ ಕವನ ವಾಚನವು ಮಾಡಿದ ಇವರು ಹಲವಾರು ರಾಜ್ಯ, ರಾಷ್ಟçಮಟ್ಟದ ಕಮ್ಮಟಗಳಲ್ಲಿಯು ಅನೇಕ ಉಪನ್ಯಾಸಗಳು ನೀಡಿದ್ದಾರೆ. ಸದ್ಯ ಇವರು ಬೀದರನಲ್ಲಿದ್ದುಕೊಂಡು ತಮ್ಮ ವೃತಿ ಬದುಕಿನೊಂದಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿದ್ದಾರೆ,
ವಿರೂಪಾಕ್ಷ ಗಾದಗಿ
`ಬಸವ ದನಿ' ಪತ್ರಿಕೆಯ ಪ್ರಧಾನ ಸಂಪಾದಕರಾಗಿ ಬರವಣಿಗೆಯಲ್ಲಿ ತೊಡಗಿಸಿರುವ ಬರಹಗಾರ ವಿರೂಪಾಕ್ಷ ಗಾದಗಿ. ಇವರು ಬೀದರ ತಾಲೂಕಿನ ಗಾದಗಿ ಗ್ರಾಮದ ಸದಾನಂದ ಹಾಗೂ ಸಿದ್ದಮ್ಮ ದಂಪತಿಗಳಿಗೆ ದಿನಾಂಕ ೨೪-೧೧-೧೯೭೭ರಲ್ಲಿ ಜನಿಸಿದ್ದಾರೆ. ಎಂ.ಎಸ್ಸಿ. ಕೃಷಿ. ಎಂ.ಎಸ್ಸಿ. ಸಕ್ಕರೆ ತಂತ್ರಜ್ಞಾನದಲ್ಲಿ ಪದವಿ ಪಡೆದು ಪತ್ರಿಕಾ ರಂಗದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಸಾಹಿತ್ಯದಲ್ಲಿಯು ಆಸಕ್ತರಾಗಿ ಕತೆ ಕವನ ಹನಿಗವನಗಳನ್ನು ಬರೆದಿದ್ದಾರೆ. ಅವು ಈಗಾಗಲೇ ಹಲವಾರು ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಇವರು ಕನ್ನಡ ನಾಡು- ನುಡಿಗಾಗಿ ೨೦೦೦ರಲ್ಲಿ `ಕನ್ನಡಾಂಬೆ ಗೆಳೆಯರ ಬಳಗ' ರಚಿಸಿ ಯುವ ಜನರನ್ನು ಸಂಘಟಿಸಿ ಅನೇಕ ಹೋರಾಟಗಳನ್ನು ನಡೆಸಿದ್ದಾರೆ. ಕಲಂ ೩೭೧ ಜಾರಿಗಾಗಿ, ಅವಿರತ ಹೋರಾಟ, ಗಡಿ ಭಾಗದಲ್ಲಿ ಕನ್ನಡಿಗರಿಗೆ ಆಗುತ್ತಿರುವ ಅನ್ಯಾಯ, ಅಸಮಾನತೆ ವಿರುಧ್ಧ ಧ್ವನಿ ಎತ್ತಿ, ಸರ್ಕಾರವನ್ಮು ಎಚ್ಚರಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕ ರಾಜ್ಯ ಸರಕಾರ ೨೦೦೪ನೇ ಸಾಲಿನಲ್ಲಿ ರಾಜ್ಯ ಅತ್ತ್ಯುತ್ತಮ ಯುವ ಪ್ರಶಸ್ತಿ ಇವರಿಗೆ ನೀಡಿದೆ. ಮತ್ತು ಭಾರತ ಸರ್ಕಾರದ ವತಿಯಿಂದ ಮದ್ಯಪ್ರದೇಶದ ರತಲಾಮ್ ನಲ್ಲಿ ಆಯೊಜಿಸಲಾದ ಯುವ ಸಮ್ಮೇಳನದಲ್ಲಿ ರಾಜ್ಯವನ್ನು ಪ್ರತಿನಿಧಿಸಿ ರಾಷ್ಟ್ರಮಟ್ಟದ ಯುವ ಪ್ರಶಸ್ತಿ ಯು ಪಡೆದಿದ್ದಾರೆ. ಇವರು ಬಂಡಾಯ ಬರಹಗಾರರಾಗಿ ಬರೆದ ಬರಹಗಳು ಪುಸ್ತಕ ರೂಪದಲ್ಲಿ ಹೊರ ತರುವ ನಿಟ್ಟಿನಲ್ಲಿದ್ದಾರೆ. ಇವರು ನಾಲ್ಕು ಶಿಕ್ಷಣ ಸಂಸ್ಥೆಗಳನ್ನು ತೆರೆದು ಬೀದರ ನಗರದ ಕೊಳಚೆ ಪ್ರದೇಶಗಳಲ್ಲಿಯ ಬಡ ಮಕ್ಕಳಿಗೆ ಶಿಕ್ಷಣ ನೀಡುತ್ತಿದ್ದಾರೆ.
ಬುದ್ಧದೇವಿ ಅಶೋಕ ಸಂಗಮ್.
ಉದಯೋನ್ಮುಖ ಕವಯತ್ರಿಯಾದ ಬುದ್ಧದೇವಿ ಅಶೋಕ ಸಂಗಮ್ ರವರು ಬೀದರ ತಾಲೂಕಿನ ಅಷ್ಟೂರ ಗ್ರಾಮದ ಶಂಕರರಾವ ಮೆಲ್ಲದೊಡ್ಡಿ ಮತ್ತು ಘಾಳೆಮ್ಮ ದಂಪತಿಗಳಿಗೆ ದಿನಾಂಕ ೧-೬-೧೯೭೬ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ. ಟಿ.ಸಿ.ಎಚ್ ವರೆಗೆ ಶಿಕ್ಷಣ ಪಡೆದ ಇವರು ೧೯೯೮ರಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾಗಿ ಸೇವೆಗೆ ಸೇರಿ, ಸದ್ಯ ಜನವಾಡ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಇತ್ತಿಚಿಗೆ ಸಾಹಿತ್ಯ ರಚನೆಯಲ್ಲಿ ತೊಡಗಿರುವ ಇವರು ಬುದ್ದ, ಬಸವ, ಅಂಬೇಡ್ಕರ್ ತತ್ವದಡಿಯಲ್ಲಿ ಕವನ ಲೇಖನಗಳು ರಚಿಸುತ್ತಿದ್ದಾರೆ. ಇವರ ಬರಹಗಳು ಬೆಳಗಾವಿಯ ಹಸಿರು ಕ್ರಾಂತಿ. ಮತ್ತು ಬುಕ್ ಬ್ರಹ್ಮ ಜಾಲತಾಣದಲ್ಲಿ ಪ್ರಕಟವಾಗಿವೆ. ಮತ್ತು ಬುಕ್ ಬ್ರಹ್ಮ ಜಾಲತಾಣದವರು ಏರ್ಪಡಿಸಿದ ೨೦೨೦ ರ ಅಕ್ಟೊಬರ್ ತಿಂಗಳ ಜನ ಮೆಚ್ಚಿದ ಕವನ ಸ್ಪರ್ಧೆಯಲ್ಲಿ ಇವರ ಕವನಕ್ಕೆ ರಾಜ್ಯ ಮಟ್ಟದ ದ್ವಿತೀಯ ಬಹುಮಾನ ಲಭಿಸಿದೆ. ಇವರಿಗೆ ೨೦೧೮ರಲ್ಲಿ ತಾಲೂಕು ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಮತ್ತು ಇಂಡಿಯನ್ ಲಿಟರೆಸ್ಸಿ ಮಿಷನ್ ರೋಟರಿ ಕ್ಲಬ್ ವತಿಯಿಂದ `ರಾಷ್ಟ್ರ ನಿರ್ಮಾಣ ಪ್ರಶಸ್ತಿ,’ ೨೦೧೯ರಲ್ಲಿ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ೨೦೦೯ರಲ್ಲಿ ಭಾರತೀಯ ಸ್ಕೌಟ್ ಮತ್ತು ಗೈಡ್ಸ ವತಿಯಿಂದ ಉತ್ತಮ ಗೈಡ್ಸ ಪ್ರಶಸ್ತಿ, ಮತ್ತು ಕರ್ನಾಟಕ ರಾಜ್ಯ ನೌಕರರ ಕ್ರೀಡಾ ಕೂಟದಲ್ಲಿ ವಿವಿಧ ಸ್ಪರ್ಧೆಯಲ್ಲಿ ಭಾಗವಹಿಸಿದ ಇವರಿಗೆ ವಿವಿಧ ಕ್ರೀಡೆಗಳಲ್ಲಿ ೧೨ಕ್ಕಿಂತ ಹೆಚ್ಚು ಪ್ರಥಮ ದ್ವಿತೀಯ ಬಹುಮಾನಗಳು ಪಡೆದು ೧ ಚಿನ್ನದ ಪದಕ ಮತ್ತು ೮. ಬೆಳ್ಳಿಯ ಪದಕಗಳು ಪಡೆದು ಉತ್ತಮ ಕ್ರೀಡಾ ಪಟುವಾಗಿಯು ಗುರುತಿಸಿಕೊಂಡಿದ್ದಾರೆ. ಸದ್ಯ ಇವರು ಬೀದರ ನಗರದ ನಿವಾಸಿಯಾಗಿದ್ದು, ಕತೆ ಕವನ ಲೇಖನ ಮೊದಲಾದ ಬರವಣಿಗೆಯಲ್ಲಿ ತೊಡಗಿಸಿಕೊಂಡಿರುವ ಇವರ ಕವನ ಸಂಕಲನವೊAದು ಮುದ್ರಣದ ಹಂತದಲ್ಲಿದೆ.
ರೂಪಾ ಪಾಟೀಲ್
ಕವಯತ್ರಿ ರೂಪಾ ಪಾಟೀಲ್ ರವರ ಪೂರ್ಣ ಹೆಸರು ಸ್ವರೂಪರಾಣಿ ಪಾಟೀಲ್ ಎಂದಾಗಿದೆ. ಇವರು ಕಲಬುರಗಿ ಜಿಲ್ಲೆ ಮಹಾಗಾಂವ ಗ್ರಾಮದ ಡಾ.ಎಸ್.ಆರ್ ಕೊಂಡೆಡ್ ಮತ್ತು ರೇಣುಕಾ ದಂಪತಿಗಳಿಗೆ ದಿನಾಂಕ ೨-೩-೧೯೭೬ರಲ್ಲಿ ಜನಿಸಿದ್ದಾರೆ. ಬಿ.ಎಸ್ಸಿ.ಎಲ್.ಎಲ್.ಬಿ. ಪದವಿಧರರಾದ ಇವರು ಬೀದರಿನ ಡಾ.ಜಗದೀಶ್ ಪಾಟೀಲ್ ಮರೂರ ಅವರ ಧರ್ಮ ಪತ್ನಿಯಾಗಿದ್ದಾರೆ. ಗೃಹಿಣಿಯಾಗಿದ್ದುಕೊಂಡೆ ಸಾಹಿತ್ಯ, ಸಂಗೀತ, ಯೋಗ ಕಾರ್ಯಕ್ರಮದ ನಿರೂಪಕರಾಗಿ ಗುರ್ತಿಸಿಕೊಂಡಿರುವ ಇವರು ಕವನ, ಲೇಖನ, ಚುಟುಕು, ನುಡಿಗಟ್ಟುಗಳು ಬರೆದಿದ್ದಾರೆ. ಮತ್ತು `ಆಹಾರ ಮತ್ತು ಆರೋಗ್ಯ' ಎಂಬ ಪುಸ್ತಕ ಪ್ರಕಟಿಸುತ್ತಿದ್ದಾರೆ. ಇವರು ಕವಯತ್ರಿ, ಗಾಯಕರು, ನೃತ್ಯಗಾರ್ತಿ, ಯೋಗ ಪಟು, ನೀರೂಪಕರು ಆಗಿದ್ದರಿಂದ ಇವರಿಗೆ `ನಿರೂಪಣಾ ರತ್ನ' ಪ್ರಶಸ್ತಿಯು ನೀಡಿ ಗೌರವಿಸಲಾಗಿದೆ. ಮತ್ತು ರೋಟರಿ ಕ್ಲಬ್ ಸದಸ್ಯರಾಗಿ, ಬೀದರ ಸಿರಿಗನ್ನಡ ವೇದಿಕೆ ಮತ್ತು ವೀರಶೈವ ಲಿಂಗಾಯಿತ ಮಹಿಳಾ ಅಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇವರ ಹಲವಾರು ಬರಹಗಳು ನಾಡಿನ ಪ್ರಮುಖ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಅಷ್ಟೇಯಲ್ಲದೆ ಬೀದರನಲ್ಲಿ ನಡೆದ ಎರಡನೇ ಮಹಿಳಾ ಸಾಹಿತ್ಯ ಸಮ್ಮೇಳನ ಸೇರಿದಂತೆ ಮೊದಲಾದ ಕಾರ್ಯಕ್ರಮದಲ್ಲಿ ಬಹುಮುಖ ಪ್ರತಿಭೆಯ ಮಹಿಳೆಯಾಗಿ ನೃತ್ಯ, ಸಂಗೀತ, ಯೋಗ ಸಾಧನೆಯೊಂದಿಗೆ ಪಾಲ್ಗೊಂಡು ಸೃಜನಶೀಲ ಬರವಣಿಗೆಯಲ್ಲಿ ತೊಡಗಿದ್ದಾರೆ.
ವಿಠಲ (ವಿಕಿ)
`ವಿಕಿ' ಎಂಬ ಕಾವ್ಯನಾಮದಿಂದ ಬರೆಯುತ್ತಿರುವ ವಿಠಲ ರವರು ಬೀದರದ ಕಿಶನರಾವ ಮತ್ತು ಲಕ್ಷ್ಮೀಬಾಯಿ ದಂಪತಿಗಳಿಗೆ ದಿನಾಂಕ ೨೩-೭-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.ಸ್ನಾತಕೋತ್ತರ ಪದವಿಧರರಾದ ಇವರು ಖಾಸಗಿ ಕಾಲೇಜಿನ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಕವನ, ಲೇಖನ, ಹನಿಗವನಗಳು ಬರೆಯುತ್ತಿರುವ ಇವರ ಬರಹಗಳು ಅನೇಕ ಪತ್ರಿಕೆ ಮತ್ತು ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ಡಾ.ಬಂಡಯ್ಯ ಸ್ವಾಮಿ
ಡಾ.ಬಂಡಯ್ಯ ಸ್ವಾಮಿ
ಹವ್ಯಾಸಿ ಬರಹಗಾರರಾದ ಡಾ.ಬಂಡಯ್ಯ ಸ್ವಾಮಿಯವರು ಬೀದರ ನಾವದಗೇರಿಯ ಆಡಯ್ಯ ಸ್ವಾಮಿ ಮತ್ತು ಪಾರ್ವತಿ ದಂಪತಿಗಳಿಗೆ ದಿನಾಂಕ ೫-೬-೧೯೭೪ರಲ್ಲಿ ಜನಿಸಿದ್ದಾರೆ. ಎಂ.ಎ.ಪಿ.ಎಚ್.ಡಿ.ಪದವೀಧರರಾದ ಇವರು ಉಪನ್ಯಾಸಕರಾಗಿ ಸೇವೆ ಸಲ್ಲಿಸುವುದರೊಂದಿಗೆ ಕವನ, ಲೇಖನ ಮೊದಲಾದ ಬರಹಗಳು ಬರೆದಿದ್ದು, ಅವು ಕೆಲ ಪತ್ರಿಕೆ ಹಾಗೂ ಪ್ರಾತಿನಿಧಿಕ ಸಂಕಲನಗಳಲ್ಲಿ ಪ್ರಕಟವಾಗಿವೆ.
ವಿಜಯಕುಮಾರ ಕನ್ನಾಡೆ
`ಲಾಂಚನ ಪ್ರಿಯ' ಎಂಬ ಕಾವ್ಯನಾಮದಲ್ಲಿ ಬರೆಯುತ್ತಿರುವ ಹವ್ಯಾಸಿ ಬರಹಗಾರರೆಂದರೆ ವಿಜಯಕುಮಾರ ಕನ್ನಾಡೆ. ಇವರು ಬೀದರದ ಮಾಣಿಕಪ್ಪಾ ಮತ್ತು ಗಂಗಮ್ಮಾ ದಂಪತಿಗಳಿಗೆ ದಿಇ ೧-೬-೧೯೭೩ರಲ್ಲಿ ಜನಿಸಿದ್ದಾರೆ. ಬಿ.ಎ.ಪದವಿಧರರಾದ ಇವರು ವಿದ್ಯುನ್ಮಾನ ಉಪಕರಣಗಳ ದುರಸ್ತಿ ಕಾರ್ಯದ ತೊಡಗಿ ಕವನ, ಲೇಖನ, ಬರಹಗಳು ಬರೆದಿದ್ದಾರೆ. ಮತ್ತು ಅವು ಕೆಲವು ಕಡೆ ಪ್ರಕಟವಾಗಿವೆ.
ನಿರ್ಹಂಕಾರ ಬಂಡಿ
ಹವ್ಯಾಸಿ ಬರಹಗಾರ ನಿರ್ಹಂಕಾರ ಬಂಡಿಯವರು. ಬೀದರದ ವೀರಣ್ಣ ಮತ್ತು ಇಂದುಮತಿ ದಂಪತಿಗಳಿಗೆ ದಿನಾಂಕ ೧೭-೫-೧೯೭೩ರಲ್ಲಿ ಜನಿಸಿದ್ದಾರೆ. ಎಸ್.ಎಸ್.ಎಲ್.ಸಿ.ವರೆಗೆ ಶಿಕ್ಷಣ ಪಡೆದ ಇವರು ಹಾವೇರಿ ಗೊಟಗೋಡಿಯ ಕರ್ನಾಟಕ ಜಾನಪದ ವಿಶ್ವವಿದ್ಯಾಲಯದಿಂದ ಜನಪದ ವೈದ್ಯ ಮತ್ತು ಔದ್ಯೋಗಿಕ ತರಬೇತಿ ಪಡೆದು ಸ್ವಯಂ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಸಾಹಿತಿ ದಿ. ಇಂದುಮತಿ ಬಂಡಿಯವರ ಪುತ್ರರಾದ ಇವರು ತಮ್ಮ ತಾಯಿಯ ಸಾಹಿತ್ಯದ ಪ್ರೇರಣೆಯಿಂದ ಕತೆ ,ಕವನ ,ಲೇಖನಗಳು ಬರೆದಿದ್ದಾರೆ. ಇವರ ಬರಹಗಳು ಪಬ್ಲಿಕ್, ಉತ್ತರ ಕರ್ನಾಟಕ, ಕಲ್ಯಾಣ ಕಿರಣ, ಪ್ರಪಂಚ ಮೊದಲಾದ ಪತ್ರಿಕೆಗಳಲ್ಲಿ ಹಾಗೂ ಕೆಲ ಪ್ರಾತಿನಿಧಿಕ ಮತ್ತು ಅಭಿನಂದನಾ ಗ್ರಂಥಗಳಲ್ಲಿ ಪ್ರಕಟವಾಗಿವೆ. ಇವರು ಬೀದರದ ಕರ್ನಾಟಕ ವಚನ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾಗಿ, ಧರಿನಾಡು ಕೇಂದ್ರ ಕನ್ನಡ ಸಂಘದ ಖಜಾಂಚಿಯಾಗಿ, ಕಲ್ಯಾಣ ಕರ್ನಾಟಕ ವಿಭಾಗದ ರಾಜ್ಯ ಯುವ ಬರಹಗಾರರ ಒಕ್ಕೂಟದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. ಮತ್ತು ಕೆಲ ಯೂಟ್ಯೂಬ್ನ ಕಿರು ಚಿತ್ರಗಳಲ್ಲಿಯೂ ನಟಿಸಿದ ಇವರಿಗೆ ಯಾದಗಿರಿಯ ಕಲಾನಿಕೇತನ ಟ್ರಸ್ಟ್ ವತಿಯಿಂದ `ಬಸವ ಕಾಯಕ ರತ್ನ ಪ್ರಶಸ್ತಿ, ಬೀದರ ದೇಶಪಾಂಡೆ ಪ್ರತಿಷ್ಠಾನದ ವತಿಯಿಂದ `ಕಾವ್ಯ ರತ್ನ ಪ್ರಶಸ್ತಿ, ಮೊದಲಾದವು ಪಡೆದಿದ್ದಾರೆ.
ಅರವಿಂದ ಕುಲಕರ್ಣಿ.
ಹವ್ಯಾಸಿ ಬರಹಗಾರರಾದ ಅರವಿಂದ ಕುಲಕರ್ಣಿ ಯವರು ಬೀದರ ತಾಲೂಕಿನ ಬಾವಗಿ ಗ್ರಾಮದ ದತ್ತಾತ್ರೇಯರಾವ ಮತ್ತು ಶಾಂತಾಬಾಯಿ ದಂಪತಿಗಳಿಗೆ ದಿನಾಂಕ ೧-೬-೧೯೭೧ ರಲ್ಲಿ ಜನಿಸಿದ್ದಾರೆ. ಡಿ.ಎಂ.ಎಲ್.ಟಿ. ಪದವಿಧರರಾದ ಇವರು ಬೀದರ ಸರ್ಕಾರಿ ಆಸ್ಪತ್ರೆಯಲ್ಲಿ ವೈಧ್ಯಕೀಯ ಸೇವೆ ಸಲ್ಲಿಸುತ್ತಿದ್ದಾರೆ. ಬಾಲ್ಯದಿಂದಲೂ ಸಾಹಿತ್ಯದಲ್ಲಿ ತುಂಬ ಆಸಕ್ತರಾಗಿ ಕವನ, ಲೇಖನ, ಬರಹಗಳು ಸಾಮಾಜಿಕ, ಶೈಕ್ಷಣಿಕ, ಪರಿಸರ ಮತ್ತು ಆರೋಗ್ಯದ ಕುರಿತು ರಚನೆ ಮಾಡುತ್ತಿದ್ದಾರೆ. ಇವರ ಬರಹಗಳು ಅನೇಕ ಪತ್ರಿಕೆ ಹಾಗೂ ಪ್ರಾತಿನಿಧಕ ಸಂಕಲನಗಳಲ್ಲಿ ಪ್ರಕಟವಾಗಿವೆ. ಇವರ ಪ್ರಗತಿ ಮತ್ತು ಶಿಕ್ಷಣ ಸಂಸ್ಥೆ ಅಡಿಯಲ್ಲಿ ಹಲವಾರು ಸಾಹಿತ್ಯೀಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾರೆ. ಮತ್ತು ಮಕ್ಕಳ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರಿಗೆ ಬೀದರ ಧೇಶಪಾಂಡೆ ಪ್ರತಿಷ್ಠಾನದ ವತಿಯಿಂದ ಕವಿ ಭಾರ್ಗವಿ, ಪರಿಸರ ರತ್ನ, ಆದರ್ಶ ದಂಪತಿಗಳು, ಬಸವ ಕಾಯಕ ರತ್ನ ಮೊದಲಾದ ಪ್ರಶಸ್ತಿ ಪುರಸ್ಕಾರಗಳು ನೀಡಿ ಗೌರವಿಸಿದ್ದಾರೆ..
ನಾಗಶೆಟ್ಟಿ ಧರಮಪೂರ
ಸಾಹಿತಿ ಹಾಗೂ ಪತ್ರಕರ್ತರಾದ ನಾಗಶೆಟ್ಟಿ ಧರಮಪೂರ ರವರು ಬೀದರ ತಾಲೂಕಿನ ಧರಂಪುರ ಗ್ರಾಮದ ವೀರಶೆಟ್ಟಿ ಮತ್ತು ಶರಣಮ್ಮ ದಂಪತಿಗಳಿಗೆ ದಿನಾಂಕ ೨೩-೫-೧೯೬೯ರಲ್ಲಿ ಜನಿಸಿದ್ದಾರೆ. ಪಿ.ಯು.ಸಿ ಇಂಟ್ರನಶಿಪ್ ಹಾಗೂ ಬಿ.ಎ ಪದವಿಧರರಾದ ಇವರು `ಕ್ರಾಂತಿ ಭೂಮಿ’ ಪತ್ರಿಕೆಯ ಸಂಪಾದಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ತೀರ ಬಡಕುಟುಂಬದಲ್ಲಿ ಜನಿಸಿದ ಇವರು ಪಿ.ಯು.ವಿದ್ಯಾರ್ಥಿಯಾಗಿರುವಾಗಲೇ ಸುಭಾಶ ಗಾದಗಿಯವರ ಯುವ ಗರ್ಜನೆ ಮತ್ತು ಕಲಬುರ್ಗಿಯ ಗ್ರೀನೋಬಲ್ಸ ಪತ್ರಿಕೆಗಳನ್ನು ಮನೆ ಮನೆಗೂ ವಿತರಿಸಿ ಪತ್ರಿಕಾ ಲೋಕ ಪ್ರವೇಶ ಮಾಡಿದರು. ನಂತರ ಯುವ ಗರ್ಜನೆ, ನವನಾಡು , ಕನ್ನಡಮ್ಮ, ಗ್ರೀನೋಬಲ್ಸ್, ಜನದನಿ,ಉತ್ತರ ಕರ್ನಾಟಕ, ಬಸವ ದನಿ,ವಿಶ್ವಾಸಿಗ, ಈ ಸೂರ್ಯಸ್ಥ, ಕ್ರಾಂತಿ ಕಲ್ಯಾಣ, ಪ್ರಜಾ ಚಳುವಳಿ, ಮೊದಲಾದ ಪತ್ರಿಕೆಗಳ ವರದಿಗಾರರಾಗಿ ಸೇವೆ ಸಲ್ಲಿಸುವುದರೊಂದಿಗೆ ಕ್ರಾಂತಿ ಭೂಮಿ ಪತ್ರಿಕೆಯ ಸಂಪಾದಕರಾಗಿ, ಅನೇಕ ಲೇಖನ, ಬರಹಗಳು ಬರೆದಿದ್ದಾರೆ. ಇವರ ಬರಹಗಳು ಕೆಲ ಪ್ರಾತಿನಿಧಿಕ ಸಂಕಲನಗಳಲ್ಲಿಯು ಪ್ರಕಟವಾಗಿವೆ. ಬೀದರನಲ್ಲಿ ಪ್ರಭುರಾವ ಕಂಬಳಿವಾಲೆ ಕನ್ನಡ ಸೇವಾ ಪ್ರತಿಷ್ಠಾನದ ಸಂಸ್ಥಾಪಕ ಅಧ್ಯಕ್ಷರಾಗಿ ನಿರಂತರವಾಗಿ ತಿಂಗಳಿಗೊAದು ಸಾಹಿತ್ಯಿಕ ಕಾರ್ಯಕ್ರಮವನ್ನು ಮಾಡುತ್ತಿದ್ದಾರೆ. ೧೪ ವರ್ಷಗಳಿಂದ ಬೀದರ ಜಿಲ್ಲಾ ಬರಹಗಾರ ಮತ್ತು ಕಲಾವಿದರ ಸಂಘದ ಕಾರ್ಯದರ್ಶಿಯಾಗಿ, ಕರ್ನಾಟಕ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಾಧಾನ ಕಾರ್ಯದರ್ಶಿಯಾಗಿ, ಜಿಲ್ಲಾ ವರದಿಗಾರರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ ಇವರು ಬೀದರ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಮತ್ತು ಜಿಲ್ಲಾ ಬರಹಗಾರ ಹಾಗೂ ಕಲಾವಿದ ಬಳಗದ ಕರ್ನಾಟಕ ಗಡಿ ಹೋರಾಟ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ, ಮಾತೆ ಮಾಣಿಕೇಶ್ವರಿಯ ಸಾಮಾಜಿಕ, ಮತ್ತು ಸಾಂಸ್ಕೃತಿಕ ಟ್ರಸ್ಟ್ ನ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. ಇವರಿಗೆ ೮೧ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ರಾಷ್ಟ್ರೀಯ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಸೇರಿದಂತೆ ಅನೇಕ ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಸದ್ಯ ಇವರು ಬೀದರನಲ್ಲಿ ವಾಸವಾಗಿದ್ದಾರೆ.
ಇದಕ್ಕೆ ಸಬ್ಸ್ಕ್ರೈಬ್ ಆಗಿ:
ಪೋಸ್ಟ್ಗಳು (Atom)